Tuesday, 27 March 2018

ಮನೆಯ ಶುಚಿಯೂ, ವಾಸ್ತು ವಿಚಾರವೂ....

ಭಾರತೀಯ ವಾಸ್ತುಕಲೆಯ ವಸ್ತು ಸಂಯೋಜನೆಗಳನ್ನು ಸೂಕ್ತರೀತಿಯಲ್ಲಿ ಹೊಂದಿಸಿಡಲು ಒತ್ತಿ ಹೇಳುತ್ತದೆ. ಉದಾಹರಣೆಗೆ ಪತ್ರವಾದ ತುಳಸಿ, ದೂರ್ವಾಂಕುರ, ಶ್ರೀಗಂಧ, ಚಂದನ, ರುದ್ರಾಕ್ಷಿ$, ಶಂಖ, ಸಾಲಿಗ್ರಾ, ಗಂಟೆ, ಕಿರುಗಂಟೆ, ಸುವಾಸನಾ ಬತ್ತಿ, ಕಡ್ಡಿ, ಆರತಿಯ ಸಲಕರಣೆಗಳು ದೇವರ ಮನೆಯಲ್ಲಿಯೇ ಇರಬೇಕು. ನಾವು ಅದನ್ನು ಇನ್ನೆಲ್ಲಿಯೋ ಇಡಕೂಡದು. ಪುಸ್ತಕಗಳನ್ನು ಓದುವ ಕೋಣೆ, ಮಲಗುವ ಕೋಣೆಗಳಲ್ಲಿ ಹಜಾರದಲ್ಲಿಡಬೇಕೇ ಧಿವಿನಾ ಉಳಿದ ಕಡೆ ಅಲ್ಲ. ಇನ್ನು ಹಜಾರದಲ್ಲಾಗಲೀ, ಮಲಗುವ ಕೋಣೆಯಲ್ಲಾಗಲೀ ಪುಸ್ತಕಗಳ ರಾಶಿ ತುಂಬಿರಬಾರದು. ಪುಸ್ತಕಗಳು ನಮ್ಮ ಸಂಸ್ಕೃತಿಯಲ್ಲಿ ಧಿದೇಧಿವಿಸರಸ್ವತಿಯ ವಾಸಸ್ಥಾನ. ಪ್ರತ್ಯಕ್ಷ ಅದು ಸರಸ್ವತಿಯೇ ಆಗಿದೆ.

ಹೀಗಾಗಿ ಪಾವಿತ್ರತೆಯನ್ನು ಉಳಿಸಿಕೊಳ್ಳುವ ವಿಚಾರ ಪುಸ್ತಕಗಳ ಬಗೆಗೆ ಅನಿವಾರ್ಯವಾಗಿದೆ.

ನಿಯತಕಾಲಿಕೆಗಳು ಹಜಾರದಲ್ಲಿರುವುದು ಸೂಕ್ತ. ನಿಯತಕಾಲಿಕೆಗಳು ಹೊಸಕಾಲದ ಆವಿಷ್ಕಾರ. ಅವು ರದ್ದಿಗೆ ಸೇರಲ್ಪಡುವ ಧಿವಿಚಾರವನ್ನು ಗಮನಿಸಿ ಹಜಾರದಲ್ಲಿಡುವುದು ತಾರ್ಕಿಕವಾಗಿಸರಿ. ಸಂಗ್ರಹ ಯೋಗ್ಯ ಪುಸ್ತಕಗಳು ಓದಿನ ಕೋಣೆಯಲ್ಲಿರಲಿ. ಅದು ಹಜಾರದಲ್ಲಿರಬಾರದು.

ರದ್ದಿ ಪೇಪರುಗಳು ಇತರ ಉಪಯೋಗಧಿವಿರದ ಬಾಟಲು, ಕರಡಿಗೆ ಪೊಟ್ಟಣ, ಪ್ಲಾಸ್ಟಿಕ್‌ ತ್ಯಾಜ್ಯ, ಟೂತ್‌ ಪೇಸ್ಟ್‌ ಟ್ಯೂಬುಗಳು ತುಕ್ಕು ಹಿಡಿದ ವಸ್ತುಗಳು, ಉಪಯೋಗಕ್ಕೆ ಬಾರದ ಆದರೆ ನೋಡಲು ಅನ್ಯ ಕಾರಣಗಳಿಗಾಗಿ ಇಟ್ಟುಕೊಂಡ ಹಗರಣಗಳನ್ನು ಸೂಕ್ತವಾಗಿ ಲೇವಾರಿ ಮಾಡಿ ಮನೆಯಿಂದ ದೂರವಿಡುವುದೇ ಕ್ಷೇಮ. ಪೀಠೊಪಕರಣಗಳ ವಿಚಾರದಲ್ಲಿ ಜಾಗ್ರತೆ ಇರಲಿ. ಅವು ಎಂಥೆಂಥದೋ ರೀತಿಯಲ್ಲಿ ಜೋಡಿಸಲ್ಪಡುವ ವಿಚಾರ ಯುಕ್ತವಾಗದು. ಹಲವು ಸಲ ಸೋಫಾಗಳು, ಕುರ್ಚಿಗಳು ಮನೆಗೆ ಬರುವ ಅಭ್ಯಾಗತರನ್ನು ಒಂದು ರೀತಿಯ ದಿವ್ಯ ಕಲ್ಪನಾ ಲಹರಿಗೆ ಒಯ್ಯುವ ಹಾಗೆ ಇರಲಾರದು. ಬೇಕಾಬಿಟ್ಟಿ ಇರುತ್ತದೆ. ಬದಲು ಅಂದವಾಗಿ ಜೋಡಿಸಿ ಇಡಲ್ಪಟ್ಟರೆ ಅತಿಥಿಗೆ ಒಂದು ಸುಂದರ ತಾಣಕ್ಕೆ ಹಾರ್ದಿಕವಾದ ತೃಪ್ತಿಯೊಂದಿಗೆ ಬಂದ ಅನುಭವ ಉದಿಸಿ ಒಳ್ಳೆಯ ವಿಚಾರವನ್ನು ಹಂಚಿಕೊಳ್ಳಬಹುದು. ಮನೆಗೆ ಬರುತತಿರುವಂತೆ ಹೊರಗೆ ಓಡಿ ಹೋಗುವ ಅನುಭವ ಆಗಬಾರದು.

ಅಡುಗೆ ಮನೆಯಲ್ಲಿ ಅಗ್ನಿಗೆ ಸಂಬಂಧಿಸಿದ ಸಲಕರಣೆಗಳು ಒಲೆಯ ಬೆಂಕಿಯಲ್ಲಿ ಅಡುಗೆಗೆ ಒದಗಿ ಬರುವ ಸರಂಜಾಮುಗಳೇ ಇರಬೇಕು. ಆಗ್ನೇಯ ದಿಕ್ಕನ್ನು ಅಡುಗೆ ಕೋಣೆಯ ಬಗೆಗೆ ಅಡುಗೆಗೆ ಬೇಕಾದ ಇತರ ಘಟಕಗಳಾದ ಗ್ಯಾಸ್‌ ವಿದ್ಯುತ್‌ ಒಲೆ, ಒಲೆಯ ಹತ್ತಿರವೇ ಆಗಿರದ ಹಾಗೆ ಆದರೂ ಆಗ್ನೇಯನ ಸಮೀಪಕ್ಕೇ ಫ್ರಿಡುj, ಪಾತ್ರೆ ಹರಿವಾಣ ಲೋಟ ಮುಚ್ಚಳಗಳು, ಇತ್ಯಾದಿ ಅಂದವಾಗಿ ಜೋಡಿಸಿಕೊಂಡಿರಬೇಕು. ಅಡುಗೆ ಮನೆಯಲ್ಲೇ ಅಥವಾ ಹಜಾರದಲ್ಲೇ ಊಟದ ಸ್ಥಳ ಇರಬಾರದು. ದೇವರ ಮನೆ ಅಥವಾ ಪೀಠ ಕೂಡಾ ಊಟದ ಸ್ಥಳಕ್ಕೂ ದೇವರ ಪೀಠಕ್ಕೂ ದೇವರ ಪೀಠದಿಂದ ಸ್ನಾನಗೃಹಗಳ ಶೌಚಾಲಯಗಳಿಗೂ ಅಂತರ ಇರಬೇಕು. ಒಂದೊಂದು ಕಡೆಯ ವಸ್ತುಗಳು ಇನ್ನೊಂದೆಡೆ ಬಂದಿರಬಾರದು. ಊಟದ ಟೇಬಲ್ಲೇ ಗಮನಿಸಿ, ಹಲವರಿಗೆ ಊಟದ ಟೇಬಲ್ಲಿನ ಪುಸ್ತಕ ಪೇಪರುಗಳನ್ನು ಇಟ್ಟು ಓದದೆ ಇದ್ದರೆ ಸಮಾಧಾನವೇ ಆಗದು. ಊಟದ ಎಂಜಲು ಮುಸುರೆಗಳಿರುವ ತಿನಿಸು.  ಅನ್ನ ಸಾಂಬಾರುಗಳು ಪುಸ್ತಕ ಅಥವಾ ಪೇಪರುಗಳಿಗೆ ಅಂಟಿಕೊಂಡು ಕೊಳೆಯಾಗುತ್ತದೆಂಬ ಅರಿವು ಇವರಿಗೆ ಬಾರದು. ಇನ್ನು ಕೆಲವರು ಟೂತ್‌ ಬ್ರಷ್‌ ಪೇಸ್ಟ್‌ ತಂದು ಮಲಗುವ ಕೋಣೆಯಲ್ಲಿಡುವುದೂ ಇದೆ. ದವಸ ದಾನ್ಯಗಳನ್ನು ಹಜಾರದಲ್ಲಿಡುವುದೂ ಇದೆ. ಅಂದವಾದ ಜೋಡಣೆಗಾಗಿ ಸಹಕರಿಸಿ ಮುಂದಾಗದಿರುವ ಪರಿಸ್ಥಿತಿ ಇದೆ. ಇದರಿಂದ ಸಕಾರಾತ್ಮಕ ಶಕ್ತಿ ಸುಳಿಗಳು, ಅಲೆಗಳು, ಹೊಯ್ದಾಟಗಳು, ತರಂಗ ಧಿದಾಡ್ಯìತೆಗಳು ಸೊರಗುತ್ತವೆ. ಮನೆಯೊಂದು ಪುಟ್ಟ ಅಮರಾಬತಿಯಾಗಿರಬೇಕು. ಇರಬೇಕಾದ್ದು ಇರಬೇಕಾದಲ್ಲಿಯೇ ಇದ್ದರೆ ಸೊಗಸು ಪುಟಿಯುತ್ತದೆ. ದುರ್ಗಾ ಲಕ್ಷಿ$¾à ಹಾಗೂ ಸರಸ್ವತಿಯರಿಗೆ ತಾಣ ಒದಗುತ್ತದೆ.


Saturday, 24 March 2018

ಅಧ್ಯಯನ ಕೋಣೆ ಹೇಗಿರಬೇಕು: ಇಲ್ಲಿದೆ ವಾಸ್ತು ಟಿಪ್ಸ್

 ಪಶ್ಚಿಮ-ದಕ್ಷಿಣ-ಪಶ್ಚಿಮ ಭಾಗದ ವಾಸ್ತು ಪ್ರದೇಶ ಜ್ಞಾನಕ್ಕೆ ಪ್ರೇರಣೆ ನೀಡುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿಕ್ಕು ವಿದ್ಯಾಭ್ಯಾಸಕ್ಕೆ ಸೂಕ್ತವಾಗಿರುತ್ತದೆ, ವಿದ್ಯೆ ಎಂದರೆ ಜ್ಞಾನ, ಅಭ್ಯಾಸ ಎಂದರೆ ತರಬೇತಿ. ಆದ್ದರಿಂದ, ತರಬೇತಿ ಪಡೆಯುವಾಗ ನೀವು ಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕಠಿಣ ಪರಿಶ್ರಮದಿಂದ ಅಭ್ಯಸಿಸಿದಲ್ಲಿ ಹೆಚ್ಚಿನ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ.

ಆದ್ದರಿಂದ ಅಧ್ಯಯನ ಕೋಣೆಯ ಪಶ್ಚಿಮ-ದಕ್ಷಿಣ-ಪಶ್ಚಿಮ ಭಾಗ ವಿದ್ಯಾಭ್ಯಾಸಕ್ಕೆ ಸೂಕ್ತವಾಗಿರುತ್ತದೆ. ಜ್ಞಾನಕ್ಕೆ ಸಂಬಂಧಿಸಿದಂತೆ ಬೇಕಾಗುವ ನೆನಪಿನ ಶಕ್ತಿ, ಸಾಮರ್ಥ್ಯ ಮತ್ತು ಜ್ಞಾನವನ್ನು ಗ್ರಹಿಸುವ ಶಕ್ತಿಗೆ ವಾಸ್ತು ಹೆಚ್ಚಿನ ಬೆಂಬಲ ಸೂಚಿಸುತ್ತದೆ. 

ಇಂತಹ ಪ್ರದೇಶದಲ್ಲಿ ವಾಶಿಂಗ್‌ಮಶಿನ್ ಯಾವತ್ತು ಇಡಬಾರದು.ಒಂದು ವೇಳೆ, ನೀವು ಈ ಪ್ರದೇಶದಲ್ಲಿ ವಾಶಿಂಗ್ ಮಶಿನ್ ಇಟ್ಟಲ್ಲಿ ನಿಮ್ಮ ಮಕ್ಕಳು ಎಷ್ಟೇ ಪರಿಶ್ರಮ ಪಟ್ಟು ಅಭ್ಯಾಸ ಮಾಡಿದರೂ ಪರೀಕ್ಷೆ ಹಾಲ್‌ನಲ್ಲಿ ಮರೆತುಹೋಗುವ ಸಾಧ್ಯತೆಗಳಿರುತ್ತವೆ.

ಮಕ್ಕಳು ವಿದ್ಯಾವಂತರು, ಪ್ರತಿಭಾವಂತರಾಗಬೇಕು ಎನ್ನುವುದು ಎಲ್ಲಾ ತಂದೆ ತಾಯಿಗಳ ಬಯಕೆಯಾಗಿರುತ್ತದೆ. ಆದ್ದರಿಂದ ಮಕ್ಕಳು ವಿದ್ಯಾಭ್ಯಾಸ ಮಾಡುವ ಕೋಣೆಯ ಪಶ್ಚಿಮ-ದಕ್ಷಿಣ-ಪಶ್ಚಿಮ ಭಾಗದಲ್ಲಿ ಪುಸ್ತಕಗಳ ಚಿತ್ರಗಳು ಅಥವಾ ಲೈಬ್ರೆರಿ ಮಾಡುವುದು ಉತ್ತಮ.

ಯಾವ ವಿಷಯಗಳ ಬಗ್ಗೆ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ ಎನ್ನುವುದರ ಮೇಲೆ ವಾಸ್ತು ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಸಾಧನೆ ಮಾಡಬೇಕು ಎಂದು ಬಯಸಿದಲ್ಲಿ ವಿದ್ಯಾರ್ಥಿಗಳು ಪಶ್ಚಿಮದತ್ತ ಮುಖ ಮಾಡಿ ಅಭ್ಯಾಸ ಮಾಡಬೇಕು.

ಒಂದು ವೇಳೆ, ವಿದ್ಯಾರ್ಥಿಗಳು ಕೋಣೆಯ ದಕ್ಷಿಣ ಭಾಗದತ್ತ ಮುಖ ಮಾಡಿ ಅಭ್ಯಾಸ ಮಾಡುತ್ತಿದ್ದರೆ ಭಾಷಣ ಮಾಡುವ ಸಾಮರ್ಥ್ಯ, ಉದ್ಯಮಿಯಾಗುವ ಮುನ್ಸೂಚನೆಗಳು ಕಂಡು ಬರುತ್ತವೆ.

ಒಂದು ವೇಳೆ, ವಿದ್ಯಾರ್ಥಿಗಳು ಪೂರ್ವದತ್ತ ಮುಖ ಮಾಡಿ ಅಭ್ಯಾಸ ಮಾಡುತ್ತಿದ್ದರೆ ಅವರು ಧಾರ್ಮಿಕ ಕಾರ್ಯಗಳಲ್ಲಿ ಜ್ಞಾನ ಪಡೆಯುತ್ತಾರೆ.

ಒಂದು ವೇಳೆ, ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ತೋರದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಪಶ್ಚಿಮ ಭಾಗದತ್ತ ಮುಖ ಮಾಡಿ ಅಭ್ಯಾಸ ಮಾಡುವಂತೆ ಸಲಹೆ ನೀಡಬೇಕು.

Friday, 23 March 2018

ಗ್ರಹದೋಷಕ್ಕೆ ವಾಸ್ತು ಪರಿಹಾರ

ಅಥವಾ ಕಟ್ಟಿಸುತ್ತಾರೆ. ಆದರೆ ವಿನಾಕಾರಣ ಮನೆಯಲ್ಲಿ ಜಗಳ, ಅಶಾಂತಿ, ಅನಾರೋಗ್ಯದ ವಾತಾವರಣವಿರುತ್ತದೆ. ಆದರೆ ಇದೇಕೆ ಹೀಗೆ ಎಂಬ ಪ್ರಶ್ನೆಗೆ ಪ್ರತಿಯೊಬ್ಬ ಮನುಷ್ಯನು ನವಗ್ರಹಗಳ ಅಧೀನವಾಗಿರುತ್ತಾನೆ. ವಾಸ್ತುಶಾಸ್ತ್ರವು ನವಗ್ರಹಗಳ ಸ್ಥಿತಿಗೆ ಅನುಗುಣವಾಗಿ ಮನುಷ್ಯನಲ್ಲಿ ಏರಿಳಿಕೆಯನ್ನು ಉಂಟು ಮಾಡುತ್ತವೆ.

ಯಾವ ಗ್ರಹದಿಂದ ಯಾವ ತೊಂದರೆ ಎದುರಾಗಬಹುದು, ಅದಕ್ಕೆ ಸುಲಭ ಪರಿಹಾರವೇನು ಎಂದು ತಿಳಿದುಕೊಳ್ಳೋಣ.

ರವಿ ಗ್ರಹ : 


ಮನೆ ಅಥವಾ ನಿವೇಶನ ಕೊಳ್ಳಲು ಹೋದಾಗ ತೊಂದರೆಗಳು ಉಂಟಾಗುತ್ತಿದ್ದರೆ ರವಿ ಯಂತ್ರವನ್ನು ಸ್ಥಾಪಿಸಿ ಪೂಜಿಸಿದರೆ ಒಳ್ಳೆಯದಾಗುತ್ತದೆ. ಮಂತ್ರ : ಓಂ ಸೂರ್ಯಾಯ ನಮಃ. ಈ ಮಂತ್ರವನ್ನು 108 ಬಾರಿ ಜಪಿಸಬೇಕು.

ಚಂದ್ರ ಗ್ರಹ : 


ಯಾವುದೇ ಮನೆ, ಅಂಗಡಿ, ಕಚೇರಿ, ಕಾರ್ಖಾನೆ, ಕಾರ್ಯಾಲಯದಲ್ಲಿ ಆಗಾಗ್ಗೆ ಅಪಘಾತ, ಲುಕ್ಸಾನ ಸಂಭವಿಸುತ್ತಿದ್ದರೆ ಚಂದ್ರ ಯಂತ್ರವನ್ನು ಸ್ಥಾಪಿಸಿ ಪೂಜಿಸಬೇಕು. ಮಂತ್ರ : ಓಂ ಚಂದ್ರಾಯ ನಮಃ ಅಥವಾ ಸೌಂ ಸೋಮಾಯ ನಮಃ. 108 ಬಾರಿ ಜಪಿಸುವುದು ಒಳ್ಳೆಯದು.

ಮಂಗಳ ಗ್ರಹ : 


ಮನೆಯಲ್ಲಿ ಸದಾ ಜಗಳ, ಕದನ, ಕಲಹ, ಕಾಯಿಲೆ, ಉದ್ಯೋಗದಲ್ಲಿ ವಿರೋಧಿಗಳಿಂದ ಸದಾ ತೊಂದರೆ, ಮಾನಸಿಕ ಹಿಂಸೆ, ವ್ಯಾಪಾರ ವ್ಯವಹಾರದಲ್ಲಿ ಮೋಸ ಮತ್ತಿತರ ಅಶಾಂತಿಯ ವಾತಾವರಣವಿದ್ದರೆ ಮಂಗಳ ಯಂತ್ರವನ್ನು ಸ್ಥಾಪಿಸುವುದು ಒಳ್ಳೆಯದು. ಓಂ ಭೌಂ ಭೌಮಾಯ ನಮಃ ಅಥವಾ ಓಂ ಮಂಗಳಾಯ ನಮಃ ಎನ್ನುವ ಮಂತ್ರವನ್ನು 108 ಬಾರಿ ಜಪಿಸಬೇಕು.

ಬುಧ ಗ್ರಹ : 


ವಾಸ್ತು ದೋಷವಿರುವ ಮನೆಯಲ್ಲಿ ವಾಸ ಮಾಡುತ್ತಿದ್ದರೆ, ಮನೆಯಲ್ಲಿ ಪದೇ ಪದೇ ಜಗಳ ನಡೆಯುತ್ತಿದ್ದರೆ, ಮಾಡುವ ಉದ್ಯೋಗದಲ್ಲಿ ನಷ್ಟ ಉಂಟಾಗುತ್ತಿದ್ದರೆ, ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ ಬುಧ ಯಂತ್ರವನ್ನು ಸ್ಥಾಪಿಸಬೇಕು. ಓಂ ಬಂ ಬುಧಾಯ ನಮಃ ಮಂತ್ರವನ್ನು 108 ಬಾರಿ ಜಪಿಸಬೇಕು.

ಗುರು ಗ್ರಹ : 


ಮಾಡುವ ಕೆಲಸದಲ್ಲಿ ವಿಳಂಬ ಕಾಣುತ್ತಿದ್ದರೆ, ಹಣಕಾಸಿನ ಸ್ಥಿತಿಗತಿಗಳಲ್ಲಿ ತೊಂದರೆ ಕಂಡು ಬಂದರೆ, ಆರೋಗ್ಯ, ಐಶ್ವರ್ಯ, ಲಾಭ, ನೆಮ್ಮದಿ, ಶಾಂತಿ ಬಯಸುತ್ತಿದ್ದರೆ ಗುರು ಯಂತ್ರವನ್ನು ಸ್ಥಾಪಿಸಿ ಪೂಜಿಸುವುದು ಒಳ್ಳೆಯದು. ಓಂ ಬೃಂ ಬೃಹಸ್ಪತೆಯೇ ನಮಃ ಅಥವಾ ಓಂ ಗುರವೇ ನಮಃ ಎನ್ನುವ ಮಂತ್ರವನ್ನು 108 ಬಾರಿ ಜಪಿಸಬೇಕು.

ಶುಕ್ರ ಗ್ರಹ : 


ಮಾನಸಿಕ ಹಾಗೂ ದೈಹಿಕ ತೊಂದರೆ ತೊಳಲಾಟ, ನೆಮ್ಮದಿ, ಶಾಂತಿ ಇಲ್ಲದೆ ಇರುವುದು, ಕೆಲಸ ಕಾರ್ಯದಲ್ಲಿ ಹಿನ್ನೆಡೆ, ಕ್ರಯ ವಿಕ್ರಯದಲ್ಲಿ ಅಭಿವೃದ್ಧಿ ಕಾಣದೇ ಇರುವುದು, ಮನೆ ಕಟ್ಟುವಾಗ ಪದೇ ಪದೇ ತೊಂದರೆ ಉಂಟಾಗುವುದು, ಜಮೀನು, ನಿವೇಶನ ಮಾರಾಟದಲ್ಲಿ ಅಡ್ಡಿ ಆತಂಕ ನಿವಾರಣೆಗೆ ಶುಕ್ರ ಯಂತ್ರವನ್ನು ಸ್ಥಾಪಿಸುವುದು ಒಳ್ಳೆಯದು. ಓಂ ಶುಂ ಶುಕ್ರಾಯ ನಮಃ ಮಂತ್ರವನ್ನು 108 ಬಾರಿ ಜಪಿಸಿ.

ಶನೈಶ್ಚರ ಗ್ರಹ :


 ಲೇಔಟ್‌ ನಿರ್ಮಾಣದಲ್ಲಿ ಹಿನ್ನೆಡೆ, ಬಹು ಅಂತಸ್ತಿನ ಕಟ್ಟಡ ನಿರ್ಮಾಣದಲ್ಲಿ ಅಡೆತಡೆ, ರಸ್ತೆ ನಿರ್ಮಾಣಕಾರ್ಯದಲ್ಲಿ ವಿಳಂಬ ಮತ್ತಿತರ ದೋಷ ನಿವಾರಣೆಗೆ ಶನಿಯಂತ್ರವನ್ನು ಸ್ಥಾಪಿಸಿ ಪೂಜಿಸಿ. ಓಂ ಶಂ ಶನೈಶ್ಚರಾಯ ನಮಃ ಮಂತ್ರವನ್ನು 108 ಬಾರಿ ಪಠಿಸಿ.

ರಾಹು ಹಾಗೂ ಕೇತು ಗ್ರಹ :


 ಆರೋಗ್ಯದಲ್ಲಿ ತೊಂದರೆ, ಶಾಂತಿಗೆ ಭಂಗ, ಚರ್ಮದ ಕಾಯಿಲೆ, ಮನೆ, ಅಂಗಡಿಯಲ್ಲಿ ತೊಂದರೆ ತಾಪತ್ರಯಗಳು ಉಂಟಾಗುತ್ತಿದ್ದರೆ, ವ್ಯಾಪಾರದಲ್ಲಿ ಹಿನ್ನಡೆಯುಂಟಾಗಿದ್ದರೆ, ದುಷ್ಟ ಗ್ರಹ ಪ್ರಭಾವದಿಂದ ಪೀಡಿತವಾಗಿದ್ದರೆ, ದುಸ್ವಪ್ನಗಳು ಬೀಳುತ್ತಿದ್ದರೆ ಈ ಯಂತ್ರಗಳ ಸ್ಥಾಪನೆ ಹಾಗೂ ಪೂಜೆಯಿಂದ ಒಳ್ಳೆಯದಾಗುತ್ತದೆ. ರಾಹು ಶಾಂತಿಗೆ ಓಂ ರಾಂ ರಾಹವೇ ನಮಃ, ಕೇತು ಶಾಂತಿಗೆ ಓಂ ಕೇಂ ಕೇತುವೇ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು.

Friday, 16 March 2018

ಇರಬೇಕು ಒಂದು ಇಂಥ ಓದಿನ ಕೋಣೆ

ಮನೆ ಎಂದರೆ ಉಳಿಯಲು ಬೇಕಾದ ನಾಲ್ಕು ಗೋಡೆಗಳಿಗೆ, ಮೇಲ್ಛಾವಣಿಗೆ ಮಾತ್ರ ಬೇಕಾದ ತಾಣವಲ್ಲ. ಮನೆ ಎಂದರೆ ವಾಸಿಸಲು ಬೇಕಾದ ನಿರ್ಮಲ ಸ್ಥಳ. ವಾಸದ ಮನೆ ವಿಶ್ರಾಂತಿಗೆ ಅನುಪಮವಾದ ಅವಕಾಶ ಒದಗಿಸಿ, ಸಂಜೀವಿನಿಯಂತೆ ಬದುಕನ್ನು ತಿರುತಿರುಗಿ ಸಶಕ್ತಗೊಳಿಸಿ ಪುನರುತ್ಥಾನಕ್ಕೆ ದಾರಿಯಾಗಿಸುವ ಉಲ್ಲಾಸದ ಸ್ಥಳ. ಹಾಗೆಯೇ ಬುದ್ಧಿ ಶಕ್ತಿ, ಚಾತುರ್ಯ, ಸಮಯ ಪ್ರಜ್ಞೆ, ವಿನಯ, ಸದ್ಬುದ್ಧಿಗಳೊಂದಿಗೆ ಸಂಪನ್ನ ಸಂಸ್ಕಾರವನ್ನ ಒದಗಿಸುವ ನೆಲೆಯೂ ಆಗಿದೆ.

ಮಾನವನ ಧೀ ಶಕ್ತಿಗೆ ಉತ್ತಮವಾದೊಂದು ಅಡಿಪಾಯ ಕೂಡ ವಾಸದ ಮನೆಯಲ್ಲಿ ದೊರಕಬೇಕು. ಶಾಲೆ, ಕಾಲೇಜು, ಗುರು ಕುಲಗಳಲ್ಲಿ ಓದು, ಬರಹ, ಪಾಠ, ಬೋಧನೆಗಳೆಲ್ಲ ದೊರಕಿದರೂ ಮನೆ, ಚಿಂತನೆಗೆ, ಮಂಥನಕ್ಕೆ, ಅಂತೆಯೇ ಇತರ ಅನೇಕ ವಿಚಾರಗಳನ್ನು ತಿಳಿಯುವ ಓದಿಗೆ ಸೂಕ್ತ ಭೂಮಿಕೆಯನ್ನು ಕಟ್ಟಿಕೊಡುತ್ತದೆ. ಹೀಗಾಗಿ ನಿರಂತರ ಅಭ್ಯಾಸನಗಳಿಗೆ ಮನೆ ಫ‌ಲವಂತಿಕೆಯ ಬೀಡೇ ಆಗಿದೆ. ಪಶ್ಚಿಮ ದಿಕ್ಕಿನಲ್ಲಿ ಓದುವ ಕೋಣೆಯೊಂದು ಮನೆಯಲ್ಲಿರುವುದು ಒಳ್ಳೆಯ ವಿಚಾರವಾಗಿದೆ. ನೈಋತ್ಯ ಮೂಲೆಯಲ್ಲಿ ಓದಿನ ಕೋಣೆ ಬರಬಾರದು. ವಾಯವ್ಯದ ಮೂಲೆಗೂ ಓದಿನ ಕೋಣೆ ಇರಬಾರದು. ಓದಿನ ಸತ್ವ ಈ ದಿಕ್ಕುಗಳಲ್ಲಿ ನೂಕಲ್ಪಡುತ್ತದೆ.

 ಪಶ್ಚಿಮ ದಿಕ್ಕಿನ ಓದಿನ ಕೋಣೆಯಲ್ಲಿ ಓದಿನ ಶಕ್ತಿಗೆ ಸಂಪನ್ನತೆ, ಆರೋಗ್ಯಕರ ಸಮತೋಲನ ದೊರಕಿ ಬೌದ್ಧಿಕ ಹಾಗೂ ಮಾನಸಿಕ ವಿಕಾಸಗಳಿಗೆ ಅವಕಾಶ ಒದಗಿಬರುತ್ತದೆ. ಈ ದಿಕ್ಕಿನಲ್ಲಿ ಬುಧ,ಗುರು, ಶುಕ್ರ ಹಾಗೂ ಚಂದ್ರ ಗ್ರಹಗಳ
ಶುಭಕಾರಕವಾದ ಪ್ರೇರಕ ಶಕ್ತಿ ಕೂಡಿಬರುತ್ತದೆ. ಈ ಎಲ್ಲಾ ಗ್ರಹಗಳೂ ಶುಭ ಗ್ರಹಗಳ ಪಟ್ಟಿಯಲ್ಲಿ ಸಮಾವೇಶಗೊಳ್ಳುತ್ತವೆ. ಈ ಶುಭಕಾರಕವಾದ ಶಕ್ತಿಯೇ ಬೌದ್ಧಿಕ ವಿಕಸನಕ್ಕೆ ಹೆದ್ದಾರಿ ರೂಪಿಸುವ ಧಾತವಾಗಿದೆ. ಬುಧನಿಂದ ಮೇಧಾ ಶಕ್ತಿ, ಗುರುವಿನಿಂದ ಜ್ಞಾನ, ಚಂದ್ರನಿಂದ ಮಾನಸಿಕ ಸ್ಥೈರ್ಯ, ಶುಕ್ರನಿಂದ ಸಂಕಲ್ಪಿತ ಕಾರ್ಯದಲ್ಲಿ ಮುಂದಡಿ ಇಡುವ ಇಚ್ಛಾಶಕ್ತಿಗಳು ಚಿಮ್ಮುಕೊಳ್ಳುತ್ತಿರುತ್ತವೆ. ಪ್ರಾಣಿಗಳಿಗಿಂತ ಮನುಷ್ಯ ಹೀಗೆ ಭಿನ್ನನಾಗುತ್ತಾನೆ.

 ಈ ಭಿನ್ನ ಸಂವಿಧಾನದಿಂದಾಗಿ ಪಾಶವೀ ಗುಣ, ಕ್ರೌರ್ಯಗಳು ಮೂಲೆ ಸೇರಿ ಸಾತ್ವಿಕ ಮಾರ್ಗಕ್ಕೆ ಬಾಗಿಲು ತೆರೆದು ಕೊಳ್ಳುತ್ತದೆ. ಹುರುಪು, ಮಹತ್ವಾಕಾಂಕ್ಷೆ, ಪೂರಕ ಪ್ರಯತ್ನಗಳಿಗೆ ಸಿದ್ಧಿಯೂ ಸಾಧ್ಯ. ಶುಕ್ರನ ಮತ್ತೂಂದು ದೊಡ್ಡ ಶಕ್ತಿ ಎಂದರೆ ಪ್ರತಿಭೆಗೆ ಉದ್ದೀಪನೆ ನೀಡುವ ವಿಫ‌ುಲ ಉತ್ಸಾಹವನ್ನ ನೈಸರ್ಗಿಕವಾಗಿ ಒದಗಿಸಿಕೊಡುವ ಪ್ರಚೋದಕ ಕ್ರಿಯೆ. ಹೀಗೆ ಓದಿನಿಂದ, ಮಾತು, ಪ್ರತಿಭೆಯ ವಿಕಸನ, ವಿನಯಗಳ ಸಿದ್ಧಿ ಸಾಧ್ಯ. ಈ ಸಿದ್ಧಿಯಿಂದ ಜೀವನಕ್ಕೆ ಬೇಕಾದ ದ್ರವ್ಯ ಸಂಪಾದನೆಗಳಿಗೆ ಸಾತ್ವಿಕ ಅವಕಾಶಕ್ಕೆ ದಾರಿ ಸಿಗುತ್ತದೆ. ಮನೆಯಲ್ಲಿ ನಮ್ಮ ಓದು ಪೂರ್ವದ ಕಡೆ ಅಥವಾ ಉತ್ತರದ ಕಡೆ ಮುಖ ಮಾಡಿಯೇ ಇರಬೇಕು. ಓದಿನ ಕೋಣೆಯ ಗೋಡೆಗಳ ಬಣ್ಣ ಆಕಾಶ ನೀಲಿ ಅಥವಾ ಕೆನೆ ಬಣ್ಣದಲ್ಲಿದ್ದರೆ ಒಳ್ಳೆಯದು. ಬಿಳಿ ಅಥವಾ ಹಸಿರು ಬಣ್ಣಗಳೂ ಕೂಡ ಅನುಪಮವೇ ಆಗಿವೆ.

ನೆಲದ ಹಾಸುಗಳೂ ಕೂಡ ಇವೇ ಬಣ್ಣವನ್ನು ಹೊಂದಿದ್ದಲ್ಲಿ ಉತ್ತಮ ಫ‌ಲ ಸಿಗಬಹುದಾಗಿದೆ. ಓದಿನ ಕೋಣೆಯ ಕಿಡಕಿಗಳು ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕುಗಳಿಗೆ ಇದ್ದಿರುವುದು ಸೂಕ್ತ.

 ಪುಸ್ತಕಗಳು ಜೋಡಿಸಲ್ಪಟ್ಟು, ಓರಣವಾಗಿ ಅಭ್ಯಾಸದ ಕೋಣೆ ಇರುವುದು ಮುಖ್ಯ. ಚಲ್ಲಾಪಿಲ್ಲಿಯಾಗಿ ಪುಸ್ತಕಗಳು ಹರಡಿ ಹಂಚಿಕೊಂಡು ಇರಬಾರದು. ಪುಸ್ತಕಗಳ ಕಪಾಟುಗಳು ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರುವುದು
ಪ್ರಶಸ್ತವೆನಿಸುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಕೂಡಾ ಪುಸ್ತಕದ ಕಪಾಟುಗಳನ್ನು ಇಡಬಹುದಾಗಿದ್ದು, ಉತ್ತಮ ಓದಿಗೆ ಇದು ಸಹಾಯಕವೇ.


Thursday, 15 March 2018

ವಾಸ್ತು ನಿಮ್ಮ ಮಕ್ಕಳ ಒತ್ತಡ ತಗ್ಗಿಸಬಹುದು

ಸಣ್ಣಪುಟ್ಟ ವಾಸ್ತುಶಾಸ್ತ್ರದ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಮಕ್ಕಳ ಪರೀಕ್ಷಾ ಒತ್ತಡವನ್ನು ತಗ್ಗಿಸಬಹುದು. ಪರೀಕ್ಷೆ ಸಮೀಪಿಸುತ್ತಲೇ ಹೆಚ್ಚು ಅಂಕ ಪಡೆಯಲೋಸುಗ ಸದಾಕಾಲ ಪುಸ್ತಕ ಹಿಡಿದು ಓದುವಂತೆ ಮಕ್ಕಳನ್ನು ಹಿಂಸಿಸುವುದು ಅವರ ಮನಸ್ಸಿನ ಮೇಲೆ ಅಡ್ಡಪರಿಣಾಮ ಬೀರಬಹುದು. ಮಕ್ಕಳ ಹೆತ್ತವರು ನೀವಾಗಿದ್ದರೆ, ಇಲ್ಲ ನಿಮ್ಮ ಮನೆಯಲ್ಲಿ ಓದುವ ಮಕ್ಕಳಿದ್ದರೆ ಇಲ್ಲಿ ಕೊಟ್ಟಿರುವ ಕೆಲವು ಸರಳ ಸೂತ್ರಗಳನ್ನು ಗಮನಿಸಿ.

ನಿಮ್ಮ ಮಗುವು-
*ಎಂದಿಗೂ ಪಶ್ಚಿಮ ಮತ್ತು ಉತ್ತರಕ್ಕೆ ತಲೆ ಹಾಕಿ ಮಲಗಬಾರದು.

*ನಿಮ್ಮ ಮಗುವು ಹುಡುಗನಾಗಿದ್ದರೆ, ಮನೆಯ ಅಥವಾ ಕೊಠಡಿಯ ವಾಯುವ್ಯ ಭಾಗದಲ್ಲಿ ಮಲಗಿ ನಿದ್ರಿಸದಂತೆ ಎಚ್ಚರ ವಹಿಸಿ.

*ಹುಡುಗಿಯಾಗಿದ್ದಲ್ಲಿ ಮನೆಯ ಅಥವಾ ಕೊಠಡಿಯ ನೈರುತ್ಯ ಭಾಗದಲ್ಲಿ ನಿದ್ರಿಸದಿರಲಿ.

*ಮಲಗುವ ಕೋಣೆಯಲ್ಲಿ ಕನ್ನಡಿಗಳು ಬೇಡ.

*ಮಕ್ಕಳು ಅಭ್ಯಾಸಕ್ಕೆ ಬಳಸುವ ಜಾಗದ ದಕ್ಷಿಣ ಮತ್ತು ಪಶ್ಚಿಮ ಗೋಡೆಗಳಲ್ಲಿ ಕನ್ನಡಿಗಳನ್ನು ಅಳವಡಿಸಬೇಡಿ.

*ಅಭ್ಯಾಸ, ಓದಿನ ವೇಳೆಗೆ ಪೂರ್ವ ಅಥವಾ ಉತ್ತರದತ್ತ ಮುಖಮಾಡಲಿ.

*ಸುತ್ತಮುತ್ತ ಪುಸ್ತಕ ಹಾಳೆಗಳನ್ನು ಹರಡದೆ ಅಭ್ಯಾಸದ ಮೇಜನ್ನು ಶುದ್ಧವಾಗಿಸಿ.

*ಮನೆಯ ಅಥವಾ ಕೊಠಡಿಯ ಈಶಾನ್ಯ ಭಾಗದಲ್ಲಿ ಮಕ್ಕಳಿಗೆ ಓದುವ ಜಾಗವನ್ನು ಅನುವು ಮಾಡಿ ಕೊಡಿ.

*ಮಕ್ಕಳು ಹೆಚ್ಚಿನ ಒತ್ತಡದಲ್ಲಿದ್ದರೆ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಲು ಹೇಳಿ.

*ಕುಟುಂಬದ ಸದಸ್ಯರು ಒಟ್ಟಾಗಿ ಕಲೆಯು ಲೀವಿಂಗ್ ರೂಮಿನ ಈಶಾನ್ಯ ದಿಕ್ಕಿಗೆ ಮೀನುಗಳ ಅಕ್ವೇರಿಯಂ, ನೀರಿನ ಕಾರಂಜಿ ಅಥವಾ ಅರ್ಧ ಡಜನ್ ಬಿದಿರಿನ ಸಸಿಗಳನ್ನಿಡಿ. ಆದರೆ ಎಂದಿಗೂ ಇವುಗಳನ್ನು ಮೂಲೆಯಲ್ಲಿ ಇಡಬೇಡಿ.

*ಮಕ್ಕಳು ಮಲಗುವ ಮತ್ತು ಅಭ್ಯಾಸ ನಡೆಸುವ ಸ್ಥಳಗಳಲ್ಲಿ ಹಸಿರು ಮತ್ತು ಹಳದಿ ಬಣ್ಣಗಳು ಯಥೇಚ್ಛವಾಗಿರಲಿ. ಹೊದಿಕೆ, ಅಭ್ಯಾಸ ಮೇಜಿನ ಹಾಸು ವಸ್ತ್ರ, ಕಿಟಿಕಿ ಬಾಗಿಲಿನ ಪರದೆಗಳು, ಮನೆಯೊಳಗಿಡುವ ಗಿಡಗಳು, ದಿಂಬಿನ ಕವರ್ ಇತ್ಯಾದಿಗಳನ್ನು ಈ ಬಣ್ಣದಲ್ಲೇ ಆರಿಸಿ.

*ಊಟ ಮಾಡುವ ವೇಳೆ, ಹುಡುಗಿಯಾಗಿದ್ದಲ್ಲಿ, ಪೂರ್ವಕ್ಕೂ, ಹುಡುಗನಾಗಿದ್ದರೆ ಉತ್ತರಕ್ಕೂ ಮುಖಮಾಡಿರಲಿ.

*ಕಲಿಕಾ ನಿರತವಾಗಿರುವ ಮಕ್ಕಳು ಬಳಸುವ ಜಾಗ ಮತ್ತು ಮಲಗುವ ಜಾಗವನ್ನು ಇತರರು ಬಳಸದಂತೆ ಜಾಗೃತೆ ವಹಿಸಿ.

*ಬೆಳಿಗ್ಗೆ ಎದ್ದೊಡನೆ ಬರಿಯ ಹೊಟ್ಟೆಗೆ ಕೆಲವು ತುಳಸಿ ಎಲೆಗಳನ್ನು ತಿನ್ನುವ ಅಭ್ಯಾಸ ಮಾಡಿಸಿ

*ಎಂದಿಗೂ ಕಿವಿಗಡಚಿಕ್ಕುವ ಸಂಗೀತವನ್ನು ಕೇಳಿಸಲೇ ಬೇಡಿ. ಇದು ಅವರ ಮನಸ್ಸಿನ ಕೇಂದ್ರೀಕರಣಕ್ಕೆ ಧಕ್ಕೆ ತರಬಹುದು ಮತ್ತು ಒತ್ತಡವುಂಟುಮಾಡಹುದು.

*ಅತ್ಯಂತ ಕನಿಷ್ಠ ಧ್ವನಿಯಲ್ಲಿ ಮೃದುವಾಗ ಲಘಸಂಗೀತವನ್ನು ರಾತ್ರಿಯ ವೇಳೆ ಅವರ ಮಲಗುವ ಕೋಣೆಯಲ್ಲಿ ಕೇಳಿಸಿ. ಇದು ಗಾಯತ್ರಿ ಮಂತ್ರವೂ ಆಗಿರಬಹುದು.

*ಸೇರಿದ ಗೋಡೆಗಳ ಕೋನಕ್ಕೆ ಬಾಗಿಲಿರುವ ಕೋಣೆಯಲ್ಲಿ ಮಕ್ಕಳು ಮಲಗುವುದು ಮತ್ತು ಅಧ್ಯಯನ ನಡೆಸುವುದು ಬೇಡ.

*ಇವಿಷ್ಟು ಅಂಶಗಳನ್ನು ಗಮನಿಸುವುದರೊಂದಿಗೆ ಮಕ್ಕಳಲ್ಲಿ ಧನಾತ್ಮಕ ಮನೋಭಾವ ತುಂಬಿ. ಅವರ ಬಗ್ಗೆ ಧನಾತ್ಮಕವಾಗಿ ಮಾತನಾಡದಿರಿ. ನೀವು ಮಕ್ಕಳನ್ನು ಪ್ರೀತಿಸುತ್ತೀರೆಂಬ ಭದ್ರತಾ ಭಾವನೆ ಅವರಲ್ಲಿ ಮೂಡುವಂತೆ ಮಾಡಿ.

*ಮಧ್ಯೆ ಮಧ್ಯೆ ಅವರಿಗೆ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿ. ಆಟವಾಡಲು ಅಥವಾ ಅವರ ಇಷ್ಟದಲ್ಲಿ ತೊಡಗಲು ಇಲ್ಲವೇ ಯೂವುದಾದರೂ ಹೊಟೇಲಿಗೆ ಕರೆದೊಯ್ಯಿರಿ.

*ಮಕ್ಕಳ ಮನಸ್ಸನ್ನು ಬೇರೆಡೆಗೆ ಸೆಳೆಯುವಂತಹ ಯಾವದೇ ವಸ್ತುವನ್ನು ಅವರ ಅಭ್ಯಾಸ ಜಾಗದಲ್ಲಿ ಇರಿಸಬೇಡಿ. *ಮಕ್ಕಳು ವ್ಯಾಯಾಮ ಧ್ಯಾನ ಮಾಡಲು ಪ್ರೇರೇಪಿಸಿ. ಆದರೆ ಯಾವುದೇ ವಿಚಾರದಲ್ಲೂ ಅವರನ್ನು ಒತ್ತಾಯಿಸುವುದೇ ಬೇಡವೇ ಬೇಡ.

ಸರಿ, ಇದೀಗ ನಿಮಗೂ, ನಿಮ್ಮ ಮಗುವಿಗೂ ಶುಭಹಾರೈಕೆಗಳು. ವಾಸ್ತು ಸಹಾಯದಿಂದ ನಿಮ್ಮ ಮಗುವು ಒತ್ತಡರಹಿತವಾಗಿ ಪರೀಕ್ಷೆ ಬರೆಯುವಂತಾಗಲಿ.

Wednesday, 14 March 2018

ಮನೆಯಲ್ಲಿ ಕನ್ನಡಿ ತೂಗು ಹಾಕಲು ವಾಸ್ತು!

ಇಂದಿನ ದಿನಗಳಲ್ಲಿ ವಾಸ್ತು ನಂಬದ ಜನರು ಸಿಗುವುದು ತುಂಬಾ ವಿರಳ. ಪ್ರತಿಯೊಬ್ಬರು ವಾಸ್ತುವಿನೊಳಗೆ ಬಂಧಿಯಾಗಿರುವರು. ಇದು ಕಚೇರಿ ಅಥವಾ ಮನೆಯೇ ಆಗಿರಬಹುದು. ಕೆಲವರು ಗೊತ್ತಿಲ್ಲದೆ ವಾಸ್ತು ಅಳವಡಿಸಿಕೊಂಡರೆ ಇನ್ನು ಕೆಲವರು ವಾಸ್ತು ತಜ್ಞರ ಅಭಿಪ್ರಾಯದ ಪ್ರಕಾರ ಎಲ್ಲವನ್ನು ಮಾಡುವರು. ವಾಸ್ತುವಿನಲ್ಲಿ ಕನ್ನಡಿ ಎನ್ನುವುದು ತುಂಬಾ ಪ್ರಮುಖ ಪಾತ್ರ ವಹಿಸುವುದು. ಕನ್ನಡಿಯು ನಿಮ್ಮ ಮನೆಯಲ್ಲಿ ಶಕ್ತಿಯನ್ನು ತರಬಹುದು ಅಥವಾ ನಾಶ ಮಾಡಬಹುದು ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.
ಎಲ್ಲಾ ಕನ್ನಡಿಗಳನ್ನು ಒಂದೇ ರೀತಿಯಲ್ಲಿ ಅಳವಡಿಸಲು ಆಗುವುದಿಲ್ಲ. ಕೆಲವು ಸಕಾರಾತ್ಮಕ ಶಕ್ತಿ ತಂದರೆ ಇನ್ನು ಕೆಲವೊಂದು ನಕಾರಾತ್ಮಕ ಶಕ್ತಿಯನ್ನು ತರುವುದು. ಇದನ್ನು ಎಲ್ಲಿ, ಹೇಗೆ ಅಳವಡಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಪ್ರತಿಯೊಂದು ಅವಲಂಬಿತವಾಗಿದೆ. ಮನೆ ಹಾಗೂ ಕಚೇರಿಯಲ್ಲಿ ಕನ್ನಡಿ ಎಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ಬಗ್ಗೆ ಈ ಲೇಖನದಲ್ಲಿ ನಿಮಗೆ ಕೆಲವೊಂದು ಸಲಹೆಗಳನ್ನು ನೀಡಲಿದ್ದೇವೆ. ಅದನ್ನು ಅಳವಡಿಸಿಕೊಂಡು ಹೋದರೆ ನಿಮ್ಮ ವಾಸ್ತು ಸರಿಯಾಗಲಿದೆ. 

ಮನೆಯ 'ಬಾಗಿಲಿನ ವಾಸ್ತು' ಸರಿ ಇಲ್ಲವಾದರೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ!


ಮನೆ


 ಮನೆಯಲ್ಲಿ ನೀವು ಕನ್ನಡಿ ಅಳವಡಿಸಿಕೊಳ್ಳುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಅಂಶವೆಂದರೆ ಅದು ಮಲಗುವ ಹಾಸಿಗೆಯನ್ನು ತೋರಿಸಬಾರದು. ಹೀಗೆ ಮಾಡಿದರೆ ಅದರಿಂದ ನಕಾರಾತ್ಮಕ ಶಕ್ತಿ ಬರುವುದು. ಮನೆಯ ಮುಖ್ಯದ್ವಾರವು ಕನ್ನಡಿಯಲ್ಲಿ ಕಾಣುತ್ತಾ ಇದ್ದರೆ ನೀವು ಆ ಕನ್ನಡಿಯನ್ನು ಸ್ಥಳಾಂತರಿಸಬೇಕು. ವಾಸ್ತುಶಾಸ್ತ್ರದ ಪ್ರಕಾರ ಇದು ಮನೆಯೊಳಗಿನ ಎಲ್ಲಾ ಧನಾತ್ಮಕ ಶಕ್ತಿಯನ್ನು ಹೊರಹಾಕುವುದು ಮತ್ತು ನಿಮಗೆ ಅವಕಾಶಗಳು ಕೈತಪ್ಪುವುದು. ನಿಮಗೆ ಕಿಟಕಿ ಬಾಗಿಲಿನಲ್ಲಿ ಎಲ್ಲವೂ ಕಾಣುತ್ತಲಿದ್ದರೆ ಆಗ ನೀವು ಅದರ ವಿರುದ್ಧ ದಿಕ್ಕಿನಲ್ಲಿ ಕನ್ನಡಿ ಅಳವಡಿಸಿ. ನಕಾರಾತ್ಮಕ ಶಕ್ತಿ ಇರುವಂತಹ ಜಾಗದ ವಿರುದ್ಧ ದಿಕ್ಕಿನಲ್ಲಿ ಕನ್ನಡಿ ಅಳವಡಿಸಿಕೊಳ್ಳಿ. ಇದರಿಂದ ಮನೆಯಲ್ಲಿ ಇರುವಂತಹ ಎಲ್ಲಾ ನಕಾರಾತ್ಮಕ ಶಕ್ತಿಗಳು ಹೊರಹೋಗುವುದು.


ಕಚೇರಿ


 ವೃತ್ತಿಯಲ್ಲಿ ಧನಾತ್ಮಕ ಶಕ್ತಿ ಬರಬೇಕೆಂದರೆ ನೀವು ಧನಾತ್ಮಕವಾಗಿರುವಂತಹ ಕನ್ನಡಿಯನ್ನು ಅಳವಡಿಸಿಕೊಳ್ಳಬೇಕು. ಸಮೃದ್ಧಿ ಕಚೇರಿಗೆ ಬರಲು ನೀವು ಲಾಕರ್ ಎದುರು ಕನ್ನಡಿ ಅಳವಡಿಸಿಕೊಳ್ಳಿ. ತುಂಬಾ ಇಕ್ಕಟ್ಟಾಗಿರುವ ಜಾಗದಲ್ಲಿ ಕನ್ನಡಿ ಅಳವಡಿಸಬೇಡಿ. ಯಾಕೆಂದರೆ ಇದರಿಂದ ನಕಾರಾತ್ಮಕ ಶಕ್ತಿ ಬರುವುದು. ಇಕ್ಕಟ್ಟಾಗಿರುವ ಜಾಗದಲ್ಲಿ ನಕಾರಾತ್ಮಕತೆ ಮತ್ತು ಕ್ಲಾಸ್ಟ್ರೋಫೋಬಿಕ್ ಸುತ್ತುವರಿದಿರುವುದು. ಇಂತಹ ಜಾಗದಲ್ಲಿ ಕನ್ನಡಿ ಅಳವಡಿಸಬೇಡಿ. ಕನ್ನಡಿಯಲ್ಲಿ ಒಳ್ಳೆಯ ದೃಶ್ಯಗಳು ಮತ್ತು ಧನಾತ್ಮಕ ಶಕ್ತಿಯು ಬರುವಂತಿರಲಿ. ಕಿಟಕಿಗೆ ವಿರುದ್ಧ ದಿಕ್ಕಿನಲ್ಲಿ ಕಿರುಕೋಣೆಯಲ್ಲಿ ಕನ್ನಡಿ ಅಳವಡಿಸಿಕೊಂಡರೆ ಒಳ್ಳೆಯ ಧನಾತ್ಮಕ ಶಕ್ತಿ ಬರುವುದು.

ಕನ್ನಡಿ ಅಳವಡಿಕೆಗೆ ಸಾಮಾನ್ಯ ವಾಸ್ತು ಸಲಹೆಗಳು 


ನೀವು ಶೌಚಾಲಯದಲ್ಲಿ ಕನ್ನಡಿ ಅಳವಡಿಸಿಕೊಳ್ಳಬೇಕೆಂದು ನಿರ್ಧರಿಸಿದ್ದರೆ ಆಗ ನೀವು ಉತ್ತರ ಅಥವಾ ಪೂರ್ವ ಭಾಗದಲ್ಲಿ ಇದನ್ನು ತೂಗು ಹಾಕಿ. ಮನೆಯ ಮಧ್ಯಭಾಗದಲ್ಲಿ ಗೋಡೆಯಿದ್ದರೆ ಆಗ ನೀವು ಇದರಲ್ಲಿ ಒಂದು ಕನ್ನಡಿ ತೂಗು ಹಾಕಿ ಮನೆಯ ಎರಡು ಭಾಗಗಳು ಸಂಪರ್ಕದಲ್ಲಿರುವಂತೆ ಮಾಡಬಹುದು. ಒಂದು ಕನ್ನಡಿಗೆ ವಿರುದ್ಧವಾಗಿ ಮತ್ತೊಂದನ್ನು ಯಾವತ್ತೂ ಅಳವಡಿಸಬೇಡಿ. ವಾಸ್ತು ಸಂಪೂರ್ಣವಾಗ ಇದರ ವಿರುದ್ಧವಾಗಿದೆ. ಇದರಿಂದ ವಿಶ್ರಾಂತಿ ಇಲ್ಲದಂತೆ ಆಗುವುದು. ಶೌಚಾಲಯವನ್ನು ಹೊರತುಪಡಿಸಿ ಬೇರೆ ಯಾವುದೇ ಭಾಗದಲ್ಲಿ ಉತ್ತರ ಅಥವಾ ಪೂರ್ವ ಭಾಗದಲ್ಲಿ ಕನ್ನಡಿ ತೂಗು ಹಾಕಬೇಡಿ. ಇದರಿಂದ ಧನಾತ್ಮಕ ಶಕ್ತಿ ಕಳೆದುಹೋಗಬಹುದು. ಮುಖ್ಯದ್ವಾರಕ್ಕೆ ಎದುರಾಗಿ ಕನ್ನಡಿ ಅಳವಡಿಸಬೇಡಿ ಮತ್ತು ನಿಮ್ಮ ಚಿತ್ರ ಕಾಣುವಂತೆ



ಕನ್ನಡಿ ಇಡಬೇಡಿ!


 ವಾಸ್ತು ಪ್ರಕಾರ ಕನ್ನಡಿಗಳನ್ನು ಅಳವಡಿಸಿಕೊಂಡರೆ ಅದರಿಂದ ಖಂಡಿತವಾಗಿಯೂ ನಿಮ್ಮ ಮನೆಯೊಳಗೆ ಧನಾತ್ಮಕ ಶಕ್ತಿಯು ಹರಿದುಬರುವುದರಲ್ಲಿ ಸಂಶಯವೇ ಇಲ್ಲ.







Tuesday, 13 March 2018

ಮನೆಯ ಎದುರಿಗೇ ರಸ್ತೆ ಇರಬಹುದಾ?

ನಮ್ಮ ವೈಯುಕ್ತಿಕ ಏರಿಳಿತಗಳ ಸಂಬಂಧವಾಗಿ ಮನೆ ಎದುರಿನ ಏಕ ಒಂದೇ ರಸ್ತೆಗಿಂತ ಎರಡು ರಸ್ತೆಗಳು ಒಂದು ಇನ್ನೊಂದನ್ನು ಕೂಡಿರುವುದು, ಛೇದಿಸಿರುವುದು ಸೂಕ್ತ. ಒಂದೇ ರಸ್ತೆಯಾದರೆ ಅದು ತನ್ನ ನಕಾರಾತ್ಮಕ ಭಾವವನ್ನು ಇನ್ನೊಂದೆಡೆಗೆ ದೂಡಿ ಎಸೆಯಲಾಗದೆ ನಿಮ್ಮ ಮನೆಗೇ ನೇರ ತೂರಿಸಬಹುದು.

ರಸ್ತೆಗಳು ಯಾವಾಗಲೂ ಸಾರ್ವಜನಿಕರು ಓಡಾಡುವ ಜಾಗವಾದರೂ ಓಡಾಡುವ ಜನರ ದೃಷ್ಟಿ ಚಿಂತನ ಸ್ವಭಾವಗಳು ಅಲ್ಲಿನ ಸಮೀಪದ ಮನೆಗಳ ಮೇಲೂ ಪ್ರಭಾವ ಬೀರುತ್ತವೆ.
 ರಸ್ತೆಗಳ ಸಂಖ್ಯೆಯು ತನ್ನದೇ ಆದ ಪ್ರಭಾವವನ್ನು ಮನೆಯ ಯಜಮಾನನ ಸಂಖ್ಯಾಭಾವಗಳ ಮೇಲೆ ತನ್ನದೇ ಆದ ಹಿಡಿತಗಳನ್ನು ಹೊಂದಿರುತ್ತದೆ. ರಸ್ತೆಗಳ ನಿರ್ಮಾಣದ ರೀತಿ ನೀತಿಗಳು ಪ್ರಮುಖವೇ ಆಗಿವೆ. ಇದರಿಂದಾಗಿ ನಮ್ಮ ವೈಯುಕ್ತಿಕ ಏರಿಳಿತಗಳ ಸಂಬಂಧವಾಗಿ ಮನೆ ಎದುರಿನ ಏಕ ಒಂದೇ ರಸ್ತೆಗಿಂತ ಎರಡು ರಸ್ತೆಗಳು ಒಂದು ಇನ್ನೊಂದನ್ನು ಕೂಡಿರುವುದು ಛೇದಿಸುವುದು ಸೂಕ್ತ. ಒಂದೇ ರಸ್ತೆಯಾದರೆ ಅದು ತನ್ನ ನಕಾರಾತ್ಮಕ ಭಾವವನ್ನು ಇನ್ನೊಂದೆಡೆಗೆ ದೂಡಿ ಎಸೆಯಲಾಗದೆ ನಿಮ್ಮ ಮನೆಗೇ ನೇರ ತೂರಿಸಬಹುದು.

ನಿಮ್ಮ ಮನೆಗೆ ಉತ್ತರಕ್ಕೋ ಪೂರ್ವಕ್ಕೋ ಇರುವ ರಸ್ತೆಗಳು ಉತ್ತಮ ಹಾಗೂ
ಅದೃಷ್ಟವೇ ಸರಿ. ನೀವು ಪೂರ್ವದಿಂದ ಸಂಚರಿಸಿ ಆಗ್ನೇಯಕ್ಕೆ ಹೊರಳಿಕೊಳ್ಳುವಂತಿದ್ದರೆ
ಇದು ಮನಸ್ಸಿನ ಸಮಾಧಾನಕ್ಕೆ ಯೋಗ್ಯ. ನಿಮ್ಮ ಮನೆಯ ಭಾಗದಿಂದ ನೇರವಾಗಿ ಈಶಾನ್ಯ ಪೂರ್ವ ಉತ್ತರದಿಕ್ಕುಗಳನ್ನು ಕ್ರಮಿಸುವ ರೀತಿಯ ರಸ್ತೆ ಇದ್ದರೆ ಅದು ಚೆಂದ ಹಾಗೂ ಅಪೇಕ್ಷಣೀಯ. ರಸ್ತೆಯಲ್ಲಿ ಜನನಿಬಿಡ ದಟ್ಟಣೆ ಉಪಯುಕ್ತ. ಮನೆಯೆದುರು ಇರುವ ಪೂರ್ವ ರಸ್ತೆಗೆ ಪೂರ್ವದ ಕಡೆಯನ್ನು ಒಳಗೊಳ್ಳುವ ಈಶಾನ್ಯ ದಿಕ್ಕಿಗೆ ಗೇಟ್‌ ಇಡುವುದು ಉತ್ತಮ. ಕೇವಲ ಪೂರ್ವಕ್ಕೇ ನೇರ ದಟ್ಟ ಸಾಂದ್ರ ಗೇಟು ರಚಿಸುವುದೂ ಒಳ್ಳೆಯದೇ.

ದಕ್ಷಿಣದ ಕಡೆಯ ರಸ್ತೆ ಇದ್ದರೆ ದಕ್ಷಿಣವೂ ದಕ್ಷಿಣಭಾಗವೂ ಹೆಚ್ಚಿನಂಶ ಸಿಗುವಂತ ಆಗ್ನೇಯ ದಿಕ್ಕಲ್ಲಿ ಗೇಟ್‌ ಉತ್ತಮ. ದಕ್ಷಿಣವನ್ನೇ ಪೂರ್ತಿ ಬಳಸಿಕೊಳ್ಳುವುದಾದರೆ ನಡುವೆ ದಕ್ಷಿಣದ ಸಾಂದ್ರತೆ ಉತ್ತಮ. ಪಶ್ಚಿಮದ ರಸ್ತೆ ಇದ್ದಲ್ಲಿ ನೇರ ಪಶ್ಚಿಮದ ನಡುಭಾಗದ ಗೇಟ್‌ ಸ್ವಾಗತಾರ್ಹ. ಇಲ್ಲಾ ಪಶ್ಚಿಮವು ಅಧಿಕವಾಗಿ ದೊರಕುವ ವಾಯವ್ಯ ಭಾಗದಲ್ಲಿ ಗೇಟ್‌ ಇರುವಂತಾಗಲಿ. ಉತ್ತರದ ಕಡೆಯ ರಸ್ತೆ ಇದ್ದರೆ ನೇರ ಉತ್ತರದ ನಡುಭಾಗದಲ್ಲಿ ಗೇಟ್‌ ಇರಲಿ. ಇಲ್ಲವೇ ಉತ್ತರ ವಿಸ್ತಾರಕ್ಕೆ ಒಳಗೊಳ್ಳುವಂತೆ ಈಶಾನ್ಯದಲ್ಲಿ ಗೇಟು ಕೂಡಿಬರಲಿ.
ಗೇಟುಗಳು ಯಾವಾಗಲೂ ಸಂರಕ್ಷಣಾ ಘಟಕಗಳಾಗಿ ತಮ್ಮ ಕಾರ್ಯ ನಿರ್ವಹಿಸುತ್ತವೆ.
ಇವುಗಳ ಬಣ್ಣ, ದಪ್ಪ ಎತ್ತರ ಅಗಲಗಳು ಮನೆಯ ವಿಸ್ತಾರವನ್ನೂ ಒಟ್ಟೂ ವಿಸ್ತೀರ್ಣವನ್ನು ಅನುಲಕ್ಷಿಸಿ ಅಳತೆಗಳನ್ನು ಹೊಂದಿರಬೇಕಾದ್ದು ಜರೂರಾಗಿದೆ.

ಹೊಸ ಕಾಲವು ಈಗ ಮಾಡ್ರನ್‌ ಎಂಬ ಹೆಸರಿನಲ್ಲಿ ಚಿತ್ರ ರೀತಿಯ ಪಟ್ಟಿ ವರ್ತುಲಗಳ ಚೌಕಗಳನ್ನೊಳಗೊಂಡ ಗೇಟುಗಳನ್ನು ಬಳಸುವ ವಿಚಾರಗಳನ್ನು ಹುಟ್ಟು ಹಾಕುತ್ತದೆ. ಗೇಟ್‌ ಎಂಬುದು ನಮ್ಮ ಧನಶಕ್ತಿಯನ್ನು ತೋರಿಸುವ ಆಡಂಬರ ಹೊಂದಿರುವುದು ಅವಶ್ಯಕವಾಗಿಲ್ಲ. ಗೇಟುಗಳು ಹೊರಭಾಗದ ಸುರಕ್ಷಿತ ದೂರವಾದ ಸ್ಪಂದನಗಳನ್ನು ತಡೆಗಟ್ಟುವಂತಿರಬೇಕು. ಪೂರ್ತಿ ಗೇಟ್‌ ದಪ್ಪ ಒಂದೇ ಮರದ ಪಟ್ಟಿಯಿಂದಾಗಲೀ ಕಬ್ಬಿಣದ ಫ್ರೆàಮ್‌ ನಿಂದಾಗಲೀ ಇರುವುದು ಸೂಕ್ತವಲ್ಲ. ಮನೆಯೊಳಗಿನಿಂದಲೇ ಗೇಟಿನಾಚೆಗೆ ಕಾಣುವ ಹಾಗೆ ನಡುನಡುವೆ ಖಾಲಿಯಾಗಿ ಸರಳು ಪಟ್ಟಿಗಳಿಂದ ರಚನೆಗೊಂಡಿರಲಿ. ಇಲ್ಲಿನ ಪಟ್ಟಿಗಳು ಡೈಮಂಡ್‌, ಸ್ವಸ್ತಿಕ್‌, ಮಂಡಲಾಕೃತಿಗಳನ್ನು ತ್ರಿಶೂಲ, ಸುಭ್ರಮ್ಯಣ್ಯ ಕರಶೂಲ ಇತ್ಯಾದಿ ಆಕೃತಿಗಳನ್ನು ಹೊಂದಿದ್ದರೆ ಶುಭ.

ಮನೆಯ ಎದುರಿಗೆ ರಸ್ತೆ ಎಡಬಲಕ್ಕೆ ಇರದೆ ನೇರವಾಗಿ ಇದ್ದಿದ್ದರೆ ವಾಸ್ತು ಗಣಪತಿಯನ್ನು ಗೇಟಿನ ಇಕ್ಕೆಲದ ಒಂದು ಭಾಗ ಮುಖ್ಯವಾಗಿ ಬಲಗಡೆಗೆ ಇಡುವುದು ಸೂಕ್ತ. ವಾಸ್ತು ಪುರುಷನ ಮಂಡಲ ಕಾಂತಿ ರಚನಾ ಶೈಲಿಯ ಬಣ್ಣಗಳ ಚಿತ್ರ ಇರುವುದೂ ಉತ್ತಮವೇ. ಒಟ್ಟಿನಲ್ಲಿ ಈ ಚಿತ್ರಗಳು ಗಣಪನ ಉಪಸ್ಥಿತಿಗಳು ಅಶುಭವನ್ನು ನಿಯಂತ್ರಿಸಿ ವಾಸ್ತವಕ್ಕೆ ಅನಿವಾರ್ಯವಾದ ಸಾಮಾಜಿಕತೆಗೆ ಯಶಸ್ಸಿನ ಆವರಣ ಒದಗಿಸಲು ಕ್ಷಿಪ್ರ ಒಳದಾರಿಗಳಾಗಿ ಪರಿವರ್ತನೆ ಆಗುತ್ತದೆ.


Monday, 12 March 2018

ನಿವೇಶನದ ವಾಸ್ತು

1)ಬೋರ್‌ವೆಲ್ ಅಥವಾ ಸಂಪ್‌ ನಿವೇಶನದ ಈಶಾನ್ಯ ಭಾಗದಲ್ಲಿರಬೇಕು.

2)ಪ್ರವೇಶ ದ್ವಾರವು ಈಶಾನ್ಯ ಮೂಲೆಯಲ್ಲಿರಬೇಕು ಅಥವಾ ಪೂರ್ವ ಗೋಡೆಯಲ್ಲಿದ್ದರೆ ಪ್ರಶಸ್ತ ಸ್ಥಳ.

3)ನಿವೇಶನದ ಎತ್ತರದ ಸ್ಥಳವು ವಾಯವ್ಯ ಮೂಲೆಯಲ್ಲಿರಬೇಕು.

4)ವಾಯವ್ಯದಿಂದ ಈಶಾನ್ಯಕ್ಕೆ ನಿವೇಶನವು ಇಳಿಜಾರಾಗಿರಬೇಕು

5)ಬಾಗಿಲುಗಳು, ಕಾಲಮ್, ಬೀಮ್‌ಗಳು ಸರಿ ಸಂಖ್ಯೆಯಲ್ಲಿರಬೇಕು.

6)ವಾಯವ್ಯ ಮೂಲೆಯಲ್ಲಿ ಕಿಟಕಿಗಳು ಇರಬಾರದು

Saturday, 10 March 2018

ಆಧುನಿಕ ಉಪಕರಣಗಳು ಮತ್ತು ಮನೆ

ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ನಿರ್ದಿಷ್ಟವಾಗಿ ಇದೇ ದಿಕ್ಕಿನಲ್ಲಿ ಸಂಯೋಜಿಸಲ್ಪಡುವ ವಿಚಾರ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಗೊಂಡಿಲ್ಲ ಉರಿ ಎದ್ದು ಬೆಂಕಿಯನ್ನು ಕಣ್ಣಲ್ಲಿ ಕಾಣುವ ಒಲೆ ಗ್ಯಾಸ್‌ ಒಲೆಗಳನ್ನು ಆಗ್ನೇಯದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಿಚಾರ ಸರಿ. ಆದರೆ ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ಪಶ್ಚಿಮ ಭಾಗಗಳನ್ನು ವಿಶೇಷವಾಗಿ ನೈಋತ್ಯವನ್ನು ಆಕ್ರಮಿಸುವಂತಿದ್ದರೆ ಸೂಕ್ತ.

ಹೆಚ್ಚು ಹೆಚ್ಚು ಆಧುನೀಕರಣ ಮನೆಯ ವಿಷಯದಲ್ಲಿ ಹೊಸ ಹೊಸ ಸಾಮಗ್ರಿಗಳನ್ನು ತುಂಬಿಕೊಳ್ಳಲು ಅನಿವಾರ್ಯವಾದೊಂದು ಸನ್ನಿವೇಶವನ್ನು ನಿರ್ಮಿಸುತ್ತ ಹೋಗುತ್ತದೆ.

ನಿಜ ಹೇಳಬೇಕಂದರೆ ಆಧುನಿಕತೆ ಸಮಾಜದ ಸಂಪನ್ನತೆಯನ್ನು ವರ್ಧಿಸುತ್ತ ಹೋಗಬೇಕಿತ್ತು. ಆದರೆ ನಾವು ಇಂದು ಬದುಕುತ್ತಿರುವ ಸಮಾಜ ಆಧುನಿಕತೆಗೆ ತೆರೆದುಕೊಂಡಂತೆ ಅನಿಸುತ್ತದೆಯೇ? ದೂರದ ಅಮೆರಿಕಾ ಎಷ್ಟು ಹತ್ತಿರವಾಗಿದೆಯೆಂದರೆ ಅಮೆರಿಕದವರಿಗೂ ಭಾರತ ಅಪರಿಚಿತವಾದೊಂದು ದೇಶವಲ್ಲ. ಇದು ತಮಗೆ ಬೇಕೆಂದಾಗ ದೇಶ ಅನಿವಾರ್ಯವಾಗಿ ನಾವು ಆಶ್ರಯಿಸಿ ಇರಬೇಕಾದ ದೇಶ ಎಂಬ ಅವರ ಮನೋಭಾವವನ್ನು ಗಮನಿಸುತ್ತಾ ಎಷ್ಟು ಹತ್ತಿರ ತಲುಪಕೂಡದೋ ಅಷ್ಟು ಹತ್ತಿರ ಬರುತ್ತಿದೆ. ಆಧುನಿಕತೆಯ ಹೆಸರಿನಲ್ಲಿ ಅಮೆರಿಕಾ ಹತ್ತಿರವಾದದ್ದು. ನಮ್ಮನ್ನು ನಾವು ನಮಗೆ ಬೇಕಾದುದಕ್ಕಿಂತ ಅವರಿಗೆ ಬೇಕಾದ ರೀತಿಯಲ್ಲಿ ಸಜ್ಜುಗೊಳಿಸುತ್ತಿದ್ದೇವೆ ನಮ್ಮ ಮನೆಗಳನ್ನು.

ಈ ಕಾರಣದಿಂದ ನಮ್ಮ ಮನೆಗಳು ನಮಗೆ ಜೀವನೋಲ್ಲಾಸವನ್ನು ಚಿಮ್ಮಿಸುವ ವಿಚಾರದಲ್ಲಿ ಕಟ್ಟಲ್ಪಡದೆ ಸಂಯೋಜಿಸಲ್ಪಡದೆ ಮನೆಮನೆಯ ಶಾಂತಿ ಹಾಗೂ ನೆಮ್ಮದಿಗಳು ಒಂದು ರೀತಿಯ ಶುಷ್ಕ ನೆಲೆಯಲ್ಲಿ ಸಪ್ಪೆಯಾಗತೊಡಗಿದೆ. ಶುಷ್ಕ ನೆಲೆಗಳೇ ನಮ್ಮ ಆಧುನಿಕತೆಯನ್ನು ಪ್ರತಿಪಾದಿಸುತ್ತಿರುವ ಕೀಲಿ ಕೈಗಳಾಗಿರುವುದರಿಂದ ನಮ್ಮ ಸಾಂಸ್ಕೃತಿಕ ಚೌಕಟ್ಟು ಸಮತೋಲನ ಕಳೆದುಕೊಂಡಿದೆ. ಆಧುನಿಕ ಉಪಕರಣಗಳಾದ ಟೀ, ಓವನ್‌ ಮೈಕ್ರೋವೇವ್‌, ಗೀಸರ್‌, ಲಿಫ್ಟ್, ವ್ಯಾಕ್ಯೂಮ್‌ ಕ್ಲೀನರ್‌ ಇತ್ಯಾದಿ ಇತ್ಯಾದಿ ಅಸಂಪ್ರದಾಯಿಕವಾದ ರೀತಿಯಲ್ಲಿ ಮನೆಯಲ್ಲಿ ಬಿದ್ದುಕೊಂಡಿರುತ್ತದೆ.

ಇದರಿಂದಾಗಿ ವಿವಿಧ ರೀತಿಯ ನಕಾರಾತ್ಮಕ ಸ್ಪಂದನಗಳು ಮನೆಯನ್ನು ಆಕ್ರಮಣ ಮಾಡಿ ಹಿಂಸಿಸುತ್ತದೆ. ಉದಾಹರಣೆಗೆ ಹಾಗೂ ಗ್ಯಾಸಿನ ಒಲೆಯ ಗ್ಯಾಸಿನ ಸಿಲಿಂಡರ್‌ ಅಂತರಗಳು ಸದಾ ಮುಖ್ಯವಾದ ಸ್ವಿಚ್‌ ಒಂದು ಟೀವಿಯಲ್ಲಿ ವಿಸಿಆರ್‌ ಇತ್ಯಾದಿಗಳು ಆರಿಸದೇ ಇರುವುದು ತಪ್ಪುದಿಕ್ಕಿನಲ್ಲಿ ಟೀವಿಯನ್ನೋ ವಿಸಿಆರ್‌ ಅನ್ನೋ ಕೂಡಿಸುವುದು ಓವನ್‌ ಅಥವಾ ಮೈಕ್ರೋವೇವ್‌ ಉಪಕರಣಗಳನ್ನು ತಪ್ಪಾದ ಕಡೆ ಸಂಯೋಜಿಸುವುದು ಗೀಸರ್‌ ಅನ್ನು ಒಂದೆಡೆ ಬಚ್ಚಲಿಗೆ ತಗುಲಿ ಹಾಕುವುದು ಇತ್ಯಾದಿ ಸರಿಯಾದ ರೀತಿಯಲ್ಲಿ ನಡೆದಿರುವುದಿಲ್ಲ.

ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ನಿರ್ದಿಷ್ಟವಾಗಿ ಇದೇ ದಿಕ್ಕಿನಲ್ಲಿ ಸಂಯೋಜಿಸಲ್ಪಡುವ ವಿಚಾರ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಗೊಂಡಿಲ್ಲ ಉರಿ ಎದ್ದು ಬೆಂಕಿಯನ್ನು ಕಣ್ಣಲ್ಲಿ ಕಾಣುವ ಒಲೆ ಗ್ಯಾಸ್‌ ಒಲೆಗಳನ್ನು ಆಗ್ನೇಯದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಿಚಾರ ಸರಿ. ಆದರೆ ವಿದ್ಯುತ್‌ ನಿಣದ ನಡೆಯುವ ಉಪಕರಣಗಳನ್ನು ಪಶ್ಚಿಮ ಭಾಗಗಳನ್ನು ವಿಶೇಷವಾಗಿ ನೈಋತ್ಯವನ್ನು ಆಕ್ರಮಿಸುವಂತಿದ್ದರೆ ಸೂಕ್ತ. ಈ ಸಂದರ್ಭದಲ್ಲಿ ಹೈಟೆನÒನ್‌ ವಿದ್ಯುತ್‌ ಕಂಬಗಳು ಹೈಟೆನ್‌ ಲೋಡಿರುವ ವೈರುಗಳು ಜಾಲಾಡಿಕೊಂಡಿರುವ ಮನೆಯ ಹೊರವಲಯದ ಜೋಡಣೆಗಳ ವಿಚಾರವನ್ನು ಮನದಟ್ಟು ಮಾಡಿಕೊಂಡು ವಿದ್ಯುತ್‌ ಬಗೆಗೆ ಸೂಕ್ತ ಮಾಹಿತಿ ಇರುವ ತಜ್ಞರಿಂದ ಪಶ್ಚಿಮವೂ ತೊಂದರೆಗೆ ಈಡಾಗುವ ಬಿಂದುವೇ ಎಂಬುದನ್ನು ತಿಳಿದುಕೊಳ್ಳಿ. ಟೀವಿಯನ್ನಾಗಲೀ ಕಂಪ್ಯೂಟರ್‌ನ್ನಾಗಲೀ ಮಲಗುವ ಕೋಣೆಯಲ್ಲಿ ಇಡಲೇ ಕೂಡದು. ಇದು ಮಾನಸಿಕವಾದ ಅಂತರ್‌ ವಲಯವನ್ನು ಮೆದುಳಿನ ಸೂಕ್ಷ್ಮ ಕೋಶಗಳನ್ನು ಬಾಧಿಸುವ ವಿಚಾರವಾಗಿರುವುದರಿಂದ ಟೀ ಕಂಪ್ಯೂಟರ್‌ ಹಾಗೂ ಮೊಬೈಲ್‌ ವಿಷಯದಲ್ಲಿ ಟೆಲಿಫೋನಿನ ಲ್ಯಾಂಡ್‌ ಲೈನ್‌ ವಿಚಾರದಲ್ಲಿ ಎಚ್ಚರವಾಗಿರಿ.

ಅನಪೇಕ್ಷಿತ ವಿಚಾರವನ್ನು ತಿಳಿದು ಜಾಗರೂಕತೆಯಿಂದ ವರ್ತಿಸಿ. ಇನ್ನು ಎಷ್ಟೇ ಆದರೂ ಉಂಟಾಗುವ ಪಡಿಪಾಟಲುಗಳಿಂದಾಗಿ ದೇವರ ಮನೆಯಲ್ಲಿ ದೇವರ ಪೀಠ ಇರಿಸುವ ಕಟ್ಟೆಯ ಕೆಳಗಡೆ ಹವಳವನ್ನು ಇಟ್ಟು ಕಟ್ಟೆ ಕಟ್ಟುವುದು ಸೂಕ್ತ ವಿಚಾರ. ಧರಣಿ ಗರ್ಭಸಂಭೂತನಾದ ಅಂಗಾರಕನೇ ವಿದ್ಯುತ್‌ ಉಪಕರಣಗಳ ವಿಷಯದಲ್ಲಿ ನಿಯಂತ್ರಣಕ್ಕಾಗಿ ಜವಾಬ್ದಾರಿಯನ್ನು ಹೊತ್ತ ಗ್ರಹವಾದ್ದರಿಂದ ಹವಳವು ಪ್ರಧಾನವಾದ ದೇವರ ಕೋಣೆಯಲ್ಲಿ ಸೇರಿಕೊಂಡಿರುವುದು ಸೂಕ್ತವಾಗಿದೆ.


Monday, 5 March 2018

ಮನೆಯೊಳಗೆ ಹಳೇ ಸರಂಜಾಮುಗಳ ತಿಪ್ಪೆ ಗುಂಡಿ ಮಾಡಲೇ ಬೇಡಿ

ಅನಿಷ್ಟಗಳ ನಡುವಿನ ಆವರಣದಲ್ಲಿ ಚಿತ್ತಾರವಿಲ್ಲ. ಮನಸ್ಸಿಗೆ ಸುಖವೂ ಇಲ್ಲ. ಹಳತರಿಂದ ಹೊರಬರಲಾಗದೆ, ಹೊಸತೇ ಆದದ್ದನ್ನು ಕಟ್ಟುವ ವಿಚಾರದಲ್ಲಿ ನಕಾರಾತ್ಮಕ ವಿಚಾರಗಳು ಉಸಿರುಗಟ್ಟಿಸುತ್ತಾ ವರ್ತಮಾನವನ್ನು ಬೇಟೆಯಾಡುತ್ತವೆ.

ಇದು ಯಾರನ್ನೂ ಬೇಸರಿಸಲಿಕ್ಕೆಂದು ಬರೆದದ್ದಲ್ಲ. ಆದರೆ ಕೆಲವರ ಮನೆಯನ್ನು ಗಮನಿಸಿದರೆ ಇಡೀ ಮನೆ ಪೂರ್ತಿಯಾಗಿ ಬೊಬ್ಬಿರಿದ ತಿಪ್ಪೆಗುಂಡಿಯಂತಿರುತ್ತದೆ. ಒಂದು ರೂಮಿನಲ್ಲಿ ಹಳೆಯ ಪೇಪರ್‌, ಅರ್ಧರ್ಧ ತುಂಬಿದ ಪ್ಲಾಸ್ಟಿಕ್‌ ಚೀಲಗಳು ಎಲ್ಲಿಂದಲೋ ಬಂದ ಪತ್ರಗಳು ಉಪಯೋಗಿಸಲು ಮನಬಾರದೆ ಉಪಯೋಗಿಸಬೇಕು ಎಂಬ
ಮನಸ್ಸನ್ನು ಬಿಟ್ಟೂ ಬಿಡದೆ ಎಷ್ಟೆಷ್ಟೋ ವಸ್ತುಗಳು, ಎಷ್ಟೋ ವರ್ಷಗಳಿಂದ ಒಂದೆಡೆ ಕಿಕ್ಕಿರಿದು ತುಂಬಿಕೊಂಡಿರುತ್ತದೆ. ಮೋಕ್ಷಕಾಣದ ಆತ್ಮಗಳಂತೆ ಇವು ಕಾಣುತ್ತದೆ ಎಂದರೂ ತಪ್ಪಿಲ್ಲ. ಪಂಕ್ಚರ್‌ ಆದ ಟಯರು, ಹಳೆ ಸೈಕಲ್‌, ಹಳೆ ಚಪ್ಪಲಿಗಳು ಖಾಲಿ ಹಾಲಿನ ಪ್ಯಾಕೆಟ್ಟಿನ ಕವರುಗಳು, ಹಳೆ ಬೆಂಕಿ ಪೊಟ್ಟಣಗಳು, ಅಂಗಡಿಯಲ್ಲಿದ್ದಾಗ ಚೆನ್ನಾಗಿ ಕಂಡಿದ್ದಕ್ಕೆ ಖರೀದಿಸಿ ತಂದಿಟ್ಟುಕೊಂಡ ಪ್ಲಾಸ್ಟಿಕ್‌ ಹೂಗಿಡಗಳು, ಹೂಬಳ್ಳಿಗಳು ಹಸಿರು ತರುಲತೆಗಳು ಜೀವವಿಲ್ಲದ ಧೂಳ ಲೇಪದಲ್ಲಿ ಎಷ್ಟೋ ವರ್ಷಗಳಿಂದ ಹೊರಳಾಡಿಕೊಂಡಿರುತ್ತದೆ. ಯಾರೋ ಕೊಟ್ಟ ಉಡುಗೊರೆಗಳನ್ನು ಬಿಡಿ, ಅವುಗಳನ್ನು ಸುತ್ತಿದ್ದ ಪ್ಯಾಕಿಂಗ್‌ ಝರಿಗಳು ಬೇಗಡೆಗಳು ಸುತ್ತಿದ್ದ ಕಲರ್‌ ಸ್ತಿಂಗ್‌ಗಳು ಹಳತಾದ ಫೋಟೋ ಆಲ್ಬಂಗಳು ಹಳೆ ಫೋಟೋಗಳು ಕೆಸೆಟ್‌ಗಳು ಕೆಸೆಟ್‌ ಪ್ಲೇಯರYಳು, ಛತ್ರಿಗಳು ಹಳೆ ವಾಚು, ಎಷ್ಟು ಹಳತೆಂದರೆ ರಿಪೇರಿಯೂ ಸಾಧ್ಯವಿಲ್ಲದಷ್ಟು ಹಳತಾಗಿ ಕರಕಲಾಗಿರುವಂಥದ್ದು ಇತ್ಯಾದಿ ಸಾವಿರ ವಸ್ತುಗಳು ಮನೆಯಲ್ಲಿ ಬಿದ್ದಿರುತ್ತದೆ.

ಸೆಂಟಿಮೆಂಟಲ್‌ ಅಂಶಗಳೊಂದಿಗೆ ಅವು ನೆರಳು ಪಡೆದಿರುತ್ತದೆ ಅಥವಾ ಮುಂದೆ ಉಪಯೋಗಕ್ಕೆ ಬರಲಿದೆ ಎಂದು ಹಾಗೆ ಬಿದ್ದಿರುತ್ತದೆ. ಹಾಗೇ ಅವು ದಶಕಗಳಿಂದ ಅಲ್ಲಿರುತ್ತದೆ. ಹಳೆ ಬಟ್ಟೆಗಳ ವಿಷಯದಲ್ಲೂ ಇದೇ ಅನುಭವ. ಹಳೆ ಪುಸ್ತಕಗಳು ಹೀಗಯೇ ಜಾಗ ಪಡೆದುಕೊಂಡಿರುತ್ತದೆ. ಬಿಸಾಡಲಾಗದು ಇಟ್ಟುಕೊಳ್ಳಲಾಗದು. ಎರಡು ಅಲಗಿನ ಚೂರಿಯಂತೆ ನೆತ್ತಿಗೆ ತೂಗುವ ಈ ತಿಪ್ಪೆ ಎಂಬ ಮಾಯೆ ಬಹುತೇಕ ಜನರಿಗೆ ಒಂದು ಪ್ರಾರಬ್ಧದ ಭೇತಾಳ. ಬೆನ್ನು ಹತ್ತಿಕೊಂಡೇ ಇರುತ್ತದೆ. ವಿನೋದವೆಂದರೆ ನಿರಂತರವಾಗಿ ಮೂರು ವರ್ಷಗಳ ಕಾಲ ಒಂದು ದಿನವೂ ಉಪಯೋಗಕ್ಕೆ
ಬಂದಿರದ ವಸ್ತುನಿಂದ ಯಾವ ಉಪಯೋಗವೂ ಇಲ್ಲವೆಂಬುದನ್ನು ಗಮನಿಸಬೇಕು. ಮನೆಯ ವರ್ತಮಾನದಲ್ಲಿ ಅನವಶ್ಯಕವಾದ ವಸ್ತುಗಳಿಗೆ ಒದಗಿಸಲೇ ಬೇಕಾದ ಆದ್ರìತೆಯ ಪರಿಮಾಣ ಜಾಸ್ತಿಯಾಗುತ್ತಾ ಹೋದರೆ, ಅವಶ್ಯಕ ವಸ್ತುಗಳಿಗೆ ಇದು ಬೇಕಾದಷ್ಟು ಪ್ರಮಾಣದಲ್ಲಿ ಹಿತಕರವಾಗಿ, ಆರೋಗ್ಯಕರವಾಗಿ ಸಿಗುವುದಿಲ್ಲ.

ಕ್ಷೀಣ ಚಂದ್ರನ ಉಪಟಳದಿಂದಾಗಿ ಈ ತಿಪ್ಪೆಗುಂಡಿಯನ್ನು ಮನೆಯಲ್ಲಿ ಯಾರೋ ಒಬ್ಬರು ನಿರ್ಮಿಸುತ್ತಾರೆ. ಕ್ಷೀಣ ಚಂದ್ರನು ಇವರ ಜಾತಕದಲ್ಲಿ ಸುಖಸ್ಥಾನವನ್ನೂ, ಭಾಗ್ಯ ಹಾಗೂ ಲಾಭಾದಿ ಕುಟುಂಬ ಸ್ಥಾನಗಳನ್ನೂ ನಿಯಂತ್ರಿಸಿ ಇಡೀ ಬದುಕನ್ನು ಧನಾತ್ಮಕವಲ್ಲದ ಸ್ಪಂದನಗಳಿಂದ ಗೋಳಿನಿಂದ ತುಂಬಿಸಿ ಬಿಡುತ್ತಾನೆ. ಇದೇ ಚಂದ್ರನಿಂದ ಶನಿಕಾಟದ
ಸಂದರ್ಭದಲ್ಲಿ ಶನೈಶ್ಚರನಿಂದ ಅನೇಕ ತೊಂದರೆಗಳು ಎದುರಾಗುತ್ತದೆ. ಹಳೆಯ ವಸ್ತುಗಳನ್ನು ಶಿಸ್ತಿನಿಂದ ಒಂದೆಡೆ ಜೋಡಿಸಿ ಯಾವುದೋ ಶತಮಾನದ ತುಣುಕೊಂದನ್ನು ಪ್ರಗಲ#ತೆಯಿಂದ ಬಿಂಬಿಸುವುದು ಬೇರೆ. ಆದರೆ ಇಂದು ಎಂಬುದು ಎಂದೋ ದೂರದೊಂದು ಕಾಲದಲ್ಲಿ ಭೂತಕಾಲವಾಗಿದ್ದ ಭಾಗದ ವಿಚಾರವೊಂದನ್ನು, ವಸ್ತುವೊಂದನ್ನು
ಹದಗಟ್ಟಿಸುವುದು ಬೇರೆ. ಆದರೆ ಅದೇ ಇಂದು ಹೊಸ ಹೊಸ ಡಿವಿಡಿ, ಸಿಡಿಗಳ ಬೂಜು ಹಿಡಿದು ಕಗ್ಗಂಟಾದ ಕೆಸೆಟ್‌ಗಳನ್ನು ಒಂದು ಹಳೆ ಪೆಟ್ಟಿಗೆಯಲ್ಲಿ ಧೂಳಿನ ಕಲ್ಪದಲ್ಲಿ ಕಟ್ಟಿಕೊಂಡ ದಿನ, ತುಂಬಿದ ಬಸುರಿಯಂತೆ ಉಸಿರು ಬಿಡುತ್ತಿದ್ದರೆ ಅದು ನರಕಸದೃಶವಾದ ವಿಚಾರ. ಅನಿಷ್ಟಗಳ ನಡುವಿನ ಆವರಣದಲ್ಲಿ ಚಿತ್ತಾರವಿಲ್ಲ. ಮನಸ್ಸಿಗೆ ಸುಖವೊ ಇಲ್ಲ. ಹಳತರಿಂದ ಹೊರಬರಲಾಗದೆ ಹೊಸತೇ ಆದದ್ದನ್ನು ಕಟ್ಟುವ ವಿಚಾರದಲ್ಲಿ ನಕಾರಾತ್ಮಕ ವಿಚಾರಗಳು ಉಸಿರುಗಟ್ಟಿಸುತ್ತಾ ವರ್ತಮಾನವನ್ನು ಬೇಟೆಯಾಡುತ್ತದೆ.


Saturday, 3 March 2018

ಮನೆಯಲ್ಲಿ ಓಂಕಾರ; ಎಲ್ಲದಕ್ಕೂ ಅದೇ ಶ್ರೀಕಾರ

ಭಾರತೀಯ ಸಂಸ್ಕೃತಿಯಲ್ಲಿ ಪಂಚಮ ಸ್ಥಾನಕ್ಕೆ ಬಹುತರವಾದ ತೂಕ ಹಾಗೂ ಎತ್ತರವಿದೆ. ಪಂಚ ಮಹಾಭೂತಗಳು ಪಂಚತತ್ವದಲ್ಲಿನ ದಾರಿ ಕಾರ್ಯಕ್ಕೆ ಸಿದ್ಧಿಯಾಗುತ್ತದೆಂಬ ನಂಬಿಕೆ. ಪಂಚಮುಖೀ ಶಿವ, ಪಂಚಮುಖೀ ಆಂಜನೇಯ ಸೌರಭಕ್ಕೆ ದಾರಿ ಮಾಡುವ ಪಂಚವಳಿ, ಪಂಚವಾಳದಲ್ಲಿರುವ ಅರಿಶಿಣ, ಕುಂಕುಮಾದಿ ಸುದ್ರವ್ಯ, ಕ್ಷೀರ, ಮಧು, ಘೃತ, ತವರಾಜಾದಿ ಪಂಚಾಮೃತಗಳು ಪಂಚಮಹಾ ಪುರುಷಗಳೆಂಬ ಸಿದ್ದಿಯ ದಾರಿಯ ಜಾತಕದಲ್ಲಿನ ಯೋಗಗಳು, ಪಂಚಮಹಾ ಕನ್ನಿಕೆಯರು, ಪಂಚಮ ಸ್ವರ, ಮಾಧುರ್ಯ, ಶಿವನ ಸಾûಾತ್ಕಾರಕ್ಕಾಗಿನ ಪಂಚಮನ ಬಗೆಗಿನ ನಮ್ಮ ಗೌರವಾದರಗಳು, ಇತ್ಯಾದಿ ಇತ್ಯಾದಿ ನಮ್ಮ ಆಂತರ್ಯ ಹಾಗೂ ಬಾಹ್ಯ ಸಂಬಂಧವಾದ ಶುಚಿತ್ವಕ್ಕೆ ದಾರಿ ದೀಪಗಳಾಗಿದೆ. ಬ್ರಹ್ಮನು ಸೃಷ್ಟಿ ಕರ್ತನಾದರೂ ವಿಷ್ಣುವು ಪಾಠ, ಪಾಲನೆಯ ಹೊಣೆ ಹೊತ್ತರೂ ಶಿವನು ತನ್ನೊಳಗಿನ ಅಪೂರ್ಣತೆಗಾಗಿ ದುಃಖೀತನಾದಾಗ ಸತಿಯಾದ ದಾûಾಯಿಣಿಯನ್ನು ತನ್ನ ಅಪೂರ್ಣತ್ವವನ್ನು ನಿವಾರಿಸಿಕೊಳ್ಳು ತನ್ನ ಮಡದಿಯಾಗು ಎಂದು ಅಂಗಲಾಚಿಕೊಳ್ಳುತ್ತಾನೆ.

 ಹೀಗಾಗಿ ಶಿವನ ಪೂರ್ಣತ್ವವೆಂದರೆ ನಾರೀತನ ಸಮ್ಮಿಳಿಸಿದ ಅರ್ಧನಾರೀಶ್ವರತ್ವ. ಸಕಲ ಸಂನ್ಮಂಗಳೆಯಾದ ಪ್ರಕೃತಿಯು ತನ್ನ ಪೂರ್ಣ ಸಂವರ್ಧನೆಗಾಗಿ ಪುರುಷನಾದ ಶಿವನನ್ನು ಸ್ತುತಿಸುತ್ತಾಳೆ. ಶಿವನೆಂಬ ಪುರುಷ ಚೇತನ ಪಡೆದು ನಿಗುರುವುದೇ ಪ್ರಕೃತಿ ತನ್ನ ಬಳಿ ಬಂದಾಗ. ಈ ಆಧಾರದ ಮೇಲೆ ಬ್ರಹ್ಮನ ಸೃಷ್ಟಿಗೆ ಅವಕಾಶ. ಬ್ರಹ್ಮ ಹಾಗೂ ಮಹೇಶ್ವರರ ಸಂಪರ್ಕದ ಕೊಂಡಿಯಾಗಿ ಮಹಾವಿಷ್ಣು ಇದ್ದಾನೆ. ಶಿವನ ಮೂರನೆಯ ಕಣ್ಣು ವಿಶ್ವದ ಚೈತನ್ಯದ, ನಾಶದ ಬೆಂಕಿಯ ಭಾಗವಾಗಿದೆ. ಈ ಬೆಂಕಿಯೂ ಸರ್ವಸ್ವವನ್ನೂ ರುದ್ರ ಭಯಂಕರವಾದ ರೀತಿಯಲ್ಲಿ ಶುದ್ಧಗೊಳಿಸಿದರೆ ಪಂಚಗವ್ಯ ಪಂಚಭೂತಾತ್ಮಕವಾದ ಶರೀರವನ್ನು ಶುದ್ಧಗೊಳಿಸುತ್ತದೆ.

 ಹಾಗೆಯೇ ಗ್ರಹವೆಂಬುದು ನಮ್ಮ ವಾಸದ ಶಿವನ ಆಲಯವಾಗಿದ್ದು, ಶಿವನನ್ನು ಸಂತುಷ್ಟಗೊಳಿಸುವ ದಾರಿಯಲ್ಲಿ ಹೆಜ್ಜೆ ಇರಿಸಿದಾಗಲೇ ಅದು ಸಾಧ್ಯ. ಹೊರನೋಟಕ್ಕೆ ವಿಕೃತವಾಗಿ ಕಾಣಿಸುವ ವಿರೂಪಾಕ್ಷ ಶಿವ ಒಳಗಿನಾಳದ ಒಳಗೆ ಪರಮಶುಚಿತ್ವದ ಕಣಜನಾಗಿದ್ದಾನೆ. ಅದು ಬೆಂಕಿಯ ಸುಡುಜಾÌಲೆಯಿಂದಾಗಿ ಮಾತ್ರವಲ್ಲ, ಪ್ರೇಮದ ಶಾಂತಭಾವ ಸಾಂಪ್ರತದಲ್ಲಿ ಹುಟ್ಟುವ ಜೀವಜೀವದ ನಡುವಣ ಅವಲಂಭನದ ಸತ್ಯದ ಕಾವು. ಜೀವ ಬೆಳೆಸುವ ಜೀವದ್ರವ್ಯದ ಕಾವೂ ಹೌದು. ಹೀಗಾಗಿ ಆಂತರಿಕವಾದ ಜೀವದ ಕಾವು ಚಲನಶೀಲತೆಯಿಂದ ತುಂಬಿದೆ. ಕಾವು ಆರಿದಾಗ ಮರಣ ಸಂಪ್ರಾಪ್ತ. ಜೀವ ಹೋದಾಗ ಜೀವಿಯ ದೇಹ ಹಾವಿನಂತೆ ತಣ್ಣನೆಯ ಬರಿಮೈ.

 ಈ ಎಲ್ಲಾ ಕಾರಣದಿಂದಾಗಿ ಮನೆಯಲ್ಲಿ ಓಂ ಎಂಬ ನೀನಾದ ಪಂಚ ಆವರ್ತನಗಳೊಂದಿಗೆ ಪಂಚೇಂದ್ರಿಯಗಳ ಅನುಭವಕ್ಕೆ ಸ್ಪಂದಿಸುವ ಸಚೇತಕತೆ ಒದಗಿಸಿದಾಗ ಬೇರೆ ರೀತಿಯ ಸಾಮರ್ಥ್ಯವನ್ನು ಮನೆಯೊಳಗಿನ ಸದಸ್ಯರಿಗೆ ಒದಗಿಸುತ್ತದೆ.  ಮನೆಯ ವಾಸ್ತುವಿಗೆ ಕೊರತೆಗಳಿರುವ ದೋಷಗಳು ಓಂಕಾರ ನಾದ ಮನೆಯಲ್ಲಿ ತುಂಬಿದ್ದರೆ ಕೆಡುಕನ್ನು ಹೊಡೆದು ಉತ್ತಮವಾದುದನ್ನು ಬಿತ್ತುವ ಕೆಲಸ ನಡೆಯುತ್ತದೆ. ಹೀಗಾಗಿ ಶಿವನ ಸ್ತೋತ್ರ ರುದ್ರ ಪಠಣ, ಚಮಕ ಪಠಣಗಳೆಲ್ಲ ಸದಾ ಮನೆಯಲ್ಲಿ ತುಂಬಿರಲಿ ಎಂದರೆ ಅದು ಸರ್ವರಿಗೂ ಸಾಧ್ಯವಾಗುವ ಸರಳ ವಿಷಯವಾಗದು. ಆದರೆ ಓಂ ಎನ್ನುವ ಓಂಕಾರ ಜಪದಿಂದ ಐದು ಘಟ್ಟಗಳಲ್ಲಿ
ಸಾಧ್ಯವಾಗಲಿ. ಒಂದು ಬೆಳಗ್ಗೆ ಸ್ನಾನಾ ನಂತರ ಮಧ್ಯಾಹ್ನದ ಊಟಕ್ಕೆ ಮುನ್ನ ಮೂರು ಗೋಧೂಳಿ ಸಮಯದಲ್ಲಿ ನಾಲ್ಕು ರಾತ್ರಿಯ ಊಟದ ಒಂದು ತಾಸಿಗೆ ಮುಂಚೆ, ಐದು ಇನ್ನೇನು ಮಲಗುವ ಮುನ್ನ ಹೀಗೆ ಪಂಚಾವರ್ಣ ಪೂರ್ಣ ಶಿವನ ಓಂಕಾರ ಜಪ ಸಿದ್ಧಿಸಿಕೊಳ್ಳಿ. ಇದರಿಂದ ಮನೆಯ ವಾಸ್ತು ದೋಷಗಳಿಗೆ ತಡೆ ದೊರಕುತ್ತದೆ. ಜೊತೆಗೆ ಶಿವಪುರಾಣ ವಿಷ್ಣು ಪುರಾಣ ಬ್ರಹ್ಮಾನಂದ ಸೂತ್ರಪೂರಕ ಶಾರದಾ ಸ್ತೋತ್ರಗಳ ಪಠಣದಿಂದ ಜೀವಿಯ ದೇಹದ ಕಾಂತಿಗೆ ಆಯುಷ್ಯ ವೃದ್ಧಿಗೆ ದಾರಿ ಸಿಗುತ್ತದೆ. ಎಲ್ಲವೂ ಪಠಿಸಲು ಅಸಾಧ್ಯವಾಗುವ ಒತ್ತಡ ಇಂದಿನ ಆಧುನಿಕ ಜೀವನದಲ್ಲಿದೆ.  ಹೀಗಾಗಿ ಓಂಕಾರದ ನಾದ ತಾದಾತ್ಮವೇ ಸಕಲ ಸನ್ಮಂಗಳಕ್ಕೂ ದಾರಿಯಾಗುವ ಸಂಜೀವಿನಿಯಾಗಿದೆ.

 ದೇವತೆಗಳ ಸಕಲ ವಿಶ್ವ ಜೀವಿಗಳ ಯಶೋಗಾಥೆಗೆ ವಾಸ್ತು ಶ್ರೀಮಂತಿಕೆಗೆ ಜನಕನಾದ ದೇವಶಿಲ್ಪಿ ಮಯನು ಮಹಾವಿಷ್ಣುವನ್ನೇ ವಾಸ್ತುಪುರುಷನನ್ನಾಗಿ ಗುರುತಿಸುತ್ತಾನೆ. ವಿಷ್ಣುವಿನ ನಾಭಿಯಿಂದ ಬೆಳೆದ ಕಮಲದಲ್ಲಿ ಬ್ರಹ್ಮನು ಪೂರ್ಣತ್ವಕ್ಕೆ ಸಂಕೇತನಾಗಿದ್ದಾನೆ. ವಿಷ್ಣು ಹಾಗೂ ಬ್ರಹ್ಮಂದಿರು ಓಂಕಾರ ಹಾಗೂ ಪೂರ್ಣವಾದ ಶಿವನಿಂದ ಬಲಾಡ್ಯರು ಎಂದು ಮಯನು ಹೇಳಿದ್ದಾನೆ. 

Friday, 2 March 2018

ವಾಸ್ತು ನಿಮ್ಮ ಮಕ್ಕಳ ಒತ್ತಡ ತಗ್ಗಿಸಬಹುದು

ಸಣ್ಣಪುಟ್ಟ ವಾಸ್ತುಶಾಸ್ತ್ರದ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಮಕ್ಕಳ ಪರೀಕ್ಷಾ ಒತ್ತಡವನ್ನು ತಗ್ಗಿಸಬಹುದು. ಪರೀಕ್ಷೆ ಸಮೀಪಿಸುತ್ತಲೇ ಹೆಚ್ಚು ಅಂಕ ಪಡೆಯಲೋಸುಗ ಸದಾಕಾಲ ಪುಸ್ತಕ ಹಿಡಿದು ಓದುವಂತೆ ಮಕ್ಕಳನ್ನು ಹಿಂಸಿಸುವುದು ಅವರ ಮನಸ್ಸಿನ ಮೇಲೆ ಅಡ್ಡಪರಿಣಾಮ ಬೀರಬಹುದು. ಮಕ್ಕಳ ಹೆತ್ತವರು ನೀವಾಗಿದ್ದರೆ, ಇಲ್ಲ ನಿಮ್ಮ ಮನೆಯಲ್ಲಿ ಓದುವ ಮಕ್ಕಳಿದ್ದರೆ ಇಲ್ಲಿ ಕೊಟ್ಟಿರುವ ಕೆಲವು ಸರಳ ಸೂತ್ರಗಳನ್ನು ಗಮನಿಸಿ.

ನಿಮ್ಮ ಮಗುವು-
*ಎಂದಿಗೂ ಪಶ್ಚಿಮ ಮತ್ತು ಉತ್ತರಕ್ಕೆ ತಲೆ ಹಾಕಿ ಮಲಗಬಾರದು.

*ನಿಮ್ಮ ಮಗುವು ಹುಡುಗನಾಗಿದ್ದರೆ, ಮನೆಯ ಅಥವಾ ಕೊಠಡಿಯ ವಾಯುವ್ಯ ಭಾಗದಲ್ಲಿ ಮಲಗಿ ನಿದ್ರಿಸದಂತೆ ಎಚ್ಚರ ವಹಿಸಿ.

*ಹುಡುಗಿಯಾಗಿದ್ದಲ್ಲಿ ಮನೆಯ ಅಥವಾ ಕೊಠಡಿಯ ನೈರುತ್ಯ ಭಾಗದಲ್ಲಿ ನಿದ್ರಿಸದಿರಲಿ.

*ಮಲಗುವ ಕೋಣೆಯಲ್ಲಿ ಕನ್ನಡಿಗಳು ಬೇಡ.

*ಮಕ್ಕಳು ಅಭ್ಯಾಸಕ್ಕೆ ಬಳಸುವ ಜಾಗದ ದಕ್ಷಿಣ ಮತ್ತು ಪಶ್ಚಿಮ ಗೋಡೆಗಳಲ್ಲಿ ಕನ್ನಡಿಗಳನ್ನು ಅಳವಡಿಸಬೇಡಿ.

*ಅಭ್ಯಾಸ, ಓದಿನ ವೇಳೆಗೆ ಪೂರ್ವ ಅಥವಾ ಉತ್ತರದತ್ತ ಮುಖಮಾಡಲಿ.

*ಸುತ್ತಮುತ್ತ ಪುಸ್ತಕ ಹಾಳೆಗಳನ್ನು ಹರಡದೆ ಅಭ್ಯಾಸದ ಮೇಜನ್ನು ಶುದ್ಧವಾಗಿಸಿ.

*ಮನೆಯ ಅಥವಾ ಕೊಠಡಿಯ ಈಶಾನ್ಯ ಭಾಗದಲ್ಲಿ ಮಕ್ಕಳಿಗೆ ಓದುವ ಜಾಗವನ್ನು ಅನುವು ಮಾಡಿ ಕೊಡಿ.

*ಮಕ್ಕಳು ಹೆಚ್ಚಿನ ಒತ್ತಡದಲ್ಲಿದ್ದರೆ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಲು ಹೇಳಿ.

*ಕುಟುಂಬದ ಸದಸ್ಯರು ಒಟ್ಟಾಗಿ ಕಲೆಯು ಲೀವಿಂಗ್ ರೂಮಿನ ಈಶಾನ್ಯ ದಿಕ್ಕಿಗೆ ಮೀನುಗಳ ಅಕ್ವೇರಿಯಂ, ನೀರಿನ ಕಾರಂಜಿ ಅಥವಾ ಅರ್ಧ ಡಜನ್ ಬಿದಿರಿನ ಸಸಿಗಳನ್ನಿಡಿ. ಆದರೆ ಎಂದಿಗೂ ಇವುಗಳನ್ನು ಮೂಲೆಯಲ್ಲಿ ಇಡಬೇಡಿ.

*ಮಕ್ಕಳು ಮಲಗುವ ಮತ್ತು ಅಭ್ಯಾಸ ನಡೆಸುವ ಸ್ಥಳಗಳಲ್ಲಿ ಹಸಿರು ಮತ್ತು ಹಳದಿ ಬಣ್ಣಗಳು ಯಥೇಚ್ಛವಾಗಿರಲಿ. ಹೊದಿಕೆ, ಅಭ್ಯಾಸ ಮೇಜಿನ ಹಾಸು ವಸ್ತ್ರ, ಕಿಟಿಕಿ ಬಾಗಿಲಿನ ಪರದೆಗಳು, ಮನೆಯೊಳಗಿಡುವ ಗಿಡಗಳು, ದಿಂಬಿನ ಕವರ್ ಇತ್ಯಾದಿಗಳನ್ನು ಈ ಬಣ್ಣದಲ್ಲೇ ಆರಿಸಿ.

*ಊಟ ಮಾಡುವ ವೇಳೆ, ಹುಡುಗಿಯಾಗಿದ್ದಲ್ಲಿ, ಪೂರ್ವಕ್ಕೂ, ಹುಡುಗನಾಗಿದ್ದರೆ ಉತ್ತರಕ್ಕೂ ಮುಖಮಾಡಿರಲಿ.

*ಕಲಿಕಾ ನಿರತವಾಗಿರುವ ಮಕ್ಕಳು ಬಳಸುವ ಜಾಗ ಮತ್ತು ಮಲಗುವ ಜಾಗವನ್ನು ಇತರರು ಬಳಸದಂತೆ ಜಾಗೃತೆ ವಹಿಸಿ.

*ಬೆಳಿಗ್ಗೆ ಎದ್ದೊಡನೆ ಬರಿಯ ಹೊಟ್ಟೆಗೆ ಕೆಲವು ತುಳಸಿ ಎಲೆಗಳನ್ನು ತಿನ್ನುವ ಅಭ್ಯಾಸ ಮಾಡಿಸಿ

*ಎಂದಿಗೂ ಕಿವಿಗಡಚಿಕ್ಕುವ ಸಂಗೀತವನ್ನು ಕೇಳಿಸಲೇ ಬೇಡಿ. ಇದು ಅವರ ಮನಸ್ಸಿನ ಕೇಂದ್ರೀಕರಣಕ್ಕೆ ಧಕ್ಕೆ ತರಬಹುದು ಮತ್ತು ಒತ್ತಡವುಂಟುಮಾಡಹುದು.

*ಅತ್ಯಂತ ಕನಿಷ್ಠ ಧ್ವನಿಯಲ್ಲಿ ಮೃದುವಾಗ ಲಘಸಂಗೀತವನ್ನು ರಾತ್ರಿಯ ವೇಳೆ ಅವರ ಮಲಗುವ ಕೋಣೆಯಲ್ಲಿ ಕೇಳಿಸಿ. ಇದು ಗಾಯತ್ರಿ ಮಂತ್ರವೂ ಆಗಿರಬಹುದು.

*ಸೇರಿದ ಗೋಡೆಗಳ ಕೋನಕ್ಕೆ ಬಾಗಿಲಿರುವ ಕೋಣೆಯಲ್ಲಿ ಮಕ್ಕಳು ಮಲಗುವುದು ಮತ್ತು ಅಧ್ಯಯನ ನಡೆಸುವುದು ಬೇಡ.

*ಇವಿಷ್ಟು ಅಂಶಗಳನ್ನು ಗಮನಿಸುವುದರೊಂದಿಗೆ ಮಕ್ಕಳಲ್ಲಿ ಧನಾತ್ಮಕ ಮನೋಭಾವ ತುಂಬಿ. ಅವರ ಬಗ್ಗೆ ಧನಾತ್ಮಕವಾಗಿ ಮಾತನಾಡದಿರಿ. ನೀವು ಮಕ್ಕಳನ್ನು ಪ್ರೀತಿಸುತ್ತೀರೆಂಬ ಭದ್ರತಾ ಭಾವನೆ ಅವರಲ್ಲಿ ಮೂಡುವಂತೆ ಮಾಡಿ.

*ಮಧ್ಯೆ ಮಧ್ಯೆ ಅವರಿಗೆ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿ. ಆಟವಾಡಲು ಅಥವಾ ಅವರ ಇಷ್ಟದಲ್ಲಿ ತೊಡಗಲು ಇಲ್ಲವೇ ಯೂವುದಾದರೂ ಹೊಟೇಲಿಗೆ ಕರೆದೊಯ್ಯಿರಿ.

*ಮಕ್ಕಳ ಮನಸ್ಸನ್ನು ಬೇರೆಡೆಗೆ ಸೆಳೆಯುವಂತಹ ಯಾವದೇ ವಸ್ತುವನ್ನು ಅವರ ಅಭ್ಯಾಸ ಜಾಗದಲ್ಲಿ ಇರಿಸಬೇಡಿ. *ಮಕ್ಕಳು ವ್ಯಾಯಾಮ ಧ್ಯಾನ ಮಾಡಲು ಪ್ರೇರೇಪಿಸಿ. ಆದರೆ ಯಾವುದೇ ವಿಚಾರದಲ್ಲೂ ಅವರನ್ನು ಒತ್ತಾಯಿಸುವುದೇ ಬೇಡವೇ ಬೇಡ.

ಸರಿ, ಇದೀಗ ನಿಮಗೂ, ನಿಮ್ಮ ಮಗುವಿಗೂ ಶುಭಹಾರೈಕೆಗಳು. ವಾಸ್ತು ಸಹಾಯದಿಂದ ನಿಮ್ಮ ಮಗುವು ಒತ್ತಡರಹಿತವಾಗಿ ಪರೀಕ್ಷೆ ಬರೆಯುವಂತಾಗಲಿ.

Thursday, 1 March 2018

ಇರಬೇಕು ಒಂದು ಇಂಥ ಓದಿನ ಕೋಣೆ

ಮನೆ ಎಂದರೆ ಉಳಿಯಲು ಬೇಕಾದ ನಾಲ್ಕು ಗೋಡೆಗಳಿಗೆ, ಮೇಲ್ಛಾವಣಿಗೆ ಮಾತ್ರ ಬೇಕಾದ ತಾಣವಲ್ಲ. ಮನೆ ಎಂದರೆ ವಾಸಿಸಲು ಬೇಕಾದ ನಿರ್ಮಲ ಸ್ಥಳ. ವಾಸದ ಮನೆ ವಿಶ್ರಾಂತಿಗೆ ಅನುಪಮವಾದ ಅವಕಾಶ ಒದಗಿಸಿ, ಸಂಜೀವಿನಿಯಂತೆ ಬದುಕನ್ನು ತಿರುತಿರುಗಿ ಸಶಕ್ತಗೊಳಿಸಿ ಪುನರುತ್ಥಾನಕ್ಕೆ ದಾರಿಯಾಗಿಸುವ ಉಲ್ಲಾಸದ ಸ್ಥಳ. ಹಾಗೆಯೇ ಬುದ್ಧಿ ಶಕ್ತಿ, ಚಾತುರ್ಯ, ಸಮಯ ಪ್ರಜ್ಞೆ, ವಿನಯ, ಸದ್ಬುದ್ಧಿಗಳೊಂದಿಗೆ ಸಂಪನ್ನ ಸಂಸ್ಕಾರವನ್ನ ಒದಗಿಸುವ ನೆಲೆಯೂ ಆಗಿದೆ.

ಮಾನವನ ಧೀ ಶಕ್ತಿಗೆ ಉತ್ತಮವಾದೊಂದು ಅಡಿಪಾಯ ಕೂಡ ವಾಸದ ಮನೆಯಲ್ಲಿ ದೊರಕಬೇಕು. ಶಾಲೆ, ಕಾಲೇಜು, ಗುರು ಕುಲಗಳಲ್ಲಿ ಓದು, ಬರಹ, ಪಾಠ, ಬೋಧನೆಗಳೆಲ್ಲ ದೊರಕಿದರೂ ಮನೆ, ಚಿಂತನೆಗೆ, ಮಂಥನಕ್ಕೆ, ಅಂತೆಯೇ ಇತರ ಅನೇಕ ವಿಚಾರಗಳನ್ನು ತಿಳಿಯುವ ಓದಿಗೆ ಸೂಕ್ತ ಭೂಮಿಕೆಯನ್ನು ಕಟ್ಟಿಕೊಡುತ್ತದೆ. ಹೀಗಾಗಿ ನಿರಂತರ ಅಭ್ಯಾಸನಗಳಿಗೆ ಮನೆ ಫ‌ಲವಂತಿಕೆಯ ಬೀಡೇ ಆಗಿದೆ. ಪಶ್ಚಿಮ ದಿಕ್ಕಿನಲ್ಲಿ ಓದುವ ಕೋಣೆಯೊಂದು ಮನೆಯಲ್ಲಿರುವುದು ಒಳ್ಳೆಯ ವಿಚಾರವಾಗಿದೆ. ನೈಋತ್ಯ ಮೂಲೆಯಲ್ಲಿ ಓದಿನ ಕೋಣೆ ಬರಬಾರದು. ವಾಯವ್ಯದ ಮೂಲೆಗೂ ಓದಿನ ಕೋಣೆ ಇರಬಾರದು. ಓದಿನ ಸತ್ವ ಈ ದಿಕ್ಕುಗಳಲ್ಲಿ ನೂಕಲ್ಪಡುತ್ತದೆ.

 ಪಶ್ಚಿಮ ದಿಕ್ಕಿನ ಓದಿನ ಕೋಣೆಯಲ್ಲಿ ಓದಿನ ಶಕ್ತಿಗೆ ಸಂಪನ್ನತೆ, ಆರೋಗ್ಯಕರ ಸಮತೋಲನ ದೊರಕಿ ಬೌದ್ಧಿಕ ಹಾಗೂ ಮಾನಸಿಕ ವಿಕಾಸಗಳಿಗೆ ಅವಕಾಶ ಒದಗಿಬರುತ್ತದೆ. ಈ ದಿಕ್ಕಿನಲ್ಲಿ ಬುಧ,ಗುರು, ಶುಕ್ರ ಹಾಗೂ ಚಂದ್ರ ಗ್ರಹಗಳ
ಶುಭಕಾರಕವಾದ ಪ್ರೇರಕ ಶಕ್ತಿ ಕೂಡಿಬರುತ್ತದೆ. ಈ ಎಲ್ಲಾ ಗ್ರಹಗಳೂ ಶುಭ ಗ್ರಹಗಳ ಪಟ್ಟಿಯಲ್ಲಿ ಸಮಾವೇಶಗೊಳ್ಳುತ್ತವೆ. ಈ ಶುಭಕಾರಕವಾದ ಶಕ್ತಿಯೇ ಬೌದ್ಧಿಕ ವಿಕಸನಕ್ಕೆ ಹೆದ್ದಾರಿ ರೂಪಿಸುವ ಧಾತವಾಗಿದೆ. ಬುಧನಿಂದ ಮೇಧಾ ಶಕ್ತಿ, ಗುರುವಿನಿಂದ ಜ್ಞಾನ, ಚಂದ್ರನಿಂದ ಮಾನಸಿಕ ಸ್ಥೈರ್ಯ, ಶುಕ್ರನಿಂದ ಸಂಕಲ್ಪಿತ ಕಾರ್ಯದಲ್ಲಿ ಮುಂದಡಿ ಇಡುವ ಇಚ್ಛಾಶಕ್ತಿಗಳು ಚಿಮ್ಮುಕೊಳ್ಳುತ್ತಿರುತ್ತವೆ. ಪ್ರಾಣಿಗಳಿಗಿಂತ ಮನುಷ್ಯ ಹೀಗೆ ಭಿನ್ನನಾಗುತ್ತಾನೆ.

 ಈ ಭಿನ್ನ ಸಂವಿಧಾನದಿಂದಾಗಿ ಪಾಶವೀ ಗುಣ, ಕ್ರೌರ್ಯಗಳು ಮೂಲೆ ಸೇರಿ ಸಾತ್ವಿಕ ಮಾರ್ಗಕ್ಕೆ ಬಾಗಿಲು ತೆರೆದು ಕೊಳ್ಳುತ್ತದೆ. ಹುರುಪು, ಮಹತ್ವಾಕಾಂಕ್ಷೆ, ಪೂರಕ ಪ್ರಯತ್ನಗಳಿಗೆ ಸಿದ್ಧಿಯೂ ಸಾಧ್ಯ. ಶುಕ್ರನ ಮತ್ತೂಂದು ದೊಡ್ಡ ಶಕ್ತಿ ಎಂದರೆ ಪ್ರತಿಭೆಗೆ ಉದ್ದೀಪನೆ ನೀಡುವ ವಿಫ‌ುಲ ಉತ್ಸಾಹವನ್ನ ನೈಸರ್ಗಿಕವಾಗಿ ಒದಗಿಸಿಕೊಡುವ ಪ್ರಚೋದಕ ಕ್ರಿಯೆ. ಹೀಗೆ ಓದಿನಿಂದ, ಮಾತು, ಪ್ರತಿಭೆಯ ವಿಕಸನ, ವಿನಯಗಳ ಸಿದ್ಧಿ ಸಾಧ್ಯ. ಈ ಸಿದ್ಧಿಯಿಂದ ಜೀವನಕ್ಕೆ ಬೇಕಾದ ದ್ರವ್ಯ ಸಂಪಾದನೆಗಳಿಗೆ ಸಾತ್ವಿಕ ಅವಕಾಶಕ್ಕೆ ದಾರಿ ಸಿಗುತ್ತದೆ. ಮನೆಯಲ್ಲಿ ನಮ್ಮ ಓದು ಪೂರ್ವದ ಕಡೆ ಅಥವಾ ಉತ್ತರದ ಕಡೆ ಮುಖ ಮಾಡಿಯೇ ಇರಬೇಕು. ಓದಿನ ಕೋಣೆಯ ಗೋಡೆಗಳ ಬಣ್ಣ ಆಕಾಶ ನೀಲಿ ಅಥವಾ ಕೆನೆ ಬಣ್ಣದಲ್ಲಿದ್ದರೆ ಒಳ್ಳೆಯದು. ಬಿಳಿ ಅಥವಾ ಹಸಿರು ಬಣ್ಣಗಳೂ ಕೂಡ ಅನುಪಮವೇ ಆಗಿವೆ.

ನೆಲದ ಹಾಸುಗಳೂ ಕೂಡ ಇವೇ ಬಣ್ಣವನ್ನು ಹೊಂದಿದ್ದಲ್ಲಿ ಉತ್ತಮ ಫ‌ಲ ಸಿಗಬಹುದಾಗಿದೆ. ಓದಿನ ಕೋಣೆಯ ಕಿಡಕಿಗಳು ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕುಗಳಿಗೆ ಇದ್ದಿರುವುದು ಸೂಕ್ತ.

 ಪುಸ್ತಕಗಳು ಜೋಡಿಸಲ್ಪಟ್ಟು, ಓರಣವಾಗಿ ಅಭ್ಯಾಸದ ಕೋಣೆ ಇರುವುದು ಮುಖ್ಯ. ಚಲ್ಲಾಪಿಲ್ಲಿಯಾಗಿ ಪುಸ್ತಕಗಳು ಹರಡಿ ಹಂಚಿಕೊಂಡು ಇರಬಾರದು. ಪುಸ್ತಕಗಳ ಕಪಾಟುಗಳು ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರುವುದು
ಪ್ರಶಸ್ತವೆನಿಸುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಕೂಡಾ ಪುಸ್ತಕದ ಕಪಾಟುಗಳನ್ನು ಇಡಬಹುದಾಗಿದ್ದು, ಉತ್ತಮ ಓದಿಗೆ ಇದು ಸಹಾಯಕವೇ.


ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...