Monday, 25 November 2019

ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ

ಜಾತಕದ ಪ್ರಕಾರ ಶನಿ ನಿಮ್ಮ ರಾಶಿಯಲ್ಲಿದ್ದಾನಾ ? ಅಥವಾ ಶನಿ ನಿಮ್ಮನ್ನು ಕಾಡುತ್ತಿದ್ದಾನಾ ? ಶನಿ ಕಾಟದಿಂದ ತಪ್ಪಿಸಿಕೊಲ್ಳುವ ಉಪಾಯಗಳಿಗಾಗಿ ಮುಂದೆ ಓದಿ

*ಶನಿವಾಋ ವೃತ ಮಾಡಿ

* ಶನಿವಾರ ಶನಿನಿಯ ಪೂಜೆ ಮಾಡಿ ( ಕವಚ , ಸ್ತೋತ್ರ , ಮಂತ್ರ ಜಪ ಮಾಡಿ)

* ಶನಿವಾರ ಶನಿದೇವರ ವೃತದ ಕಥೆ ಓದಿ.

* ವೃತದ ಸಮಯದಲ್ಲಿ ಹಾಲು, ಲಸ್ಸಿ, ಹಣ್ಣುಗಳನ್ನು ಸೇವನೆ ಮಾಡಿ.

* ಸಂಜೆ ಹನುಮಾನ ದೇವರ ದರ್ಶನ ಮಾಡಿ .

* ಶನಿವಾರ ಸಾಯಂಕಾ ಆಲದ ಮರಕ್ಕೆ ಹತ್ತಿದಾರವನ್ನು 7 ಸುತ್ತು ಸುತ್ತಿ. ಈ ಸಮಯದಲ್ಲಿ ಶನಿಯ ಮಂತ್ರವನ್ನು ಜಪಿಸಿ .

* ಆಲದ ಮರದ ಕೆಳಗಡೆ ದೀಪವನ್ನು ಹಚ್ಚಿ.

Saturday, 23 November 2019

ಆರೋಗ್ಯ ಮತ್ತು ಶ್ರೀಮಂತಿಕೆ ಪಡೆಯಲು ವಿಶೇಷ ವಾಸ್ತು ಟಿಪ್ಸ್

ಕಸ ಗುಡಿಸುವ ಪೊರಕೆಗಳನ್ನು ಕಣ್ಣಿನಿಂದ ಮರೆಯಾಗುವಂತೆ ಮ‌ೂಲೆಯಲ್ಲಿ ತಲೆಕೆಳಗಾಗಿ ಇಡುವುದರಿಂದ ಕುಟುಂಬದ ಜೀವನ ತೊಳೆದುಹೋಗದಂತೆ ತಪ್ಪಿಸುತ್ತದೆ.

* ಸ್ನಾನದ ಗೃಹ ಅಥವಾ ಅಡುಗೆ ಮನೆಯ ನಲ್ಲಿಗಳಲ್ಲಿ ನೀರು ತೊಟ್ಟಿಕ್ಕದಂತೆ ಖಾತರಿ ಮಾಡಿಕೊಳ್ಳಿ.ಸತತ ನೀರಿನ ತೊಟ್ಟಿಕ್ಕುವಿಕೆಯು ನಕಾರಾತ್ಮಕ ಶಕ್ತಿಯನ್ನು ಸೂಸುವುದರಿಂದ ನೀರಿನ ತೊಟ್ಟಿಕ್ಕುವಿಕೆಯು ಸಂಪತ್ತಿನ ಸೋರುವಿಕೆಯನ್ನು ಸಂಕೇತಿಸುತ್ತದೆ.

* ಸ್ವಚ್ಛವಾದ ಡೆಸ್ಕ್ ಸ್ಪಷ್ಟ ಯೋಚನೆಗೆ ಪ್ರೋತ್ಸಾಹಿಸುತ್ತದೆ. ಇದು ಆರ್ಥಿಕ ಶಕ್ತಿ ಮತ್ತು ಸೃಜನಶೀಲತೆಯನ್ನು ಸಂಕೇತಿಸುತ್ತದೆ. ಕಂಪ್ಯೂಟರ್, ಫೋನ್ ಮುಂತಾದುವನ್ನು ಡೆಸ್ಕ್‌ನಲ್ಲಿ ಬಳಸಬಹುದು.

* ಎಲ್ಲ ಗಡಿಯಾರಗಳು ಸುಸ್ಥಿತಿಯಲ್ಲಿ ಇರಬೇಕು. ಕಾರ್ಯನಿರ್ವಹಿಸದ ಗಡಿಯಾರವು ಹಣಕಾಸು ಸ್ಥಿತಿ ಸುಧಾರಿಸದೇ ಅಲ್ಲೇ ನಿಲ್ಲುವಂತೆ ಮಾಡುತ್ತದೆ. ನಿಧಾನ ಗಡಿಯಾರದಿಂದ ನಿಮ್ಮ ಕೆಲಸಗಳು ವಿಳಂಬವಾಗುತ್ತದೆ.

* ನಿಮ್ಮ ಮಲಗುವ ಕೋಣೆಯ ಕಿಟಕಿಗಳನ್ನು ಕನಿಷ್ಠ 20 ನಿಮಿಷಗಳ ಕಾಲ ತೆರೆದು ಹೊಸ ಗಾಳಿ ಒಳಪ್ರವೇಶಕ್ಕೆ ಅವಕಾಶ ನೀಡಿ. ಇಲ್ಲದಿದ್ದರೆ ಪ್ರತಿ ರಾತ್ರಿ ನೀರಸ ಗಾಳಿಯೊಂದಿಗೆ ನೀವು ಮಲಗಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡಿದರೆ, ಜೀವನದಲ್ಲಿ ಉತ್ತಮ ಅದೃಷ್ಟವನ್ನು ನೀವು ಹೇಗೆ ನಿರೀಕ್ಷಿಸುತ್ತೀರಿ? 

* ನೆಲದಿಂದ ಒಂದು ಅಡಿ ಎತ್ತರದಲ್ಲಿ ಹಾಸಿಗೆಯಿರಬೇಕು. ಇದರಿಂದ ನೆಲದಲ್ಲಿ ಮುಕ್ತವಾಗಿ ಶಕ್ತಿ ಹರಿಯಲು ಅವಕಾಶ ಕಲ್ಪಿಸುತ್ತದೆ. ಶಕ್ತಿಯ ಮುಕ್ತ ಹರಿಯುವಿಕೆ ತಡೆದರೆ ನಿಮ್ಮ ಸಂಪತ್ತು ಗಳಿಸುವ ಅವಕಾಶ ಕೂಡ ಮೊಟಕಾಗುತ್ತದೆ.

* ತಲೆಯ ಹಿಂಭಾಗದಲ್ಲಿ ಭದ್ರಗೋಡೆಯೊಂದಿಗೆ ಮಲಗಿ. ಈ ಸ್ಥಿತಿಯು ನೀವು ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ತಲೆಯ ಹಿಂಭಾಗದಲ್ಲಿ ಕಿಟಕಿಗಳು ಮತ್ತು ಬಾಗಿಲಿಗೆ ಅವಕಾಶ ಕೊಡಬಾರದು.

* ನೆಲವನ್ನು ಮನೆಯ ಒಳಗೆ ಗುಡಿಸಿಕೊಂಡು ಹೋಗಬೇಕು. ಮುಖ್ಯ ದ್ವಾರದತ್ತ ಕಸ ಗುಡಿಸುವುದರಿಂದ ಸಂಪತ್ತು ಕ್ಷೀಣಿಸುತ್ತದೆ.

* ಕಸದ ಬುಟ್ಟಿಗಳನ್ನು ಸದಾ ಮುಚ್ಚಿರಬೇಕು. ಇಲ್ಲದಿದ್ದರೆ ಸಂಪತ್ತಿನ ಶಕ್ತಿಯ ಭ್ರಷ್ಟತೆಗೆ ದಾರಿಕಲ್ಪಿಸುತ್ತದೆ.

* ಮನೆಯ ಮುಖ್ಯದ್ವಾರದಲ್ಲಿ ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬಾರದು. ಮುಖ್ಯದ್ವಾರದಲ್ಲಿ ಮುಕ್ತ ಮತ್ತು ಸ್ವಚ್ಛ ಜಾಗವಿರಬೇಕು. ಇಲ್ಲದಿದ್ದರೆ ಗಾಳಿಯೊಂದಿಗೆ ಹರಿಯುವ ಶಕ್ತಿಯು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯೊಂದಿಗೆ ಮಿಶ್ರಣಗೊಂಡು ಮನೆಯಲ್ಲಿ ನಷ್ಟಗಳು ಪ್ರಾಪ್ತವಾಗುತ್ತದೆ.

* ತೊಳೆಯದ ಪಾತ್ರೆಗಳನ್ನು ಸಿಂಕ್‌ನಲ್ಲಿ ಹಾಗೇ ಬಿಡದೇ ಆದಷ್ಟು ಬೇಗ ತೊಳೆಯುವುದು ಒಳ್ಳೆಯದು. ತಕ್ಷಣವೇ ತೊಳೆಯದಿರುವುದು ಅಪೂರ್ಣತೆಯ ಸಂಕೇತವಾಗಿದ್ದು, ಹಣಕಾಸು ಪರಿಸ್ಥಿತಿಯ ಅವ್ಯವಸ್ಥೆಗೆ ಪುರಾವೆ ಒದಗಿಸುತ್ತದೆ.

* ಮುಖ್ಯ ಪ್ರವೇಶದ್ವಾರದ ಮೇಲೆ ಶೌಚಾಲಯಗಳು ಇರಬಾರದು. ಅದು ನಕಾರಾತ್ಮಕ ಶಕ್ತಿಯನ್ನು ಸೂಸುತ್ತದೆ. ಇದು ಮುಖ್ಯದ್ವಾರದಿಂದ ಪ್ರವೇಶಿಸುವ ನಕಾರಾತ್ಮಕ ಶಕ್ತಿಗೆ ಹಸ್ತಕ್ಷೇಪ ಉಂಟುಮಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Wednesday, 20 November 2019

ಭಾರತೀಯ ವಾಸ್ತುಶಾಸ್ತ್ರ

ಭಾರತೀಯ ವಾಸ್ತು ಶಾಸ್ತ್ರವು ಪ್ರಾಚೀನ ಇತಿಹಾಸ ಹೊಂದಿದೆ. ವಾಸ್ತು ಎಂದರೆ ಮನೆ, ಕಟ್ಟಡ ಇತ್ಯಾದಿ ನಿರ್ಮಾಣಗಳು. ಇವುಗಳಿಗೆ ಸಂಬಂಧಿಸಿದ ಒಳಿತು ಕೆಡುಕುಗಳನ್ನು ತಿಳಿಸುವ ಶಾಸ್ತ್ರ ಇದಾಗಿರುವುದರಿಂದ ಗೃಹಶಾಂತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಭಾರತೀಯ ವಾಸ್ತು ಶಾಸ್ತ್ರವು ಪಂಚಭೂತಗಳನ್ನಾಧರಿಸಿ ವಿವರಣೆ ನೀಡುತ್ತದೆ. ಗಾಳಿ, ಬೆಳಕು, ನೀರು , ನೆಲ , ಆಕಾಶ ಇತ್ಯಾದಿಗಳನ್ನಾಧರಿಸಿ ನಿರ್ಮಾಣದ ಕುರಿತು ವಿವರಣೆ ನೀಡುತ್ತದೆ. ವಾಸ್ತುಶಾಸ್ತ್ರವು ಜ್ಯೋತಿಷ್ಯದ ಒಂದು ಅಂಗವಾಗಿಯೂ ಪರಿಗಣಿಸಲ್ಪಡುತ್ತದೆ.

ಗೃಹ ಇತ್ಯಾದಿ ನಿರ್ಮಾಣದ ವೇಳೆ ನಿವೇಶನದ ಆಕಾರ, ದಿಕ್ಕುಗಳು, ಇತ್ಯಾದಿಗಳನ್ನಾಧರಿಸಿ ಮಾಹಿತಿ ನೀಡುತ್ತದೆ. ನಿವೇಶನಗಳನ್ನು ವಾಸ್ತುವಿನಲ್ಲಿ ಆಯಗಳಾಗಿ ವಿಭಾಗಿಸಿ ಮನೆಯ ವಿಸ್ತಾರಕ್ಕನುಗಣವಾಗಿ ನಿರ್ದೇಶಿಸಲಾಗುವುದು. ಇದರಂತೆ ಧ್ವಜ ಆಯ, ಗಜ ಆಯ ಮುಂತಾಗಿ ಹೆಸರಿಸಲಾಗುವುದು.

ವಾಸ್ತುವು ನಿರ್ಮಾಣ ಪರಿಸರದಲ್ಲಿರುವ ಶುಭಾರಕ ಶಕ್ತಿಯನ್ನು ಮಾಲಕನ ಹಿತಕ್ಕನುಗುಣವಾಗಿ ಮನೆಯೊಳಗೆ ಆವಾಹಿಸುವಂತಹ ಒಳಿತನ್ನುಂಟುಮಾಡುತ್ತದೆ. ಮನೆ ಇತ್ಯಾದಿ ನಿರ್ಮಾಣಗಳು ಯಾವ ದಿಕ್ಕಿಗೆ ಅಭಿಮುಖವಾಗಿರಬೇಕು. ಅನುಬಂಧಿತ ಕಟ್ಟಡಗಳು ಯಾವ ದಿಕ್ಕಿನಲ್ಲಿದ್ದರೆ ಅಶುಭ. ಈ ಮುಂತಾದ ಕಾರ್ಯಗಳನ್ನು ವಾಸ್ತು ನಿರ್ದೇಶಿಸುತ್ತದೆ.

Saturday, 16 November 2019

ಮಗುವಿಲ್ಲದ ಮನೆ

ಸಂತಾನವಿಲ್ಲದ ದಂಪತಿಗಳ ಗೋಳು ಹೇಳತೀರದು. ಮಗು ಮನೆಗೆ ದೀಪವಿದ್ದಂತೆ. ಕುಟುಂಬಕ್ಕೆ ಯಾವುದೇ ದೋಷವಿರದಿದ್ದರು ಅನೇಕ ದಂಪತಿಗಳಿಗೆ ಮಕ್ಕಳಾಗುವದಿಲ್ಲ.

ಅದು ಹೆಚ್ಚಾಗಿ ಕಾಣ ಸಿಗುವದು ನಗರಗಳಲ್ಲಿ ಮಾತ್ರಆಧುನಿಕ ಒತ್ತಡದಿಂದ ಕೂಡಿದ ಜೀವನ, ಪ್ರದೂಷಣೆವೇ ಕಾರಣವಾಗಿರುತ್ತದೆ ಎಂದು ವಾಸ್ತು ಹೇಳುತ್ತದೆ. ಒತ್ತಡ ,ಪ್ರದೂಷಣೆ ಗರ್ಭಾಶಯದ ಉಷ್ಣ ಕಡಿಮೆ ಮಾಡುತ್ತದೆ. ಇದರಿಂದ ಗರ್ಭಧಾರಣೆ ಶಕ್ತಿ ಕಡಿಮೆ ಮಾಡುತ್ತದೆ.

ಪ್ರತಿಯೊಬ್ಬ ವ್ಯಕ್ತಿಗೆ ಅದೃಷ್ಟ ನೀಡುವ ತನ್ನದೆ ಆದ ದಿಕ್ಕು ಇರುತ್ತದೆನಿಯನ್ ಯೆನ್ ದಿಕ್ಕೂ ಎಂದು ಕರೆಯುತ್ತಾರೆ.ಮಲಗುವ ಕೋಣೆಯಲ್ಲಿ ನಿಯನ್ ಯೆನ್ ದಿಕ್ಕಿನ ಕಡೆ ತಲೆ ಮಾಡಿ ಮಲಗಬೇಕು ತೊಲೆಯ ಕೆಳಗೆ ಮಲಗಬಾರದು.

ಮನೆಯ ಪ್ರವೇಶದ್ವಾರವನ್ನು ಪರೀಕ್ಷಿಸಿಕೊಳ್ಳಿ, ಮಲಗುವ ಕೋಣೆಯಲ್ಲಿ ಹರಿತವಾದ ಬಾಣಗಳು ಇರುವಂತ ಚಿತ್ರವನ್ನು ಹಾಕಬೇಡಿ. ರಾತ್ರಿ ಮಲಗುವಾಗ ಸಂತಾನಕ್ಕಾಗಿ ಯತ್ನಿಸುತ್ತಿರುವಾಗ ಇಂಪಾದ ಸಂಗೀತ ಆಲಿಸಿ ಒತ್ತಡದಲ್ಲಿರಬೇಡಿ ಆನಂದವಾಗಿರಿ .

Wednesday, 13 November 2019

ಡೋರ್ ಮ್ಯಾಟ್ ಕೆಳಗೆ ಇದನ್ನು ಇಟ್ಟರೆ ದರಿದ್ರ ಲಕ್ಷ್ಮೀ ನಿಮ್ಮ ಮನೆ ಪ್ರವೇಶಿಸುವುದಿಲ್ಲ

ಎಲ್ಲರ ಮನೆಯಲ್ಲಿಯೂ ಡೋರ್ ಮ್ಯಾಟ್ ನ್ನು ಉಪಯೋಗಿಸುತ್ತಾರೆ. ಈ ಡೋರ್ ಮ್ಯಾಟ್ ಕೆಳಗೆ ಈ ಒಂದು ವಸ್ತುವನ್ನು ಇಡುವುದರಿಂದ ದರಿದ್ರ ಲಕ್ಷ್ಮೀ ಮನೆ ಪ್ರವೇಶಿಸದಂತೆ ಮಾಡಬಹುದು.

ಹೌದು. ಮನೆಯ ಡೋರ್ ಮ್ಯಾಟ್ ಹಾಕುವಾಗ ಯಾವಾಗಲೂ ಕಪ್ಪು ಬಣ್ಣದ ಮ್ಯಾಟ್ ಗಳನ್ನು ಬಳಸಬೇಕು. ಮತ್ತು ಈ ಡೋರ್ ಮ್ಯಾಟ್ ಕೆಳಗೆ ಸ್ಫಟಿಕವನ್ನು ಪುಡಿ ಮಾಡಿ ಕೆಂಪು ಬಣ್ಣದ ಬಟ್ಟೆಯಿಂದ ಸುತ್ತಿ ಇಡಬೇಕು. ಇದರಿಂದ ಮನೆಗೆ ದರಿದ್ರ ಲಕ್ಷ್ಮೀ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಹಾಗೇ  ಮನೆಯಲ್ಲಿ ಅಷ್ಟ ಐಶ್ವರ್ಯ ತುಂಬಿರುತ್ತದೆ.

Saturday, 9 November 2019

ಚೀನಿ ವಾಸ್ತು ಶಾಸ್ತ್ರ ಫೆಂಗ್‌ ಶುಯಿ

ಚೀನಾ ಮೂಲದ ಫೆಂಗ್‌ ಶುಯಿ ವಾಸ್ತುಶಾಸ್ತ್ರಕ್ಕೆ ಐದು ಸಹಸ್ರಾಬ್ದಗಳಿಗೂ ಹಿಂದಿನ ಇತಿಹಾಸವಿದೆ. ಈ ಶಾಸ್ತ್ರವು ಗೃಹ ಸಂಬಂಧಿ ವಿಚಾರಗಳಿಗೆ ಪ್ರಾಧಾನ್ಯ ನೀಡಿದೆಯಾದರೂ ಕಲೆ ಮತ್ತು ವೈಜ್ಞಾನಿಕ ಮಹತ್ವ ಹೊಂದಿದೆ.

ಫೆಂಗ್‌ ಶುಯಿಯು ಗಾಳಿ ಮತ್ತು ನೀರಿನ ಅಧ್ಯಯನ ನಡೆಸುವ ಶಾಸ್ತ್ರ. ಭಾರತೀಯ ವಾಸ್ತು ಶಾಸ್ತ್ರದಂತೆ ಇಲ್ಲಿಯೂ ಪಂಚಭೂತಗಳಾದ ವಾಯು, ನೀರು, ಬೆಳಕು, ಭೂಮಿ, ಆಕಾಶಗಳನ್ನು ಅಧ್ಯಯನಕ್ಕೆ ಬಳಸಲಾಗುತ್ತದೆ. ಆದರೆ ನೀರನ್ನು ಐಶ್ವರ್ಯಕ್ಕೆ ಪರ್ಯಾಯವಾಗಿ ಗಾಳಿಯನ್ನು ದಿಕ್ಕುಗಳಿಗೆ ಪರ್ಯಾಯವಾಗಿ ಪರಿಗಣಿಸಲಾಗುವುದು.


ಶುಭ ಹಾಗೂ ಅಶುಭ ಶಕ್ತಿಗಳನ್ನು ಆಧಾವಾಗಿ ಪ್ರವಚಿಸುವ ಶಾಸ್ತ್ರವಾಗಿದ್ದು, ವಾಸಸ್ಥಳದಲ್ಲಿ ಜನರಿಗೆ ಅಶುಭಕಾರಕ ಶಕ್ತಿಗಳನ್ನು ದುರ್ಬಲಗೊಳಿಸುವ ಹಾಗೂ ಶುಭಕಾರಕ ಶಕ್ತಿಗಳನ್ನು ವೃದ್ದಿಸುವ ಸಲಕರಣೆಗಳನ್ನು ಇರಿಸಲು ಶಿಫಾರಸು ಮಾಡುತ್ತದೆ. ಈ ಉದ್ದೇಶಗಳಿಗೆ ಬಹಳಷ್ಟು ಉಪಕರಣಗಳನ್ನು ಶುಭ ಅಥವಾ ಅಶುಭ ಎಂದು ಫೆಂಗ್‌ ಶುಯಿ ಹೆಸರಿಸಿದೆ.

ವಾಸಸ್ಥಳದಲ್ಲಿ ಶುಭಕಾರಕ ಶಕ್ತಿಗಳಿದ್ದರೂ ನಿರ್ದಿಷ್ಟ ಸಲಕರಣೆಯನ್ನು ಫೆಂಗ್‌ಶುಯಿ ಸೂಚನೆಯಂತೆ ಬಳಸಿದರೆ ಅದು ಬಲವರ್ಧಕವಾಗಿ ಬಳಕೆಯಾಗುವುದು ಎಂದು ಶಾಸ್ತ್ರ ಹೆಸರಿಸುತ್ತದೆ. ಚಿತ್ರಪಟಗಳು, ಧ್ವನಿಎಬ್ಬಿಸುವ ಗಂಟೆಗಳು,ಜೋಡಿಹಕ್ಕಿಗಳು, ಡ್ರಾಗನ್‌, ಮೂರು ಕಾಲಿನ ಕಪ್ಪೆ, ನಗುವ ಬುದ್ಧ ಮುಂತಾಗಿ ಈ ಪಟ್ಟಿಯಲ್ಲಿ ಅನೇಕ ವಿಷಯಗಳಿವೆ.

ಮನೆಯ ನಿವೇಶನಗಳನ್ನು ಯಾವ ರೀತಿ ಆಯ್ಕೆ ಮಾಡಬೇಕು. ನಿವೇಶನದಲ್ಲಿ ಎಷ್ಟು ಮೂಲೆಗಳಿರಬೇಕು. ನಿವೇಶನಗಳಲ್ಲಿ ಮನೆ-ಕಟ್ಟಡಗಳನ್ನು ನಿರ್ಮಿಸುವಾಗ ಶುಭಶಕ್ತಿಗಳನ್ನು ಪ್ರಭಾವಗೊಳಿಸಲು ಅನುಸರಿಸಬೇಕಾದ ಕ್ರಮಗಳನ್ನು ಫೆಂಗ್‌ಶುಯಿ ನಿಷ್ಕರ್ಷಿಸುತ್ತದೆ.

Wednesday, 6 November 2019

ಮನೆಯಲ್ಲಿ ವಾಸ್ತು ಶೈಲಿ

*ಮನೆಯ ಮುಂಬಾಗಿಲು ಪೂರ್ವ ಅಧವಾ ಉತ್ತರ ದಿಕ್ಕಿನೆಡೆಗಿರಲಿ.

*ದಕ್ಷಿಣ ಮತ್ತು ಪೂರ್ವ ದಿಕ್ಕಿನ ಗೋಡೆಗಿಂತ ಉತ್ತರ ಮತ್ತು ಪಶ್ಚಿಮ ದಿಕ್ಕಿನ ಗೋಡೆ ಗಟ್ಚಿಮುಟ್ಟಾಗಿರಲಿ.

*ದಕ್ಷಿಣ ಅಥವಾ ಪೂರ್ವ ಭಾಗದಲ್ಲಿ ಅಡುಗೆ ಕೋಣೆ ಇರಲಿ

* ಪಶ್ಚಿಮ ದಿಕ್ಕಿನಲ್ಲಿ ಊಟದ ಕೋಣೆ ಇದ್ದರೆ ಆರೋಗ್ಯ ವರ್ಧಿಸುತ್ತದೆ.

Monday, 4 November 2019

ಭೋಜನ ಕೋಣೆ ಹೇಗಿರಬೇಕು?

ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ಸೇವಿಸುವ ಆಹಾರ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಸೇವಿಸುವ ಸ್ಥಳ ಅಥವಾ ಪರಿಸರವು ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು.

ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ ಮನಸ್ಸಿಗೆ ಹಿತವೂ ಲಭಿಸುತ್ತದೆ. ಮನೆಯಲ್ಲಿ ಆಹಾರ ಸೇವನೆಗಾಗಿ ಭೋಜನೆ ಕೋಣೆ ಇರುವುದು ಸಾಮಾನ್ಯ. ಅಲ್ಲಿರುವ ವಸ್ತುಗಳನ್ನು ಚೊಕ್ಕವಾಗಿ ಇಟ್ಟರೆ ಮಾತ್ರ ಅಲ್ಲಿ ಭೋಜನ ಸೇವಿಸಲು ಹಿತವೆನಿವುದು. ಭೋಜನ ಕೋಣೆಯಲ್ಲಿ ವಸ್ತುಗಳ ಇರಿಸುವಿಕೆಯು ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ ಎಂದು ಫೆಂಗ್‌ಶುಯಿ ಶಾಸ್ತ್ರ ಹೇಳುತ್ತದೆ.

ಎಂದಿಗೂ ಮನೆಯ ಮುಖ್ಯದ್ವಾರಕ್ಕೆ ಎದುರಾಗಿ ಭೋಜನದ ಮೇಜನ್ನು ಇರಿಸಬೇಡಿ. ಸ್ನಾನಗೃಹದ ಹತ್ತಿರ ಅಥವಾ ಮುಂಭಾಗದಲ್ಲಿ ಮೇಜನ್ನು ಇರಿಸಲೇಬೇಡಿ. ಎರಡು ಕೋಣೆಗಳನ್ನು ವಿಂಗಡಿಸುವಂತೆ ಮಧ್ಯದಲ್ಲಿರಿಸಬೇಡಿ.

ನಿಮ್ಮ ಭೋಜನದ ಮೇಜು ಅಡಿಗೆ ಕೋಣೆಗೆ ಮುಖಮಾಡಿದೆ ಅಥವಾ ಅಲ್ಲಿಯೇ ಇದೆಯೆಂದಾದರೆ ಅದು ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ. ಹವಾನಿಯಂತ್ರಕ, ಫ್ಯಾನ್‌ ಮೊದಲಾದುವುಗಳನ್ನು ಭೋಜನ ಕೋಣೆಯ ಎಡಭಾಗಕ್ಕಿರಿಸುವುದು ಉತ್ತಮ.ಭೋಜನ ಕೋಣೆಯು ಆದಷ್ಟು ಶುಚಿ ಹಾಗೂ ವಾಯುಯುಕ್ತವಾಗಿರಲಿ.

Saturday, 2 November 2019

ಮನೆಯ ಸುತ್ತ ಪರಿಸರ

* ಮೇಲ್ಚಾವಣಿಯಿಂದ ಹರಿದು ಬರುವ ನೀರು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಿಂದ ಹರಿದುಹೋಗುವಂತೆ ನೋಡಿಕೊಳ್ಳಬೇಕು.

* ಮನೆಯ ಪೂರ್ವ ಅಧವಾ ಉತ್ತರ ಭಾಗದಲ್ಲಿ ದೊಡ್ಡ ಮರಗಳನ್ನು ಬೆಳೆಸಬಾರದು.

* ಓದುವಾಗ ನಿಮ್ಮ ಮುಖ ಪೂರ್ವದ ಕಡೆಗೆ ಮುಖಮಾಡಿರಲಿ

* ಮಲಗಿಕೊಂಡಾಗ ಕಾಲ ಮೇಲೆ ಕಾಲು ಹಾಕಿಕೊಂಡು ಮಲಗಬೇಡಿ.

ಇದರಲ್ಲಿ ಇನ್ನಷ್ಟು ಓದಿ :  ಮನೆ, ಪರಿಸರ, ದಕ್ಷಿಣ, ಪಶ್ಚಿಮ

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...