Monday, 30 July 2018

ಮನೆಯ ನೈಋತ್ಯ ಮೂಲೆಯಲ್ಲೇ ಕುಟುಂಬ ಸೌಖ್ಯ

ಮನೆಯ ನೈಋತ್ಯ ಮೂಲೆಯು ಇತರ ಯಾವುದೇ ಭಾಗಗಳಿಗಿಂತ ಹೆಚ್ಚು ಎತ್ತರದಲ್ಲಿ ಇರುವುದು ಸೂಕ್ತ. ಹಾಗೆಯೇ ಮನೆಯ ಸುತ್ತಲೂ ಕಟ್ಟುವ ಗಡಿ ಗೋಡೆಯ ವಿಚಾರದಲ್ಲಿಯೂ ನೈಋತ್ಯ ಭಾಗದ ಗಡಿಗೋಡೆ ಇತರ ದಿಕ್ಕಿಗಿಂತಲೂ ತುಸು ಹೆಚ್ಚೇ ಎತ್ತರವನ್ನು ಕಾಯ್ದುಕೊಳ್ಳಬೇಕು. ವಿಷಮತೆಗಳನ್ನು ತಂದೊಡ್ಡುವ ಸ್ಪಂದನಗಳನ್ನು ತಡೆದು ಒಳ್ಳೆಯ ಪರಿಣಾಮಗಳನ್ನು  ನಿರೀಕ್ಷಿಸಬಹುದು. ಇದರಿಂದ ಮನೆಯ ಜನರಿಗೆ ಒಳ್ಳೆಯ ಭವಿಷ್ಯಕ್ಕೆ ಇದು ಸಕಾರಾತ್ಮಕವಾಗಿರುತ್ತದೆ. 

ಹಾಗೆಯೇ ಈ ದಿಕ್ಕಿನಲ್ಲಿ ಇಡುವ ಕಬ್ಬಿಣದ ಪೆಟ್ಟಿಗೆಯ ಕುರಿತಂತೆ ಎಚ್ಚರ ಬೇಕೇ ಬೇಕು. ಉತ್ತರ ಅಥವಾ ಪೂರ್ವ ದಿಕ್ಕುಗಳಿಗೆ ಮುಖ ಮಾಡುವಂತೆ ಈ ಪೆಟ್ಟಿಗೆಗಳನ್ನು ಕೂಡಿಸಬೇಕು. ಪಶ್ಚಿಮ ಅಥವಾ ದಕ್ಷಿಣ ದಿಕ್ಕುಗಳನ್ನು ಒಳಗೊಳ್ಳುವ ಮೂಲೆಯ ಭಾಗವೇ ನೈಋತ್ಯ ದಿಕ್ಕಾಗಿದೆ. ಅಷ್ಟದಿಕಾ³ಲಕರಲ್ಲಿ ಒಬ್ಬನಾದ ನಿಯತನ ಆಳ್ವಿಕೆಗೊಳಪಟ್ಟ ದಿಕ್ಕು ಇದು. ಜೀವ ತತ್ವಕ್ಕೆ ಬೇಕಾದ ನೀರಿನ ವಿಚಾರವನ್ನು ನಿಯಂತ್ರಿಸುವ ಮೂಲೆ ಇದು. ಮನೆಯ ಕುರಿತಾದ ಮಹಡಿಯ ಮೆಟ್ಟಿಲುಗಳನ್ನು ಕೂಡಾ ನೈಋತ್ಯಕ್ಕೆ ಸಮಾವೇಶಗೊಳಿಸುವ ರಚನೆ ಇರಬೇಕು. ಈ ರೀತಿಯ ಮಹಡಿ ಮೆಟ್ಟಿಲುಗಳು ಯಶಸ್ಸನ್ನು ಸಂಪಾದಿಸುವ ಎತ್ತರಕ್ಕೆ ತನ್ನ ಸ್ಪಂದನವನು ಕ್ರೋಢೀಕರಿಸಿಕೊಳ್ಳುತ್ತದೆ. ಅನುಮಾನವಿಲ್ಲ. 
ಮನೆಗೆ ಬೇಕಾದ ನೀರನ್ನು ಹಿಡಿದಿಡುವ ತೊಟ್ಟಿ ಅಥವಾ ವಾಟರ್‌ ಟ್ಯಾಂಕ್‌ ನೈಋತ್ಯ ಮೂಲೆಯಲ್ಲಿ ಕೂಡಿಸುವುದು ಒಳ್ಳೆಯದು. ನೀರಿನ ಸಂಬಂಧವಾದ ಸಲಿಲತೆ ಒದಗದೆ ಇರುವ ನೀರಿನ ಕುರಿತಾದ ಕೊರತೆಗೆ ಇದು ಶುಭದಾಯಕ. ಒಂದೊಮ್ಮೆ ನಿರ್ವಾಹವಿಲ್ಲದೆ ಅನಿವಾರ್ಯವಾಗಿ ಅಗ್ನಿಮೂಲೆಯಲ್ಲೋ, ವಾಯುವ್ಯದಲ್ಲೋ ನೀರಿನ ತೊಟ್ಟಿ ಇಡುವ ಅನಿವಾರ್ಯತೆ ಒದಗಿದಲ್ಲಿ ಅಂಥ ನೀರಿನ ತೊಟ್ಟಿಗಿಂತಲೂ ಎತ್ತರ ಎತ್ತರ ಹೊಂದುವ ಹಾಗೆ ನೈಋತ್ಯ ಮೂಲೆಯಲ್ಲಿ ಗೋಡೆಯ ಮಟ್ಟವನ್ನು ಕಾಯ್ದುಕೊಳ್ಳಬೇಕು. ಜೊತೆಗೆ ನೈಋತ್ಯ ಮೂಲೆ ನೇರವಾದ ಕೋನವನ್ನು ಹೊಂದಿರಬೇಕೇ ವಿನಾ ಅಂಕುಡೊಂಕಾಗಿ ಇರಕೂಡದು. ಹೀಗೇನಾದರೂ ಆದರೆ ಮುಖ್ಯವಾಗಿ ರಕ್ತ ಪರಿಚಲನೆಗೆ ಸಂಬಂಧಿಸಿದ ಏರುಪೇರುಗಳು ಮನೆಯ ಜನರಲ್ಲಿ ಉಂಟಾಗಬಹುದು. ಅಂತರ್ಗತ ಭೂಜಲ ಮನೆಯ ಪರಿಧಿಯಲ್ಲಿ ಒಣಗಿಬಿಡಬಹುದು. 

ಈ ದಿಕ್ಕಿನಲ್ಲಿ ಬಾವಿಗಳು, ಬೋರವೆಲ್‌ಗ‌ಳು, ನೀರಿನ ಸಂಪು ಇರಬಾರದು. ನೀರಿನ ಕೊಳಾಯಿಯನ್ನು ಕೂಡಾ ಇಡಬಾರದು. ಇದರಿಂದ ವಿಧವಿಧವಾದ ಹಾನಿಗೆ ಎಡೆ ಮಾಡಿಕೊಡುವುದನ್ನು ಮನೆಯ ಜನವೇ ನಿರ್ಮಿಸಿದಂತಾಗುತ್ತದೆ. ವಿಶೇಷವಾಗಿ ಮಕ್ಕಳು ಮತ್ತು ಸ್ತ್ರೀಯರಿಗೆ ತೊಂದರೆ ಎದುರಾಗುವ ವಿಚಾರ ತಲೆದೋರುತ್ತದೆ. ನಿರಂತರವಾದ  ರೋಗರುಜಿನಗಳಿಗೆ ವ್ಯಾಧಿಗಳಿಗೆ ಅವಕಾಶ ಉಂಟಾಗಿ ಆಯಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಈ ಮೂಲೆಯಲ್ಲಿ ಸರ್ವಥಾ ಚರಂಡಿಗಳು ಹಾಳುಗುಂಡಿಗಳು ಇರದಂತೆ ನೋಡಿಕೊಳ್ಳುವುದು ಕ್ಷೇಮ. ದಕ್ಷಿಣ ಮತ್ತು ಪಡುವಣ ದಿಕ್ಕುಗಳಲ್ಲಿ ಕೂಡಾ ಈ ಕ್ರಮವನ್ನು ಅನುಸರಿಸಬೇಕು.

ಒಟ್ಟಿನಲ್ಲಿ ನೈಋತ್ಯ ಮೂಲೆಯ ಸಮತೋಲನ ಸಿದ್ಧಿಯಿಂದ ಕುಟುಂಬ ಜೀವನದಲ್ಲಿ ಉತ್ತಮವಾದ ನೆಮ್ಮದಿ ಪರಸ್ಪರ ತಿಳುವಳಿಗೆ ಸಂತೋಷ ನೆಮ್ಮದಿಗಳನ್ನು ಸಂಪಾದಿಸಿಕೊಳ್ಳಬಹುದು. ದೇಹಾರೋಗ್ಯದ ವಿಚಾರದಲ್ಲಿ ಲವಲವಿಕೆ ಉತ್ಸಾಹ ಪರಿಪಕ್ವ ಸಕಾರಾತ್ಮಕ ಸ್ಪಂದನಗಳು ಸಾಧ್ಯ. ಹೀಗಾಗಿ ನೈಋತ್ಯ ದಿಕ್ಕಿನ ಪರಿಣಾಮಗಳು ವಾಸ್ತು ಶಾಸ್ತ್ರದಲ್ಲಿ ಅತಿಮುಖ್ಯವಾದ ಘಟಕಗಳಾಗಿ ವಿಂಗಡಿಸಲ್ಪಟ್ಟಿವೆ. ಸಾಲದ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಇದು ಸಂಪನ್ನತೆಯನ್ನು ನಿರ್ಮಿಸಬಹುದಾದ ಅಂಶಗಳಾಗಿದೆ. ವಿಶೇಷವಾಗಿ ಸ್ತ್ರೀಯರ ಪಾಳಿನ ನೆಮ್ಮದಿಗೆ ವಿಶೇಷ ಗಟ್ಟಿತನ ದೊರಕುತ್ತದೆ. ಇದರಿಂದಾಗಿಯೇ ಗಂಡಸರ ಪಾಲಿನ ನೆಮ್ಮದಿ ಮಾನಸಿಕ ಶಾಂತಿ ಅಂತರ್ಗತ ಉತ್ಸಾಹಗಳಿಗೆ ದಾರಿ ಸಿಗುತ್ತದೆ. 

Tuesday, 17 July 2018

ಮನೆ ಕಟ್ಟುವಾಗ ವಾಸ್ತು ನೋಡಿ


ಮನೆಯನ್ನು ಕಟ್ಟುವಾಗ ಅನೇಕ ಸಣ್ಣ ಸಂಗತಿಗಳನ್ನು ನೆನಪಿನಲ್ಲಿಡಬೇಕಾದದ್ದು ಅವಶ್ಯವಾಗಿದೆ. ಮನೆಯ ಈಶಾನ್ಯ ಮೂಲೆ ಅಗ್ನಿಮೂಲೆ, ವಾಯು ಮೂಲೆಗಳಲ್ಲಿ ಅಡುಗೆ ಮನೆ, ಮಲಗುವ ಕೋಣೆ, ಬಚ್ಚಲು ಮನೆ, ಪಡಸಾಲೆ.
ದೇವರ ಮನೆ, ಇತ್ಯಾದಿಗಳನ್ನೆಲ್ಲ ಮೀಸಲಿಡಬೇಕೆಂಬ ಸಂಗತಿ ಬೇರೆ. ಆದರೆ ಈ ಎಲ್ಲಾ ವಿಚಾರಗಳ ಹೊರತಾಗಿ ಕೆಲವು ಅನುಸರಿಸಬೇಕಾದ ವಿಚಾರಗಳು ಕೂಡಾ ಮುಖ್ಯವಾಗಿದೆ. ಇದರಿಂದ ಮನೆಯೊಳಗಿನ ಶಾಂತಿ, ಸಮಾಧಾನ, ಸಮೃದ್ಧಿ, ಆರೋಗ್ಯ, ನಗು, ಕೇಕೆ, ಸುಖ, ಸಂತೋಷಗಳೆಲ್ಲ ವೃದ್ಧಿಗೊಳ್ಳಲು ಅವಕಾಶ ಒದಗಿ ಬರುತ್ತದೆ. ಇಲ್ಲದಿದ್ದರೆ ಅನೇಕ ಕಿರಿಕಿರಿಗಳು ಎಲ್ಲಾ ವಿಚಾರಗಳಲ್ಲೂ ಮೂಡಿಬಂದು ಅನೇಕ ಅಶಾಂತಿ, ಅಸಮಾಧಾನಗಳಿಗೆ ದಾರಿ ಮಾಡಿಕೊಡುತ್ತದೆ.
ಮನೆಯಲ್ಲಿ ರಸ್ತೆಯಿಂದ ಮನೆಯೊಳಗಿನ ಕಾಂಪೌಂಡ್‌ ಒಳಗೆ ಕಾಲಿಡಲು, ಇರುವ ಗೇಟ್‌ ಯಾವಾಗಲೂ ಮನೆಯ
ಹೆಬ್ಟಾಗಿಲಿಗಿಂತ ಚಿಕ್ಕದಿರಬೇಕು ಹಾಗೂ ಹೆಬ್ಟಾಗಿಲು ಎತ್ತರದಲ್ಲಿರಬೇಕು. ಇತ್ತೀಚೆಗೆ, ಕೇಂದ್ರ ಸರ್ಕಾರಿ ಕೆಲಸದಲ್ಲಿದ್ದು
ನಿವೃತ್ತಿ ಹೊಂದಿದವರೊಬ್ಬರು ಇದ್ದ ತಮ್ಮ ಮನೆಯನ್ನು ಹಳೆ ರೀತಿಯಿಂದ ಹೊಸಮಾದರಿಗೆ ನವೀಕರಣಗೊಳಿಸುವ
ಸಂದರ್ಭದಲ್ಲಿ ಕಾಪೌಂಡ್‌ ಗೇಟನ್ನು ತುಸು ಎತ್ತರಿಸಿ ನವೀನ ಕುಸುರಿಯಲ್ಲಿ ನಿಯೋಜಿಸಿ ಹೆಬ್ಟಾಗಿಲಿಗಿಂತ ದೊಡ್ಡದಾಗಿಸಿದರು.
ಆದರೆ ಕೆಲವೇ ದಿನಗಳಲ್ಲಿ ಚೆನ್ನಾಗಿದ್ದ ಅವರ ಆರೋಗ್ಯ ಹದಗೆಡಲು ಪ್ರಾರಂಭವಾಯಿತು. ಈ ಅಸಮತೋಲನ ಅಳತೆಗಳು ಸರಿಹೋದ ಮೇಲೆ ಮತ್ತೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತು.
ಮನೆಯ ಟೆರೆಸ್‌ ಅಥವಾ ಮಹಡಿ ಮೆಟ್ಟಿಲುಗಳನ್ನು ನಿರ್ಮಿಸುವಾಗ ಪೂರ್ವದಿಂದ ಪಶ್ಚಿಮಕ್ಕೆ ಮುಖವಿರಿಸಿ ಏರುವಂತಿದ್ದರೆ ಸೂಕ್ತ. ಉತ್ತರದಿಂದ ದಕ್ಷಿಣ ದಿಕ್ಕಿಗೆ ಮುಖವಾಗುವಂತೆ ಇದ್ದರೂ ಸರಿಯೆ. ಈ ಅಂಶವನ್ನು ಪರಿಪಾಲಿಸಿದಲ್ಲಿ ಉತ್ತಮ ಅದೃಷ್ಟವು ಶೀಘ್ರವಾಗಿ ಒದಗಿಬರಲು ಅವಕಾಶವಾಗುತ್ತದೆ. ಮನೆಯ ಸೈಟಿನಲ್ಲಿ ಗುದ್ದಲಿ ಪೂಜೆ ಕೂಡ ಪ್ರಮುಖವಾದದ್ದು. ದಕ್ಷಿಣ ಹಾಗೆಯೇ ಪೂರ್ವ ದಿಕ್ಕುಗಳು ಈ ಸಂದರ್ಭದಲ್ಲಿ ಪ್ರಥಮವಾಗಿ ಅಗೆಯಬಾರದು. ಪೂರ್ವ ದಿಕ್ಕಿನಲ್ಲಿ ಅಗೆಯುವ ವಿಚಾರ ಕೈಗೊಂಡಾಗ ಉತ್ತರ ದಿಕ್ಕಿನಲ್ಲೂ ಅಗೆತ ಪ್ರಾರಂಭಿಸಬೇಕು. ಇದರಿಂದ ಮನೆಯ ಎಲ್ಲಾ ವಿಚಾರಗಳಲ್ಲೂ ತೊಂದರೆ ಇಲ್ಲದೆ ಸುಸೂತ್ರವಾಗಿ ಮುಂದುವರೆಯುತ್ತದೆ.
ದಕ್ಷಿಣ ದಿಕ್ಕಿಗೆ ಪೂರಕವಾಗಿ ಹೊರಗಿನ ವರಾಂಡ ಕಟ್ಟುವ ನಿರ್ಣಯ ನಡೆಸಿದಲ್ಲಿ ಆಗ್ನೇಯ ದಿಕ್ಕಿನಲ್ಲಿ (ಪೂರ್ವ ದಕ್ಷಿ$ಣ ಮೂಲೆಯ ಭಾಗ) ಕೋಣೆ ಇದ್ದು ಉತ್ತರ ದಿಕ್ಕಿಗೆ ಮುಖ ಮಾಡಿದ ಬಾಗಿಲನ್ನು ಕೂಡಿಸಬೇಕು. ಮನೆಯ ಯಜಮಾನನ ಆರೋಗ್ಯ ಲವಲವಿಕೆ ಉತ್ಸಾಹಗಳಿಗೆ ಇದು ಉತ್ತಮ ವಿಚಾರವಾಗುತ್ತದೆ.
ಮನೆಯ ಮುಂಬಾಗಿಲು ವಿಷಯದಲ್ಲಿ ಎಚ್ಚರವಿರಲಿ. ನೇರ ಮುಂಬಾಗಿಲ ಎದುರಲ್ಲಿ ಒಂದು ಕಟ್ಟೆಯನ್ನೋ ಗೋಡೆಯನ್ನೋ ನಿರ್ಮಿಸಕೂಡದು. ಇದರಿಂದ ಮನೆಯ ಒಳಗೆ ಆಗಮಿಸುವ ಉತ್ತಮ ಸ್ಪಂದನಗಳು, ಸೌಭಾಗ್ಯ ಅಂಶಗಳು ಬರುವ ಅದೃಷ್ಟಕ್ಕೆ ತಡೆ ನಿರ್ಮಿಸಿದಂತಾಗಿ ಬಿಡುತ್ತದೆ.
ಹೀಗಾಗಿ ತಾನಾಗಿ ಬರುವ ಒಳ್ಳೆ, ಸೌಭಾಗ್ಯದ ವಿಚಾರಗಳನ್ನು ನಾವಾಗಿ ಗೋಡೆ ಅಥವಾ ಕಟ್ಟೆ ಕಟ್ಟಿ ತಡೆಯಲು ಹೋಗಬೇಡಿ. ಕಟ್ಟೆ ಇರುವುದನ್ನು ಬಯಸಿ, ಕಟ್ಟುವುದಾದಲ್ಲಿ ಮುಂಬಾಗಿಲ ಅಕ್ಕಪಕ್ಕ ಬರುವಂತೆ ಕಟ್ಟಿ. ಮುಂಬಾಗಿಲಿಗೆ ಯಾವರೀತಿ ತಡೆಯೂ ಆಗದಂತೆ ನೋಡಿಕೊಳ್ಳಿ. ಮನೆಯ ಸುರಕ್ಷಿತಗಾಗಿನ ಗೋಡೆಯೂ ಕೂಡ, ಇದ್ದರೂ,
ಕಟ್ಟಲ್ಪಟ್ಟರೂ ಮುಂಬಾಗಿಲ ಉದ್ದ, ಅಡ್ಡ ಅಗಲಗಳಿಗೆ ಯಾವುದೇ ರೀತಿ ತೊಂದರೆ ಆಗದೇ ಇರುವಂತೆ ಇರಲಿ. ಈವಿಚಾರವನ್ನು ಮರೆಯದೇ ಗಮನ ಹರಿಸುವುದು ಸೂಕ್ತ. ಮನೆಯ ಸೊಗಸು ಹಾಗೂ ಭದ್ರತೆಯ ವಿಚಾರಗಳನ್ನು ಯಾವಾಗಲೂ ಮರೆಯಬಾರದು.

Thursday, 12 July 2018

ಮನೆಯ ಶುಚಿಯೂ, ವಾಸ್ತು ವಿಚಾರವೂ....

ಭಾರತೀಯ ವಾಸ್ತುಕಲೆಯ ವಸ್ತು ಸಂಯೋಜನೆಗಳನ್ನು ಸೂಕ್ತರೀತಿಯಲ್ಲಿ ಹೊಂದಿಸಿಡಲು ಒತ್ತಿ ಹೇಳುತ್ತದೆ. ಉದಾಹರಣೆಗೆ ಪತ್ರವಾದ ತುಳಸಿ, ದೂರ್ವಾಂಕುರ, ಶ್ರೀಗಂಧ, ಚಂದನ, ರುದ್ರಾಕ್ಷಿ$, ಶಂಖ, ಸಾಲಿಗ್ರಾ, ಗಂಟೆ, ಕಿರುಗಂಟೆ, ಸುವಾಸನಾ ಬತ್ತಿ, ಕಡ್ಡಿ, ಆರತಿಯ ಸಲಕರಣೆಗಳು ದೇವರ ಮನೆಯಲ್ಲಿಯೇ ಇರಬೇಕು. ನಾವು ಅದನ್ನು ಇನ್ನೆಲ್ಲಿಯೋ ಇಡಕೂಡದು. ಪುಸ್ತಕಗಳನ್ನು ಓದುವ ಕೋಣೆ, ಮಲಗುವ ಕೋಣೆಗಳಲ್ಲಿ ಹಜಾರದಲ್ಲಿಡಬೇಕೇ ಧಿವಿನಾ ಉಳಿದ ಕಡೆ ಅಲ್ಲ. ಇನ್ನು ಹಜಾರದಲ್ಲಾಗಲೀ, ಮಲಗುವ ಕೋಣೆಯಲ್ಲಾಗಲೀ ಪುಸ್ತಕಗಳ ರಾಶಿ ತುಂಬಿರಬಾರದು. ಪುಸ್ತಕಗಳು ನಮ್ಮ ಸಂಸ್ಕೃತಿಯಲ್ಲಿ ಧಿದೇಧಿವಿಸರಸ್ವತಿಯ ವಾಸಸ್ಥಾನ. ಪ್ರತ್ಯಕ್ಷ ಅದು ಸರಸ್ವತಿಯೇ ಆಗಿದೆ.

ಹೀಗಾಗಿ ಪಾವಿತ್ರತೆಯನ್ನು ಉಳಿಸಿಕೊಳ್ಳುವ ವಿಚಾರ ಪುಸ್ತಕಗಳ ಬಗೆಗೆ ಅನಿವಾರ್ಯವಾಗಿದೆ. 

ನಿಯತಕಾಲಿಕೆಗಳು ಹಜಾರದಲ್ಲಿರುವುದು ಸೂಕ್ತ. ನಿಯತಕಾಲಿಕೆಗಳು ಹೊಸಕಾಲದ ಆವಿಷ್ಕಾರ. ಅವು ರದ್ದಿಗೆ ಸೇರಲ್ಪಡುವ ಧಿವಿಚಾರವನ್ನು ಗಮನಿಸಿ ಹಜಾರದಲ್ಲಿಡುವುದು ತಾರ್ಕಿಕವಾಗಿಸರಿ. ಸಂಗ್ರಹ ಯೋಗ್ಯ ಪುಸ್ತಕಗಳು ಓದಿನ ಕೋಣೆಯಲ್ಲಿರಲಿ. ಅದು ಹಜಾರದಲ್ಲಿರಬಾರದು.

ರದ್ದಿ ಪೇಪರುಗಳು ಇತರ ಉಪಯೋಗಧಿವಿರದ ಬಾಟಲು, ಕರಡಿಗೆ ಪೊಟ್ಟಣ, ಪ್ಲಾಸ್ಟಿಕ್‌ ತ್ಯಾಜ್ಯ, ಟೂತ್‌ ಪೇಸ್ಟ್‌ ಟ್ಯೂಬುಗಳು ತುಕ್ಕು ಹಿಡಿದ ವಸ್ತುಗಳು, ಉಪಯೋಗಕ್ಕೆ ಬಾರದ ಆದರೆ ನೋಡಲು ಅನ್ಯ ಕಾರಣಗಳಿಗಾಗಿ ಇಟ್ಟುಕೊಂಡ ಹಗರಣಗಳನ್ನು ಸೂಕ್ತವಾಗಿ ಲೇವಾರಿ ಮಾಡಿ ಮನೆಯಿಂದ ದೂರವಿಡುವುದೇ ಕ್ಷೇಮ. ಪೀಠೊಪಕರಣಗಳ ವಿಚಾರದಲ್ಲಿ ಜಾಗ್ರತೆ ಇರಲಿ. ಅವು ಎಂಥೆಂಥದೋ ರೀತಿಯಲ್ಲಿ ಜೋಡಿಸಲ್ಪಡುವ ವಿಚಾರ ಯುಕ್ತವಾಗದು. ಹಲವು ಸಲ ಸೋಫಾಗಳು, ಕುರ್ಚಿಗಳು ಮನೆಗೆ ಬರುವ ಅಭ್ಯಾಗತರನ್ನು ಒಂದು ರೀತಿಯ ದಿವ್ಯ ಕಲ್ಪನಾ ಲಹರಿಗೆ ಒಯ್ಯುವ ಹಾಗೆ ಇರಲಾರದು. ಬೇಕಾಬಿಟ್ಟಿ ಇರುತ್ತದೆ. ಬದಲು ಅಂದವಾಗಿ ಜೋಡಿಸಿ ಇಡಲ್ಪಟ್ಟರೆ ಅತಿಥಿಗೆ ಒಂದು ಸುಂದರ ತಾಣಕ್ಕೆ ಹಾರ್ದಿಕವಾದ ತೃಪ್ತಿಯೊಂದಿಗೆ ಬಂದ ಅನುಭವ ಉದಿಸಿ ಒಳ್ಳೆಯ ವಿಚಾರವನ್ನು ಹಂಚಿಕೊಳ್ಳಬಹುದು. ಮನೆಗೆ ಬರುತತಿರುವಂತೆ ಹೊರಗೆ ಓಡಿ ಹೋಗುವ ಅನುಭವ ಆಗಬಾರದು.

ಅಡುಗೆ ಮನೆಯಲ್ಲಿ ಅಗ್ನಿಗೆ ಸಂಬಂಧಿಸಿದ ಸಲಕರಣೆಗಳು ಒಲೆಯ ಬೆಂಕಿಯಲ್ಲಿ ಅಡುಗೆಗೆ ಒದಗಿ ಬರುವ ಸರಂಜಾಮುಗಳೇ ಇರಬೇಕು. ಆಗ್ನೇಯ ದಿಕ್ಕನ್ನು ಅಡುಗೆ ಕೋಣೆಯ ಬಗೆಗೆ ಅಡುಗೆಗೆ ಬೇಕಾದ ಇತರ ಘಟಕಗಳಾದ ಗ್ಯಾಸ್‌ ವಿದ್ಯುತ್‌ ಒಲೆ, ಒಲೆಯ ಹತ್ತಿರವೇ ಆಗಿರದ ಹಾಗೆ ಆದರೂ ಆಗ್ನೇಯನ ಸಮೀಪಕ್ಕೇ ಫ್ರಿಡುj, ಪಾತ್ರೆ ಹರಿವಾಣ ಲೋಟ ಮುಚ್ಚಳಗಳು, ಇತ್ಯಾದಿ ಅಂದವಾಗಿ ಜೋಡಿಸಿಕೊಂಡಿರಬೇಕು. ಅಡುಗೆ ಮನೆಯಲ್ಲೇ ಅಥವಾ ಹಜಾರದಲ್ಲೇ ಊಟದ ಸ್ಥಳ ಇರಬಾರದು. ದೇವರ ಮನೆ ಅಥವಾ ಪೀಠ ಕೂಡಾ ಊಟದ ಸ್ಥಳಕ್ಕೂ ದೇವರ ಪೀಠಕ್ಕೂ ದೇವರ ಪೀಠದಿಂದ ಸ್ನಾನಗೃಹಗಳ ಶೌಚಾಲಯಗಳಿಗೂ ಅಂತರ ಇರಬೇಕು. ಒಂದೊಂದು ಕಡೆಯ ವಸ್ತುಗಳು ಇನ್ನೊಂದೆಡೆ ಬಂದಿರಬಾರದು. ಊಟದ ಟೇಬಲ್ಲೇ ಗಮನಿಸಿ, ಹಲವರಿಗೆ ಊಟದ ಟೇಬಲ್ಲಿನ ಪುಸ್ತಕ ಪೇಪರುಗಳನ್ನು ಇಟ್ಟು ಓದದೆ ಇದ್ದರೆ ಸಮಾಧಾನವೇ ಆಗದು. ಊಟದ ಎಂಜಲು ಮುಸುರೆಗಳಿರುವ ತಿನಿಸು.  ಅನ್ನ ಸಾಂಬಾರುಗಳು ಪುಸ್ತಕ ಅಥವಾ ಪೇಪರುಗಳಿಗೆ ಅಂಟಿಕೊಂಡು ಕೊಳೆಯಾಗುತ್ತದೆಂಬ ಅರಿವು ಇವರಿಗೆ ಬಾರದು. ಇನ್ನು ಕೆಲವರು ಟೂತ್‌ ಬ್ರಷ್‌ ಪೇಸ್ಟ್‌ ತಂದು ಮಲಗುವ ಕೋಣೆಯಲ್ಲಿಡುವುದೂ ಇದೆ. ದವಸ ದಾನ್ಯಗಳನ್ನು ಹಜಾರದಲ್ಲಿಡುವುದೂ ಇದೆ. ಅಂದವಾದ ಜೋಡಣೆಗಾಗಿ ಸಹಕರಿಸಿ ಮುಂದಾಗದಿರುವ ಪರಿಸ್ಥಿತಿ ಇದೆ. ಇದರಿಂದ ಸಕಾರಾತ್ಮಕ ಶಕ್ತಿ ಸುಳಿಗಳು, ಅಲೆಗಳು, ಹೊಯ್ದಾಟಗಳು, ತರಂಗ ಧಿದಾಡ್ಯìತೆಗಳು ಸೊರಗುತ್ತವೆ. ಮನೆಯೊಂದು ಪುಟ್ಟ ಅಮರಾಬತಿಯಾಗಿರಬೇಕು. ಇರಬೇಕಾದ್ದು ಇರಬೇಕಾದಲ್ಲಿಯೇ ಇದ್ದರೆ ಸೊಗಸು ಪುಟಿಯುತ್ತದೆ. ದುರ್ಗಾ ಲಕ್ಷಿ$¾à ಹಾಗೂ ಸರಸ್ವತಿಯರಿಗೆ ತಾಣ ಒದಗುತ್ತದೆ. 


Tuesday, 10 July 2018

ಮನೆಯಲ್ಲಿ ಜಗಳ, ಅಶಾಂತಿಗೆ ಈ ವಾಸ್ತು ಕಾರಣವೇ?

ವಾಸ್ತು ವಿಚಾರದಲ್ಲಿ ಜನರು ಅನೇಕ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಜನರು ಯಾವಾಗಲೂ ದಿಢೀರಾದ ಬದಲಾವಣೆಯ ಕುರಿತು ಅವಸರದಲ್ಲಿರುತ್ತಾರೆ. ಹೀಗಾಗಿ ತಾವು ಏನು ಬೇಕಾದರು ಮಾಡಲು ಸಿದ್ಧ ಎಂದು ಸಿದ್ಧರಾಗಿರುತ್ತಾರೆ. ಸಾಲ ಮಾಡಿಯಾದರೂ ಸರಿ ನಿವಾರಣೆಗಾಗಿನ ಕ್ರಮಗಳನ್ನು ಕೈಗೊಳ್ಳಲು ಪರಿಹಾರಕ್ಕಾಗಿನ ಅವಸರ ತೋರುತ್ತಾರೆ. ಇಷ್ಟೆಲ್ಲಾ ಅವಸರದಲ್ಲಿ ನಿರ್ಣಯ ಕೈಗೊಳ್ಳುವುದು ಇನ್ನೊಂದು ರೀತಿಯ ತೊಂದರೆಗೆ ಕಾರಣವಾಗುತ್ತದೆ.  ದಿಢೀರಾಗಿ ಸಮಸ್ಯೆ ಕರಗಿಹೋಗಲಾರದು. ಕರಗಿ ಹೋಗುವುದಕ್ಕಾಗಿ ಪ್ರಯತ್ನ ಇರಲಿ. ಆದರೆ ಅವಸರ ಬೇಡ. 

ಈಗ ಕಾಲದ ರೀತಿನೀತಿ ಬದಲಾಗಿದೆ ಎಂಬುದನ್ನು ಗಮನಿಸಬೇಕು. ಮನೆಯ ವಾಸ್ತು ಬದಲಾವಣೆಯ ವಿಚಾರ ಅಥವಾ ವಾಸ್ತುವಿನ ಉತ್ತಮವಾದ ಸಂಯೋಜನೆಯ ಆವಿಷ್ಕಾರಗಳ ಮೇಲಿಂದ ಒಳಿತು ಹಾಗೂ ಕೆಡಕುಗಳ ನಿರ್ಣಯ ಬೇರೆ. ಆದರೆ ಬದಲಾದ ಕಾಲ ನಡೆಸಿರುವ ಆಘಾತಗಳನ್ನು ವೈಯುಕ್ತಿಕ ನೆಲೆಯಲ್ಲಿ ತಾರ್ಕಿಕವಾಗಿ ಯೋಚಿಸಿ ಸೂಕ್ತ ಅಥವಾ ಸೂಕ್ತವಲ್ಲ ಎಂಬ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಕುಟುಂಬದ ವ್ಯಾಖ್ಯೆ ಬದಲಾಗಿದೆ. ಸಂಕೀರ್ಣವಾಗಿದೆ. ಹೆಣ್ಣುಮಕ್ಕಳು ಮನೆಯಲ್ಲಿಯೇ ಇದ್ದು ಗೃಹಸೂತ್ರಗಳನ್ನು ಪಾಲನ ಪೋಷಣೆಯ ಕೋಷ್ಟಕಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದ ಕಾಲ ಬದಲಾಗಿದೆ. ಈಗ ವಾಸ್ತು ಶಿಸ್ತು ಮನೆಗೆ ಬೇಕೇ ? ಏಕೆಂಬುದನ್ನು ಅಲ್ಲಗೆಳೆಯಲಾಗದು.
ಆದರೆ ವಾಸ್ತು ಶಿಸ್ತಿನ ಜೊತೆಗೆ ನಮ್ಮ ನಮ್ಮ ಸುತ್ತವೇ ವೈಯುಕ್ತಿಕವಾಗಿ ಪ್ರತಿಯೋರ್ವನಲ್ಲೂ ಒಂದು ಪ್ರಭಾವಲಯದ ಕಾಂತಿ ಇರುತ್ತದೆ. ಪುರುಷನಿಗೂ ಮಳೆಗೂ ನಡುವಣ ಇರುವ ಪ್ರಭಾವಳಿಯ ಸೇತು ಮತ್ತೂಂದು ರೀತಿಯದು. ಸ್ವೇಚ್ಛೆಯು ಯಾರಿಗೂ ಸರಿಯಲ್ಲ. ಸ್ವೇಚ್ಛೆಯ ಪರಿಣಾಮದಿಂದ ನಾವು ನಮ್ಮ ಸುತ್ತಲಿನ ಪ್ರಭಾವಳಿಯನ್ನು ಕಾಂತಿವಲಯವನ್ನೂ ಬಲಿಕೊಡುತ್ತಾ ಬಾಳ ಪಯಣದಲ್ಲಿ ಸೋಲುತ್ತ ಹೋಗುತ್ತೇವೆ. ನಿಮ್ಮ ಪ್ರಭಾವಲಯವನ್ನು ನಮ್ಮ ವರ್ಚಸ್ಸು ನೈತಿಕ ಶಕ್ತಿಯ ಮೂಲಕ ಸಂರಕ್ಷಿಸಿಕೊಂಡಾಗ ಮನೆಯ ಶಾಂತಿ ಒಂದೊಮ್ಮೆಗೇ ಧಕ್ಕೆ ಬರಲಾರದು. ನಮ್ಮ ದೇಹದಲ್ಲಿ ಷಟcಕ್ರಗಳು ವಿವಿಧ ನೆಲೆಯಲ್ಲಿ ತಂತಮ್ಮ ಜಾಗ್ರತಾವಸ್ಥೆ ಪಡೆದುಕೊಳ್ಳಲು ಸಾಧ್ಯವಾದಾಗ ನಮ್ಮಲ್ಲಿಯೇ ಎಲ್ಲವನ್ನೂ ನಿಯಂತ್ರಿಸುವ ಚೈತನ್ಯ ಒದಗಿ ಬರುತ್ತದೆ. 

ದಿವ್ಯದ ಸಾûಾತ್ಕಾರಕ್ಕೂ ಅವಕಾಶ ಇರುತ್ತದೆ. ಇತ್ತೀಚೆಗೆ ಮಲೆನಾಡಿನ ಒಂದು ಊರಿಗೆ ಹೋಗಿದ್ದಾಗಿನ ವಿಷಯ ವಿವರಿಸಲು ಯತ್ನಿಸುತ್ತಿದ್ದೇನೆ. ಅಲ್ಲಿ ತುಂಬಿ ತುಳುಕುವ ಶ್ರೀಮಂತಿಕೆ ಇದೆ. ಏನೂ ತೊಂದರೆ ಇರಲಾರದು ಶ್ರೀಮಂತರಿಗೆ ಎಂಬ ವಿಚಾರ ಸುಳ್ಳು ಎಂಬುದಕ್ಕೆ ಉದಾಹರಣೆಯಾಗಿ ಈ ಮನೆಯನ್ನು ಉದಾಹರಿಸಬಹುದು. ಇಲ್ಲಿ ಜಗಳಗಳಿಲ್ಲ. ಆದರೆ ಮನೆಯಲ್ಲಿನ ಶಾಂತಿ ಮಾತ್ರ ಕದಡಲ್ಪಟ್ಟಿದೆ. ಜಗಳಗಳಿರದೆಯೂ ಶಾಂತಿ ಇಲ್ಲವಾಗಿದೆ. ಕೋಟಿ ಲೆಕ್ಕವೇ ಇಲ್ಲ. ನೂರಾರು ಕೋಟಿಯ ಆಸ್ತಿ ಇದೆ.
ಅದ್ಭುತವಾದ ಮನೆ. ನೂರಾರು ಆಳುಕಾಳುಗಳು. ಆದರೆ ಮನಃಶಾಂತಿ ಇಲ್ಲ. ಏನು ಕಾರಣ? ವಾಸ್ತುವನ್ನು ಪರೀಕ್ಷಿಸಿ ಹೇಳುತ್ತೀರಾ? ಎಂದು ಮನೆಯ ಯಜಮಾನರು ವಿನಂತಿಸಿದರು. ಒಬ್ಬ ಕೋಟಿಗಳಷ್ಟು ಆಸ್ತಿಗಳ ಒಡೆಯ ಕೈ ಜೋಡಿಸಿ ವಾಸ್ತು ಪರೀಕ್ಷಿಸುತ್ತೀರಾ ಎಂದು ಅಳುಕುತ್ತಾ ಕೇಳಿದಾಗ ಕೆಲ ಲಕ್ಷಗಳ ವಿಚಾರ ಇರಲಿ ಕೆಲವು ಸಾವಿರಗಳಷ್ಟು ಹಣ ಓಡಾಡುವ ಒಬ್ಬ ಸಾಮಾನ್ಯನನ್ನಂಥವನ ಬಳಿ ವಿನಂತಿಸಿದಾಗ ನಿಜಕ್ಕೂ ನನ್ನ ಕಣ್ಣುಗಳು ಒದ್ದೆಯಾದವು. ಅವರ ಮನೆಯನ್ನು ಪರೀಕ್ಷಿಸಿದೆ. ಮನೆಯ ವಾಸ್ತು ವಿಚಾರದಲ್ಲಿ ಯಾವ ತೊಂದರೆಗಳು ಇಲ್ಲ. ಆದರೂ ತೊಂದರೆಗಳು ಧಾರಾಳವಾಗಿದ್ದವು. ಈ ತೊಂದರೆ ಬೇರೆ. 

ಮಗನು ಅಶಾಂತಿಯಲ್ಲಿದ್ದಾನೆ. ಯಾವ ತೊಂದರೆಯೂ ಇಲ್ಲ. ಸೊಸೆಯ ಜೊತೆ ಅತ್ತೆ ಮಾವ ಚೆನ್ನಾಗಿ ಹೊಂದಿಕೊಂಡೇ ಇದ್ದರು. ಆದರೆ ಮಗನಿಗೆ ಮತ್ತು ಸೊಸೆಗೆ ಸದಾ ಕಾದಾಟ, ಕಿರಿಕಿರಿಗಳು. ಹಿಂದಿನ ಕಾಲದಲ್ಲಿ ಮದುವೆಯ ಸಂದರ್ಭದಲ್ಲಿ ನವ ವಧೂವರರನ್ನು ಅಲಂಕರಿಸಿದ ಮೇನೆಯಲ್ಲಿ ಕೂಡಿಸಿ ಊರ ಬೀದಿಗಳಲ್ಲಿ ಓಲಗ, ವಾದ್ಯ, ಸಂಗೀತ ಸಲಕರಣೆಗಳೊಂದಿಗೆ ಸುತ್ತು ಹಾಕಿಕೊಂಡು ಬರುವ ಕ್ರಮವಿತ್ತು.  ಈ ಕೋಟಿ ಕೋಟಿ ಆಸ್ತಿಯ ಒಡೆಯರ ಮನೆಯಲ್ಲಿ ಗತಕಾಲದ ಮೇನೆ ಈಗಲೂ ಇದೆ. ಆದರೆ ಅದನ್ನು ಒಂದೆಡೆ ಮುರಿದು ಸೂಕ್ತವಲ್ಲದ ಕೋಣೆಯಲ್ಲಿ ಅಂದರೆ ಅಲಂಕಾರಿಕವಾಗಿ ಕಾಣುವಂತೆ ಅಂದವಾಗಿಯೇ ಕಾಣುವಂತೆ ಇರಿಸಿದ್ದಾರೆ. ಮುರಿದ ಪಲ್ಲಕ್ಕಿಯಂತೆ ಇವರ ವೈವಾಹಿಕ ಜೀವನವೂ ಮುರಿಯುತ್ತಿದೆ. ಆದರೆ ಇದೊಂದೇ ಕಾರಣವಲ್ಲ. ಅಶಾಂತಿಗೆ ಇನ್ನಷ್ಟು ಕಾರಣಗಳಿವೆ. ಆದರೆ ಇದನ್ನು ಕಾರಣವಲ್ಲ ಎಂದು ತೆಗೆದು ಹಾಕುವಂತಿಲ್ಲ. 


Friday, 6 July 2018

ಮನೆಯಲ್ಲಿ ವಾಸ್ತು ಶೈಲಿ

*ಮನೆಯ ಮುಂಬಾಗಿಲು ಪೂರ್ವ ಅಧವಾ ಉತ್ತರ ದಿಕ್ಕಿನೆಡೆಗಿರಲಿ. 

*ದಕ್ಷಿಣ ಮತ್ತು ಪೂರ್ವ ದಿಕ್ಕಿನ ಗೋಡೆಗಿಂತ ಉತ್ತರ ಮತ್ತು ಪಶ್ಚಿಮ ದಿಕ್ಕಿನ ಗೋಡೆ ಗಟ್ಚಿಮುಟ್ಟಾಗಿರಲಿ. 

*ದಕ್ಷಿಣ ಅಥವಾ ಪೂರ್ವ ಭಾಗದಲ್ಲಿ ಅಡುಗೆ ಕೋಣೆ ಇರಲಿ

* ಪಶ್ಚಿಮ ದಿಕ್ಕಿನಲ್ಲಿ ಊಟದ ಕೋಣೆ ಇದ್ದರೆ ಆರೋಗ್ಯ ವರ್ಧಿಸುತ್ತದೆ.

Monday, 2 July 2018

ಆರ್ಥಿಕ ವೃದ್ಧಿಗೆ ವಾಸ್ತು ಟಿಪ್ಸ್

ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಆದ್ದರಿಂದ ವಾಸ್ತು ನಿಮ್ಮ ಜೀವನದ ಸುಧಾರಣೆಗೆ ಸದಾ ನೆರವಾಗುತ್ತದೆ. ಉದಾಹರಣೆಗೆ ನಿಮ್ಮ ಬಳಿ ಕಾರಿದ್ದರೆ, ವಿಮಾನದಂತೆ ಮೇಲೆ ಹಾರಬೇಕೆಂದು ನೀವು ಅದರಿಂದ ನಿರೀಕ್ಷಿಸುವಂತಿಲ್ಲ. ಅದೇ ರೀತಿ ಒಳ್ಳೆಯ ವಾಸ್ತು ಕೂಡ ನಿಮ್ಮ ಹಣಕಾಸು ಸ್ಥಾನಮಾನ ಮತ್ತು ಕೆಲಸದ ಸ್ಥಿತಿಗತಿಗಳನ್ನು ಸುಧಾರಿಸುತ್ತದೆ.

1.ಹಣ ಮತ್ತು ಆಭರಣಗಳನ್ನು ಅಲ್ಮೆರಾದಲ್ಲಿ ಉತ್ತರ ದಿಕ್ಕಿಗೆ ಎದುರಾಗಿ ಇರಿಸಬೇಕು.

2. ಉತ್ತರ ದಿಕ್ಕು ಬ್ಲಾಕ್ ಆಗಿದ್ದರೆ ಅದು ಸಂಪತ್ತಿಗೆ ತಡೆ ವಿಧಿಸುತ್ತದೆ.

3.ದಕ್ಷಿಣದಲ್ಲಿ ಕೊಳವೆ ಬಾವಿ ಅಥವಾ ಟ್ಯೂಬ್ ಬಾವಿ ಇದ್ದರೆ ಅದು ಆರ್ಥಿಕ ಶಕ್ತಿಗೆ ಹಾನಿಕಾರಕ.

4. ದಕ್ಷಿಣದಲ್ಲಿ ಭೂಗತ ಟ್ಯಾಂಕ್ ಅಥವಾ ಹೊಂಡವು ಹಣಕಾಸಿಗೆ ತುಂಬ ಹಾನಿಕಾರಕ. ಕೆಲವು ದೇವ, ದೇವತೆಗಳ ಚಿತ್ರ ಮತ್ತು ಕನ್ನಡಿಗಳನ್ನು ಸೂಕ್ತ ಸ್ಥಳದಲ್ಲಿ ಇರಿಸುವುದರಿಂದ ಆರ್ಥಿಕ ಲಾಭ ಮನೆಗೆ ಸಿಗಬಹುದು.

5. ಉತ್ತರದಿಂದ ಪೂರ್ವ ದಿಕ್ಕಿಗೆ ಹರಿಯುವ ನೀರು ತುಂಬ ಒಳ್ಳೆಯದು.

6. ಮನೆಯ ಅಥವಾ ಕಾರ್ಖಾನೆಯ ಈಶಾನ್ಯ ಭಾಗದಲ್ಲಿ ನೀರಿನ ಚಿಲುಮೆಯಿರುವುದು ತುಂಬ ಒಳ್ಳೆಯದು.

7. 9 ಗೋಲ್ಡ್‌ಫಿಷ್ ಮತ್ತು ಒಂದು ಕಪ್ಪು ಮೀನಿನ ಮತ್ಸ್ಯಾಲಯ ಮನೆಯ ಅಥವಾ ಕಾರ್ಖಾನೆಯ ಈಶಾನ್ಯ ಮ‌ೂಲೆಯಲ್ಲಿರುವುದು ತುಂಬ ಒಳ್ಳೆಯದು.

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...