Monday, 30 October 2017

ಮನೆಯಲ್ಲಿ ತುಳಸಿ ಗಿಡ ಎಲ್ಲಿರಬೇಕು, ಹೇಗಿರಬೇಕು?

ಮನೆಯಲ್ಲಿ ಪೂಜಾ ಸ್ಥಳದಷ್ಟೇ ಮಹದ್ವದ್ದಾಗಿ ತುಳಸಿ ಗಿಡವನ್ನು ಕೂಡಾ ಪರಿಗಣಿಸಬೇಕು. ತುಳಸೀ ಗಿಡದ ಔಷಧೀಯ ಗುಣಗಳ ಕುರಿತಂತೆ ಎಲ್ಲರೂ ಒಪ್ಪುವವಾದ ಒಂದೆಡೆಯಾದರೆ ಇನ್ನೊಂದೆಡೆ ಅನಾಚೂನವಾಗಿ ತುಳಸೀ ಗಿಡದ ಕುರಿತು ನಮ್ಮ ಧರ್ಮ ನಂಬಿಕೊಂಡು ಬಂದ ಗೌರವಯುತವಾದ ಆಷೇìಯ ವಿಚಾರ. ತುಳಸೀ ಗಿಡದ ಉಪಸ್ಥಿತಿ ಮನೆಯನ್ನು ಹತ್ತು ಹಲವು ಉಪಟಳಗಳಿಂದ ಪಾರು ಮಾಡಿ ಒಂದು ಅವಿಚ್ಛಿನ್ನವಾದ ದೈಹೀಕ ಶಕ್ತಿಯನ್ನು ಮನೆಯೊಳಗೆ ಹರಳುಗಟ್ಟಿಸುತ್ತದೆ.

ಅನೇಕ ರೀತಿಯ ಸೂûಾ¾ಣುಗಳನ್ನು ವೈರಸ್‌ಗಳನ್ನು ಕಣ್ಣಿಗೆ ಗೋಚರಿಸದ ಏಕಕೋಶ ಉಪದ್ರವ ನೀಡುವ ಜೀವಿಗಳನ್ನು ಕೇವಲ ತನ್ನ ಪರಿಮಳಭರಿತ ಸುವಾಸನೆಯಿಂದಲೇ ತುಳಸಿ ನಿವಾರಿಸ ಬಲ್ಲದು ಎಂಬುದು ವೈಜಾnನಿಕವಾಗಿ ನಿರೂಪಿತಗೊಂಡ ವಾಸ್ತವ. ಅಂದಮೇಲೆ ಒಂದು ಮನೆಯಲ್ಲಿ ತುಳಸೀ ಗಿಡ ಸಂಜೀನಿಯಾಗುತ್ತದೆ.
ಕಾವಲು ಭಂಟನಂತಿರುತ್ತದೆ. ನಮ್ಮ ಸಂಸ್ಕೃತಿ ತುಳಸಿಯನ್ನು ಲಕ್ಷಿ$¾ದೇವಿಯನ್ನಾಗಿ ಪರಿಗ್ರಹಿಸಿದೆ. ಆರೋಗ್ಯ ಸಂಪತ್ತನ್ನು ಸಂವರ್ಧಿಸುವ ಕೈಂಕರ್ಯದಲ್ಲಿ ತುಳಸೀ ಗಿಡ ಅಕ್ಷರಶಃ ಲಕ್ಷಿ$¾àದೇವಿಯೇ ಆಗಿದ್ದಾಳೆ.

ಈ ಗಿಡವನ್ನು ಎಲ್ಲಿ ನೆಡಬಹುದು ಸಾಮಾನ್ಯವಾಗಿ ತುಳಸೀಗಿಡದ ಬುಡದಲ್ಲಿ ಒಂದು ದೀಪವನ್ನೂ ಕೂಡಾ ಸಂಜೆಯೂ ಹಗಲೂ ತುಳಿತಗೊಳ್ಳುವ ಮೂರು ಸಂಜೆಯ ಹೊತ್ತಿಗೆ ಬೆಳಗುವುದು ನಮ್ಮೆಲ್ಲರ ವಾಡಿಕೆಯಾಗಿದೆ. ಹೀಗಾಗಿ ದೀಪವನ್ನು ಬೆಳಗುವ ವೈಶಿಷ್ಠ$Âವನ್ನು ತುಳಸೀಗಿಡ ಬಯಸುವುದರಿಂದ ವಾಯುವ್ಯ ದಿಕ್ಕಿನಲ್ಲಿ ಈ ಗಿಡವನ್ನು ಇಡಬಹುದಾಗಿದೆ.
ಮನೆಯ ವಾಯುವ್ಯ ದಿಕ್ಕು ಪ್ರಶಸ್ತವಾಗಿದೆ.

ನೈರುತ್ಯವನ್ನು ಆಗಬಹುದಾದರೂ ನೈರುತ್ಯಕ್ಕೆ ದೀಪವನ್ನು ಹಚ್ಚುವುದು ಸೂಕ್ತವಲ್ಲ. ಹೀಗಾಗಿ ತುಳಸೀಗಿಡಕ್ಕೆ ವಾಯುವ್ಯವೇ ಸರಿ. ಹಾಗೆಯೇ ತುಳಸೀಕಟ್ಟೆಗೆ ಕೆಲವರು ಮನಸ್ಸಿಗೆ ಬಂದಂತೆ ವಿಧ ವಿಧ ದೇವರ ಚೌಕಗಳನ್ನು ಕೂಡ್ರಿಸುತ್ತಾರೆ.

ಆದಷ್ಟು ಈ ಕ್ರಮವನ್ನು ತಪ್ಪಿಸುವುದು ಒಳ್ಳೆಯದು. ತುಳಸೀ ಗಿಡಕ್ಕೆ ದೇವರನ್ನು ಪ್ರತಿಷ್ಟಾಪಿಸುವಾಗಿನ ಮೂಲಭೂತ ನಿಯಮ ರೀತಿ ರಿವಾಜುಗಳನ್ನು ಪೂರೈಸಬೇಕಾಗಿಲ್ಲ. ಪಂಚಭೂತಾತ್ಮಕವಾದ ನೆಲೆಯಲ್ಲಿ ತುಳಸೀಗಿಡವನ್ನು ಹಾಗೆಯೇ ಪ್ರಕಟಗೊಳಿಸಬಹುದು. ದೇವರುಗಳ ಫ‌ಲಕ ಚೌಕಗಳನ್ನು ಗಿಡದ ಕಟ್ಟೆಗೆ ಕಟ್ಟಿಹಾಕುವುದು ಶಾಸ್ತ್ರಕ್ಕೆ ವಿರೋಧವಾದ ಕ್ರಮವಾಗುತ್ತದೆ. ಆಗಮ ಶಾಸ್ತ್ರವು ನಿರೂಪಿಸುವ ಸಂಧಾನ ಕ್ರಮದಲ್ಲಿ ಈ ಜೋಡಣೆಗಳು ಅಚ್ಚುಗಳು ತಾಳೆಯಾಗುವುದಿಲ್ಲ.

ಹಲವಾರು ಬೀದಿಗಳಲ್ಲಿ ಖಾಲಿ ಜಾಗೆಗಳ ಗೋಡೆಗಳಿಗೆ ಕಾಪೌಂಡ್‌ಗಳಿಗೆ ಧಾರಾಳವಾಗಿ ಲಕ್ಷಿ$¾ ಗಣಪತಿ ಈಶ್ವರ ಮಾರುತಿ ಪಾರ್ವತಿ ಸರಸ್ವತಿ ಮೊದಲಾದ ದೇವರ ಅಚ್ಚುಗಳು ಅಂಟಿಸಿರುತ್ತಾರೆ. ಸಾರ್ವಜನಿಕರು ಮನಬಂದಂತೆ
ಮೂತ್ರವಿಸರ್ಜನೆ ಮಾಡಬಾರದು ಎಂಬ ಕಾರಣಕ್ಕಾಗಿ ಈ ಕ್ರಮ ಚಾಲ್ತಿಗೆ ಬಂದಿದೆ. ಆದರೆ ಇದು ತಪ್ಪು ಸಂಧಾನವಾಗಿದೆ. ದೇವರ ವಿಷಯದಲ್ಲಿ ಕೆಲವು ನಿಯಮಗಳಿರುತ್ತವೆ. ಒಂದೋ ದೇವರು ಎಲ್ಲಾ ಕಡೆಗೂ ಇದ್ದಾನೆ ಎಂದು ತಿಳಿದು ಆರಾಧಿಸುವ ಕ್ರಮ ಒಳಿತು. ದೇವರನ್ನು ಕೂರಿಸುವುದೇ ಆದರೆ ಅದಕ್ಕೆ ನಿಯಮಗಳುಂಟು. ನಿಯಮ ಪಾಲಿಸದ ಕ್ರಮ ಸಮಂಜಸವಾಗದು ಎಂಬುದು ಗಮನಾರ್ಹ.



No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...