Friday, 23 March 2018

ಗ್ರಹದೋಷಕ್ಕೆ ವಾಸ್ತು ಪರಿಹಾರ

ಅಥವಾ ಕಟ್ಟಿಸುತ್ತಾರೆ. ಆದರೆ ವಿನಾಕಾರಣ ಮನೆಯಲ್ಲಿ ಜಗಳ, ಅಶಾಂತಿ, ಅನಾರೋಗ್ಯದ ವಾತಾವರಣವಿರುತ್ತದೆ. ಆದರೆ ಇದೇಕೆ ಹೀಗೆ ಎಂಬ ಪ್ರಶ್ನೆಗೆ ಪ್ರತಿಯೊಬ್ಬ ಮನುಷ್ಯನು ನವಗ್ರಹಗಳ ಅಧೀನವಾಗಿರುತ್ತಾನೆ. ವಾಸ್ತುಶಾಸ್ತ್ರವು ನವಗ್ರಹಗಳ ಸ್ಥಿತಿಗೆ ಅನುಗುಣವಾಗಿ ಮನುಷ್ಯನಲ್ಲಿ ಏರಿಳಿಕೆಯನ್ನು ಉಂಟು ಮಾಡುತ್ತವೆ.

ಯಾವ ಗ್ರಹದಿಂದ ಯಾವ ತೊಂದರೆ ಎದುರಾಗಬಹುದು, ಅದಕ್ಕೆ ಸುಲಭ ಪರಿಹಾರವೇನು ಎಂದು ತಿಳಿದುಕೊಳ್ಳೋಣ.

ರವಿ ಗ್ರಹ : 


ಮನೆ ಅಥವಾ ನಿವೇಶನ ಕೊಳ್ಳಲು ಹೋದಾಗ ತೊಂದರೆಗಳು ಉಂಟಾಗುತ್ತಿದ್ದರೆ ರವಿ ಯಂತ್ರವನ್ನು ಸ್ಥಾಪಿಸಿ ಪೂಜಿಸಿದರೆ ಒಳ್ಳೆಯದಾಗುತ್ತದೆ. ಮಂತ್ರ : ಓಂ ಸೂರ್ಯಾಯ ನಮಃ. ಈ ಮಂತ್ರವನ್ನು 108 ಬಾರಿ ಜಪಿಸಬೇಕು.

ಚಂದ್ರ ಗ್ರಹ : 


ಯಾವುದೇ ಮನೆ, ಅಂಗಡಿ, ಕಚೇರಿ, ಕಾರ್ಖಾನೆ, ಕಾರ್ಯಾಲಯದಲ್ಲಿ ಆಗಾಗ್ಗೆ ಅಪಘಾತ, ಲುಕ್ಸಾನ ಸಂಭವಿಸುತ್ತಿದ್ದರೆ ಚಂದ್ರ ಯಂತ್ರವನ್ನು ಸ್ಥಾಪಿಸಿ ಪೂಜಿಸಬೇಕು. ಮಂತ್ರ : ಓಂ ಚಂದ್ರಾಯ ನಮಃ ಅಥವಾ ಸೌಂ ಸೋಮಾಯ ನಮಃ. 108 ಬಾರಿ ಜಪಿಸುವುದು ಒಳ್ಳೆಯದು.

ಮಂಗಳ ಗ್ರಹ : 


ಮನೆಯಲ್ಲಿ ಸದಾ ಜಗಳ, ಕದನ, ಕಲಹ, ಕಾಯಿಲೆ, ಉದ್ಯೋಗದಲ್ಲಿ ವಿರೋಧಿಗಳಿಂದ ಸದಾ ತೊಂದರೆ, ಮಾನಸಿಕ ಹಿಂಸೆ, ವ್ಯಾಪಾರ ವ್ಯವಹಾರದಲ್ಲಿ ಮೋಸ ಮತ್ತಿತರ ಅಶಾಂತಿಯ ವಾತಾವರಣವಿದ್ದರೆ ಮಂಗಳ ಯಂತ್ರವನ್ನು ಸ್ಥಾಪಿಸುವುದು ಒಳ್ಳೆಯದು. ಓಂ ಭೌಂ ಭೌಮಾಯ ನಮಃ ಅಥವಾ ಓಂ ಮಂಗಳಾಯ ನಮಃ ಎನ್ನುವ ಮಂತ್ರವನ್ನು 108 ಬಾರಿ ಜಪಿಸಬೇಕು.

ಬುಧ ಗ್ರಹ : 


ವಾಸ್ತು ದೋಷವಿರುವ ಮನೆಯಲ್ಲಿ ವಾಸ ಮಾಡುತ್ತಿದ್ದರೆ, ಮನೆಯಲ್ಲಿ ಪದೇ ಪದೇ ಜಗಳ ನಡೆಯುತ್ತಿದ್ದರೆ, ಮಾಡುವ ಉದ್ಯೋಗದಲ್ಲಿ ನಷ್ಟ ಉಂಟಾಗುತ್ತಿದ್ದರೆ, ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ ಬುಧ ಯಂತ್ರವನ್ನು ಸ್ಥಾಪಿಸಬೇಕು. ಓಂ ಬಂ ಬುಧಾಯ ನಮಃ ಮಂತ್ರವನ್ನು 108 ಬಾರಿ ಜಪಿಸಬೇಕು.

ಗುರು ಗ್ರಹ : 


ಮಾಡುವ ಕೆಲಸದಲ್ಲಿ ವಿಳಂಬ ಕಾಣುತ್ತಿದ್ದರೆ, ಹಣಕಾಸಿನ ಸ್ಥಿತಿಗತಿಗಳಲ್ಲಿ ತೊಂದರೆ ಕಂಡು ಬಂದರೆ, ಆರೋಗ್ಯ, ಐಶ್ವರ್ಯ, ಲಾಭ, ನೆಮ್ಮದಿ, ಶಾಂತಿ ಬಯಸುತ್ತಿದ್ದರೆ ಗುರು ಯಂತ್ರವನ್ನು ಸ್ಥಾಪಿಸಿ ಪೂಜಿಸುವುದು ಒಳ್ಳೆಯದು. ಓಂ ಬೃಂ ಬೃಹಸ್ಪತೆಯೇ ನಮಃ ಅಥವಾ ಓಂ ಗುರವೇ ನಮಃ ಎನ್ನುವ ಮಂತ್ರವನ್ನು 108 ಬಾರಿ ಜಪಿಸಬೇಕು.

ಶುಕ್ರ ಗ್ರಹ : 


ಮಾನಸಿಕ ಹಾಗೂ ದೈಹಿಕ ತೊಂದರೆ ತೊಳಲಾಟ, ನೆಮ್ಮದಿ, ಶಾಂತಿ ಇಲ್ಲದೆ ಇರುವುದು, ಕೆಲಸ ಕಾರ್ಯದಲ್ಲಿ ಹಿನ್ನೆಡೆ, ಕ್ರಯ ವಿಕ್ರಯದಲ್ಲಿ ಅಭಿವೃದ್ಧಿ ಕಾಣದೇ ಇರುವುದು, ಮನೆ ಕಟ್ಟುವಾಗ ಪದೇ ಪದೇ ತೊಂದರೆ ಉಂಟಾಗುವುದು, ಜಮೀನು, ನಿವೇಶನ ಮಾರಾಟದಲ್ಲಿ ಅಡ್ಡಿ ಆತಂಕ ನಿವಾರಣೆಗೆ ಶುಕ್ರ ಯಂತ್ರವನ್ನು ಸ್ಥಾಪಿಸುವುದು ಒಳ್ಳೆಯದು. ಓಂ ಶುಂ ಶುಕ್ರಾಯ ನಮಃ ಮಂತ್ರವನ್ನು 108 ಬಾರಿ ಜಪಿಸಿ.

ಶನೈಶ್ಚರ ಗ್ರಹ :


 ಲೇಔಟ್‌ ನಿರ್ಮಾಣದಲ್ಲಿ ಹಿನ್ನೆಡೆ, ಬಹು ಅಂತಸ್ತಿನ ಕಟ್ಟಡ ನಿರ್ಮಾಣದಲ್ಲಿ ಅಡೆತಡೆ, ರಸ್ತೆ ನಿರ್ಮಾಣಕಾರ್ಯದಲ್ಲಿ ವಿಳಂಬ ಮತ್ತಿತರ ದೋಷ ನಿವಾರಣೆಗೆ ಶನಿಯಂತ್ರವನ್ನು ಸ್ಥಾಪಿಸಿ ಪೂಜಿಸಿ. ಓಂ ಶಂ ಶನೈಶ್ಚರಾಯ ನಮಃ ಮಂತ್ರವನ್ನು 108 ಬಾರಿ ಪಠಿಸಿ.

ರಾಹು ಹಾಗೂ ಕೇತು ಗ್ರಹ :


 ಆರೋಗ್ಯದಲ್ಲಿ ತೊಂದರೆ, ಶಾಂತಿಗೆ ಭಂಗ, ಚರ್ಮದ ಕಾಯಿಲೆ, ಮನೆ, ಅಂಗಡಿಯಲ್ಲಿ ತೊಂದರೆ ತಾಪತ್ರಯಗಳು ಉಂಟಾಗುತ್ತಿದ್ದರೆ, ವ್ಯಾಪಾರದಲ್ಲಿ ಹಿನ್ನಡೆಯುಂಟಾಗಿದ್ದರೆ, ದುಷ್ಟ ಗ್ರಹ ಪ್ರಭಾವದಿಂದ ಪೀಡಿತವಾಗಿದ್ದರೆ, ದುಸ್ವಪ್ನಗಳು ಬೀಳುತ್ತಿದ್ದರೆ ಈ ಯಂತ್ರಗಳ ಸ್ಥಾಪನೆ ಹಾಗೂ ಪೂಜೆಯಿಂದ ಒಳ್ಳೆಯದಾಗುತ್ತದೆ. ರಾಹು ಶಾಂತಿಗೆ ಓಂ ರಾಂ ರಾಹವೇ ನಮಃ, ಕೇತು ಶಾಂತಿಗೆ ಓಂ ಕೇಂ ಕೇತುವೇ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು.

No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...