Thursday, 30 November 2017

ವಾಸ್ತು ಅಂದರೆ ಹೀಗೆ ಕಾಲ, ಕಾಲಕ್ಕೆ ಬದಲಾಗುವ ವಿಚಾರವಲ್ಲ

ನಿಯಮಗಳು ಯಾವಾಗಲೂ ಬದಲಾಗುವ ಕಾಲವನ್ನು ಮೊತ್ತಮೊದಲಾಗಿ ಊಸಿಕೊಂಡೆ ರೂಪಿತಗೊಳ್ಳುತ್ತದೆ ಎಂಬುದು ವಾಸ್ತವಿಕ ಸತ್ಯವಾದರು ಎಲ್ಲಾ ಸಂದರ್ಭಗಳಲ್ಲಿ ಅದು ಸಮರ್ಪಕವಾಗಿ ಇದ್ದಿರಲು ಸಾಧ್ಯಲ್ಲ. ವಾಸ್ತುಶಾಸ್ತ್ರದ ಪ್ರಮುಖ ಉದ್ದೇಶ ಮನೆಯ ಶಕ್ತಿ ತರಂಗಗಳನ್ನು ಮನೆಯ ಯಜಮಾನನನ್ನು ಮುಖ್ಯವಾಗಿರಿಸಿಕೊಂಡು ಯಜಮಾನನೂ ಸೇರಿದಂತೆ ಮನೆಯ ಸದಸ್ಯರೆಲ್ಲರ ಒಳಿತುಗಳನ್ನು ಅನುಲಕ್ಷಿಸಿ, ಒಳಿತಿಗಾಗಿ ಬಳಸುವಂತೆ ಮಾಡುವುದು. ಹಲವು ವಿಚಾರಗಳನ್ನು ಸಾಂಕೇತಿಕವಾಗಿ ಗ್ರಹಿಸಬೇಕು. ಇಲೆಕ್ಟ್ರಿಕಲ್‌ ಸ್ವಿಚ್‌ಗಳ ಬಗ್ಗೆ ಪ್ರಾಚೀನ ವಾಸ್ತುಶಾಸ್ತ್ರವು ವ್ಯಾಖ್ಯಾನಿಸುವುದು ಸಾಧ್ಯವಾಗಿರದ ಮಾತಾಗಿತ್ತು. ಹೀಗಾಗಿ ಸ್ವಿಚ್‌ಗಳನ್ನು ಹೇಗೆ ಜೋಡಿಸಬೇಕು ಎಂಬ ಪ್ರಶ್ನೆಯನ್ನು ಭಾರತೀಯ ವಾಸ್ತುಶಾಸ್ತ್ರ ಸಾಂಕೇತಿಕವಾಗಿ ಹೇಳಿದೆ. ಅಧಿಕವಾದ ವಿದ್ಯುತ್‌ ತರಂಗಗಳ ಮೋಟಾರ್‌ ಉಪಕರಣಗಳು ಬೆಂಕಿಯನ್ನು ಒಗ್ಗೂಡಿಸಿಕೊಂಡ ಘಟಕಗಳಾದ್ದರಿಂದ ಅದನ್ನು ದಕ್ಷಿಣದ ಅದರಲ್ಲೂ ಆಗ್ನೇಯ ಭಾಗದಲ್ಲಿ ಸಂಯೋಜಿಸಬೇಕು.

ಮನೆಗಳು ಇರುವುದೇ ತನುಮನಗಳಿಗೆ ಸುಹಾಸಕರ ಶಾಂತಿಯನ್ನು ಒದಗಿಸಲಿಕ್ಕೆ ಎಂಬುದು ತಿಳಿದಿರಿ. ಹಲವರು ಸಾಕುಪ್ರಾಣಿಗಳ ಬಗ್ಗೆ ಮನೆಯಲ್ಲಿ ಎಲ್ಲಿರಲಿ ಎಂಬುದಾಗಿ ಪ್ರಶ್ನಿಸುತ್ತಾರೆ. ಭಾರತೀಯ ವಾಸ್ತುಶಾಸ್ತ್ರ ದನದ ಕೊಟ್ಟಿಗೆಗಳ ಬಗ್ಗೆ, ಕುದುರೆ ಲಾಯಗಳ ಬಗ್ಗೆ ಆನೆ ವಾಸದ ಗಜಶಾಲೆಯ ಬಗ್ಗೆ , ಬೇಟೆ ನಾಯಿಯ ಗೂಡಿನ ಬಗ್ಗೆ , ಶಸ್ತ್ರಾಗಾರದ ಬಗ್ಗೆ , ರಾಜ ಹಾಗೂ ಮಂತ್ರಿಗಳ ಮಂತ್ರಾಗಾರದ ಬಗ್ಗೆ ನಿರ್ದಿಷ್ಟ ವರ್ಗಗಳ ಮನೆಗಳು ಇಂತಿಂಥ ಜಾಗದಲ್ಲಿ ಇರಬೇಕೆಂಬುದರ ಬಗ್ಗೆ ತಿಳಿಸುತ್ತದೆ. ಇದರ ಬಗ್ಗೆ  ಇನ್ನೂ ಅನೇಕ ವಿವರಗಳನ್ನು ಕೊಡುತ್ತದೆ. ಒಟ್ಟಿನಲ್ಲಿ ರಾಜನ ವಿಷಯ ಬಂದಾಗ ರಾಜನ ವಿಚಾರದ ನೆಲೆಯಲ್ಲಿಯೇ ಇತರರ ಮನೆಗಳು ವಸತಿ ಪ್ರದೇಶಗಳ ವಿಚಾರ ವ್ಯಾಖ್ಯಾನಗೊಳ್ಳುತ್ತಿತ್ತು. ಆಗ ರಾಜಭಟನ ಮನೆಯ ಮುಖ್ಯದ್ವಾರ ಪೂರ್ವಕ್ಕೋ, ಪಶ್ಚಿಮಕ್ಕೋ, ಉತ್ತರಕ್ಕೋ ಅಥವಾ ದಕ್ಷಿಣಕ್ಕೋ ಎನ್ನುವುದು ಮುಖ್ಯವಾಗುತ್ತಿರಲಿಲ್ಲ. ಪ್ರಶಾಂತವಾದ ದುರ್ಗಂಧಗಳಿರದ ಸ್ವತ್ಛ ಪರಿಸರ ಇರಬೇಕು ರಾಜಭಟನಿಗೆ ಎಂಬುದಷ್ಟೇ ಮುಖ್ಯವಾಗಿರುತ್ತಿತ್ತು.

ಈಗ ಸಾಕು ನಾಯಿಯನ್ನು ಮನೆಯ ಯಾವ ಮೂಲೆಯಲ್ಲಿ ಮಲಗಿಸಬಹುದು? ನೇರವಾಗಿ ನಮ್ಮ ಹಾಸಿಗೆಯಲ್ಲಿಯೇ ಮಲಗಿದರೆ ವಾಸ್ತು ಪ್ರಕಾರ ಕೆಟ್ಟದಾಗಬಹುದೇ? ಇತ್ಯಾದಿ ಇತ್ಯಾದಿ ಪ್ರಶ್ನೆ ಕೇಳುತ್ತಾರೆ. ಮುಖ್ಯವಾಗಿ ಪ್ರಾಣಿಗಳ ಬಗ್ಗೆ ಯಾವ ತಿರಸ್ಕಾರವೂ ಇರದೆ ಮಾತಾಡುವುದಾದರೆ ಮೂಕಪ್ರಾಣಿಗಳನ್ನು ನಮಗೆ ಬೇಕಾದ ವಿಧದಲ್ಲಿ ನಿಯಂತ್ರಿಸುವುದು ಹಿಂಸೆಯ ಭಾಗವಾಗುತ್ತದೆ ಅಲ್ಲವೇ? ನಿದ್ರೆ, ಹಸಿವು, ಭಯ, ಮೈಥುನಾದಿ ವಿಚಾರಗಳಲ್ಲಿ ಅದು ಅದನ್ನು ಸಾಕಿದವರ ಅಂಕಿತದಲ್ಲಿರಬೇಕು ಎಂಬುದನ್ನು ಗ್ರಹಿಸಲು ಸಾಧ್ಯವೇ? ಅಂತಯೇ  ನಿದ್ರೆ, ಹಸಿವು, ಭಯ, ಮೈಥುನಾದಿಗಳು ನಾಯಿ ಸಾಕಿದವರ ಮನೆಯಲ್ಲಿ ನಾಯಿ ಸ್ವಾತಂತ್ರ್ಯ ಹರಣಗೊಳ್ಳದೆ ಮುಕ್ತವಾಗಿ ನಡೆದರೆ ಮನೆಯ ಅಸ್ವತ್ಛತೆ ಮನೆಯ ಸದಸ್ಯರ ಮನೋಸ್ಥಿತಿ ಇತ್ಯಾದಿ ಇತ್ಯಾದಿ ಏನಿರುತ್ತದೆ?

ಹೀಗಾಗಿ ವಾಸ್ತುವಿನ ಬಗೆಗೆ ಲಕ್ಷ್ಯ ಕೊಡಬೇಕು. ಆದರೆ ಆಧುನಿಕ ಜೀವನ ಶೈಲಿಯಲ್ಲಿ ವಾಸ್ತುವಿನ ಸಂಬಂಧವಾದ ವಿಚಾರಗಳನ್ನು ಒತ್ತಡದಿಂದ ಎಳೆತಂದು ನಮ್ಮ ಅನುಕೂಲಕ್ಕೆ ತಕ್ಕಂತೆ ಬಗ್ಗಿಸಿ ಹಿಡಿಯಲಾಗುವುದಿಲ್ಲ. ಮನೆ ಕಟ್ಟಲು ಸರಿಯಾದ ಸ್ಥಳ ಮುಖ್ಯ ಎಂಬುದು ತಿಳಿದಿರಲಿ. ಆಧುನಿಕತೆಯು ವಾಸ್ತುಶಾಸ್ತ್ರವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ತಮ್ಮನ್ನು ತಾವು ವಿಮರ್ಶಿಸಿಕೊಳ್ಳಬೇಕೇ ಹೊರತೂ ವಾಸ್ತು ಶಾಸ್ತ್ರವು ಆಧುನಿಕತೆಯ ತಾಳಕ್ಕೆ ಕುಣಿಯಲು ಸಾಧ್ಯವಿಲ್ಲ. ಯಾವ ನಿಟ್ಟಿನಿಂದಲೂ ವಾಸ್ತು ಜೀವನ್ಮೂಖೀಯಾಗಿ ಪ್ರತಿ ನಾಗರೀಕನ ಅಭ್ಯುದಯಕ್ಕೆ ಹೆಣಗಾಡುತ್ತದೆ. ಆಧುನಿಕತೆ ಈಗ ಬಂದು ಇನ್ನೊಂದಿಷ್ಟು ವರ್ಷಗಳಲ್ಲಿ ಸವಕಲಾಗುವ ವಿಚಾರ. ಟಿವಿಯ ಜಾಹೀರಾತುಗಳನ್ನು ಗಮನಿಸಿ. ಅನೇಕ ಬ್ರಾಂಡ್‌ಗಳು ಹಿಂದೆ ತಾವು ಬೋಧಿಸಿದ್ದನ್ನೇ ಅದು ಈಗ ಸರಿಇಲ್ಲ ಎಂಬ ಜಾಹೀರಾತು ನೀಡುತ್ತದೆ. ಭಾರತೀಯ ವಾಸ್ತು ಹೀಗೆ ಬದಲಾಗುವ ವಿಚಾರವಲ್ಲ.


Wednesday, 29 November 2017

ಜೀವನದಲ್ಲಿ ಒಂದಲ್ಲಾ ಒಂದು ಬಾರಿ ಪೀಡೆಗೆ ಕಾರಣವಾಗುವ ದಿಕ್ಕು, ದಕ್ಷಿಣ

ನೆನಪಿಡಿ. ದಕ್ಷಿಣದಿಕ್ಕು ಮಾನವನ ಜೀವನದ ಪರಿಸಮಾಪ್ತಿಯ ಕಡೆಗಿನ ದಿಕ್ಕು. ಇದರ ಅರ್ಥ ಕೇವಲ ಸಾವಿಗಾಗಿ ಮಾತ್ರ ಈ ದಿಕ್ಕು ಮಾನವನ ಮೇಲೆ ತನ್ನ ದುರ್ಭರ ಹಿಡಿತವನ್ನು ಹಾಕಿ ಹೊಸಕಿಹಾಕುತ್ತದೆ ಎಂದು ಅರ್ಥವಲ್ಲ. ಒಟ್ಟಿನಲ್ಲಿ ಈ ದಿಕ್ಕಿನ ದೋಷ ಶನಿ, ರಾಹು, ಕುಜ, ಕೇತು ಅಥವಾ ಸೂರ್ಯರ ವೈಪರೀತ್ಯಗಳು ಆಯಾ ವ್ಯಕ್ತಿಯ ಮುಖ್ಯ ವೇದಿಕೆಯಲ್ಲಿ ಕೆಟ್ಟ ಹೆಸರನ್ನು ಆರೋಗ್ಯದ ವೈಪರೀತ್ಯಗಳನ್ನು ದಿಢೀರನೆ ಸಲ್ಲದ ಕಾರ್ಯತಂತ್ರಗಳನ್ನು ಸಂಯೋಜಿಸುವ ದುಬುದ್ಧಿಯನ್ನು, ಯುದ್ಧದಂತ ಅನಿಷ್ಟಗಳಿಗೆ ಮುಂದಾಗುವ ನಿರ್ಣಯಗಳನ್ನು ಪರಿಣಾಮಗಳ ಯೋಚನೆಗಳಿರದೆ ಸರ್ರನೆ ಕಾರ್ಯೋನ್ಮುಖರಾಗುವ ಅವಸರಗಳನ್ನು ಕೈಗೆಟುಕಲಾರದ ಕನಸಿನ ಗೋಪುರದ ಶಿಖರಕ್ಕೆ ಕೈಚಾಚುವುದನ್ನು,

ನಿರಪರಾಧಿಗಳನ್ನು ಶಿಕ್ಷಿಸಿ ಕರ್ಮಗಳನ್ನು ಸುತ್ತಿಕೊಳ್ಳುವ ದುರ್ಭರತೆಗಳನ್ನು, ಭಯೋತ್ಪಾದಕ ಘಟನೆಗಳಿಗೆ ಬಲಿಯಾಗುವ ಅತಂತ್ರಗಳನ್ನು, ಮಕ್ಕಳಿಂದಲೇ ಗೋಳಿಗೆ ಸಿಲುಕುವ ಮಿಸುಕಾಟಗಳನ್ನು ಒದಗಿಸಬಹುದು. ಕಟ್ಟಡಗಳಿಗೂ ದುಷ್ಟಗ್ರಹಗಳ ಬಾಧೆಯೇ ಎಂಬ ವಿಚಾರ ಆಶ್ಚರ್ಯವಾಗಬಹುದು. ಆದರೆ ಸತ್ಯ. ಕಟ್ಟಡಗಳಿಗೂ ತೊಂದರೆ ಉದ್ಭವಿಸುತ್ತದೆ. 2001 ಸೆಪ್ಟೆಂಬರ್‌ ನಲ್ಲಿ ಉರುಳಿದ ಅಮೆರಿಕಾದ ವರ್ಲ್ಡ್ ಟ್ರೇಡ್‌ ಸೆಂಟರ್‌ ಅವಳಿ ಕಟ್ಟಡಗಳನ್ನು ನೆನಪಿಸಿಕೊಳ್ಳಿ. ಕಟ್ಟಡದ ದಕ್ಷಿಣ ದಿಕ್ಕಿನ ವಾಸ್ತು ಸಂಯೋಜನೆಗಳು ಅಗ್ನಿತತ್ವಕ್ಕೆ ವೈರುಧ್ಯದಿಂದ ಕೂಡಿದ ಪ್ರಮಾಣದೊಂದಿಗೆ ಸಮತೋಲನ ತಪ್ಪಿದ್ದವು. ತಗ್ಗಿನ ಹೊರ ಆವರಣ ಕಟ್ಟಡದ ದಕ್ಷಿಣ ಭಾಗದಲ್ಲಿ ಹಿಗ್ಗಿಕೊಂಡಿತ್ತು. ಉತ್ತರ ದಿಕ್ಕಿನ ಅಮೃತ ಸ್ಪಂದನಗಳನ್ನು ಅದು ಘರ್ಷಿಸುತ್ತಲೇ ಇತ್ತು. ಹೀಗಾಗಿ ಶನೈಶ್ಚರನು ಆಗಿನ ಪ್ರಧಾನಿ ಬುಶ್‌ರ ಜನನದ ಸಂದರ್ಭದ ರಾಹುವಿನ ಜಾಗೆಗೆ ಬಂದಾಗ ಬುಶ್‌ ಅಧಿಕಾರದ ಪ್ರಥಮ ಅವಧಿಯ ಸಂದರ್ಭದಲ್ಲಿ ಅಷ್ಟಮ ಶನಿಕಾಟದ ವೇಳೆಯಲ್ಲಿ ಒಸಾಮ ಬಿನ್‌ ಲಾಡೆನ್‌ ಅಪಾಯಕಾರಿ ಯೋಜನೆ ರೂಪಿಸುವುದರಲ್ಲಿ ದಕ್ಷಿಣ ದಿಕ್ಕಿನ ದೋಷದ ಅಂಶವನ್ನು ವಾಸ್ತು ವಿಚಾರದಲ್ಲಿ ಹೊಂದಿದ್ದ ವರಲ್ಡ್‌ ಟ್ರೇಡ್‌ ಸೆಂಟರ್‌ ಕಟ್ಟಡಗಳು ಕುಸಿದು ಬಿದ್ದು ಈ ಭಯೋತ್ಪಾದಕ ಚಟುವಟಿಕೆ ಇಷ್ಟು ದೊಡ್ಡ ಅಗಾಧ ಪರಿಣಾಮ ಹಾನಿ ನಿರ್ಮಿಸಿದಾಗ ಜಗತ್ತಿಗೇ ಭಯೋತ್ಪಾದನೆಯ ಕರಾಳ ಸ್ವರೂಪದ ರೂಪುರೇಷೆಗಳು ಯುಕ್ತವಾಗಿ ಅರ್ಥವಾದದ್ದು ಭಾರತದಲ್ಲಿ 1983ರ ಮುಂಬೈ ಸ್ಫೋಟಗಳು ಭಯೋತ್ಪಾದನೆಯ ನಿಕೃಷ್ಟ ಕ್ರೂರ ಮನಸ್ಸಿನ ಕಟ್ಟಹಾಸವಾಗಿದ್ದರೂ ವರಲ್ಡ್‌ ಟ್ರೇಡ್‌ ಸೆಂಟರ್‌ ಕಟ್ಟಡಗಳು ಬೆಂಕಿ ಹತ್ತಿ ಉರಿದದ್ದು, ಬೆಂಕಿ ಜಾÌಲೆಯ  ತಾಂಡವ ನೃತ್ಯ ನಡೆದಾಗ ಜಗತ್ತಿನ ಇತಿಹಾಸಕ್ಕೆ ಹೊಸರೂಪ ಒದಗಿ ಜಾಗತಿಕ ಹೋರಾಟದ ವ್ಯಾಖ್ಯೆ ಭಯೋತ್ಪಾದಕತೆಯ ವಿರುದ್ಧ ಹೊಸರೂಪ ಪಡೆಯಿತು. ವಾಸ್ತು ದೋಷದ ಪರಿಣಾಮವು ಒಂದು ಅವಳಿ ಕಟ್ಟಡಗಳ ಕಾರಣದಿಂದಾಗಿ ಜಾಗತಿಕ ವರ್ತಮಾನದ ತಲ್ಲಣಗಳಿಗೆ ಕಾರಣವಾಗುವ ಕ್ರಿಯೆ ಅನೂಹ್ಯ.

ನಾವು ಕಟ್ಟುವ ಕಟ್ಟಡಗಳು, ಮನೆ, ವಸತಿ, ಸಂಕೀರ್ಣ ಅಥವಾ ಏನೇ ಕಟ್ಟೋಣಗಳಿರಲಿ ಎಡವಟ್ಟಾದ ಸ್ವರೂಪದಲ್ಲಿ ಆಗ್ನೇಯ ದಿಕ್ಕು ವಿಸ್ತರಿಸಿಕೊಳ್ಳಬಾರದು. ಎಪ್ಪತ್ತರ ದಶಕದ ಹಿಂದಿ ಚಲನಚಿತ್ರರಂಗದ ಜನಪ್ರಿಯ ಸೂಪರ್‌ ಸ್ಟಾರ್‌ ತನ್ನ ಅರಮನೆಯ ಸದೃಶವಾದ ಬಂಗ್ಲಾದಲ್ಲಿ ಎಷ್ಟು ಎತ್ತರಕ್ಕೆ ಏರಿದ್ದು ಸತ್ಯವೋ ಹಾಗೇ ಇನ್ನಿಲ್ಲದ ರೀತಿಯಲ್ಲಿ ಕುಸಿದದ್ದೂ ಕೂಡಾ ಅಷ್ಟೇ ಸತ್ಯ. ಈ ಕಟ್ಟಡದ ವಿಚಾರದಲ್ಲಿವ ವಾಸ್ತು ದೋಷಗಳು ತನಗೆ ದುರ್ಭರ ದಿನಗಳನ್ನು ತಂದವು ಎಂಬುದನ್ನು ಆ ಪ್ರಸಿದ್ಧ ನಟರೇ ಅವರ ಸಂದರ್ಶನ ಒಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಪತ್ನಿಯೊಂದಿಗೆ ಹೊಂದಿಕೊಂಡು ಹೋಗಲಾರದ ಶನಿದಶಾ ಸಂದರ್ಭವೂ ಈ ನಟ ಡೈವೋರ್ಸ್‌ ಪಡೆದು ಒಂಟಿಯಾಗುವಂತಾಯ್ತು. ಅನೇಕ ರೀತಿಯ ತಾಪತ್ರಯ ಸಾಲಗಳು ಕಷ್ಟಗಳಿಗೆ ವೇದಿಕೆ ಒದಗಿಸಿತು.

ದಕ್ಷಿಣದಿಕ್ಕು ಮೂಲಭೂತವಾಗಿ ಅಗ್ನಿಯನ್ನು ಸಂಕೇತಿಸುವ ವಿಚಾರಗಳನ್ನು ಅಂತರ್ಗತಗೊಳಿಸಿಕೊಂಡಿರುತ್ತದೆ. ಅಗ್ನಿಯು ಶುಭಕರನಾದಾಗ ಅವನೇ ಶನೈಶ್ಚರ. ಸ್ವರ್ಗ ಹಾಗೂ ಭೂಮಿಯನ್ನು ಕೊಂಡಿ ಕೂಡಿಸುವ ಹವ್ಯವಾಹನ. ನಮ್ಮ ಪ್ರಾರ್ಥನೆಗಳು ನಮ್ಮ ಸಮರ್ಪಣೆಗಳು ದೈವೀಕವಾದ ಅನನ್ಯ ಶಕ್ತಿ ಧಾತುವನ್ನು ಮುಟ್ಟುತ್ತದೆ. ಬೆಂಕಿ ಮುನಿದಾಗ ಅದು ಕಾಳಿYಚ್ಚು. ಅದು ಚಿತೆಯ ದಾರುಣತೆಗೆ ಕಾರಣನಾಗುವ ಸರಕು. ದಕ್ಷಿಣ ದಿಕ್ಕು ವಾಸ್ತು ದೋಷ ಹೊಂದಿದ್ದರೆ ದುರ್ಗಾದೇಯನ್ನು ನೆನೆಯಬೇಕು. ಸ್ತುತಿಸಬೇಕು. ಇದರಿಂದ ಅಗ್ನಿಭೀತಿಯ ಅಗ್ನಿ ದಾರುಣತೆಯ ಶಮನಗಳಿಗೆ ದಾರಿ ಲಭ್ಯ. ಮಲಿನತೆಗಳು ದಕ್ಷಿಣ ದಿಕ್ಕಿನಲ್ಲಿ ಬೇರೂರುವಂತೆ ಆಗದಿರಲಿ. ನಿಮ್ಮ ಪ್ರಯತ್ನ ಈ ದಿಸೆಯಲ್ಲಿ ನಡೆದುದಾದರೆ ಕೊಂಚ ಮಟ್ಟಿಗಿನ ನಿರಾಳತೆ ಸಾಧ್ಯ.


Tuesday, 28 November 2017

ಮನೆಯ ವಾಯುವ್ಯ ಮೂಲೆಯಿಂದಲೇ ಲವಲವಿಕೆ ಹುಟ್ಟೋದು..

ವಾಯುವ್ಯ ಮೂಲೆಯು ಉತ್ತರ ಹಾಗೂ ದಕ್ಷಿಣ ದಿಕ್ಕನ್ನು ಸಮಾವೇಶಗೊಳಿಸುವ ಭಾಗವಾಗಿದೆ. ಅಗ್ನಿಮೂಲೆಗಿದು ಸಮಾನಾಂತರ ಭಾಗವಾಗಿದ್ದು ಅಗ್ನಿಧರ್ಮಕ್ಕೆ ವಿರುದ್ಧವಾದ ವಾಯುತತ್ವಕ್ಕೆ ಒಂದರ್ಥದಲ್ಲಿ ಇಂಬು ಕೊಡುವಂಥದ್ದು. ಅಗ್ನಿ ಮತ್ತು ಗಾಳೀ ಎರಡೂ ಸೇರಿದರೆ ಆಗುವ ಅನಾಹುತವೇನು ಎಂಬುದು ಎಲ್ಲರೂ ತಿಳಿದ ವಿಷಯವಾಗಿದೆ. ಪ್ರತ್ಯೇಕವಾದ ವಿಶ್ಲೇಷಣೆ ಏನೂ ಬೇಕಿಲ್ಲ. ಆದರೂ ಅಗ್ನಿ ಹಾಗೂ ವಾಯು ತತ್ವ ಒಂದಕ್ಕೊಂದು ಸ್ನೇಹ ಹಾಗೂ ಆತ್ಮೀಯತೆಗೆ ಪೂರಕವಾದುದೂ ಆಗಿವೆ. ಅಗ್ನಿಗೆ ವಾಯುವೇ ಪ್ರಾಣ, ಜೀವಂತಿಕೆಗೆ ಉಸಿರು.

ಹೀಗಾಗಿ ಅಗ್ನಿ ಮೂಲೆಯ ವಿಚಾರವಾಗಿ ಟಿಪ್ಪಣಿಗಳನ್ನು ಒದಗಿಸಿದ್ದು ನೆನಪಿಸಿಕೊಳ್ಳುತ್ತಲೂ ಒಂದೊಮ್ಮೆ ಅಗ್ನಿಮೂಲೆಯಲ್ಲಿ ಅಡುಗೆ ಮನೆ ಇರಿಸಲು, ಕೂಡ್ರಿಸಲು ಸಾಧ್ಯವಾಗದಲ್ಲಿ ಮನೆಯ ವಾಯುವ್ಯ ಮೂಲೆಯಲ್ಲೂ ಅಡುಗೆ ಮನೆಯನ್ನು ಒಳಗೊಳ್ಳಬಹುದಾಗಿದೆ. ಹಾಗೆ ಒಳಗೊಳಿಸುವ ಸಂದರ್ಭದಲ್ಲಿ ಹೀಗೆ ನಿರ್ಮಿಸಿದ ಅಡುಗೆ ಮನೆಯ ಅಗ್ನಿಮೂಲೆಗೆ ಒಲೆಯು ಬರುವಂತೆ ನೋಡಿಕೊಂಡು ಅದರ ಪೂರ್ವಾಭಿಮುಖವಾಗಿ ಮನೆಯೊಡತಿ ಅಡುಗೆ ಮಾಡುವಂತಿರಬೇಕು.

ವಾಯುವ್ಯ ಮೂಲೆ ಈಶಾನ್ಯ ದಿಕ್ಕಿಗಿಂದ ತುಸು ಎತ್ತರವೇ ಇರಬೇಕು. ಈ ಎತ್ತರದ ಭಾಗದ ಉದ್ದ ತುಸು ನೈಋತ್ಯ ಮೂಲೆಗೆ ಸಮೀಪವಾಗುವ ಹಾಗೇ ರಚನೆ ಇದ್ದರೆ ಒಳ್ಳೆಯದು.

ಆದರೆ ನೈಋತ್ಯಕ್ಕೆ ಹತ್ತಿರವಾಗಬೇಕು ಎಂಬ ಕಾರಣಕ್ಕೆ ಕ್ಲಿಷ್ಟತೆಗಳನ್ನು ರೂಪಿಸಿಕೊಳ್ಳುವುದು ಬೇಕಾಗಿಲ್ಲ. ಕ್ಲಿಷ್ಟತೆಗಳನ್ನು ಸಹಿಸಿ ಈ ರಚನೆ ಅಳವಡಿಸುವುದು ಬೇಕಾಗಿಲ್ಲ. ಹಾಗೆಯೇ ವಾಯುಮೂಲೆ ನೆಂಟರಿಷ್ಟರು ಬಂಧು-ಮಿತ್ರರಿಗಾಗಿನ ಕೊಠಡಿಗಳನ್ನು ಒಳಗೊಳ್ಳುವುದೇ ಸೂಕ್ತ. ಮನೆಯಲ್ಲಿನ ಚಿಕ್ಕ ಮಕ್ಕಳಿಗೂ ಕೂಡಾ ಇಲ್ಲಿ ಕೊಠಡಿಗಳಿರುವುದು ಸೂಕ್ತ. ಹೀಗಾಗದಿದ್ದಲ್ಲಿ ವಿಚಿತ್ರವಾದ ರೀತಿಯಲ್ಲಿ ಭಾರವಾಗುವ ಖರ್ಚುಗಳು ಬಂದೊದಗುತ್ತವೆ.

ಈ ದಿಕ್ಕಿನಲ್ಲಿ ಬಾವಿ ತೆಗೆಯುವುದು, ತೊಟ್ಟಿಗಳನ್ನು ನಿರ್ಮಿಸುವುದು ಸೂಕ್ತವಾಗದು. ಮನೆಗೆ ಬೇಕಾದ ನೀರಿನ ವಿಚಾರದಲ್ಲಿ ಈ ದಿಕ್ಕಿನಲ್ಲಿ ಇದರದ್ದೇ ಆದ ಅರಿಷ್ಟ ಸ್ಪಂದನೆಗಳಿರುತ್ತದೆ. ಮೋಟರ್‌ ಪಂಪ್‌ ಕೂಡಾ ಇಲ್ಲಿ ಜೋಡಣೆಯಾಗಬಾರದು. ಮಕ್ಕಳಿಗೆ ಅನಾರೋಗ್ಯ ಒದಗಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ನೀರಿಗೆ ಸಂಬಂಧಿಸಿದ ವಿಚಾರಗಳನ್ನು ಇಲ್ಲಿ ಹೆಚ್ಚಾಗಿ ಲಕ್ಷಿಸಿ ಸಾಧ್ಯವಾದಷ್ಟೂ ಈ ಎಲ್ಲಾ ವಿಚಾರಗಳನ್ನೂ ವರ್ಜಿಸುವುದು ಅವಶ್ಯಕವಾಗಿದೆ.

ಉತ್ತಮ ಗಾಳಿಗೆ ಅವಕಾಶವಾಗುವ ಹಾಗೆ ಕೆಟ್ಟ ಗಾಳಿಗಳು ಇಲ್ಲಿಂದ ಹೊರದಬ್ಬಲ್ಪಡುವ ವಿಚಾರಗಳಿಂದಾಗಿ ಮನೆಯಲ್ಲಿ ಮಕ್ಕಳ ಲವಲವಿಕೆ ಚೈತನ್ಯ ಉತ್ಸಾಹಗಳೆಲ್ಲ ಸಂವರ್ಧಿಸಲ್ಪಡುತ್ತದೆ. ಮನೆಯೊಳಗೆ ವಿಶೇಷವಾದ ನೆಮ್ಮದಿ ಬಹುತೇಕವಾಗಿ ಸೋಲುಗಳೇ ಇರದೆ ವಿಜಯದ ಮುಗುಳ್ನಗೆಗೆ ಹೆಚ್ಚಿನ ಅವಕಾಶ ಸಾಧ್ಯ ಎಂಬುದೂ ಇಲ್ಲಿ ಹೆಚ್ಚು ಗಮನಾರ್ಹವಾದ ವಿಚಾರ. ಒಂದೊಮ್ಮೆ ಈ ಮೂಲೆ ಸರಿಯಾದ ಅನುಪಾತದೊಂದಿಗೆ ಇರದೆ ಹೋದರೆ ಕಾರಣವಲ್ಲದ ಕಾರಣಕ್ಕೆ ಅಶಾಂತಿ ತಲೆದೋರಬಹುದು. ಭಿನ್ನಾಭಿಪ್ರಾಯಗಳು ವೃಥಾ ವ್ಯಾಜ್ಯಗಳು ಸಂಭವಿಸುವ ವಿಚಾರವನ್ನು ಅಲ್ಲಗೆಳೆಯಲಾಗದು. ಮನೆ ಮಂದಿಗಾಗಲಿ, ಒಡೆಯನಿಗಾಗಲಿ ಕೆಟ್ಟದೇ ಆದ ಘಟನೆಗಳಿಂದ ವರ್ಚಸ್ಸಿಗೆ ಕುಂದುಗಳು ಉಂಟಾಗುವ ವಿಚಾರಗಳು ಬೇರು ಬಿಡಬಹುದು. ಮುಖ್ಯತವಾಗಿ ಮಕ್ಕಳ ವಿಚಾರದಲ್ಲಿ ಎಲ್ಲವೂ ದುಷ್ಪರಿಣಾಮಗಳನ್ನು ಚಿಮ್ಮಿಸಲು ದಾರಿ ಮಾಡಿಕೊಡಬಲ್ಲವು. ಒಟ್ಟಿನಲ್ಲಿ ಮನೆಯ ವಾಯುವ್ಯ ಮೂಲೆ ಅತುಳ ಬಲಶಾಲಿಯಾದ ವಾಯುದೇವನ ನಿವಾಸವಾಗಿದೆ. ಬಲವರ್ಧನೆಗೆ ಇವನೇ ಆಧಾರವಾಗಿದ್ದಾನೆ.

Monday, 27 November 2017

ಮನೆಯಲ್ಲಿ ಹೂಗಳನ್ನು ಎಲ್ಲಿ, ಹೇಗೆ ಇಡಬೇಕು?

ಈ ಹಿಂದಿನ ಅಂಕಣಗಳಲ್ಲಿ ವಾಸ್ತು ಸಂಬಂಧವಾಗಿ ನೂರಕ್ಕೆ ನೂರು ಸರಿಯಾದ ಯುಕ್ತ ವಿಚಾರಗಳನ್ನು ಪೂರೈಸಲು, ಸಂಯೋಜಿಸಲು ಎಂದೂ ಮಾಡಲಾಗದು ಎಂಬುದರ ಬಗ್ಗೆ ಚರ್ಚಿಸಿದ್ದೇವೆ. ಸಾಮಾನ್ಯವಾಗಿ ವಾಸ್ತು ವಿಚಾರಕ್ಕೆ ಬಂದಾಗ ಅನೇಕರು ಫೋನ್‌ ಕರೆಗಳಲ್ಲಿ ನೂರಕ್ಕೆ ನೂರು ಎಲ್ಲವನ್ನೂ ಭದ್ರವಾಗುವ ಹಾಗೆ ಮಾಡಿಕೊಡುತ್ತೇವೆ ಎಂದು ಆಶ್ವಾಸನೆ ನೀಡಿ ಇಷ್ಟು ಖರ್ಚುಬರುತ್ತದೆ ಎಂದು ಹೇಳುತ್ತಾರಲ್ಲಾ ಏನು ಮಾಡುವುದು ಎಂದು ಪ್ರಶ್ನಿಸುತ್ತಾರೆ. ಈ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಅವರವರಿಗೆ ಬಿಟ್ಟ ವಿಚಾರ. ವಾಸ್ತವವಾಗಿ ಇದು ಸಾಧ್ಯವಿಲ್ಲ. ಹಾಗೆಂದು ಸಾಧ್ಯವಾದಷ್ಟು ಮಾಡಿಕೊಳ್ಳುವುದು ಕಡಿಮೆ ಹೊರೆಯಾಗುವಂತೆ ಸರಳ ವಿಧಾನಗಳಲ್ಲಿ ನಿರೂಪಿಸಿಕೊಳ್ಳುವುದು ಸೂಕ್ತ. ವೃಥಾ ಹಣಪೋಲು ಮಾಡಬೇಡಿ.
ಮುಖ್ಯವಾಗಿ ನಿಮ್ಮ ಮನೆ ಬಾಗಿಲು ಪೂರ್ವಭಾಗಕ್ಕೆ ಬರುತ್ತಿದ್ದಲ್ಲಿ ಪೂರ್ವಭಾಗದ ಒಂದೆಡೆ ಪುಟ್ಟ ಟೇಬಲ್‌ ಒಂದನ್ನು ಇರಿಸಿ ಗಾಜಿನ ಒಂದು ಚಿಕ್ಕ ಹೂದಾನಿಯಲ್ಲಿ ಕೆಂಪು, ಹಳದಿ, ಬಿಳಿ ಹೂಗಳು ಸೇರಿಕೊಂಡಿರುವ ಹೂ ಗುತ್ಛ ಒಂದನ್ನು ಎರಡು ಅಥವಾ ಮೂರು ದಿನಕ್ಕೊಮ್ಮೆ ಇಡಿ. ಹೂದಾನಿಯಲ್ಲಿ ಶುದ್ಧವಾದ ನೀರಿರಲಿ. ಹೂಗಳು ಯಾವ ಕಾರಣಕ್ಕೂ ಒಣಗುವಂತಿರಬಾರದು. ಮನೆಯ ಪೂಜಾಗೃಹದಲ್ಲಿ ಈ ಹೂಗಳನ್ನು ಹೂದಾನಿಯಲ್ಲಿ ಒಂದೆಡೆ ಇರಿಸಿದರೂ ಸೂಕ್ತವೇ. ಕೆಂಪು ಹಾಗೂ ಬಿಳಿ ಹೂಗಳು ಜಾಸ್ತಿ ಇರಲಿ. ಮನೆಯ ಬಾಗಿಲು ಪಶ್ಚಿಮಾಭಿಮುಖವಾಗಿದ್ದಲ್ಲಿ ಮೇಲೆ ಹೇಳಿದ ರೀತಿಯಲ್ಲೇ ಹೂಗಳನ್ನು ಸೂಕ್ತವಾಗಿ ಇರಿಸಿ. ಆದರೆ ಉಳಿದ ಹೂಗಳಿಗಿಂತ ಹಾಗೂ ಬಿಳಿ ಹೂಗಳು ಜಾಸ್ತಿ ಇರಲಿ. ಹಳದಿ ಹೂಗಳೂ ಇರಲಿ. ಆದರೆ ಪ್ರಮಾಣ ಕಡಿಮೆ ಇರಬೇಕು. ಕೆಂಪು ಹೂಗಳೂ ಅಷೇr.

ಮನೆಯ ಬಾಗಿಲು ದಕ್ಷಿಣಾಭಿಮುಖವಾಗಿದ್ದಲ್ಲಿ ಪುಟ್ಟ ಟೇಬಲ್‌ನ ಮೇಲೆ ಚಿಕ್ಕ ಹೂದಾನಿಯಲ್ಲಿ ನೀರು ತುಂಬಿ ಪ್ರಧಾನವಾಗಿ ನೀಲಿ ಹೂಗಳು ಜಾಸ್ತಿ ಇರುವಂತೆ ಗಮನವಿರಿಸಿ ಜಾಸ್ತಿ ಹಸಿರು, ಜೇನು ಹಾಗೂ ನೇರಳೇ ಬಣ್ಣದ ಹೂಗುತ್ಛ ಇರಲಿ. ಯಾವ ಕಾರಣಕ್ಕೂ ಬಿಳಿ, ಕೆಂಪು ಹಳದಿ ಹೂಗಳಾಗಲೀ ಉಳಿದಂತೆ ಕಿತ್ತಳೆ ಕೇಸರಿ ಬಣ್ಣದ ಹೂಗಳಾಗಲೀ ಇರಲೇ ಕೂಡದು. ಈ ಬಣ್ಣಗಳು ದಕ್ಷಿಣಾಭಿ ಮುಖದ ಸ್ಪಂದನಗಳನ್ನು ಕೆಡಿಸುತ್ತದೆ. ದಕ್ಷಿಣಾಭಿಮುಖದ ಬಾಗಿಲ ಕಡೆಯ ಧನಾತ್ಮಕವಲ್ಲದ ಸ್ಪಂದನಗಳು ನೀಲಿ ಹೂಗಳಿಂದಾಗಿ ನಿಯಂತ್ರಣಕ್ಕೆ ಬರುತ್ತದೆ.

ಇನ್ನು ಉತ್ತರಾಭಿಮುಖದ ಬಾಗಿಲಿಗಿರುವ ಮನೆಗಳಲ್ಲಿ ಎಲ್ಲಾ ರೀತಿಯ ಬಣ್ಣಗಳನ್ನು ಬಳಸಿಕೊಂಡು ಹೂಗುತ್ಛ ಇರಿಸಬಹುದು. ಒಂದೇ ಒಂದು ನೆನಪಿಡಿ. ತಪ್ಪಿ ಕೂಡಾ ನೀಲಿ ಹೂಗಳನ್ನು ಇಲ್ಲಿ ಸಂಯೋಜಿಸಬೇಡಿ. ಇದು ಕುಬೇರನ ದಿಕ್ಕಾದುದರಿಂದ ನೀಲಿಯನ್ನು ಜೋಡಿಸಬಾರದು. ನೇರಳೆ ಬಣ್ಣದ ಹೂಗಳು ಜಾಸ್ತಿ ಇದ್ದಷ್ಟೂ ಉತ್ತಮ. ಧನಪ್ರಾಪ್ತಿಗೆ ಇದರಿಂದ ಸಿದ್ಧಿ ಉಂಟಾಗುತ್ತದೆ. ಒಂದು ಮುಖ್ಯವಾದ ವಿಚಾರ ಎಂದರೆ ಎಲ್ಲಾ ಸಂದರ್ಭಗಳಲ್ಲೂ ಹೂಗಳು ಬಾಡದಂತಿರಲಿ. ಹೂಗಳು ಸೊಗಸಾಗೇ ಇದ್ದಲ್ಲಿ ವಾರಕ್ಕೊಮ್ಮೆ ಹೂಗಳನ್ನು ಬದಲಾಯಿಸಿದರೂ ಪರವಾಗಿಲ್ಲ. ಇನ್ನು ಬದಲಾಯಿಸಬೇಕಾದ ದಿನಗಳ ವಿಚಾರದಲ್ಲೂ ಇಂಥದ್ದೇ ದಿನ ಎಂದು ಪರಿಗಣಿಸಬೇಕಾದ ಅವಶ್ಯಕತೆಯಿಲ್ಲ. ಆದರೆ ಅಮಾವಾಸ್ಯೆಯ ದಿನಗಳಂದು ಮಾತ್ರ ಬದಲಿಸಬೇಡಿ. ಒಂದು ವಾರಕ್ಕಿಂತ ಅಧಿಕವಾಗಿ ಉಪಯೋಗಿಸಿದ ಹೂಗುತ್ಛಗಳು ಮುಂದುವರೆಯದಂತಿರಲಿ. ಈ ಕುರಿತು ನಿಗಾ ವಹಿಸಿ. ಈ ಹೂಗಳಿಂದ ಅಷ್ಟ ದಿಕಾ³ಲಕರಾದ ಈಶ್ವರ, ಇಂದ್ರ, ಅಗ್ನಿ, ಯಮ, ನಿಋತ, ವರುಣ, ವಾಯು ಹಾಗೂ ಕುಬೇರಾದಿಗಳು ಮನೆಯ ದಿವ್ಯತೆಗೊಂದು ಪರಿಶೋಭೆ ಒದಗಿಸುತ್ತಾರೆ.


Friday, 24 November 2017

ಮನೆ ಮತ್ತು ಮಧ್ಯ ಭಾಗ ಹೀಗಿರಲಿ

ಮನೆಯ ಮಧ್ಯಭಾಗ ಖಾಲಿಯಾಗಿರಬೇಕು. ಮಧ್ಯ ಭಾಗಕ್ಕೆ ಗೋಡೆಗಳು, ಕಪಾಟುಗಳು, ಮಂಚಗಳಿರದೆ ನಿರಾಳವಾಗಿರಬೇಕು. ಮಧ್ಯಭಾಗದಲ್ಲಿ ಹಳದಿ ಬಣ್ಣದ ಹಾಸು ಹಾಸಿರಬೇಕು. ಹೊರಭಾಗದ ಆಗಸದ ನೀಲಿಗೆ ಎದುರಾಗಿ ಹಳದಿ ಹಾಸಿನ ಭಾಗ ಸಮಾನತೆ ಪಡೆದ ಗ್ರಹಭಾವಗಳ ಶನಿ ಹಾಗೂ ಗುರು ಗ್ರಹಗಳ ಸಂಪನ್ನತೆ ಮನೆಯ ಪಾಲಿಗೆ ಸಿದ್ಧಿಯಾಗುತ್ತದೆ. ಈ ಮಧ್ಯಭಾಗದ ಸೂರಿನ ಜಂತಿಗೆ ಅಥವಾ ಗಟ್ಟಿಯಾದ ಲೋಹದ ಭಾಗಕ್ಕೆ ದೀಪ ಗುತ್ಛ ಜೋಡಣೆಗೊಂಡಂತೆ ಇಲ್ಲಾ ಫ್ಯಾನ್‌ ಜೋಡಿಸಿದರೆ ಮನೆಯ ಧನಾತ್ಮಕ ಶಕ್ತಿಗೆ ಹೆಚ್ಚು ತೂಕ ಸಂಪ್ರಾಪ್ತವಾಗುತ್ತದೆ.

ವಾಸ್ತುವಿನ ಸಂಬಂಧವಾಗಿ ಸಾವಿರಾರು ವಿಚಾರಗಳನ್ನು ನಮ್ಮ ಶಾಸ್ತ್ರಗಳು, ಪ್ರಪಂಚದ ಇತರೆ ನಾಗರಿಕ ಸಂಪ್ರದಾಯಗಳು ವಿವರಿಸಿವೆ. ಮನೆಯ ಪೂರ್ವಾದಿ ಅಷ್ಟ ದಿಕ್ಕುಗಳು ಬಗೆಗೆ ನಾವು ಜಾಗ್ರತೆ ವಹಿಸುತ್ತಿರುತ್ತೆವೆಯೋ ಹೊರತು ಮನೆಯ ಮಧ್ಯ ಭಾಗದ ಬಗೆಗೆ ನಾವು ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಮುಖ್ಯವಾಗಿ ಬದುಕಿನ ನಮ್ಮ ಆರೋಗ್ಯದ ವಿಚಾರದಲ್ಲಿ ಮಧ್ಯಭಾಗ ಪ್ರಾಮುಖ್ಯವಾಗಿದೆ.

ಏನೇ ಇದ್ದರೂ ಆರೋಗ್ಯವೇ ಸುಸಂಬದ್ಧತೆ ಹೊಂದಿರದೇ ಹೋದರೆ ಬದುಕು ಅಸಹನೀಯ ದೈಹಿಕ, ಹಾಗೆಯೇ ಮಾನಸಿಕ ಆರೋಗ್ಯ ಎರಡೂ ಮುಖ್ಯ. ಹೊರನೋಟಕ್ಕೆ ಏನೂ ತಿಳಿಯದಿದ್ದರೂ ನಮ್ಮ ನಡುವಣ ಅನೇಕಾನೇಕ ಮಂದಿ ದೈಹಿಕವಾಗಿ ಸುಖದಲ್ಲಿದ್ದಂತೆ ಕಂಡರೂ ಮಾನಸಿಕ ನರಳಾಟ ಅನುಭವಿಸುತ್ತಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುತ್ತಾರೆ. ದೈಹಿಕವಾಗಿ ಗಟ್ಟಿತನವಿದ್ದರೂ ಅನೇಕ ಮಾನಸಿಕ ಸಮಸ್ಯೆಗಳು ಬದುಕನ್ನು ನರಕವಾಗಿಸ ಬಹುದಾಗಿದೆ. ಈ ವಿಚಾರದಲ್ಲಿ ಚಂದ್ರ ಮಹತ್ವದ ಪಾತ್ರ ನಿರ್ವಹಿಸುತ್ತಾನೆ. ಮನೆಯ ಮಧ್ಯಭಾಗದ     ಒಡೆತನ ಹೀಗಾಗಿ ಚಂದ್ರನದ್ದು ಮನೆಯ ಮಧ್ಯಭಾಗ ಅಂದರೆ, ಇದಕ್ಕೆ ಬ್ರಹ್ಮ ಬಿಂದು ಎಂದೂ ಹೆಸರಿದೆ. ಈ ಬ್ರಹ್ಮಬಿಂದುವಿನ ಚೈತನ್ಯಕ್ಕೆ ಚಂದ್ರನ ಬೆಂಬಲ ದೊರೆತಲ್ಲಿ ಅದು ಸ್ವಾರಸ್ಯಕರ ಗೃಹ ಸೌಖ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಮನೆಯ ಮಧ್ಯಭಾಗದಿಂದ ಆಕಾಶವು ಕಾಣುವಂತೆ ವ್ಯವಸ್ಥೆ ಇದ್ದರೆ ಉತ್ತಮ. ಚಂದ್ರನ ಮೋಹಕತೆ ಈ ಆಕಾಶದ ವ್ಯಾಪ್ತಿಯಲ್ಲಿ ಕಾಣಿಸುವಂತಿದ್ದರೆ ಉತ್ತಮ. ಅಂದರೆ ಮಧ್ಯಭಾಗದ ಸೂರಿಗೆ ಗಾಜನ್ನು ಕೂಡಿಸಿ ಬೆಳಕು ಒಳಬರುವಂತೆ ಜೋಡಣೆ ಇದ್ದರೆ ಬಹಳ ಸಂಪನ್ನತೆ ಸಾಧ್ಯ. ಈ ಗಾಜನ್ನು ಜೋಡಿಸಿದ ಗಾಜಿನ ಅಂಚಲ್ಲಿ ಹಸಿರು ಹುಲ್ಲುಗಳು ತೆಳ್ಳಗೆ ಚಿಗುರಿಕೊಂಡಿರಬೇಕು.

ಮನೆಯ ಮಧ್ಯಭಾಗ ಖಾಲಿಯಾಗಿರಬೇಕು. ಮಧ್ಯ ಭಾಗಕ್ಕೆ ಗೋಡೆಗಳು, ಕಪಾಟುಗಳು, ಮಂಚಗಳಿರದೆ ನಿರಾಳವಾಗಿರಬೇಕು. ಮಧ್ಯಭಾಗದಲ್ಲಿ ಹಳದಿ ಬಣ್ಣದ ಹಾಸು ಹಾಸಿರಬೇಕು. ಹೊರಭಾಗದ ಆಗಸದ ನೀಲಿಗೆ ಎದುರಾಗಿ ಹಳದಿ ಹಾಸಿನ ಭಾಗ ಸಮಾನತೆ ಪಡೆದ ಗ್ರಹಭಾವಗಳ ಶನಿ ಹಾಗೂ ಗುರು ಗ್ರಹಗಳ ಸಂಪನ್ನತೆ ಮನೆಯ ಪಾಲಿಗೆ ಸಿದ್ಧಿಯಾಗುತ್ತದೆ. ಈ ಮಧ್ಯಭಾಗದ ಸೂರಿನ ಜಂತಿಗೆ ಅಥವಾ ಗಟ್ಟಿಯಾದ ಲೋಹದ ಭಾಗಕ್ಕೆ ದೀಪ ಗುತ್ಛ ಜೋಡಣೆಗೊಂಡಂತೆ ಇಲ್ಲಾ ಫ್ಯಾನ್‌ ಜೋಡಿಸಿದರೆ ಮನೆಯ ಧನಾತ್ಮಕ ಶಕ್ತಿಗೆ ಹೆಚ್ಚು ತೂಕ ಸಂಪ್ರಾಪ್ತವಾಗುತ್ತದೆ.
ಹಾಗೆಯೇ ಮನೆಯ ಮಧ್ಯಭಾಗದಲ್ಲಿ ವಿವಿಧ ಬಣ್ಣಗಳ ಹೂಗಳನ್ನು ಸಂಯೋಜಿಸಿಬಹುದು. ಹೆಚ್ಚು ತೂಕದ ತೊಲೆ ಅಥವಾ ಇತರ ಭಾರವಾದ ವಸ್ತುಗಳಲ್ಲಿ ಇರಕೂಡದು. ಮಧ್ಯಭಾಗದಲ್ಲಿ ಶೌಚಾಲಯವಾಗಲಿ, ಸಿಂಕ್‌ ಆಗಲಿ, ಇರಲೇಕೂಡದು. ಆರೋಗ್ಯದ ವಿಷಮತೆಗೆ ಕಾರಣವಾಗುತ್ತದೆ.

ಮನೆಯ ಮಧ್ಯಭಾಗದಲ್ಲಿ ಸಿರಾಮಿಕ್‌ನಿಂದ ರೂಪಿಸಲ್ಪಟ್ಟ ಐದು ಕೊಳವೆಗಳನ್ನು ನಿರ್ಮಿಸಿ ಗಾಳಿ ಗಂಟೆಯನ್ನು ಹಾಕಬೇಕು. ಇದರಿಂದ ಹುಟ್ಟುವ ಘಂಟಾ ನಿನಾದಕ್ಕೆ ಮೃದುತ್ವ, ಮಾನಸಿಕ ನೆಮ್ಮದಿ ತರುವ ಹಿತವಾದ ಸ್ಪಂದನಗಳಿರುತ್ತವೆ. ಸ್ಪಟಿಕಾಚ್ಛಾದಿತ ಗಾಳಿ ಗಂಟೆ ಕೂಡಾ ಉತ್ತಮ. ಮುಖ್ಯವಾಗಿ ಇಲ್ಲೀಗ ಪ್ರಸ್ತಾಪಿಸಿದ ಐದು ಸಿರಾಮಿಕ್‌ ಕೊಳವೆಗಳು ಮಧ್ಯಭಾಗದ ಮನೆಯ ಬೆಂಬಲದ ಸಂಖ್ಯೆ 5 ಅನ್ನು ಸೂಚಿಸಿಸುತ್ತದೆ. ಹೀಗಾಗಿ 5 ಕೊಳವೆಗಳನ್ನು ಈ ಭಾಗದಲ್ಲಿ ಸ್ಥಾಯಿಗೊಳಿಸಬೇಕು. ಗುರುಗ್ರಹವೂ ಸಂಖ್ಯೆ 5ರಿಂದ ಸಂಕೇತಿಸಲ್ಪಡುವುದರಿಂದ ಗುರುವಿನ ಅನುಗ್ರಹಕ್ಕೂ ಇದು ಅನುಕೂಲಕರ. ಒಟ್ಟಿನಲ್ಲಿ ಮನೆಯ ಮಧ್ಯಭಾಗಕ್ಕೂ ಗುರು ಚಂದ್ರರ ಕಾರಣದಿಂದ ಉಂಟಾಗುವ ಗಜಕೇಸರಿ ಯೋಗದ ಸಂಪನ್ನತೆಯ ಒದಗಿಸುವ ಸುಖ ವಿಶೇಷಕ್ಕೂ ಉತ್ತಮವಾದ ಜೋಡಣೆ ಮತ್ತು ಸಂಬಂಧಗಳಿವೆ.


Thursday, 23 November 2017

ಜ್ಞಾನಕ್ಕೆ ಉತ್ತರ ದಿಕ್ಕು ಉತ್ತಮ

ಭಾರತೀಯ ಮೀಮಾಂಸೆಯು ಲೌಕಿಕವನ್ನು ಅಲೌಕಿಕವನ್ನು ಒಟ್ಟಂದದಲ್ಲಿ ಸಮಾನ ದೃಷ್ಟಿಯಲ್ಲೇ ನೋಡಿದೆ. ಬದುಕನ್ನು ಶೂನ್ಯ ಎನ್ನುವುದಿಲ್ಲ. ಭಾವನಾಮಯವಾದ ಜಗದ
ಯಾತ್ರೆಯಲ್ಲಿ ಅಧ್ಯಾತ್ಮವನ್ನು ಬೆರೆಸಿಕೊಂಡು ನಿನ್ನೊಳಗೇ ಪರಮಾತ್ಮನನ್ನು ಹುಡುಕು ಎಂದೂ ಹೇಳುತ್ತದೆ. ನಿನ್ನಿಂದ ಅನ್ಯನಾದ ಪರಮಾತ್ಮನಲ್ಲಿ ಶರಣಾಗುವ ವಿನಯವನ್ನು ತೋರು ಎಂದು ಬೋಧಿಸುತ್ತದೆ. ಮಂಗಳಮಯನಾಗಿ ಮಂಗಳಪ್ರದನನಾದವನ್ನು ಹುಡುಕಿಕೊಂಡಿರು ಎಂದು ಬೋಧಿಸುತ್ತದೆ. ಒಂದು ಎಲೆಯ ಹಸಿರು ಉದುರಿ ಬೀಳುವ ಮುನ್ನ ಅಕಸ್ಮಾತ್ತಾಗಿ ಹಸುವಿನ ಆಹಾರವಾಗಿಯೂ ಮಾಯವಾಗಿಬಿಡಬಹುದು. ಹೀಗಾಗಿ ಒಂದು ಗೊಂದಲ ಇದೇ ಇರುತ್ತದೆ. ಯಾವುದು ತನ್ನ ಕಾರ್ಯವನ್ನು ಪೂರ್ತಿ ಮುಗಿಸಿ ಉದುರುತ್ತದೆ. ಮುಗಿಸುವ ಮುನ್ನವೇ ಯಾವುದು ಮರೆಯಾಗುತ್ತದೆ ಎಂಬ ಗೊಂದಲಕ್ಕೆ ಉತ್ತರವಿಲ್ಲ. ಇದನ್ನು ಅದೃಷ್ಟ ಎಂದು ಕರೆದರು. ಅದೃಷ್ಟದ ಬೇರುಗಳು ಅಧ್ಯಾತ್ಮದ ಚಿಂತನೆಯಿಂದಲೇ ಕೆಲವಷ್ಟು ಉತ್ತರಗಳನ್ನು ತಡೆಯಬಹುದು. ಜಾnನದಿಂದಾಗಿ ಆಧ್ಯಾತ್ಮದ ಬತ್ತಿಗೆ ಬೆಳಕಿನ ಸೌಭಾಗ್ಯ ಒದಗಿಬರಬಹುದು. ಬೆಳಕು ಕತ್ತಲನ್ನು ಹೊಡೆದೋಡಿಸುತ್ತದೆ. ಆದರೆ ಕತ್ತಲು ಏಕೆ? ಹೇಗೆ? ಎಲ್ಲಿಂದ ಬಂತು. ಬೆಳಕು ಕತ್ತಲಿಗೆ ಪ್ರತಿರೋಧ ತರುವ ತನ್ನ ಹುಟ್ಟನ್ನು ಹೇಗೆ ಕಂಡುಕೊಂಡಿತು ಹೀಗೆ ಆಳವಾಗಿ ಇಳಿಯುತ್ತ ಹೊರಟರೆ ಎಲ್ಲವೂ ಮತ್ತೆ ಪ್ರಶ್ನೆಗಳೆ.

ಉತ್ತರಗಳನ್ನು ಕೆಲವುಸಲ ನೀಡಬಹುದೇ ವಿನಾ ಪ್ರತಿಯೊಂದಕ್ಕೂ ಉತ್ತರವಿಲ್ಲ ಹೀಗಾಗಿ ಅದೃಷ್ಟವನ್ನು ಮನಗಾಣಲೇ ಬೇಕು. ಏನೋ ಒಂದು ನಮ್ಮನ್ನು ಮೀರಿ ಇದೆಯೆಂಬುದು ನಂಬಬೇಕು. ದಾಡ್ಯìತೆ ಇದ್ದರೆ ನಂಬದೆ ಇರಿ. ಪ್ರಧಾನವಾಗಿ ಮನೆಯಲ್ಲಿ ಮನಸ್ಸು ಕಂಡ
ರೀತಿಯಲ್ಲಿ ದೇವರುಗಳನ್ನು, ದೇವರುಗಳ ಪಟವನ್ನು ಇಡಬೇಡಿ. ದೇವರು ಎನ್ನುವುದು ನಮ್ಮನ್ನು ಒಂದು ಶಕ್ತಿಯ ಎದುರು ಬಾಗುವ ವಿನಯಕ್ಕಾಗಿ ಇರಬೇಕಾದದ್ದು. ಕುಳಿತಲ್ಲಿ, ನಿಂತಲ್ಲಿ, ಕಂಡಕಂಡಲ್ಲಿ ದೇವರನ್ನು ಪ್ರತಿಷ್ಠಾಪಿಸುತ್ತಾ ಹೋದರೆ ತುಂಬಾ ಅಪಾಯಕರವಾದ ರೀತಿಯಲ್ಲಿ ನೀವು ಕರಗಿಹೋಗುತ್ತೀರಿ. ಬೌದ್ಧಿಕ ವಿಕಸನಕ್ಕೆ  ಅಡೆತಡೆ ಉಂಟಾಗುತ್ತದೆ. ಜಾnನವನ್ನು ವಿಸ್ತರಿಸಿಕೊಳ್ಳಿ. ದೇವರನ್ನು ವಿಸ್ತರಿಸಿಕೊಳ್ಳಲು ಮುಂದಾಗದಿರಿ. ದೇವರು ನಿಮ್ಮಿಂದ ವಿಸ್ತಾರಗೊಳ್ಳಬೇಕಾಗಿಲ್ಲ. ಜಾnನದಿಂದ ಹೊಸಹೊಸ ಹೊಳಹುಗಳು ಸಿಗುತ್ತವೆ. ಜೀವನವನ್ನು ಸರಳವಾಗಿಸಿಕೊಳ್ಳಲಿಕ್ಕೆ ನಾಗರೀಕತೆಯ ಸಂಪನ್ನತೆಗೆ ವೃದ್ಧಿ ತರುತ್ತದೆ.

ಈಶಾನ್ಯ ದಿಕ್ಕು ಜಾnನಕ್ಕೆ ಹಾಗೂ ಓದು ಕಲಿಕೆಗಳಿಗೆ ತನ್ನನ್ನು ಸಮೃದ್ಧಿಯ ವೇದಿಕೆಯನ್ನಾಗಿ ರೂಪಿಸುವ ಸಿದ್ಧಿ ಪಡೆದಿದೆ. ಮಣ್ಣು ಇದರ ಮೂಲ ವಸ್ತು. ಪ್ರತಿದಿಕ್ಕುಗಳಲ್ಲೂ ಮೂಲವಸ್ತು ಮಣ್ಣೇ ಇದ್ದರೂ ಬೆಂಕಿತತ್ವ, ವಾಯುತತ್ವ, ಜಲತತ್ವಗಳು ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಸ್ವಾಮ್ಯವನ್ನು ಮೆರೆಯುತ್ತದೆ. ಅಲ್ಲಿ ಈಶಾನ್ಯ ದಿಕ್ಕಿನಲ್ಲಿ ಚಿಂತನೆಗೆ ಅಧ್ಯಯನಕ್ಕೆ ದೈವ ಸಂಬಂಧಿ ಅನುಷ್ಠಾನಗಳಿಗೆ ಸೂಕ್ತವಾಗಿದೆ. ನೀರು, ಬೆಂಕಿ ಅಥವಾ ಗಾಳಿಯ ಪ್ರಕ್ಷುಬ್ಧತೆಗಳಿಗೆ ಈ ದಿಕ್ಕಿನಲ್ಲಿ ಅವಕಾಶ ಇರುವುದಿಲ್ಲ. ಆನೆಯ ಚಿಕ್ಕ ಶಿಲ್ಪವೊಂದು ಇದ್ದರೆ ಈಶಾನ್ಯ ದಿಕ್ಕಿನಲ್ಲಿ ಮಕ್ಕಳು ಅಭ್ಯಾಸ ಅಧ್ಯಯನ ನಡೆಸಬಹುದು.
ಆನೆಯು ಬೃಹತ್‌ ನಿಲುವು ಗಟ್ಟಿ ಬಲವುಳ್ಳ ಪ್ರಾಣಿ ಎಂಬ ನಂಬಿಕೆ ಮಕ್ಕಳಲ್ಲಿ ಒಂದು ಸುರಕ್ಷಿತ ವಲಯವನ್ನು ಪ್ರಜ್ಞೆಯ ಪರಿಧಿಯಲ್ಲಿ ನಿರ್ಮಿಸುತ್ತದೆ. ಎಲ್ಲವನ್ನೂ ತಿಳಿದ ವ್ಯಾಸ ಮಹರ್ಷಿಗಳು ಆನೆಯ ಮುಖದ ಗಣಪನಿಂದಲೇ ಮಹಾಭಾರತದ ಮಹಾಕಾವ್ಯದ ರಚನೆಯನ್ನು ಮಾಡಿಸಿದರು. ಕಥೆಯ ಪ್ರಕಾರ ಉತ್ತರ ದಿಕ್ಕಿಗೆ ತಲೆಇಟ್ಟು ಮಲಗಿದವರ ತಲೆ ಕತ್ತರಿಸಿ ತಂದುಕೊಡಿ ಎಂದು ಶಿವನು ಪ್ರಲಾಪಿಸಿದ ಕತೆ ಎಲ್ಲರಿಗೂ ತಿಳಿದಿದ್ದೆ. ಉತ್ತರ ದಿಕ್ಕಿಗೆ ಮಲಗಿದ ಒಂದು ಆನೆಯ ತಲೆಯನ್ನು ತಂದು ಗಣಪನಿಗೆ ಜೋಡಿಸಲಾಯ್ತು.

ಜಾnನಕ್ಕೆ ಹೀಗಾಗಿ ಉತ್ತರ ದಿಕ್ಕು ಉತ್ತಮ. ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು. ಅಂದರೆ ಚಿಂತನೆಯ ಸಂವರ್ಧನೆಗೆ ಎಚ್ಚರವಾಗಿದ್ದಾಗ ಉತ್ತರದಿಕ್ಕು ಶ್ರೇಷ್ಠ. ಮಲಗಿರುವಾಗ ಬೌದ್ಧಿಕ ಚಿಂತನೆಗೆ ವೇದಿಕೆಯಾದ ತಲೆ ಉತ್ತರದಿಕ್ಕಿನಲ್ಲಿ ಸ್ಥಗಿತವಾಗಕೂಡದು. ಗಣಪತಿಯ ಆನೆಯ ಮುಖದ ಕಥೆಯನ್ನೇ ಒಂದು ಆಧಾರಗೊಳಿಸಬೇಕಾಗಿಲ್ಲ. ಇದೊಂದು ದಂತ ಕಥೆ ಇದ್ದರೂ ಉತ್ತರ ದಿಕ್ಕು ಜಾnನಕ್ಕೆ ಕುಂಭ ಎಂಬುದು ನಿಸ್ಸಂಶಯ. ಒಟ್ಟಿನಲ್ಲಿ ಪರರದೆ ಇಹವಲ್ಲ. ಇಹದ ಸಾûಾತ್ಕಾರಕ್ಕೆ ಪದಾರ್ಥಚಿಂತನೆಯ ಅವಶ್ಯಕತೆ ಇದೆ. ಹಿಡಿಯಲಾಗದ್ದನ್ನು ಹಿಡಿಯುವ ಅನನ್ಯತೆಗೆ ಜಾnನವೇ ಆಧಾರ. ಜಾnನವು ಶೂನ್ಯದಿಂದ ಬರಲಾರದು. ಅದು ಅವನ ಸಂಕಲ್ಪ, ಅದೃಷ್ಟ. ಅದೃಷ್ಠದ ಸಿದ್ಧಿಗಾಗಿ ಮನೆಯ ಈಶಾನ್ಯದ ಶಿಸ್ತು ಜಾರಿಗೆ, ಮಂಥನಕ್ಕೆ ದೊರಕಲಿ.

Wednesday, 22 November 2017

ವ್ಯಾಪಾರದ ಸ್ಥಳದಲ್ಲಿನ ಕೆಲ ವಾಸ್ತು ಶಿಸ್ತುಗಳು

ಹೊಟ್ಟೆ ತುಂಬಿದ ಮೇಲೆ ದುಷ್ಟತನವನ್ನು ಮನುಷ್ಯನ ನೀಚ ಬುದಿಟಛಿ ಮಾಡಿಸುತ್ತದೆ. ಹೊಟ್ಟೆ ತುಂಬಿರದವನ ಕ್ರೌರ್ಯದಲ್ಲಿ ಸಮಾಜದ ಪಾತ್ರವೂ ಇದೆ. ಹೀಗಾಗಿ ಇವೆರಡರ ಅಂತರವನ್ನು ಚೆನ್ನಾಗಿ ತಿಳಿದು ವ್ಯಾಪಾರದ ವಿಷಯದಲ್ಲಿ ಎಚ್ಚರ ವಹಿಸಬೇಕು. ನಮ್ಮ ವ್ಯಾಪಾರದಿಂದ ಇತರರ ಶೋಷಣೆಯ ಬಗೆಗಾಗಿನ ಬುನಾದಿ ಹಾಕಬಾರದು.

ವಾಸಿಸುವ ಮನೆಗಳಲ್ಲಿ ಕೆಲವು ಉತ್ತೇಜಕ ಸ್ಪಂದನಗಳು ಹೇಗೆ ಮುಖ್ಯವೋ ಹಾಗೆ
ವ್ಯಾಪಾರದ ಸ್ಥಳದಲ್ಲಿ ಅನೇಕ ವಿಧವಾದ ಎಚ್ಚರಿಕೆಗಳನ್ನು ನಾವು ಹೊಂದಬೇಕಾಗುತ್ತದೆ.
ಜೀವನದ ಯಾತ್ರೆಯಲ್ಲಿ ಮನೆಯ ಪಾತ್ರವಷ್ಟೇ ಮುಖ್ಯವಾದ ಪಾತ್ರ ಕೆಲಸದ ಸ್ಥಳದಲ್ಲಿನ
ಶಕ್ತಿಗೆ ಸಿಗುವ ಸಕಾರಾತ್ಮಕತೆಯ ಸಿದಿಟಛಿ. ಒಂದು ಇನ್ನೊಂದನ್ನು ಹೊಂದಿಕೊಂಡೇ ಸಾಗಿದರೆ ಜೀವನದ ಸಮತೋಲನಕ್ಕೆ ಪೂರ್ತಿ ಅರ್ಥ. ಹೊಟ್ಟೆ ತುಂಬಿರದ ಮನುಷ್ಯನ ಕ್ರೌರ್ಯ ಬೇರೆ. ತುಂಬಿರದವನ ಕ್ರೌರ್ಯಕ್ಕೆ ಬೆಂಬಲ ಸಿಗಬೇಕು ಎಂದಲ್ಲ ಈ ಮಾತಿನ ಅರ್ಥ.

ಹೊಟ್ಟೆ ತುಂಬಿದ ಮೇಲೆ ದುಷ್ಟತನವನ್ನು ಮನುಷ್ಯನ ನೀಚ ಬುದಿಟಛಿ ಮಾಡಿಸುತ್ತದೆ.
ಹೊಟ್ಟೆ ತುಂಬಿರದವನ ಕ್ರೌರ್ಯದಲ್ಲಿ ಸಮಾಜದ ಪಾತ್ರವೂ ಇದೆ. ಹೀಗಾಗಿ ಇವೆರಡರ
ಅಂತರವನ್ನು ಚೆನ್ನಾಗಿ ತಿಳಿದು ವ್ಯಾಪಾರದ ವಿಷಯದಲ್ಲಿ ಎಚ್ಚರ ವಹಿಸಬೇಕು. ನಮ್ಮ
ವ್ಯಾಪಾರದಿಂದ ಇತರರ ಶೋಷಣೆಯ ಬಗೆಗಾಗಿನ ಬುನಾದಿ ಹಾಕಬಾರದು.

ಅಂಗಡಿಯ ವ್ಯಾಪಾರಿ ಸ್ಥಳವು ದಕ್ಷಿಣ ದಿಕ್ಕಿನ ಕಡೆಯ ಬಾಗಿಲಾಗಿದ್ದರೆ ಕೆಲವು ನಿಭಂಧನೆಗಳು ಮುಖ್ಯವಾಗುತ್ತದೆ. ದಕ್ಷಿಣದಿಂದ ಉತ್ತರಕ್ಕೆ ನೆಲದ ಮಟ್ಟ ಇಳಿಜಾರಾಗಿರಲಿ. ಪಶ್ಚಿಮದಿಂದ ಪೂರ್ವಕ್ಕೆ ಕೂಡಾ ಇಳಿಜಾರಾಗಿ ಇರಬೇಕು. ಹೀಗಿರುವಾಗ ನೈರುತ್ಯವನ್ನು ಪ್ರಧಾನವಾಗಿಸಿಕೊಳ್ಳಬೇಕು. ನೈಋತ್ಯದಲ್ಲಿ ವ್ಯಾಪಾರದ ಸ್ಥಳದ ಹಣದ ಗಲ್ಲಾಪೆಟ್ಟಿಗೆಯ ವಿಚಾರ ಮುಖ್ಯವಾಗಿರಬೇಕು. ನೈಋತ್ಯದಿಂದ ಪೂರ್ವದಿಕ್ಕನ್ನು ಗಮನಿಸುವ ಹಾಗೆ ಇದ್ದು ಬಲಗಡೆಗೆ ಗಲ್ಲಾಪೆಟ್ಟಿಗೆ ಬರುವಂತಾಗಲಿ.
ಕಪಾಟುಗಳು ಲೆಕ್ಕದ ಕಡತಗಳು ಯೋಜನಾ ಕೋಷ್ಟಕಗಳ ಫೈಲುಗಳನ್ನು ತುಂಬಿಕೊಂಡಿರಲಿ. ಮೊದಲು ವ್ಯಾಪಾರದ ಕೆಲಸದ ಸ್ಥಳದಲ್ಲಿ ಗಾದಿಯ ಮೇಲೆ ಕುಳಿತು ಭಾರತ ದೇಶದಲ್ಲಿ ವಹಿವಾಟು ನಡೆಯುತ್ತಿತ್ತು. ಈಗ ಮೇಜು ಟೇಬಲ್ಲುಗಳು ಆಧುನಿಕವಾಗಿ ಈ ಗಾದಿಗಳನ್ನು ಹಿಂದಕ್ಕೆ ಸರಿಸಿದೆ. ತೊಂದರೆ ಇಲ್ಲ.

ಮನೆಯ ಮುಖವು ಈಶಾನ್ಯ ಅಥವಾ ಪೂರ್ವವನ್ನು ನೋಡಲಿ ವಿನಾ ಮೇಜು ಖುರ್ಚಿಗಳು ಕಪಾಟುಗಳಿ ಈಶಾನ್ಯ/ಪೂರ್ವವನ್ನು ಆಕ್ರಮಿಸಬಾರದು. ಆದರೆ ಉತ್ತರಾಭಿಮುಖವಾಗಿ ಗಲ್ಲಾಪೆಟ್ಟಿಗೆ ಎಡಭಾಗಕ್ಕೆ ಜರುಗಲ್ಪಡಲಿ. ಪೂರ್ವಕ್ಕೆ ಮುಖವಾದಾಗ ಬಲಗಡೆಗೆ ಇರಬೇಕು. ಇದನ್ನು ಗಮನಿಸಿ. ದಕ್ಷಿಣದ ಕಡೆ ಮುಂಬಾಗಿಲು ಇರುವ ವ್ಯಾಪಾರಿ ಸ್ಥಳದಲ್ಲಿ ಆಗ್ನೇಯ ಈಶಾನ್ಯ ವಾಯುವ್ಯಗಳ ಕಡೆ ಕುಳಿತು ವ್ಯಾಪಾರ ನಡೆಸಕೂಡದು. ಇವು ಗೋಜಲುಗಳಂತೆ ಕಂಡರೂ ಸಮಾಧಾನದಿಂದ ತಿಳಿಯಿರಿ.

ಒಂದೊಮ್ಮೆ ಅಂಗಡಿಗೆ ಪೂರ್ವಾಭಿಮುಖವಾಗಿ ಬಾಗಿಲು ಇದೆ ಎಂದಾದರೆ ನಷ್ಟವೇನಿಲ್ಲ. ಆದರೆ ಪಶ್ಚಿಮದಿಂದ ಪೂರ್ವಕ್ಕೆ ದಕ್ಷಿಣದಿಂದ ಉತ್ತರಕ್ಕೆ ನೆದ ಮಟ್ಟ ಇಳಿಜಾರಾಗಿರುವಂತೆ ನೋಡಬೇಕು. ಇದರಲ್ಲಿ ಬದಲಾವಣೆ ಇಲ್ಲ. ಇಲ್ಲಿಯೂ ನೈಋತ್ಯದ ಕಡೆಗೇ ಪೂರ್ವಾಭಿಮುಖವಾಗಿ ಯಜಮಾನ ಕಾರ್ಯಾಚರಣೆ ನಡೆಸಬೇಕು.
ಪೂರ್ವಾಭಿಮುಖವಾದಾಗ ಬಲಗಡೆಗೆ ಗಲ್ಲಾಪೆಟ್ಟಿಗೆ ಬರುವಂತಿರಲಿ.

ಕಡತಗಳ ಹಣ ತುಂಬಿದ ಕಪಾಟುಗಳೂ ಕೂಡಾ ಬಲಗಡೆಗೇ ಬರಬೇಕು. ಒಂದೊಮ್ಮೆ
ಕಾರ್ಯಾಚರಣೆ ಉತ್ತರಾಭಿಮುಖವಾದಾಗ ಗಲ್ಲಾಪೆಟ್ಟಿಗೆ ಕಪಾಟು ಇತ್ಯಾದಿ ಧನಕಾರಕ
ಸಲಕರಣೆಗಳು ಎಡಭಾಗಕ್ಕೆ ಹೊಂದಿಸಲ್ಪಡಲಿ. ವ್ಯಾಪಾರಿಯು ದಕ್ಷಿಣ ಆಗ್ನೇಯ ಭಾಗಕ್ಕೆ
ಒರಗಿ ಕುಳಿತಿರುವಂತೆ ಖುರ್ಚಿ ಮೇಜು ಬರಕೂಡದು. ಆಗ್ನೇಯದಲ್ಲಿ ಪೂರ್ವದ
ಗೋಡೆಯನ್ನು ಒರಗದಂತೆ ಸಂಯೋಜನೆ ಇರಬೇಕು.

ಪೂರ್ವ ಅಥವಾ ಉತ್ತರಾಭಿಮುಖ ತೊಂದರೆ ಇಲ್ಲ. ಕ್ಯಾಂಪ್‌ ಬಾಕ್ಸ್‌ ಕಡತಗಳ
ಕಪಾಟುಗಳಿಗೆ ಸುಸಜ್ಜಿತ ಪರಿಣಾಮಕಾರಿಯಾದ ಸ್ಪಂದನಗಳು ದೊರೆತರೇನೇ ವ್ಯಾಪಾರದ ಸಿದಿಟಛಿಗೆ ಪೂರಕವಾದ ಸಾಫ‌ಲ್ಯತೆ ಒದಗುತ್ತದೆ. ವ್ಯಾಪಾರಿಯ ಉದ್ದೇಶ ಲಾಭದ ವಿನಾ ವೇಳೆ ಕಳೆಯಲು ವ್ಯಾಪಾರವನ್ನು ವೃತ್ತಿಯಾಗಿಸಿಕೊಳ್ಳಬಾರದು. ಇಂಥದೊಂದು ಯೋಜನೆಯನ್ನು ತಂದೆಯೊಬ್ಬರು ಸುಮ್ಮನೆ ವೇಳೆ ಕಳೆಯುವುದಕ್ಕಾಗಿ ಹಾಕಿ ಕೊಟ್ಟಾಗ ಮಗನ ವ್ಯಾಪಾರ ಕುಸಿಯುತ್ತ ಹೋಗಿತ್ತು. ಲಕ್ಷಿ$¾ಯು ದೃಢತೆಯನ್ನು ಬಯಸುತ್ತಾಳೆ ತಿಳಿದಿರಲಿ.


Tuesday, 21 November 2017

ಅಗರಬತ್ತಿಗಳ ಸುವಾಸನೆ ನಿಮ್ಮ ಮನೆಯೊಳಗಿರಲಿ

ನಮ್ಮ ಸಂಸ್ಕೃತಿಯಲ್ಲಿ ಧೂಪದ ಹೊಗೆಯನ್ನು ಮನೆಯೊಳಗೆ ಆಗಾಗ ತುಂಬಿಸುವ ಪದ್ಧತಿ ಇದೆ. ಧೂಪವನ್ನು ಉರಿಸುವ ಕ್ರಮ ಇಂದು ನಿನ್ನೆಯದಲ್ಲ. ಈ ಹೊಗೆಯಿಂದಾಗಿ ಮನೆಯೊಳಗಿನ ಸೂಕ್ಷ್ಮ ಏಕ ಜೀವಾಣುಗಳು ಆರೋಗ್ಯಕ್ಕೆ ಬಾಧೆ ತರುವ ಸಮಾಧಾನ ದೊಡ್ಡದೇ ಆದ ಹುಳುಹುಪ್ಪಡಿಗಳು ಸಾಯಲ್ಪಡುವ ಮನೆಯಿಂದ ಹೊರಗೆ ದೂಡಲ್ಪಡುವ ವಿಚಾರ ಇದರಿಂದ ಬಹಳಷ್ಟು ಸುಲಭವಾಗುತ್ತದೆ. ಬಹಳ ಹಿಂದೇನಲ್ಲ ಈಗ ಸುಮಾರು ಎರಡು ದಶಕಗಳ ಹಿಂದೆ ಕೂಡಾ ಹೊಸ ಮಗುವಿನ ಜನನದಿಂದಾಗಿ ಸಂಭ್ರಮ ತುಂಬಿದ ಮನೆಯಲ್ಲಿ ಧೂಪದ ಹೊಗೆ ಹಾಕಲಾಗುತ್ತಿತ್ತು. ಮಗುವಿಗೆ ಸೂಕ್ಷ್ಮಜೀವಿಗಳ ಕಾಟದಿಂದ ಬಿಡುಗಡೆ ಸಿಗಲೆಂಬ ಕಾರಣದಿಂದಲೇ ಇದನ್ನು ಮಾಡಲಾಗುತ್ತಿತ್ತು. ಹೀಗಾಗಿ ಧೂಪದ ಧೂಮ ಆರೋಗ್ಯದ ವಿಚಾರದಲ್ಲಿ ಸ್ವಾಗತಾರ್ಹವಾಗಿದೆ. ಜೊತೆಗೆ ಧೂಪದ ವಿಷಯ ದುಬಾರಿಯಾದ ಸಂಗತಿ ಏನಲ್ಲ.
ಸುಲಭ ಬೆಲೆಗೆ ಧೂಪ ಲಭ್ಯ. ಧೂಪದಂತೆ ಅಗರಬತ್ತಿಗಳು ಕೂಡಾ ಸುಹಾಸಕರ, ಮಧುರ ಸುವಾಸನೆ ಮನೆಯಲ್ಲಿ ತುಂಬಿರಲು ಇದರಿಂದಾಗಿ ಮನೆಯ ಧನಾತ್ಮಕ ಸ್ಪಂದನ ಕೂಡಾ ಹೆಚ್ಚಲು ಸಹಾಯವಾಗುತ್ತದೆ. ಧನಾತ್ಮಕ ಸ್ಪಂದನಗಳು ಅಧಿಕಗೊಳ್ಳುವ ಕಾರಣವೆಂದರೆ ಅಗರಬತ್ತಿಗಳು ಉರಿಯತೊಡಗಿದಾಗ ಅವುಗಳ ಒಳಗಿನಿಂದ ಅಡಕಗೊಳಿಸಲ್ಪಟ್ಟ ಸುವಾಸನೆಯು ತೈಲಬುಗ್ಗೆಗಳು ನಮ್ಮ ನಾಸಿಕದ ವಾಸನಾಗ್ರಹಿಕೆಯ ಗ್ರಂಥಿಗಳ ಮೂಲಕ ಮೆದುಳನ್ನು ಪ್ರವೇಶಿಸುತ್ತವೆ. ಈ ರೀತಿಯ ಸುವಾಸನಾಯುಕ್ತ ಗಾಳಿಯು ಹವೆಯು ಮನಸ್ಸನ್ನು ಉತ್ತೇಜಿಸುತ್ತಿರುತ್ತವೆ. ಸಕಾರಾತ್ಮಕ ಯೋಚನೆಗಳಿಗೆ, ಯೋಜನೆಗಳಿಗೆ ಈ ಉತ್ತೇಜನ ಪ್ರಕ್ರಿಯೆಯಿಂದ ಸಹಾಯಕವಾಗುತ್ತದೆ.

ಮಧುರ ಹಾಗೂ ಸಂಪನ್ನ ಸುವಾಸನೆಗಳು ಅಸುರೀ ಶಕ್ತಿಯನ್ನು ಗೆಲ್ಲುತ್ತದೆ. ಮನದಲ್ಲಿನ ಭಿನ್ನತೆಯನ್ನು ದಣಿವನ್ನು ನಿವಾರಿಸಿ ಚೈತನ್ಯದ ಬಿಂದುವಿಗೆ ಅದು ಮನಸ್ಸನ್ನು ರೂಪಾಂತರಿಬಲ್ಲದು. ಅದಕ್ಕೇ ನಮ್ಮ ಪೂಜಾವಿಧಾನಗಳಲ್ಲಿ ಧೂಪದೀಪಾದಿ ಮಂಗಳಾರತಿಗಳು ದೇವರನ್ನು ಆರಾಧಿಸುವ ಸಂದರ್ಭದ ಘಟಕಗಳಾಗಿವೆ. ದೀಪ ಹಾಗೂ ಮಂಗಳಾರತಿಗಳ ಸಂದರ್ಭದ ಅಗರಬತ್ತಿಗಳ ಉರಿಯುವಿಕೆಯಿಂದಾಗಿನ ಸುವಾಸನೆಯ ಜ್ವಲನದಲ್ಲಿ ಮನಸ್ಸನ್ನು ದೇವರ ನಿಟ್ಟಿನಲ್ಲಿ ಕೇಂದ್ರೀಕರಿಸಲು ಸುಲಭ ಸಾಧ್ಯ. ಶ್ರೀಗಂಧ ಹಾಗೂ ರಕ್ತಚಂದನದಂಥಾ ಪರಿಕರಗಳ ಕಲ್ಪನೆ ಕೂಡಾ ಇದೇ ಆಧಾರದಲ್ಲಿ ನಿರೂಪಿಸಿರುತ್ತದೆ. ಶ್ರೀಗಂಧವು ಮೈಯಲ್ಲಿನ ಹುಣ್ಣುಗಳನ್ನು ಗುಣಪಡಿಸುವ, ರಕ್ತಚಂದನವು ಉಷ್ಣದೇಹಕ್ಕೆ ತಂಪಿನ ಅನುಭವವನ್ನು ಸೊಗಸಾಗಿ ಒದಗಿಸುವ ಕಾರ್ಯದಲ್ಲಿ ನೆರವಾಗುತ್ತದೆ.

ಪ್ರತಿ ಸೋಮವಾರ ಸುವಾಸನಾಭರಿತ ಅಗರಬತ್ತಿಗಳ್ಳೋಂದಿಗೆ ಮನೆಯೊಳಗಿನ ದೇವರನ್ನು ಬಿಳಿಯ ಹೂಗಳಿಂದ ಪೂಜೆ ಸಲ್ಲಿಸುವುದು ಯುಕ್ತ. ಮಂಗಳವಾರ ಕೆಂಪು ಹೂಗಳು ಶ್ರೇಷ್ಟ. ಬುಧವಾರದಂದು ಹಸಿರುಬಣ್ಣದ ಹೂಗಳಿಂದ ದೇವರನ್ನು ಪೂಜಿಸದರೆ ಉತ್ತಮ ಮೇಧಾಶಕ್ತಿ ದೊರೆಯುತ್ತದೆ. ಗುರುವಾರ ಹಳದು ಜೂಗಳು ಶ್ರೇಷ್ಟ. ಶುಕ್ರವಾರದಂದು ಹೂಗಳು ನೇರಳೇ ಬಣ್ಣವು, ನೀಲಿ ಮಿಶ್ರಿತ ಬಿಳಿ ಬಣ್ಣವೂ ಉತ್ತಮ ಫ‌ಲ ನೀಡುತ್ತವೆ. ಶನಿವಾರದ ಹೂಗಳು ನೀಲಿಯೂ, ನೇರಳೆಯೂ ಜೇನುಬಣ್ಣದ ಹೂಗಳೂ ತುಂಬಾ ಅಪೇಕ್ಷಣೀಯ. ಶನಿವಾರದಂದು ದ್ರೋಣಪುಷ್ಪ, ಮಲ್ಲಿಗೆ ತಾವರೆಗಳು (ನೀಲತಾವರೆ ಹೊರತುಪಡಿಸಿ) ಉತ್ತಮವಾಗಿದೆ. ಅಗರಬತ್ತಿಗಳ ಉಪಯೋಗ ಹಾಗೂ ಆಯಾ ದಿನದಂದು ಮೇಲೆ ತಿಳಿಸಿದ ಹೂಗಳ ಉಪಯೋಗ ಪೂಜಾ ಸಂದರ್ಭಅದಲ್ಲಿ ಮಂಗಳಕರತೆಯನ್ನು ಹೆಚ್ಚು ಅರ್ಥಪೂರ್ಣವಾಗಿಸುತ್ತದೆ.

ಹೂಗಳು ಸಿಗದಿರುವಾಗ ಅದನ್ನೇ ದೊಡ್ಡ ಕೊರಗಾಗಿಸಿಕೊಂಡು ಮನಸ್ಸನ್ನು ಕೆಡಿಸಿಕೊಳ್ಳುವುದು ಬೇಡ. ಆದರೆ ಸುವಾಸನೆಯ ಅಗರಬತ್ತಿಗಳಂತೂ ಮನೆಯಲ್ಲಿ ಇರಲಿ. ಧೂಪದ ಉಪಯೋಗವೂ ಆಗಾಗ ಇರಲಿ. ಪೂಜೆಯ ಸಂದರ್ಭ ಎಂದೇ ಅಲ್ಲ. ಮುಂಜಾವಿನ ಸೂರ್ಯನಾಗಮನಕ್ಕೆ ಸಂಧ್ಯಾಕಾಲದ ತಾರೆಗಳ ಹೊಳಪಿನ ಹೊತ್ತಿಗೆ ಮಂಗಳಕರವಾದ ವರ್ತಮಾನವನ್ನು ಚೌಕಟ್ಟುಗೊಳಿಸಲಿಕ್ಕಾಗಿ ಸೂಕ್ತವಾದ ಸುವಾಸನೆ ಮನೆಯಲ್ಲಿ ತುಂಬಿರಲಿ.


Monday, 20 November 2017

ಭೋಜನ ಕೋಣೆ ಹೇಗಿರಬೇಕು?

ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ಸೇವಿಸುವ ಆಹಾರ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಸೇವಿಸುವ ಸ್ಥಳ ಅಥವಾ ಪರಿಸರವು ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು.

ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ ಮನಸ್ಸಿಗೆ ಹಿತವೂ ಲಭಿಸುತ್ತದೆ. ಮನೆಯಲ್ಲಿ ಆಹಾರ ಸೇವನೆಗಾಗಿ ಭೋಜನೆ ಕೋಣೆ ಇರುವುದು ಸಾಮಾನ್ಯ. ಅಲ್ಲಿರುವ ವಸ್ತುಗಳನ್ನು ಚೊಕ್ಕವಾಗಿ ಇಟ್ಟರೆ ಮಾತ್ರ ಅಲ್ಲಿ ಭೋಜನ ಸೇವಿಸಲು ಹಿತವೆನಿವುದು. ಭೋಜನ ಕೋಣೆಯಲ್ಲಿ ವಸ್ತುಗಳ ಇರಿಸುವಿಕೆಯು ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ ಎಂದು ಫೆಂಗ್‌ಶುಯಿ ಶಾಸ್ತ್ರ ಹೇಳುತ್ತದೆ.

ಎಂದಿಗೂ ಮನೆಯ ಮುಖ್ಯದ್ವಾರಕ್ಕೆ ಎದುರಾಗಿ ಭೋಜನದ ಮೇಜನ್ನು ಇರಿಸಬೇಡಿ. ಸ್ನಾನಗೃಹದ ಹತ್ತಿರ ಅಥವಾ ಮುಂಭಾಗದಲ್ಲಿ ಮೇಜನ್ನು ಇರಿಸಲೇಬೇಡಿ. ಎರಡು ಕೋಣೆಗಳನ್ನು ವಿಂಗಡಿಸುವಂತೆ ಮಧ್ಯದಲ್ಲಿರಿಸಬೇಡಿ.

ನಿಮ್ಮ ಭೋಜನದ ಮೇಜು ಅಡಿಗೆ ಕೋಣೆಗೆ ಮುಖಮಾಡಿದೆ ಅಥವಾ ಅಲ್ಲಿಯೇ ಇದೆಯೆಂದಾದರೆ ಅದು ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ. ಹವಾನಿಯಂತ್ರಕ, ಫ್ಯಾನ್‌ ಮೊದಲಾದುವುಗಳನ್ನು ಭೋಜನ ಕೋಣೆಯ ಎಡಭಾಗಕ್ಕಿರಿಸುವುದು ಉತ್ತಮ.ಭೋಜನ ಕೋಣೆಯು ಆದಷ್ಟು ಶುಚಿ ಹಾಗೂ ವಾಯುಯುಕ್ತವಾಗಿರಲಿ.

Saturday, 18 November 2017

ಪಶ್ಚಿಮದ ದಿಕ್ಕಿನ ಅಂಗಡಿಯ ವ್ಯಾಪಾರ, ವ್ಯವಹಾರ ಚೆನ್ನಾಗಿರುತ್ತಾ?

ಅಂಗಡಿಗಳು ಎಂದರೆ ವ್ಯಾಪಾರದ ಅಥವಾ ಬ್ಯುಸಿನೆಸ್‌ ಸ್ಥಳ. ರೆಸ್ಟೋರೆಂಟಿನಿಂದ ಹಿಡಿದು ಕೈಗಾರಿಕಾ ಘಟಕವಾಗಿ ಪುಟ್ಟ ವಿಸ್ತಾರ ಪಡೆದಿದ್ದರೂ ಸರಿಯೇ. ಡಿಸ್ಟ್ರಿಬ್ಯೂಶನ್‌ ಕೇವಲ ಫೋನ್‌ ಕರೆ, ಇಂಟರ್‌ ನೆಟ್‌ಗಳ ಮೂಲಕ ವ್ಯವಹಾರ ವಹಿವಾಟು ನಡೆಸುವುದಾದರೂ ಸರಿಯೇ. ನೈಋತ್ಯವೇ ಯಜಮಾನನಿಗೆ ಪ್ರಧಾನವಾದ ಸಂಪನ್ನತೆಗಾಗಿನ ಭಾಗ.

ಕನಕೋತ್ತಮ ಕಾಂತಿಃ ಕನಕಭೂಷಣಃ ಇತ್ಯಾದಿ - ದುರ್ಗಾಳ ಕುರಿತಾಗಿ ದುರ್ಗಾ ಸಪ್ತಶತಿಯಲ್ಲಿ ಇದು ಬರುತ್ತದೆ. ದೇವಿಯ ಸುವರ್ಣ ಕಾಂತಿಯ ಮೂರ್ತಿ ವಿವರಣೆಯ ಸಂದರ್ಭದಲ್ಲಿ ಉಲ್ಲೇಖವಾಗುತ್ತದೆ. ಪಶ್ಚಿಮ ದಿಕ್ಕನ್ನು ದೃಷ್ಟಿಸುವ ಅಂಗಡಿಯ ವ್ಯಾಪಾರವು ಅಂಬಾಳಿಂದಲೇ ಜಗದಂಬಾ ಎಂದು ಆರಾಧಿಸುವ ದುರ್ಗಾಳಿಂದಲೇ ಒದಗಿಬರಬೇಕು. ಸರ್ವತ್ರ ಭೂತಳಾದ ದೇವಿಯು ಸಜ್ಜನನ ಪಾಲಿಗೆ ವರ ಕೊಡುವ ಕಾಮಧೇನು. ಅಂಗಡಿಯಲ್ಲಿ ನೈಋತ್ಯ ಮೂಲೆಯಲ್ಲಿ ಯಜಮಾನ ಅಥವಾ ಯಜಮಾನತಿ ಕುಳಿತಿರಬೇಕು.


ಈ ಮೂಲೆ ಕೊಂಚ ಎತ್ತರವಾಗಿರಬೇಕು. ಉಳಿದ ಯಾವ ದಿಕ್ಕುಗಳೂ ಅಂಗಡಿಯ ಮಾಲೀಕ ಜನಕ್ಕೆ ಉಪಯೋಗಕ್ಕೆ  ಬರುವಂಥದ್ದಲ್ಲ. ವಾಯುವ್ಯ ಮೂಲೆಯನ್ನು ಅನೇಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರಿದು ಸೂಕ್ತ ವಿಚಾರವಲ್ಲ. ಇಲ್ಲಿ ಅಂಗಡಿಗಳು ಎಂದರೆ ವ್ಯಾಪಾರದ ಅಥವಾ ಬ್ಯುಸಿನೆಸ್‌ ಸ್ಥಳ. ರೆಸ್ಟೋರೆಂಟಿನಿಂದ ಹಿಡಿದು ಕೈಗಾರಿಕಾ ಘಟಕವಾಗಿ ಪುಟ್ಟ ವಿಸ್ತಾರ ಪಡೆದಿದ್ದರೂ ಸರಿಯೇ. ಡಿಸ್ಟ್ರಿಬ್ಯೂಶನ್‌ ಕೇವಲ ಫೋನ್‌ ಕರೆ ಇಂಟರ್‌ನೆಟ್‌ಗಳ ಮೂಲಕ ವ್ಯವಹಾರ ವಹಿವಾಟು ನಡೆಸುವುದಾದರೂ ಸರಿಯೇ.

ನೈಋತ್ಯವೇ ಯಜಮಾನನಿಗೆ ಪ್ರಧಾನವಾದ ಸಂಪನ್ನತೆಗಾಗಿನ ಭಾಗ. ಅದೇ ರೀತಿ ಯಜಮಾನ ಅಥವಾ ಒಡತಿಗೆ ಪೂರ್ವ ಅಥವಾ ಉತ್ತರ ದಿಕ್ಕನ್ನು ನೋಡುತ್ತಾ ಜವಾಬ್ದಾರಿ ನಿರ್ವಹಿಸಬೇಕು. ಶಟರ್ಸ್‌ಗಳ ವಿಚಾರದಲ್ಲೂ ಕೆಲವು ಅಗತ್ಯವಾದ ಚಿಂತನ ಗಮನಗಳ ಔಚಿತ್ಯ ಸೂಕ್ತವಾಗಿರಲಿ. ಎರಡು ಶಟರ್ಸ್‌ಗಳನ್ನು ಹೊಂದಿರುವರಾದರೂ ಎರಡನ್ನೂ ಉಪಯೋಗಿಸುವುದಕ್ಕೆ ತೊಂದರೆ ಇಲ್ಲ. ಆದರೆ ವಾಯುವ್ಯ ಮೂಲೆಯ ಶಟರ್‌ ಮಾತ್ರ ಪ್ರಧಾನವಾದ ಆಯ್ಕೆಯನ್ನು ಉಪಯೋಗದ ವಿಷಯದಲ್ಲಿ ಪಡೆದಿರಲಿ. ಪ್ರಾಶಸ್ತ್ಯವಂತೂ ವಾಯುವ್ಯ ದಿಕ್ಕಿನ ಶಟರ್‌ಗೇ ದೊರಕುವಂತಾಗಲಿ.

ಯಾವುದೇ ದೈವಿಕ ಪೂಜಾ ಕೆಲಸಗಳಿಗಾಗಿ ಸಂಬಂಧಿಸಿದ ಮೂರ್ತಿ ಅಥವಾ ಸ್ತುತಿ ಈಶಾನ್ಯದಲ್ಲೇ ನಡೆಯಲಿ. ಕಸಬರಿಗೆ ಒರೆಸುವ ವಸ್ತ್ರ, ಟಾಯ್ಲೆಟ್‌ ಸಲಕರಣೆಗಳು ನ್ಯಾಪ್‌ಕಿನ್‌, ಪೇಪರ್‌ ಕಬ್ಬಿಣದ ತ್ಯಾಜ್ಯಗಳನ್ನು ಈಶಾನ್ಯ ಅಥವಾ ವಾಯುವ್ಯ ನೈಋತ್ಯ ವಹಿವಾಟಿನ ಜಾಗೆಯಲ್ಲಿ ಇಡಬೇಡಿ. ದೇವರನ್ನಿಡುವ ಜಾಗದಲ್ಲಿ ಚಿಕ್ಕದೊಂದು ಕ್ರಿಷ್ಟಲ್‌ ಪಿರಮಿಡ್‌ ಅಥವಾ ಅಭಿಮಂತ್ರಿಸಿದ ಶಂಖ, ಗದಾ, ಧಾತು, ಸಮಷ್ಟಿ ಸಂಪುಟಗಳು ಇದ್ದಿರಲಿ. ಸಮಸ್ಯೆಗಳೇನೂ ಇಲ್ಲ. ಅತಿಯಾದ ಅಲಂಕಾರಗಳು ಬೇಡ. ಯಜಮಾನ / ಒಡತಿಯ ಹಿಂದಗಡೆಯ ದಕ್ಷಿಣ ದಿಕ್ಕಿಗೋ ವಿಸ್ತರಿಸಿದ ಜಾಗೆಯಲ್ಲಿ ಕನ್ನಡಿಯ ಜೋಡಣೆ ಅಥವಾ ದೇವರ ಮೂರ್ತಿ ಅಥವಾ ಚಿತ್ರಗಳು ಬೇಡ. ನಿಮ್ಮ ನಿಮ್ಮ ಜಾತಕದ ಆಧಾರದಲ್ಲಿ ದೇವರ ಸಲುವಾಗಿನ ಆರಾಧನೆಗಾಗಿನ ಹೂವುಗಳ ಬಣ್ಣ ಇರಲಿ. ನೈಋತ್ಯ ದಿಕ್ಕಿನಲ್ಲಿ ಸಿಮೆಂಟಿನ ಕಟ್ಟೆ ಸಮಾವೇಶಗೊಳಿಸಿ, ಅಲ್ಲಿ ಆರಾಧನೆಗಾಗಿನ ಸಲಕರಣೆಗಳು ಇಡಲ್ಪಟ್ಟರೆ ತೊಂದರೆಗಳಿಲ್ಲ.

ವಾಯುವ್ಯ ಮೂಲೆಯಲ್ಲಿನ ಪಶ್ಚಿಮದ ಭಾಗದಲ್ಲಿ ಮೆಟ್ಟಿಲುಗಳು ಇದ್ದು ಅಂಗಡಿಯ ಒಳಬರಲು ಸಾಧ್ಯವಾಗುವ ಹಾಗೆ ರಚನೆ ಇರಲಿ. ವ್ಯಾಪಾರದ ವಾಣಿಜ್ಯದ ವಿಚಾರಗಳಿಗೆ ಸಂಬಂಧಿಸಿದಂತೆ ನಡೆಯುವ ಮಾತುಕತೆಗಳ ಕಾಲದಲ್ಲಿ ಹೊರರಸ್ತೆಯ ಧೂಳು ಬರದಂತೆ ಬಾಗಿಲು ಮುಚ್ಚಿರಲಿ. ರೆಸ್ಟೋರಂಟ್‌ಗಳಾದರೆ ಸ್ಪಾಂಜ್‌ ಬಳಸಿದ ದ್ರಾವಣ, ಪ್ಲಾಸ್ಟಿಕ್‌ ಕಸಬರಿಕೆ, ಉದ್ದನೆಯ ಕೋಲಿಗೆ ಕಟ್ಟಿದ ನೆಲ ಒರೆಸುವ ಮಾಪು ನಡೆಯಲಿ. ಗ್ರಾಹಕರಿಗೆ ದ್ರಾವಣ ಸಿಡಿಯದಂತೆ, ಕಸಬರಿಕೆ ಸೋರದಂತೆ ಎಚ್ಚರಿಕೆ ವಹಿಸಿ. ಕೆಲಸಗಾರರಿಗೆ ಈ ಕುರಿತು ಸರಳವಾದ ಬೋಧನೆ ಮಾಡಿ. ಯಜಮಾನನ ಜಾತಕಕ್ಕೆ ಹೊಂದುವ ಬಣ್ಣದ ಅನುಸಾರ ಕೆಲಸಗಾರರ ಸಮವಸ್ತ್ರವಿರಲಿ. ಎಲ್ಲವೂ ಸರಿಯಾಗಿದ್ದರೆ ಲಕ್ಷ್ಮೀಯ ಚಿತ್ತ ಆನಂದವಾಗಿರುತ್ತದೆ.



Friday, 17 November 2017

ಬಾಯಿಗೂ ರುಚಿ ಆರೋಗ್ಯಕ್ಕೂ ಉತ್ತಮ ರಾಗಿ ಬರ್ಫಿ

 ಸಿರಿಧಾನ್ಯಗಳಲ್ಲೊಂದಾದ ರಾಗಿ ಕ್ಯಾಲ್ಸಿಯಂ, ಖನಿಜಾಂಶಗಳು, ಪ್ರೊಟಿನ್ ಹೇರಳವಾಗಿರುವ ಪೋಷಕಾಂಶಗಳ ಆಗರ. ಇದರಲ್ಲಿ ನಾರಿನ ಅಂಶ, ಇತರ ಆಹಾರ ಧಾನ್ಯಗಳಿಗಿಂತ ಹೆಚ್ಚಾಗಿದೆ.

ದೇಹ ತೂಕ ಇಳಿಸುವವರಿಗೆ ವರದಾನವಾಗಿದೆ. ರಾಗಿಯನ್ನು ನಿತ್ಯವೂ ಸೇವಿಸಿದಲ್ಲಿ ದೇಹದಲ್ಲಿ ರಕ್ತ ವೃದ್ಧಿಯಾಗುತ್ತದೆ. ಮಧುಮೇಹಿಗಳಂತೂ ತಪ್ಪದೇ ಸೇವಿಸಬೇಕಾದ ಸಿರಿಧಾನ್ಯವಿದು. ಹಾಗಾದರೆ ಸವಿಯಲು ರುಚಿಕರವಾದ ಆರೋಗ್ಯಕ್ಕೆ ಉತ್ತಮವಾದ ಹಾಗೂ ಮಾಡಲು ಬಲು ಸುಲಭವಾದ ರಾಗಿ ಬರ್ಫಿ ಕುರಿತು ಮಾಹಿತಿ ಇಲ್ಲಿದೆ.
 

ಬೇಕಾಗುವ ಸಾಮಗ್ರಿಗಳು:


ನೆನೆಸಿ ಹಾಕಿದ ರಾಗಿ -1 ಬೌಲ್

ಬೆಲ್ಲ - ಮುಕ್ಕಾಲು ಬೌಲ್

ತೆಂಗಿನ ತುರಿ - ಸ್ವಲ್ಪ

ತುಪ್ಪ - 2-3 ಚಮಚ

ಏಲಕ್ಕಿ ಪುಡಿ -1/2 ಚಮಚ

ಗೋಡಂಬಿ-ಸ್ವಲ್ಪ


ಮಾಡುವ ವಿಧಾನ


ಒಂದು ದಿನ ಮುಂಚಿತವಾಗಿಯೇ ನೆನೆಸಿಟ್ಟ ರಾಗಿತನ್ನು ಚೆನ್ನಾಗಿ ತೊಳೆದು ಜಾಲಿಸಿ. ಬಳಿಕ ಅದನ್ನು ಮಿಕಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಹೀಗೆ ರುಬ್ಬಿಕೊಂಡ ಮಿಶ್ರಣವನ್ನು ಶೋಧಿಸಿಕೊಳ್ಳಿ.

ಈಗ ತೆಂಗಿನ ತುರಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

ಬಳಿಕ ಶೋಧಿಸಿಕೊಂಡಿರುವ ರಾಗಿ ಹಾಲನ್ನು ಒಂದು ಪ್ಯಾನ್ ಗೆ ಹಾಕಿ.  ಅದಕ್ಕೆ  ಬೆಲ್ಲವನ್ನು ಸೇರಿಸಿ ಕೈಯಾಡಿಸುತ್ತಾ ಇರಿ. 5 ನಿಮಿಷದ ಬಳಿಕ ಅದಕ್ಕೆ ರುಬ್ಬಿಕೊಂಡಿರುವ ತೆಂಗಿನ ಹಾಲನ್ನು ಸೇರಿಸಿ ಮತ್ತೆ ಕೈಯಾಡಿಸುತ್ತಾ ಇರಿ. ಸಣ್ಣ ಉರಿಯಲ್ಲಿ ಉಂದೆಯಾಗದಂತೆ ಮಿಶ್ರಣವನ್ನು ತಿರುಗಿಸಬೇಕು.  ಈಗ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ತಿರುಗುಸಿ.

ಸುಮಾರು 10 ನಿಮಿಷದ ಬಳಿಕ ನೀರಲ್ಲಿಅದ್ದಿದ ಬೆರಳಿನಿಂದ ಮಿಶ್ರಣವನ್ನು ಮುಟ್ಟಿನೋದಿ. ಅದು ಬೆರಳಿಗೆ ಅಂಟಿಕೊಳ್ಳುತ್ತಿಲ್ಲವೆಂದರೆ ಬೆಂದಿದೆ ಎಂದರ್ಥ.

ಈಗ ಒಂದು ಬಟ್ಟಲಲ್ಲಿ ತುಂಪವನ್ನು ಸವರಿ. ಹೀಗೆ ತುಪ್ಪ ಸವರಿದ ಬಟ್ಟಲಿಗೆ ಕಾಯಿಸಿದ ರಾಗಿ ಮಿಶ್ರಣವನ್ನು ಹಾಕಿ ಒಂದು ಲೆವಲ್ ಅನ್ನಾಗಿ ಮಾಡಿ. ಬಳಿಕ 5 ನಿಮಿಷ ಆರಲು ಬಿಡಿ.

5 ನಿಮಿಷದ ಬಳಿಕ ಒಂದು ಚಾಕುವಿನಿಂದ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಅದರ ಮೇಲೆ ಗೋಡಂಬಿಯಿಂದ ಅಲಂಕರಿಸಿ. ಇದನ್ನು ತುಪ್ಪದ ಜತೆ ಸವಿಯಲು ನೀಡಿ.


ದಂಪತಿಗಳು ಸುಖವಾಗಿ, ಸಂತೋಷದಿಂದಿರಲು ಆರು ವಾಸ್ತು ಸೂತ್ರಗಳು



ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ.
 

ಸುಮಧುರ ಸಂಬಂಧ:


ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ವಾಸ್ತು ಪ್ರಕಾರ, ಆಗ್ನೇಯ ದಿಕ್ಕು ಬೆಂಕಿ ಮತ್ತು ಬೆಂಕಿ ಸಂಬಂಧಿತ ವಸ್ತುಗಳನ್ನು ಸಂಕೇತಿಸುತ್ತದೆ. ಸೂರ್ಯ ಆಗ್ನೇಯ ದಿಕ್ಕಿಗೆ ಮುಟ್ಟಿದ ಕೂಡಲೇ ಇನ್ಫ್ರಾರೆಡ್ ಕಿರಣಗಳನ್ನು ಪ್ರತಿಫಲಿಸುತ್ತದೆ. ಚರ್ಮಕ್ಕೆ ಈ ಕಿರಣಗಳು ಹಾನಿಕರವಾಗಿದ್ದು, ಕೋಣೆಯಲ್ಲಿ ಸಂಗ್ರಹವಾಗಿದ್ದರೆ ಜೀವನ ಅಹಿತಕಾರಿಯಾಗುತ್ತದೆ. ಪ್ರಾಣಿಗಳು ಹೋರಾಟ ಮಾಡುವ ಚಿತ್ರಗಳನ್ನು, ಭೇಟೆಯಾಡುವ ಸಿಂಹ, ಬೆಂಕಿಯ ದೃಶ್ಯಗಳು, ಹೂವು ಮತ್ತು ಹಣ್ಣುಗಳಿಲ್ಲದ ಮರಗಳು, ಪಾರಿವಾಳಗಳು, ಕಾಗೆಗಳು, ಸಿಂಹ, ಹಾವು, ಹದ್ದು, ಗೂಬೆಗಳ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ನೇತು ಹಾಕಬೇಡಿ.
 

ಕುಟುಂಬದ ಸದಸ್ಯರ ಜತೆ ಸಾಮರಸ್ಯ


ವಿವಾಹದ ಬಳಿಕ ಕುಟುಂಬದ ಇತರೆ ಸದಸ್ಯರ ಜತೆ ಮಧುರ ಸಂಬಂಧ ಇರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ನಿಮ್ಮ ಅಡುಗೆಮನೆಯಲ್ಲಿ ಅನಿಲ ಸ್ಟೌವ್ ಮತ್ತು ಸಿಂಕ್ ವಿಶ್ಲೇಷಣೆ ಮಾಡಿ. ಅನಿಲ ಸ್ಟೌವ್ ಅಗ್ನಿಯಾಗಿದ್ದು, ಸಿಂಕ್ ನೀರನ್ನು ಪ್ರತಿನಿಧಿಸುತ್ತದೆ. ಅಗ್ನಿ ಶಕ್ತಿ ಮತ್ತು ಜಲಶಕ್ತಿಯನ್ನು ತಪ್ಪಾದ ಸ್ಥಳದಲ್ಲಿ ಇರಿಸಿದ್ದರೆ ಕುಟುಂಬದ ಸಂಬಂಧ ಅಸ್ತವ್ಯಸ್ತಗೊಳ್ಳುತ್ತದೆ.
 

ಚಾಕು ಮತ್ತು ಕತ್ತರಿಗಳು


ಅಡುಗೆಮನೆಯಲ್ಲಿ ಚಾಕು ಮತ್ತು ಕತ್ತರಿಗಳನ್ನು ಮುಚ್ಚಿಡಬೇಕು. ಚಾಕು ಮತ್ತು ಕತ್ತರಿಗಳನ್ನು ಮುಕ್ತವಾಗಿ ತೆರೆದಿಡುವುದು ಕೆಟ್ಟ ಸಂಬಂಧಕ್ಕೆ ದಾರಿ ಕಲ್ಪಿಸುತ್ತದೆ. ಉಪ್ಪಿನಕಾಯಿಯನ್ನು ಕೂಡ ಮುಚ್ಚಿಡಬೇಕು. ಉಪ್ಪಿನಕಾಯಿಗಳನ್ನು ಬಹಿರಂಗವಾಗಿ ಪ್ರದರ್ಶಿಸುವುದು ಕೂಡ ಸಂಬಂಧದ ಬಿರುಕಿಗೆ ಕಾರಣವಾಗುತ್ತದೆ.
 

ಮಕ್ಕಳು:


ನವವಿವಾಹಿತರು ಅಥವಾ ದಂಪತಿ ಮಗುವೊಂದನ್ನು ಬಯಸಿದ್ದರೆ ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಮಲಗಬಾರದು. ಈ ಮ‌ೂಲೆಯಿಂದ ಬಲವಾದ ಆಯಸ್ಕಾಂತೀಯ ಶಕ್ತಿಗಳು ಗರ್ಭದಾರಣೆ ಮತ್ತು ಮಗುವಿನ ಉಳಿವಿನ ಬಗ್ಗೆ ಕೆಟ್ಟದನ್ನು ಸೃಷ್ಟಿಸಬಹುದು. ನಿಮ್ಮ ಮಲಗುವ ಕೋಣೆ ಕೆಂಪು ಅಥವಾ ತೀರಾ ತೀಕ್ಷ್ಣ ಬಣ್ಣದಿಂದ ಕೂಡಿರದಂತೆ ನೋಡಿಕೊಳ್ಳಿ. ನಿಮ್ಮ ನೀರಿನ ಟ್ಯಾಂಕ್ ಇರುವ ಸ್ಥಳವನ್ನು ಪರೀಕ್ಷಿಸಿ. ಅದನ್ನು ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸಿದರೆ ಗರ್ಭದಾರಣೆ ಸಮಸ್ಯೆಗಳು ಬರಬಹುದು. ನಿಮ್ಮ ಮನೆಯಲ್ಲಿ ಹೂವು ಬಿಡದ ಮರಗಳಿದ್ದರೆ, ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆದೋರಬಹುದು.
 

ಆರೋಗ್ಯಕರ ಲೈಂಗಿಕ ಸಂಬಂಧ


ಕೋಣೆಯ ಬಣ್ಣಗಳನ್ನು ಪರೀಕ್ಷಿಸಿ, ಬಣ್ಣ ಮಂದವಾಗಿರಬಾರದು. ಬಿಳಿಯ ಬಣ್ಣ ಅಥವಾ ಸಂಪೂರ್ಣ ನೇರಳೆ ಬಣ್ಣ ಆಧ್ಯಾತ್ಮದ ಸಂಕೇತವಾಗಿದ್ದು,ದಂಪತಿ ಅವುಗಳನ್ನು ಮಲಗುವ ಕೋಣೆಗಳಲ್ಲಿ ಬಳಸಬಾರದು. ದಂಪತಿ ಈಶಾನ್ಯ ಕೋಣೆಗಳನ್ನು ಆಕ್ರಮಿಸಬಾರದು. ವಿಷೇಷವಾಗಿ ವಿವಾಹಿತ ಜೀವನದಲ್ಲಿ ಪ್ರೀತಿ ಪ್ರದರ್ಶನಕ್ಕೆ ದಂಪತಿ ಕೋಣೆಯಲ್ಲಿ ಒಂಟಿ ಬಾತುಕೋಳಿ, ಚಿಟ್ಟೆ, ಹಕ್ಕಿ, ಜಿಂಕೆಯ ಚಿತ್ರಗಳಿರಬಾರದು. ವಿವಾಹಿತ ಜೀವನದಲ್ಲಿ ಒತ್ತಡವು ಲೈಂಗಿಕತೆಗೆ ಒಂದು ದೊಡ್ಡ ಶತ್ರು. ಕಂಪ್ಯೂಟರ್‌ಗಳನ್ನು ಇರಿಸುವ ಮ‌ೂಲಕ ಮಲಗುವಕೋಣೆಯಲ್ಲಿ ಕಚೇರಿ ಪರಿಸರವನ್ನು ಸೃಷ್ಟಿಸಬೇಡಿ.
 

ಆರ್ಥಿಕ ಶಕ್ತಿ


ಸುಖವಾದ ದಾಂಪತ್ಯಕ್ಕೆ ಸಾಕಷ್ಟು ಹಣಕಾಸು ಅವಿಭಾಜ್ಯ ಅಂಗ. ಸೂಕ್ಷ್ಮ ಮತ್ತು ಅಧಿಕಾರಯುತ ದಿಕ್ಕುಗಳಾದ ಉತ್ತರ ಮತ್ತು ಪೂರ್ವ ದಿಕ್ಕುಗಳನ್ನು ಪೋಷಿಸಲು ಎಚ್ಚರಿಕೆ ವಹಿಸಬೇಕು. ಉತ್ತರದ ಕಡೆಗಳಲ್ಲಿ ಹೆಚ್ಚು ಕಿಟಕಿಗಳು ಇರಬೇಕು. ರಸ್ತೆ ಕೊನೆಗೊಳ್ಳುವ T-Facing ಮನೆಗಳು ಶುಭಕರವಲ್ಲ. ಅದೊಂದು ವಿಶಮಿಶ್ರಿತ ಬಾಣ ನಿಮ್ಮ ಕಡೆಗೆ ಬಿಟ್ಟ ಹಾಗಿರುತ್ತದೆ. ಮಾನವ ಸಂಬಂಧಗಳು ದೇಹದ ನರಗಳಂತೆ ಜಟಿಲವಾಗಿದೆ. ಇನ್ನೊಂದು ಸಂಬಂಧದಿಂದ ಪ್ರತಿಯೊಬ್ಬ ವ್ಯಕ್ತಿ ಅತೀ ನಿರೀಕ್ಷೆ ಇಟ್ಟುಕೊಳ್ಳುತ್ತಾನೆ. ವಾಸ್ತು ನಿಸರ್ಗದ ಕಾನೂನಿಗೆ ಸಮ್ಮತಿಸುತ್ತದೆ. ಬೇರೆಯವರಿಂದ ಏನನ್ನು ಬಯಸುತ್ತೇವೊ, ಅದನ್ನು ನಾವೂ ಕೊಡಬೇಕು. ನಾವು ಉಸಿರನ್ನು ಎಳೆದುಕೊಂಡರೆ ಉಸಿರನ್ನು ಹೊರಕ್ಕೆ ಬಿಡಲೇಬೇಕಾಗುತ್ತದೆ. ಆದ್ದರಿಂದ ಕೊಟ್ಟು ತೆಗೆದುಕೊಳ್ಳುವ ತತ್ವದಿಂದ ವೈವಾಹಿಕ ದಾಂಪತ್ಯ ಸುಖಕರವಾಗಿರುತ್ತದೆ.

Thursday, 16 November 2017

ದೇವಾಲಯಗಳು ಪವಿತ್ರವಾಗಿರಲು ಏನು ಮಾಡಬೇಕು ಗೊತ್ತಾ?

ಜಲಾವೃತವಾದ ಬ್ರಹ್ಮಾಂಡವು ತದನಂತರದಲ್ಲಿ ಜಲದಿಂದಲೇ ಎಲ್ಲ ಸೃಷ್ಟಿ ಕ್ರಿಯೆ ಪೂರೈಸುತ್ತದೆ. ಜಲದಿಂದಲೇ ಸರ್ವಸ್ವವೂ, ತ್ರಿಮೂರ್ತಿಗಳು, ದೇವತೆಗಳು ದ್ವಾದಶಾದಿತ್ಯರೂ, ತಾರಾಮಂಡಲ, ಗ್ರಹ ಮಂಡಲ, ಭೂಮಿ ಯ ಉಪಗ್ರಹಗಳೆಲ್ಲ ನೀರಿನಿಂದಲೇ ಸೃಷ್ಟಿಗೊಂಡಂಥವು. ಅಗ್ನಿ ಮಣ್ಣುಗಾಳಿಗಳು ಲೌಕಿಕ ಹಾಗೂ ಅಲೌಕಿಕಗಳ ಕೊಂಡಿಯಾದ ಆಕಾಶತತ್ವವೂ ಹೇಗೆ ಸರ್ವಸ್ವವೂ ನೀರಿನಿಂದಲೇ ಉದಯಿಸಲ್ಪಡುತ್ತದೆ. ಈ ಉದಯಕ್ಕೆ ಕಾರಣಗಳೇನು? ಹೇಗೆ? ಎಂತು ಇತ್ಯಾದಿಗಳೆಲ್ಲ ಮಾಯೆಯ ಕಾರಣದಿಂದ ಶಂಕರಾಚಾರ್ಯರು ಜಗನಿ¾ತ್ಯಾ ಬ್ರಹ್ಮೋ ಸತ್ಯಂ ಎಂದವರು. ಅಹಂ ಬ್ರಹ್ಮಾಸ್ಮಿ ಎಂದು ವ್ಯಾಖ್ಯಾನಿಸಿದವರು. ತತ್ವಮಸಿ ಎಂದು ವಿಶ್ಲೇಷಿಸಿದವರು.  ಅದೂ ಅಲ್ಲಿದೆ ಎಂದವರು. ಅದು ಎಂದರೆ ಏನು? ಅನೂಹ್ಯವಾದದ್ದು ಎಂದೇ ಅರ್ಥ. ಮಾಯಾ ಎಂಬುದೇ ಅರ್ಥ.

ಪ್ರತಿಯೊಂದು ನಾಗರೀಕತೆಯೂ ಜನ್ಮ ತಳೆದದ್ದು ನೀರಿನ ದಡದಲ್ಲೇ. ಅಂದರೆ ನೀರು ಇರುವ ಸ್ಥಳದ ಸಮೀಪವೇ ಜನರು ಬೀಡು ಬಿಡುತ್ತಾರೆ ಹೊರತೂ ಮರುಭೂಮಿಯಲ್ಲಿ ಬೀಡು ಬಿಡಲು ಸಾಧ್ಯವಿಲ್ಲ. "ತಂತ್ರಸಮುತ್ಛಯ' ಎಂಬ ವಾಸ್ತುಶಾಸ್ತ್ರ ಹೊತ್ತಿಗೆ  ಹೀಗಾಗಿ ನೀರಿನ ಸೆಲೆ, ಅಲೆ ಹರಿತಗಳಿರುವ ಜಾಗೆದ ಸಮೀಪವೇ ದೇವಾಲಯಗಳಿರಬೇಕು ಎಂಬುದನ್ನು ದೇವಾಲಯ ಸಂಧಾನದ ಪರಿಚ್ಛೇದದಲ್ಲಿ ವಿಸ್ತಾರವಾಗಿ ವಿವರಿಸಿ ಹೇಳುತ್ತದೆ. ದೇವತೆಗಳು ಈ ನೀರಿನ ಧಾರೆಯಿರುವ ಜಾಗೆಯನ್ನೇ ದೇವಾಲಯಗಳಿಗಾಗಿ ಸಂಕೇತಿಸುತ್ತಾರೆ. ಈ ಜಾಗೆಗಳಲ್ಲಿ ಧ್ಯಾನ, ಮಂತ್ರ, ಜಪತಪಗಳನ್ನು ಮಾಡಲು ಸುಲಭವಾಗುತ್ತದೆ. ಈ ದೇವಾಲಯಗಳು ವೇದಗಳು ನಿರೂಪಿಸಿದ ಮಂತ್ರಗಳಿಂದ ಶಕ್ತಿ ಪಡೆಯುತ್ತದೆ. ಸ್ಥಾಪಿಸಲ್ಪಡುವ ದೇವರ ಪ್ರಾಣಮೂರ್ತಿ ಚೈತನ್ಯ ಪಡೆಯುವುದೇ ಮಂತ್ರಗಳ ಮೂಲಕ. ಮಂತ್ರಗಳು ಜಾnನಿಗಳು ಕೈವಶ ಮಾಡಿಕೊಂಡಿರುತ್ತಾರೆ. ಮಂತ್ರಗಳು ದೇವತೆಗಳನ್ನು ಕೈವಶ ಮಾಡಿಕೊಳ್ಳಲು ದಾರಿಯಾಗುತ್ತದೆ.

ತಪೋನಿರತನಾಗಿ ದೈವಾನುಗ್ರಹಕ್ಕೆ ಪಾತ್ರನಾದ ವ್ಯಕ್ತಿಗೆ ದೇವತೆಗಳು ಒಲಿಯುತ್ತಾರೆ. ನದೀ ತೀರದಲ್ಲಿ ಅಥವಾ ವನಪ್ರದೇಶಗಳಲ್ಲಿ ತಪೋನಿರತರಾದ ಸಾಧಕರು ತಮ್ಮ ಸಾಧನೆಗಾಗಿ ತಪಸ್ಸು ಮಾಡುತ್ತಾರೆ. ಬ್ರಾಹ್ಮಣನು ಸಾತ್ವಿಕನಾಗಿರಬೇಕು. ಸಾತ್ವಿಕತೆ ಇರದಿದ್ದರೆ ಜನ್ಮಾತ್‌ ಆತ ಬ್ರಾಹ್ಮಣನೇ ಹೊರತು ನಿಜವಾದ ಬ್ರಾಹ್ಮಣನಾಗಲೂ ಸಾಧ್ಯವಿರುವುದಿಲ್ಲ. ತಪಸ್ಸಿನ ದಿವ್ಯತೆಯಿಂದ ಶಾಖೋತ್ಪನ್ನ ಸಾಧ್ಯ. ಅದು ಮೈಮನಗಳನ್ನು ಶುದ್ಧ ಮಾಡುತ್ತದೆ. ತ್ರಿಕರಣ ಪೂರ್ವಕವಾಗಿ ದೈವಾನುಷ್ಟಾನ ನಿರತನು ತಪಸ್ಸಿನಿಂದ ಹೊಸದೇ ತೇಜಸ್ಸನ್ನು ನಿರ್ವಿಕಾರ ಚಿತ್ತದಿಂದ ವರ್ಚಸ್ಸನ್ನೂ ಸಂಪಾದಿಸಿಕೊಳ್ಳುತ್ತಾನೆ. ಜಾnನಿಯಾಗಿರದವನು ತಪಸ್ಸು ಮಾಡಲಾರ. ತಪಸ್ಸಿನ ನಂತರ ಜಾnನಕ್ಕೆ ಒದಗುವ ಪುಟವೇ ಬೇರೆ. ಈ ಕಾರಣಗಳಿಂದ ತನ್ನ ಮನಸ್ಸಿನ ವಿಕಾರಗಳನ್ನು ದೂರ ಮಾಡಿಕೊಂಡ ಅನುಷ್ಠಾನ ನಿರತ ವ್ಯಕ್ತಿ, ಜಾತಿ,ಧರ್ಮ, ಮತ, ಭಾಷೆ ಜನಾಂಗೀಯ ಸಂಬಂಧೀ  ವಿಚಾರಗಳಿಂದ ಹೊರಬಂದು ಯೋಗಿಯಾಗುತ್ತಾನೆ. ಹೀಗಾಗಿ ಪ್ರಾಜ`ರು ವಾಸಿಸುವ ನಿಸ್ವಾರ್ಥಿಗಳಿಂದ ತುಂಬಿದ ವಸತಿಗಳಲ್ಲಿ ದೇವಾಲಯಗಳಿರಬೇಕು. ನೀರು, ಜಾnನ, ತಪಸ್ಸು, ಹಸಿರು ಭೂವಲಯಗಳು ತನ್ನಷ್ಟಕ್ಕೆ ತಾನೇ ದೇವಾಲಯಗಳನ್ನು ದೈವಬಲ ಸಂವರ್ಧನಾ ಕ್ಷೇತ್ರಗಳನ್ನಾಗಿ ಪರಿವರ್ತಿಸುತ್ತದೆ.

ನೀರು ಕೊಳೆಯನ್ನು ಕಳೆಯುವ ಗಂಗೆಯಾಗಿದೆ. ಶುಚಿಭೂìತವಾದ ದೇಹವೇ ಅನನ್ಯವಾದ ಕಾಂತಿವಲಯವೊಂದನ್ನು ಕೈವಶಪಡಿಸಿಕೊಂಡ ಚೈತನ್ಯವನ್ನು ಅಂತರ್ಗತಗೊಳಿಸುತ್ತ ತಾತ್ವಿಕತೆಯೊಂದಿಗೆ ಪರಿಶುದ್ಧತೆ, ಅಧ್ಯಾತ್ಮ ಚಿಂತನೆ ತತ್ವಶಾಸ್ತ್ರ ನಿರ್ದೇಶಿತ ಕೈಂಕರ್ಯಗಳನ್ನು ಹೊಂದಲು ಸಫ‌ಲಗೊಳ್ಳುತ್ತದೆ. ಈ ಸಾಫ‌ಲ್ಯದಿಂದ ದೈವಕ್ಕೆ ಪ್ರಿಯವಾದ ಮಂತ್ರಗಳು ಜಾnನಿಗೆ ತಾತ್ವಿಕವಾಗಿ, ನೈತಿಕವಾಗಿ ಸಂಪನ್ನತೆಯನ್ನು ಒದಗಿಸುತ್ತದೆ. ದೇವಾಲಯದಲ್ಲಿನ ದೇವರು ತನ್ನ ದೃಷ್ಟಿಬಲಕ್ಕೆ ಜಾಗ್ರತ ಸಿದ್ಧಿ ಮಾಡಿಸಿಕೊಂಡಾಗ ಅನುಗ್ರಹ ನೀಡಲು ಶಕ್ತನಾಗುತ್ತಾನೆ. ಜಾಗ್ರತ ಶಕ್ತಿಗಳು ಮಂತ್ರಾಕ್ಷರಗಳ ಅನುಕರಣದಿಂದ ಪಡಿಮೂಡುತ್ತದೆ. ಮಂತ್ರಾಕ್ಷರಗಳು ಪರಿಶುದ್ಧ ದೇಹ ಮತ್ತು ಮನಸ್ಸಿನಲ್ಲಿ ಬೇರು ಬಿಡುತ್ತದೆ. ಪರಿಶುದ್ಧತೆ ನೀರಿನ ಕಾರಣದಿಂದ ಮೈಗೂಡುತ್ತದೆ. ಒಟ್ಟಿನಲ್ಲಿ ಆಸ್ತಿಕತೆಯು ಜಾnನದ ಪರಿಶುದ್ಧತೆಯ ಫ‌ಲ. ಪರಿಶುದ್ಧತೆಗೆ ಜಾnನವೂ ಪರಿಶುದ್ಧವಾದ ನೀರಿನ ಕಾರಣಕ್ಕಾಗಿ ಶುಚಿಭೂìತತ್ವವು ಅನಿವಾರ್ಯವಾಗಿದೆ.

Wednesday, 15 November 2017

ಮೀನು , ಹಕ್ಕಿಗಳನ್ನು ಮನೆಯಲ್ಲಿ ಸಾಕಬಹುದಾ?

ಮನೆಯ ಸೊಬಗಿಗೆ ಎಂದು ನಾವು ಅಕ್ವೇರಿಯಂ ಅಥವಾ ಗಿಣಿ ಪಾರಿವಾಳ ನವಿಲು ಗುಬ್ಬಿ ಇತ್ಯಾದಿ ಹಕ್ಕಿಗಳನ್ನು ಲÊ ಬರ್ಡ್ಸ್‌ಗಳಂಥ ಬಣ್ಣಬಣ್ಣಗಳ ಮೈ ಹೊದಿಕೆಯ ಹಕ್ಕಿಗಳನ್ನು ಇಟ್ಟು ಆರೈಕೆ ಮಾಡುವುದನ್ನು ಗಮನಿಸುತ್ತೇವೆ. ಅಕ್ವೇರಿಯಂ ಇಟ್ಟು ಬಣ್ಣಬಣ್ಣಗಳ, ಅವುಗಳ ಹೊರಮೈ ಚೆಲ್ಲಿ ತೆವಳುತ್ತಾ, ಈಜುತ್ತಾ ತಾವು ಹೊರಬರಲಾಗದ ಗಾಜಿನ ಗೋಡೆಗಳೀಗೆ ಡಿಕ್ಕಿ ಹೊಡೆಯುತ್ತ ಮೂತಿ ಬಡೆಯುತ್ತಾ, ಉರಟುರುಟಾಗಿಸುತ್ತ ಓಡಾಡುವ ಮೀನುಗಳು ಕಣ್ಣಿಗೆ ಆಹ್ಲಾದವನ್ನು ಕೊಡುತ್ತವೆ ಎಂದು ಆನಂದಿಸುತ್ತೇವೆ.

ಆದರೆ ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು ಗಾಜಿನ ಗಿಂಡಿಗಳನ್ನು ಮಲಗುವ ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತ ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತ ದಿಕ್ಕು ತಪ್ಪಿದ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭಲಕ್ಷಣವಾಗುವುದಿಲ್ಲ. ಜೊತೆಗೆ ಮಲಗುವ ಕೋಣೆಯಲ್ಲಿ ನೀರನ್ನು ತುಂಬಿಕೊಂಡ ಯಾವುದೇ ಪಾತ್ರೆಗಳು, ತೊಟ್ಟಿಗಳು ಜಾಡಿಗಳು ಗಿಂಡಿಗಳು ಅಶುಭ ಸೂಚಕವಾಗಿದೆ. ಇದಕ್ಕೆ ಕಾರಣ ಮಲಗಿದ ಸಂದರ್ಭದ ಸುಪ್ತಾವಸ್ಥೆಗೂ ನೀರಿನ ಕಾರಣವಾದ ಜಲತತ್ವಕ್ಕೂ ಒಂದು ಇನ್ನೊಂದನ್ನು ಭೇದಿಸಿ ಅಶುಭ ಸ್ಪಂದನಗಳನ್ನು ಮನೆಯ ಯಜಮಾನನಿಗೆ ತಂದಿಡುವ ಅಂಶಗಳಾಗಿವೆ.

ಅಕ್ವೇರಿಯಂ ಜಾಡಿಯನ್ನು ಹೊರ ದಿವಾನಖಾನೆಯಲ್ಲಿ ಇರಿಸಬಹುದು. ಹೊಸದಾಗಿ ಮದುವೆಯಾದ ದಂಪತಿಗೆ ಕೂಡಾ ಈ ರೀತಿಯ ಅಕ್ವೇರಿಯಂ ಜೋಡಣೆ ಉತ್ತಮ. ಮದುವೆಯಾಗಬೇಕಾದ ದಾಂಪತ್ಯ ಆಕಾಂಕ್ಷಿಗಳಿಗೂ ಇದು ಒಳ್ಳೆಯದು. ಹೀಗಿರುವ ಅಕ್ವೇರಿಯಂ ನಲ್ಲಿ ಪೂರ್ತಿಯಾಗಿ ಕಡುಗಪ್ಪು ಮೈಬಣ್ಣವಿರುವ ಮೀನುಗಳು ಇರದಂತೆ ನೋಡಿಕೊಳ್ಳಿ. ಬಂಗಾರದ ಬಣ್ಣ, ನಸುನೀಲಿ, ನಸುಗೆಂಪು, ಬಿಳಿಕಪ್ಪು ಪಟ್ಟೆಗಳಿರುವ  ಮೀನುಗಳು ಅಲೆ, ಅಲೆಯಾಕಾರದ ವಜ್ರದ ಸ್ವರೂಪದಲ್ಲಿರುವ ಆಕಾರದಿಂದ ಮೀನುಗಳು ಅತ್ಯುತ್ಸಾಹದಿಂದ ಪುಟಿಯುವಂತೆ ಕತ್ತು ಮೂತಿ ಕೊಂಕಿಸುತ್ತಾ ಓಡಾಡುವಂತಿರಲಿ.

ಸೂರ್ಯ ಬರುವ ಮುನ್ನ ಆಹಾರವನ್ನು ಹಾಕುವ ಪದ್ಧತಿ ಬೇಡ. ಮುಂಜಾನೆ ಸೂರ್ಯ ಬಂದಾಗಲೇ ಆಹಾರದ ಗೋಲಿಗಳು ಅಕ್ವೇರಿಯಂ ಒಳಗೆ ಮೀನುಗಳಿಗೆ ನೀಡುವ ಅಭ್ಯಾಸಿಟ್ಟುಕೊಳ್ಳಿ. ಒಳಗಿನ ನೀರು ನಸುನೀಲಿಯನ್ನು ಹಳದಿ ಛಾಯೆಯ ಬೆಳಕಲ್ಲಿ ಹೊಂದುವಂತೆ ಪ್ರತಿಫ‌ಲಿಸುವಂತಾಗಲಿ. ಇದರಿಂದ ಮನೆಯೊಳಗಿನ ಸ್ನೇಹಪೂರ್ಣ ಪರಸ್ಪರರನ್ನು ಅರಿಯುವ ನಿಟ್ಟಿನ ವಿಚಾರದಲ್ಲಿ ಒಂದು ಆದ್ರìತೆ ನಿರ್ಮಾಣಗೊಳ್ಳಲು ಸಹಾಯವಾಗುತ್ತದೆ.

ಇನ್ನು ಹಕ್ಕಿಗಳ ವಿಷಯಕ್ಕೆ ಬಂದಾಗ ಬಂಧನಕ್ಕೆ ತಳ್ಳಿಕೊಂಡ ಹಕ್ಕಿಗಳು ಮನೆಯೊಳಗಡೆ ಇರಲೇಬಾರದು. ಗುಬ್ಬಿಗಳ ವಿಷಯದಲ್ಲಿ ಬಂಧನವೆಂಬುದು ನಿರ್ಮಾಣವಾಗದಿದ್ದರೂ ಹಾರಾಡಿಕೊಂಡಿರುವ ಗುಬ್ಬಿಗಳು ಕೂಡಾ ಮನೆಯಲ್ಲಿ ಗೂಡು ಕಟ್ಟುವ ವಿಚಾರ ಆಗದಿದ್ದರೆ ಸೂಕ್ತ. ಯಾಕೆಂದರೆ ಗುಬ್ಬಿಗಳು ತಮ್ಮ ಆಹಾರವಾದ ಕೀಟಗಳನ್ನು ಮನೆಯೊಳಗೆ ತಂದು ಕೊಂದು ತಿನ್ನುವ ಅದರ ಭೋಜನ ವಿಶೇಷ ಸಂಭವಿಸಕೂಡದು. ಗುಬ್ಬಿಗಳನ್ನು ಈ  ವಿಷಯದಲ್ಲಿ ಮನುಷ್ಯ ಪ್ರಯತ್ನಗಳೊಡನೆ ಈ ನೆಲೆಯಲ್ಲಿ ನಿಯಂತ್ರಿಸಲಾಗದು. ಈ ಕಾರಣದಿಂದಾಗಿ ಗುಬ್ಬಿಗಳು ಮನೆಯೊಳಗಡೆ ನಿದ್ದವೇ ಆಗಿದೆ. ಉಳಿದಂತೆ ಗಿಣಿ , ಲವ್‌ಬರ್ಡ್ಸ್‌, ಪಾರಿವಾಳಗಳು ಸಹಾ ಮನೆಯೊಳಗೆ ತಮ್ಮ ವಸತಿಯನ್ನು ನಿರ್ಮಿಸಿಕೊಳ್ಳುವುದು ಬೇಡ. ಜೊತೆಗೆ ಪಂಜರವೊಂದನ್ನು ನಿರ್ಮಿಸಿ ಕೊಳ್ಳುವುದು ಬೇಡ. ಪಂಜರದಲ್ಲಿ ಇವುಗಳ ಅಸಹಾಯಕ ಪರಿಸ್ಥಿತಿ ಅಥವಾ ಸೆರೆವಾಸ ಅಷ್ಟು ಒಳ್ಳೆಯದಲ್ಲ.


Tuesday, 14 November 2017

ಮನೆಯ ವಾಯವ್ಯ ಮೂಲೆ ಲವಲವಿಕೆ ಕೇಂದ್ರ...

ಮನೆಯಲ್ಲಿನ ನೀರಿನ ವಿಚಾರದಲ್ಲಿ ಹೆಚ್ಚು ಎಚ್ಚರವಿರಬೇಕು. ಈಗ ಬಾವಿಗಳನ್ನು ತೆಗೆಸುವ ವಿಚಾರದಲ್ಲಿ ಬೋರು ಹೊಡೆಸುವ ಸಂದರ್ಭದಲ್ಲಿ ಬೇಕಾದ ನೀರನ್ನು ಕಾರ್ಪೊàರೇಷನ್ನ ನಗರ ಸಭೆ ಮುನಿಸಿಪಾಲಿಟಿ ಅಥವಾ ನಗರ ಪಂಚಾಯಿತಿಗಳು ಬಿಟ್ಟಾಗ ಸಂಗ್ರಹಿಸುವ ರೀತಿಯಲ್ಲಿ ಯುಕ್ತವಾದ ವಿಧಿ ವಿಧಾನಗಳನ್ನು ಅನುಸರಿಸುವುದಿಲ್ಲ. ಹೇಗೋ ಸಂಗ್ರಹಿಸುತ್ತಾರೆ. ಹೇಗೋ ನೀರಿನ ಪೂರೈಕೆ ಮನೆಯೊಳಗೆ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ
ಪ್ರತಿ ನಗರ ಪ್ರತಿ ಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ.

ಮನೆಯಲ್ಲಿ ಬಾವಿಯನ್ನು ತೋಡುವುದಾದರೆ ಈಶಾನ್ಯ ಮೂಲೆಯಲ್ಲಿ (ಉತ್ತರ ಹಾಗೂ ಪೂರ್ವ ದಿಕ್ಕುಗಳ ನಡುವೆ)
ತೋಡಬೇಕು. ಹಾಗೆಯೇ ಬೋರವೆಲ್‌ ಹಾಕಿಸುವುದಾದರೂ ಅಲ್ಲಿಯೇ ಹಾಕಿಸಬೇಕು. ಒಳಾಂತರ್ಗತವಾಗಿ ಮನೆಯಲ್ಲಿ
ನೀರಿನ ಸಂಪನ್ನು ನಿರ್ಮಾಣ ಮಾಡಿಕೊಳ್ಳುವ ದಿಕ್ಕು ಕೂಡಾ ಈಶಾನ್ಯ ಮೂಲೆಯಲ್ಲೇ ಆಗಬೇಕು. ಹೀಗೆ ನಿರ್ಮಿಸಿಕೊಳ್ಳುವ ಸಂಪು ಈಶಾನ್ಯ ಮೂಲೆಯಲ್ಲಿರಬೇಕು ಎಂಬುದು ಮುಖ್ಯವೇ ವಿನಾ ಕಾಂಪೌಂಡ್‌ ಗೋಡೆಗಳಿಗೆ ಹೊಂದಿರಬೇಕಾ ಮೂಲೆಗೇ ನಿರ್ದಿಷ್ಟವಾಗಿ ಸಮಾವೇಶವಾಗಿರಬೇಕೋ ಎಂಬುದೆಲ್ಲಾ ತಲೆಕೆಡಿಸಿಕೊಳ್ಳುವ ವಿಚಾರವಲ್ಲ.
ಮನೆಯ ಸುಮಾರು ಒಟ್ಟೂ ವಿಸ್ತೀರ್ಣದ ಶೇಕಡಾ ಒಂದು ಭಾಗದಷ್ಟು ಉದ್ದಗಲಗಳು ಸಂಪಿಗೆ ಒದಗಿರಲಿ ಎಂಬುದನ್ನು
ಗಮನಿಸಿ. ಸಂಪಿನ ಆಳ ಆರಡಿಗಳನ್ನು ಮೀರದಿರಲಿ. ಇನ್ನಷ್ಟು ಆಳ ತುಸು ಅಪಾಯಕಾರಿ ಹಾಗೂ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಹಕಾರಿಯಾಗುವುದಿಲ್ಲ. ಸಂಪನ್ನು ಆಗಾಗ ಸ್ವತ್ಛಗೊಳಿಸುವುದು ಆರೋಗ್ಯಕ್ಕೆ ಬಹುಮುಖ್ಯ.

ಮಳೆನೀನ ಕೊಯ್ಲನ್ನು ಅಳವಡಿಸಿಕೊಳ್ಳುವುದಾದರೆ ಮುಕ್ತವಾಗಿ ತೆರೆಯಲ್ಪಟ್ಟ ಬಾಯ ರೀತಿಯ ಕ್ರಮವನ್ನು
ಅನುಸರಿಸುವುದೇ ಸೂಕ್ತ. ಈ ರೀತಿಯ ಬಾವಿ ಕೂಡಾ ಈಶಾನ್ಯ ಮೂಲೆಗೆ ಸ್ಥಾಯಿಗೊಳ್ಳಿ. ಇನ್ನು ಮನೆಯ ಲಕ್ಷಣಗಳಿಗೆ ಅಂದವನ್ನು ಹೆಚ್ಚಿಸುವ ಅಂಶವಾಗಿ ಕಿರುಗಾತ್ರದ ಸುಂದರ ಕೊಳವನ್ನೋ ಚಿಮ್ಮುವ ಕಾರಂಜಿಯನ್ನೋ ನಿರ್ಮಿಸಿಕೊಳ್ಳುವ ಅಪೇಕ್ಷೆ ಹಲವರಿಗಿರುತ್ತದೆ. ಈಜುಕೊಳವನ್ನು ಕೂಡಾ ನಿರ್ಮಿಸುವ ವಿಚಾರ ಇಟ್ಟುಕೊಂಡಿರುತ್ತಾರೆ.
ಈ ಏನೇ ಇತರ ನೀರಿಗೆ ಸಂಬಂಧಿಸಿದ ವಿಚಾರಗಳು ಈಶಾನ್ಯ ದಿಕ್ಕಿನ ಜಾಗೆಯನ್ನು ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲ ಮೂಲಗಳು ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಳ್ಳುವಂತಿರಬೇಕು ಗಮನರಲಿ.

ಹೀಗೆಯೇ ಮನೆಯ ಮೇಲಿನ ಓವರ್‌ ಹೆಡ್‌ ಟ್ಯಾಂಕುಗಳು ಮಾತ್ರ ನೈಋತ್ಯ ದಿಕ್ಕಿನಲ್ಲಿ ಇರಬೇಕು. ದಕ್ಷಿಣ ಹಾಗೂ
ಪಶ್ಚಿಮ ದಿಕ್ಕುಗಳು ಒಂದಾಗುವ ಜಾಗವೇ ನೈಋತ್ಯವಾಗಿದೆ. ಇಲ್ಲಿ ಟ್ಯಾಂಕ್‌ ಇಡುವುದು ಸೂಕ್ತವೂ ಕ್ಷೇಮವೂ ಆಗಿದೆ. ಹಾಗೆಯೇ ಮನೆಯ ಈಶಾನ್ಯ ಮೂಲೆಯ ಸಂಪಿನಿಂದ ಪ್ರದಕ್ಷಿಣಾಕಾರದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ಗೆ ನೀರು ಪೂರೈಕೆಗೊಳ್ಳುವಂತಿರಲಿ. ಈ ವಿಷಯವನ್ನು ಅವಶ್ಯವಾಗಿ ಗಮನಿಸಬೇಕು. ಉದಾಸೀನತೆ ಖಂಡಿತಾ ಬೇಡ. ಪ್ರಾಣಿಕ್‌ ಹೀಲಿಂಗ್‌ ಅನ್ನುವ ವಿಚಾರದ ಸಕಾರಾತ್ಮಕ ಬಲ ಈ ರೀತಿಯ ಪ್ರದಕ್ಷಿಣಾತ್ಮಕ ನೀರಿನ ಓಡಾಟದಿಂದ ದೊರಕುತ್ತದೆ. ಆ ಪ್ರದಕ್ಷಿಣಾ ರೂಪದಲ್ಲಿ ನೀರು ಸರಬರಾಜಾದರೆ ವೈಫ‌ಲ್ಯಗಳು ಹೆಚ್ಚು. ಆರೋಗ್ಯದ ಮೇಲೂ ಇದು ದುಷ್ಪರಿಣಾಮ
ಬೀರುತ್ತದೆ.

Monday, 13 November 2017

ನಿಮ್ಮ ಮನೆಯ ವಾಸ್ತು ಹೀಗಿರಲಿ...

ನಿಮ್ಮ ಮನೆಯ ವಾಸ್ತು ಹೀಗಿರಲಿ...


* ಮನೆಯ ಮುಂಬಾಗಿಲು ಪೂರ್ವ ಅಧವಾ ಉತ್ತರ ದಿಕ್ಕಿನೆಡೆಗಿರಲಿ.

* ದಕ್ಷಿಣ ಮತ್ತು ಪೂರ್ವ ದಿಕ್ಕಿನ ಗೋಡೆಗಿಂತ ಉತ್ತರ ಮತ್ತು ಪಶ್ಚಿಮ ದಿಕ್ಕಿನ ಗೋಡೆ ಗಟ್ಚಿಮುಟ್ಟಾಗಿರಲಿ.

* ದಕ್ಷಿಣ ಅಧವಾ ಪೂರ್ವ ಭಾಗದಲ್ಲಿ ಅಡುಗೆ ಕೋಣೆ ಇರಲಿ

* ಪಶ್ಚಿಮ ದಿಕ್ಕಿನಲ್ಲಿ ಊಟದ ಕೋಣೆ ಇದ್ದರೆ ಆರೋಗ್ಯ ವರ್ಧಿಸುತ್ತದೆ.

Saturday, 11 November 2017

ಈಶಾನ್ಯದಿಕ್ಕಿನಲ್ಲಿ ಅಗಲ ಕಿಟಕಿ, ಬಾಗಿಲುಗಳಿಂದ ಸಮೃದ್ಧಿ

 ನಮ್ಮ ದಿನ ನಿತ್ಯದ ಚಟುವಟಿಕೆಗಳ ಮೇಲೆ ನಾವು ವಾಸಿಸುವ ಮನೆಯು ಪರಿಣಾಮ ಬೀರುತ್ತದೆಂದರೆ ನಂಬಲು ಸಾಧ್ಯವಿಲ್ಲವೇ? ನಾವು ಕಟ್ಟಿಸಿದ ಮನೆಯಲ್ಲಿ ವಾಸ್ತುದೋಷವಿದ್ದರೆ ಒಂದು ಕೋಣೆಯಲ್ಲಿ ಬದಲಾವಣೆ ಮಾಡುವ ಮ‌ೂಲಕ ಮನೆ ಸಮೃದ್ಧಿ ಹೊಂದುತ್ತದೆಂದು ಭಾವಿಸಿದರೆ ನಿಮ್ಮ ಊಹೆ ತಪ್ಪು. ವಾಸ್ತುಶಾಸ್ತ್ರದ ರೀತ್ಯ ಮನೆಗೆ ಎಲ್ಲ ರೀತಿಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆಗಲೇ ವಾಸ್ತುಶಾಸ್ತ್ರದ ಫಲವನ್ನು ನಾವು ಪೂರ್ಣ ಪ್ರಮಾಣದಲ್ಲಿ ಅನುಭವಿಸುತ್ತೇವೆ.

ಭೂಮಿಯ ಯಾವುದೇ ಸ್ಥಳದಲ್ಲಿ ವಿವಿಧ ಶಕ್ತಿ ಕ್ಷೇತ್ರಗಳು ಪರಸ್ಪರ ಸಂಧಿಸುತ್ತವೆ ಮತ್ತು ಛೇದಿಸುತ್ತವೆ. ಸಣ್ಣ ನಿವೇಶನಕ್ಕೆ ಕೂಡ ಇದು ಅನ್ವಯವಾಗುತ್ತದೆ. ಕಾಸ್ಮಿಕ್ ಶಕ್ತಿಗಳಾದ ಆಯಸ್ಕಾಂತೀಯ ಶಕ್ತಿ ಭೂಶಕ್ತಿಗಳು ಭೂಮಿಯ ಮೇಲೆ ತನ್ನ ಪ್ರಭಾವ ಬೀರುತ್ತಿರುತ್ತದೆ. ಚೈತನ್ಯ ಮತ್ತು ಚೈತನ್ಯಹೀನತೆಯು ವಾಸ್ತುಶಾಸ್ತ್ರದಲ್ಲಿ ವಿವರಿಸಿರುವಂತೆ ಭೂಮಿಯ ಸೌರಶಕ್ತಿಯ ಮಾರ್ಗಗಳು ಮತ್ತು ಆಯಸ್ಕಾಂತೀಯ ಶಕ್ತಿಯ ಮಾರ್ಗಗಳನ್ನು ಅವಲಂಬಿಸಿದೆ.

ಬೆಳಗಿನ ಸೂರ್ಯಕಿರಣಗಳಲ್ಲಿ ವಿಪುಲ ಸಕಾರಾತ್ಮಕ ಶಕ್ತಿ ಸೂಸುತ್ತವೆ ಮತ್ತು ಅವು ದೇಹಕ್ಕೆ ಪ್ರಯೋಜನಕಾರಿ. ಆದರೆ ಮಧ್ಯಾಹ್ನದ ಸೂರ್ಯಕಿರಣ ನಕಾರಾತ್ಮಕ ಶಕ್ತಿಯನ್ನು ಸೂಸುತ್ತದೆ ಮತ್ತು ಅವು ದೇಹಕ್ಕೆ ಪ್ರಯೋಜನಕಾರಿಯಲ್ಲ ಮತ್ತು ಸುಲಭವಾಗಿ ಆಯಾಸವಾಗುತ್ತದೆ. ಈಶಾನ್ಯ ದಿಕ್ಕಿನಿಂದ ವಾಸ್ತುಪುರುಷ ತನ್ನ ಉಸಿರನ್ನು ಎಳೆದುಕೊಳ್ಳುತ್ತಾನೆ. ಈಶಾನ್ಯ ದಿಕ್ಕಿನಿಂದ ನೀವು ಪಡೆಯುವ ಶಕ್ತಿಯನ್ನು ನೈರುತ್ಯ ದಿಕ್ಕಿನಲ್ಲಿ ಸಂಗ್ರಹಿಸಬೇಕು.

ಭೂಮಿಯ ಆಯಸ್ಕಾಂತ ಶಕ್ತಿಯಲ್ಲಿ ಈಶಾನ್ಯ ದಿಕ್ಕು ಸಕಾರಾತ್ಮಕ ಧ್ರುವದಂತೆ ಮತ್ತು ನೈರುತ್ಯ ನಕಾರಾತ್ಮಕ ದ್ರುವದಂತೆ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ನಾವು ಮನೆ ಕಟ್ಟುವಾಗ ಈಶಾನ್ಯ ಕಡೆಗಳಲ್ಲಿ ಅಗಲವಾದ ಕಿಟಕಿಗಳೊಂದಿಗೆ ಮತ್ತು ನೈರುತ್ಯ ದಿಕ್ಕಿನಲ್ಲಿ ಸಣ್ಣ ಕಿಟಕಿಗಳೊಂದಿಗೆ ಮನೆಯನ್ನು ನಿರ್ಮಿಸಬೇಕು. ಇದರಿಂದ ಸಕಾರಾತ್ಮಕ ಶಕ್ತಿ ಗರಿಷ್ಠವಾಗಿ ಹರಿದುಬಂದು ಸಾಧ್ಯವಾದಷ್ಟು ಸಂಗ್ರಹವಾಗುತ್ತದೆ ಮತ್ತು ಮನೆಯ ಅಭಿವೃದ್ಧಿಗೆ ನೆರವಾಗುತ್ತದೆ.

ಭೂಮಿಯ ಆಯಸ್ಕಾಂತೀಯ ಶಕ್ತಿಗಳ ಪ್ರಮಾಣ ಮತ್ತು ಪ್ರಭಾವವು ಭೂಮಿಯ ಜೀವಿಗಳ ಜೀವನವನ್ನು ನಿರ್ಧರಿಸುತ್ತದೆ.ಪಂಚಭೂತಗಳಾದ ವಾಯು, ಅಗ್ನಿ, ಜಲ, ಭೂಮಿ ಮತ್ತು ಆಕಾಶ ನಮ್ಮ ಜೀವನವನ್ನು ನಿಯಂತ್ರಿಸುವ ಶಕ್ತಿಗಳೆನ್ನಲಾಗಿದೆ. ಆಯಸ್ಕಾಂತೀಯ ಶಕ್ತಿಯ ಬದಲಾವಣೆಯಿಂದ ತಾನೇತಾನಾಗಿ ಪಂಚಭೂತಗಳ ಕಾರ್ಯನಿರ್ವಹಣೆ ಬದಲಾಗಿ ನಮ್ಮ ಮಾನಸಿಕ ನಡವಳಿಕೆ, ಭಾವನೆಗಳು, ಜೀವನವಿಧಾನ ಅದಕ್ಕೆ ಅನುಗುಣವಾಗಿ ಬದಲಾಗುತ್ತದೆಂದು ನಂಬಲಾಗಿದೆ.

ಹುಣ್ಣಿಮೆ ಅಥವಾ ಅಮಾವಾಸ್ಯೆಯಂದು ಮಾನಸಿಕ ಅಸ್ವಸ್ಥ ವ್ಯಕ್ತಿಯ ಮಾನಸಿಕ ಶಕ್ತಿ ಅಲ್ಲೋಲಕಲ್ಲೋಲವಾಗಿ ಈ ಅವಧಿಯಲ್ಲಿ ಕೆಟ್ಟದಾಗಿ ವರ್ತಿಸುವುದನ್ನು ಕಂಡಿದ್ದೇವೆ.ಈಶಾನ್ಯ ದಿಕ್ಕಿನಲ್ಲಿ ಕಿಟಕಿ, ಬಾಗಿಲುಗಳ ಮ‌ೂಲಕ ನಾವು ಉಚ್ಚಶಕ್ತಿಯನ್ನು ತೆರೆದು ನೈರುತ್ಯದ ಸಣ್ಣ ಕಿಟಕಿಗಳ ನಿರ್ಮಾಣದಿಂದ ನೀಚಶಕ್ತಿಯನ್ನು ಮುಚ್ಚುವ ಮ‌ೂಲಕ ನಮ್ಮ ನಿವಾಸದಲ್ಲಿ ಉಚ್ಚಶಕ್ತಿಯನ್ನು ಸುದೀರ್ಘ ಅವಧಿವರೆಗೆ ಇರಿಸಬಹುದು. ಈ ಬಾಗಿಲು, ಕಿಟಕಿಗಳು ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಉಪಸ್ಥಿತಿಯನ್ನು ಸದಾ ತೆರೆದಿಡುತ್ತದೆ. ನಮ್ಮ ಕೌಟುಂಬಿಕ ಜೀವನಕ್ಕೆ ಇದು ಸಹಕಾರಿ. ಇದರಿಂದಾಗಿ ನಮ್ಮ ನೌಕರಿ, ವ್ಯವಹಾರದಲ್ಲಿ ಯಶಸ್ವಿಯಾಗಿ ಕುಟುಂಬ ಜೀವನ ಸುಖ, ಸಂತೋಷದಿಂದ ಕೂಡಿರುತ್ತದೆ.

Friday, 10 November 2017

ಸರಳ ವಾಸ್ತು ಟಿಪ್ಸ್‌‌: ಏನು ಮಾಡಬೇಕು ? ಏನು ಮಾಡಬಾರದು?

 ಧನ ಸಮೃದ್ದಿಗಾಗಿ ಧನ ಪೆಟ್ಟಿಗೆಯಲ್ಲಿ ಮೂರು ನಾಣ್ಯಗಳನ್ನು ಇಡಿ. ಇದು ಭಾಗ್ಯ ಅಭಿವೃದ್ದಿಯಾಗಲು ಸಹಾಯಕವಾಗುತ್ತದೆ.

* ಕುದುರೆಯ ನಾಲ್‌ಗೆ ಪಶ್ಚಿಮ ದೇಶ ಅಂದರೆ ನಮ್ಮ ದೇಶದಲ್ಲಿ ಭಾಗ್ಯಶಾಲಿ ಮತ್ತು ಶುಭ ಎಂದು ನಂಬಲಾಗುತ್ತದೆ. ನಿಮ್ಮ ಸುರಕ್ಷೆ ಮತ್ತು ಸೌಭಾಗ್ಯಶಾಲಿಗಾಗಿ ನಿಮ್ಮ ಮನೆಯ ಮುಖ್ಯ ದ್ವಾರದ ಮೇಲಿನ ಚೌಪಟ್ಟಿಗೆ ಅಳವಡಿಸಿ.

* ಸಂಪತ್ತು ಮತ್ತು ಸಫಲತೆಗಾಗಿ ನೀವು ಕುಳಿತುಕೊಳ್ಳುವ ಕೋಣೆಯಲ್ಲಿ ಪಿರಮಿಡ್‌‌‌ಅನ್ನು ಉತ್ತರ ಪೂರ್ವ ದಿಕ್ಕಿನಲ್ಲಿಡಿ.
 
* ಪ್ರಖ್ಯಾತಿ ಹೊಂದಲು ಮನೆಯ ದಕ್ಷಿಣ ಭಾಗದಲ್ಲಿ ಕೆಂಪು ಬಣ್ಣದ ಬಳಕೆ ಮಾಡಿ ಮತ್ತು ಕೆಂಪು ಬಣ್ಣದ ವಸ್ತುಗಳನ್ನು ಇಡಿ.

* ಮುಖ್ಯ ದ್ವಾರದ ಎದುರು ಕಂಬ, ಮೂಲೆ ಮತ್ತು ಗಿಡಗಳು ಇದ್ದರೆ, ಇವುಗಳ ದೋಷ ನಿವಾರಣೆಗಾಗಿ ಕನ್ನಡಿ ಅಳವಡಿಸಿ.

* ವಿವಾದಕ್ಕೆ ಸಂಬಂಧಿಸಿದ ಕಾಗದಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಡಿ. ಈತರಹದ ಕಾಗದಗಳನ್ನು ಈಶಾನ್ಯ ಮತ್ತು ವಾಯುವ್ಯ ದಿಕ್ಕಿನಲ್ಲಿಡಿ.

Thursday, 9 November 2017

ಮನೆಗೆ ಭಾಗ್ಯತರುವ 'ಭಾಗ್ಯ ಬಿದಿರು'



ರಶ್ಮಿ ಪೈ


'ಲಕ್ಕಿ ಬಾಂಬೂ' ಎಂದು ಕರೆಯಲ್ಪಡುವ 'ಭಾಗ್ಯ ಬಿದಿರು' ಎಂಬ ಸಸ್ಯವು ಮನೆಗೆ ಭಾಗ್ಯವನ್ನು ತರುತ್ತದೆ ಎಂದು ಫೆಂಗ್‌ಶುಯಿ ಹೇಳುತ್ತದೆ.

ಬಾಂಬೂ ಎಂದು ಕರೆಯಲ್ಪಟ್ಟರೂ ಇದು ಬಿದಿರಿನ ವರ್ಗಕ್ಕೆ ಸೇರಿದ ಸಸ್ಯವಲ್ಲ. ನೀರಿನಲ್ಲಿರಿಸಿ ಬೆಳೆಸಬಹುದಾದ ಈ ಸಸ್ಯವು ಮನೆಗೆ ಐಶ್ವರ್ಯ ಮತ್ತು ಆರೋಗ್ಯವನ್ನು ಪ್ರಧಾನ ಮಾಡುತ್ತದೆ ಮತ್ತು ಇದನ್ನು ಯೋಗ್ಯ ದಿಕ್ಕಿನಲ್ಲಿರಿಸುವುದರಿಂದ ಅಭಿವೃದ್ಧಿ ಸುನಿಶ್ಚಿತ ಎಂದು ಫೆಂಗ್‌ಶುಯಿ ವಿಶ್ವಾಸ.

ಉತ್ತಮ ಆರೋಗ್ಯಕ್ಕಾಗಿ ಇದನ್ನು ಪೂರ್ವ ದಿಕ್ಕಿನಲ್ಲಿಯೂ, ಧನಲಬ್ಧಿಗಾಗಿ ಆಗ್ನೇಯ ದಿಕ್ಕಿನಲ್ಲಿಯೂ ಇರಿಸುವುದು ಸೂಕ್ತವಾಗಿದೆ. ಆ ಸಸ್ಯದ ಕಾಂಡಗಳನ್ನು ಕೆಂಪು ರಿಬ್ಬನ್‌ನಿಂದ ಸುತ್ತಿದರೆ ಅದು ಚೈತನ್ಯವನ್ನು ಉತ್ಪಾದಿಸುತ್ತದೆ ಎಂದು ನಂಬಲಾಗುತ್ತದೆ. ಕಾಂಡಗಳನ್ನಿರಿಸುವಾಗ ಅವುಗಳ ಸಂಖ್ಯೆಗಳಲ್ಲಿ ಜಾಗರೂಕರಾಗಿರಬೇಕು.

1. ಮೂರು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಸಂತೋಷ ಪ್ರಧಾನವಾಗುತ್ತದೆ.

2. ಐದು ಕಾಂಡಗಳನ್ನು ಒತ್ತೊಟ್ಟಿಗೆ ಇರಿಸಿದರೆ ಧನಲಾಭವಾಗುತ್ತದೆ.

3. ಇಪ್ಪತ್ತೊಂದು ಕಾಂಡಗಳನ್ನು ಒತ್ತೊಟ್ಟಿಗೆ ಇರಿಸುವುದರಿಂದ ಸರ್ವೈಶ್ವರ್ಯಗಳು ಬಾಗಿಲಿಗೆ ಬಂದು ಸೇರುವುವು.

4. ನಾಲ್ಕು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಮರಣ ಎಂಬ ಪ್ರತೀತಿ ಇದೆ. ಅದು ಹೇಗೆಂದರೆ Four- ಫೋರ್ ಎಂಬ ಪದಕ್ಕೆ ಸದೃಶವಾಗಿರುವ ಪದವು ಚೈನಾದಲ್ಲಿ ಮರಣವೆಂಬ ಅರ್ಥವನ್ನು ಹೊಂದಿದೆ. ಆದುದರಿಂದ ನಾಲ್ಕು ಕಾಂಡಗಳನ್ನು ಒಟ್ಟಿಗೆ ಎಂದೂ ಬಳಸಬಾರದು.
 

ಬೆಳೆಸುವ ವಿಧಾನ


ಇದನ್ನಿರಿಸುವ ನೀರಿನಲ್ಲಿ ಕ್ಲೋರಿನ್ ಅಂಶ ಇರದಂತೆ ಜಾಗ್ರತೆವಹಿಸಬೇಕು ಮತ್ತು ಅಲ್ಪ ಸೂರ್ಯಪ್ರಕಾಶ ತಾಗುವಂತಿರಬೇಕು. ಅತಿ ಉಷ್ಣಾಂಶವಿದ್ದರೆ ಇವುಗಳು ಹಳದಿ ಬಣ್ಣಕ್ಕ ತಿರುಗುತ್ತವೆ ಆದುದರಿಂದ ಕೋಣೆಯ ಉಷ್ಣತೆ ಮಿತವಾಗಿರಲಿ. ಎಳೆ ಕಾಂಡದ ಕತ್ತರಿಸಿದ ಭಾಗಗಳನ್ನು ನೀರಿನಲ್ಲಿರಿಸಿದರೆ ಅವುಗಳು ಕ್ರಮೇಣ ಬೆಳೆಯಲಾರಂಭಿಸುತ್ತವೆ. ಬುಡದಲ್ಲಿ ನೀರು ಅಧಿಕವಾಗಿ ತಂಗಿನಿಲ್ಲದಂತೆ ಜಾಗ್ರತೆವಹಿಸಿದರೆ ಇವುಗಳು ದಟ್ಟವಾಗಿ ಬೆಳೆಯುವುವು.

Wednesday, 8 November 2017

ಮೀನು , ಹಕ್ಕಿಗಳನ್ನು ಮನೆಯಲ್ಲಿ ಸಾಕಬಹುದಾ?

ಮನೆಯ ಸೊಬಗಿಗೆ ಎಂದು ನಾವು ಅಕ್ವೇರಿಯಂ ಅಥವಾ ಗಿಣಿ ಪಾರಿವಾಳ ನವಿಲು ಗುಬ್ಬಿ ಇತ್ಯಾದಿ ಹಕ್ಕಿಗಳನ್ನು ಲÊ ಬರ್ಡ್ಸ್‌ಗಳಂಥ ಬಣ್ಣಬಣ್ಣಗಳ ಮೈ ಹೊದಿಕೆಯ ಹಕ್ಕಿಗಳನ್ನು ಇಟ್ಟು ಆರೈಕೆ ಮಾಡುವುದನ್ನು ಗಮನಿಸುತ್ತೇವೆ. ಅಕ್ವೇರಿಯಂ ಇಟ್ಟು ಬಣ್ಣಬಣ್ಣಗಳ, ಅವುಗಳ ಹೊರಮೈ ಚೆಲ್ಲಿ ತೆವಳುತ್ತಾ, ಈಜುತ್ತಾ ತಾವು ಹೊರಬರಲಾಗದ ಗಾಜಿನ ಗೋಡೆಗಳೀಗೆ ಡಿಕ್ಕಿ ಹೊಡೆಯುತ್ತ ಮೂತಿ ಬಡೆಯುತ್ತಾ, ಉರಟುರುಟಾಗಿಸುತ್ತ ಓಡಾಡುವ ಮೀನುಗಳು ಕಣ್ಣಿಗೆ ಆಹ್ಲಾದವನ್ನು ಕೊಡುತ್ತವೆ ಎಂದು ಆನಂದಿಸುತ್ತೇವೆ.

ಆದರೆ ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು ಗಾಜಿನ ಗಿಂಡಿಗಳನ್ನು ಮಲಗುವ ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತ ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತ ದಿಕ್ಕು ತಪ್ಪಿದ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭಲಕ್ಷಣವಾಗುವುದಿಲ್ಲ. ಜೊತೆಗೆ ಮಲಗುವ ಕೋಣೆಯಲ್ಲಿ ನೀರನ್ನು ತುಂಬಿಕೊಂಡ ಯಾವುದೇ ಪಾತ್ರೆಗಳು, ತೊಟ್ಟಿಗಳು ಜಾಡಿಗಳು ಗಿಂಡಿಗಳು ಅಶುಭ ಸೂಚಕವಾಗಿದೆ. ಇದಕ್ಕೆ ಕಾರಣ ಮಲಗಿದ ಸಂದರ್ಭದ ಸುಪ್ತಾವಸ್ಥೆಗೂ ನೀರಿನ ಕಾರಣವಾದ ಜಲತತ್ವಕ್ಕೂ ಒಂದು ಇನ್ನೊಂದನ್ನು ಭೇದಿಸಿ ಅಶುಭ ಸ್ಪಂದನಗಳನ್ನು ಮನೆಯ ಯಜಮಾನನಿಗೆ ತಂದಿಡುವ ಅಂಶಗಳಾಗಿವೆ.

ಅಕ್ವೇರಿಯಂ ಜಾಡಿಯನ್ನು ಹೊರ ದಿವಾನಖಾನೆಯಲ್ಲಿ ಇರಿಸಬಹುದು. ಹೊಸದಾಗಿ ಮದುವೆಯಾದ ದಂಪತಿಗೆ ಕೂಡಾ ಈ ರೀತಿಯ ಅಕ್ವೇರಿಯಂ ಜೋಡಣೆ ಉತ್ತಮ. ಮದುವೆಯಾಗಬೇಕಾದ ದಾಂಪತ್ಯ ಆಕಾಂಕ್ಷಿಗಳಿಗೂ ಇದು ಒಳ್ಳೆಯದು. ಹೀಗಿರುವ ಅಕ್ವೇರಿಯಂ ನಲ್ಲಿ ಪೂರ್ತಿಯಾಗಿ ಕಡುಗಪ್ಪು ಮೈಬಣ್ಣವಿರುವ ಮೀನುಗಳು ಇರದಂತೆ ನೋಡಿಕೊಳ್ಳಿ. ಬಂಗಾರದ ಬಣ್ಣ, ನಸುನೀಲಿ, ನಸುಗೆಂಪು, ಬಿಳಿಕಪ್ಪು ಪಟ್ಟೆಗಳಿರುವ  ಮೀನುಗಳು ಅಲೆ, ಅಲೆಯಾಕಾರದ ವಜ್ರದ ಸ್ವರೂಪದಲ್ಲಿರುವ ಆಕಾರದಿಂದ ಮೀನುಗಳು ಅತ್ಯುತ್ಸಾಹದಿಂದ ಪುಟಿಯುವಂತೆ ಕತ್ತು ಮೂತಿ ಕೊಂಕಿಸುತ್ತಾ ಓಡಾಡುವಂತಿರಲಿ.

ಸೂರ್ಯ ಬರುವ ಮುನ್ನ ಆಹಾರವನ್ನು ಹಾಕುವ ಪದ್ಧತಿ ಬೇಡ. ಮುಂಜಾನೆ ಸೂರ್ಯ ಬಂದಾಗಲೇ ಆಹಾರದ ಗೋಲಿಗಳು ಅಕ್ವೇರಿಯಂ ಒಳಗೆ ಮೀನುಗಳಿಗೆ ನೀಡುವ ಅಭ್ಯಾಸಿಟ್ಟುಕೊಳ್ಳಿ. ಒಳಗಿನ ನೀರು ನಸುನೀಲಿಯನ್ನು ಹಳದಿ ಛಾಯೆಯ ಬೆಳಕಲ್ಲಿ ಹೊಂದುವಂತೆ ಪ್ರತಿಫ‌ಲಿಸುವಂತಾಗಲಿ. ಇದರಿಂದ ಮನೆಯೊಳಗಿನ ಸ್ನೇಹಪೂರ್ಣ ಪರಸ್ಪರರನ್ನು ಅರಿಯುವ ನಿಟ್ಟಿನ ವಿಚಾರದಲ್ಲಿ ಒಂದು ಆದ್ರìತೆ ನಿರ್ಮಾಣಗೊಳ್ಳಲು ಸಹಾಯವಾಗುತ್ತದೆ.

ಇನ್ನು ಹಕ್ಕಿಗಳ ವಿಷಯಕ್ಕೆ ಬಂದಾಗ ಬಂಧನಕ್ಕೆ ತಳ್ಳಿಕೊಂಡ ಹಕ್ಕಿಗಳು ಮನೆಯೊಳಗಡೆ ಇರಲೇಬಾರದು. ಗುಬ್ಬಿಗಳ ವಿಷಯದಲ್ಲಿ ಬಂಧನವೆಂಬುದು ನಿರ್ಮಾಣವಾಗದಿದ್ದರೂ ಹಾರಾಡಿಕೊಂಡಿರುವ ಗುಬ್ಬಿಗಳು ಕೂಡಾ ಮನೆಯಲ್ಲಿ ಗೂಡು ಕಟ್ಟುವ ವಿಚಾರ ಆಗದಿದ್ದರೆ ಸೂಕ್ತ. ಯಾಕೆಂದರೆ ಗುಬ್ಬಿಗಳು ತಮ್ಮ ಆಹಾರವಾದ ಕೀಟಗಳನ್ನು ಮನೆಯೊಳಗೆ ತಂದು ಕೊಂದು ತಿನ್ನುವ ಅದರ ಭೋಜನ ವಿಶೇಷ ಸಂಭವಿಸಕೂಡದು. ಗುಬ್ಬಿಗಳನ್ನು ಈ  ವಿಷಯದಲ್ಲಿ ಮನುಷ್ಯ ಪ್ರಯತ್ನಗಳೊಡನೆ ಈ ನೆಲೆಯಲ್ಲಿ ನಿಯಂತ್ರಿಸಲಾಗದು. ಈ ಕಾರಣದಿಂದಾಗಿ ಗುಬ್ಬಿಗಳು ಮನೆಯೊಳಗಡೆ ನಿದ್ದವೇ ಆಗಿದೆ. ಉಳಿದಂತೆ ಗಿಣಿ , ಲವ್‌ಬರ್ಡ್ಸ್‌, ಪಾರಿವಾಳಗಳು ಸಹಾ ಮನೆಯೊಳಗೆ ತಮ್ಮ ವಸತಿಯನ್ನು ನಿರ್ಮಿಸಿಕೊಳ್ಳುವುದು ಬೇಡ. ಜೊತೆಗೆ ಪಂಜರವೊಂದನ್ನು ನಿರ್ಮಿಸಿ ಕೊಳ್ಳುವುದು ಬೇಡ. ಪಂಜರದಲ್ಲಿ ಇವುಗಳ ಅಸಹಾಯಕ ಪರಿಸ್ಥಿತಿ ಅಥವಾ ಸೆರೆವಾಸ ಅಷ್ಟು ಒಳ್ಳೆಯದಲ್ಲ.


Tuesday, 7 November 2017

ಮನೆಯ ನೈಋತ್ಯ ಮೂಲೆಯಲ್ಲಿ ಇದೆ, ಕೌಟುಂಬಿಕ ಸೌಖ್ಯ

ನೈಋತ್ಯ ಮೂಲೆಯ ಸಮತೋಲನ ಸಿದ್ಧಿಯಿಂದ ಕುಟುಂಬದಲ್ಲಿ, ಜೀವನದಲ್ಲಿ ಉತ್ತಮವಾದ ನೆಮ್ಮದಿ ಪರಸ್ಪರ ತಿಳುವಳಿಕೆ ಸಂತೋಷಗಳನ್ನು ಸಂಪಾದಿಸಿಕೊಳ್ಳ ಬಹುದು. ದೇಹಾರೋಗ್ಯದ ವಿಚಾರದಲ್ಲಿ ಲವಲವಿಕೆ ಉತ್ಸಾಹ ಪರಿಪಕ್ವ ಸಕಾರಾತ್ಮಕ ಸ್ಪಂದನಗಳು ಸಾಧ್ಯ.  ಹೀಗಾಗಿ ನೈರುತ್ಯ ದಿಕ್ಕಿನ ಪರಿಣಾಮಗಳು ವಾಸ್ತು ಶಾಸ್ತ್ರದಲ್ಲಿ ಅತಿ ಮುಖ್ಯವಾದ ಘಟಕಗಳಾಗಿ ವಿಂಗಡಿಸಲ್ಪಟ್ಟಿವೆ. ಸಾಲದ ತೊಂದರೆಗಳೀಂದ ತಪ್ಪಿಸಿಕೊಳ್ಳಲು ಕೂಡಾ ಇದು ಸಂಪನ್ನತೆಯನ್ನು ನಿರ್ಮಿಸಬಹುದಾದ ಅಂಶವಾಗಿದೆ.

ಮನೆಯ ನೈಋತ್ಯ ಮೂಲೆಯು ಇತರ ಯಾವುದೇ ಭಾಗಗಳಿಗಿಂತ ಹೆಚ್ಚು ಎತ್ತರದಲ್ಲಿ ಇರುವುದು ಸೂಕ್ತ. ಹಾಗೆಯೇ ಮನೆಯ ಸುತ್ತಲೂ ಕಟ್ಟುವ ಗಡಿ ಗೋಡೆಯ ವಿಚಾರದಲ್ಲೂ ನೈಋತ್ಯ ಭಾಗದ ಗಡಿಗೋಡೆ ಇತರ ದಿಕ್ಕಿಗಿಂತಲೂ ತುಸು ಹೆಚ್ಚೇ ಎತ್ತರವನ್ನು ಕಾಯ್ದುಕೊಳ್ಳುವುದು ಸೂಕ್ತ. ವಿಷಮತೆಗಳನ್ನು ತಂದೊಡ್ಡುವ ಸ್ಪಂದನಗಳನ್ನು ತಡೆದು ಒಳ್ಳೆಯ ಪರಿಣಾಮಗಳನ್ನು ನಿರೀಕ್ಷಿಸಬಹುದು.  ಇದರಿಂದ ಮನೆಯ ಜನರಿಗೆ ಒಳ್ಳೆಯ ಭವಿಷ್ಯಕ್ಕೆ ಇದು ಸಕಾರಾತ್ಮಕವಾಗಿ ಇರುತ್ತದೆ.

ಹಾಗೆಯೇ, ಈ ದಿಕ್ಕಿನಲ್ಲಿ ಇಡುವ ಕಬ್ಬಿಣದ ಪೆಟ್ಟಿಗೆಯ ಕುರಿತಂತೆ ಎಚ್ಚರ ಬೇಕೇ ಬೇಕು. ಉತ್ತರ ಅಥವಾ ಪೂರ್ವ ದಿಕ್ಕುಗಳಿಗೆ ಮುಖ ಮಾಡುವಂತೆ ಈ ಪೆಟ್ಟಿಗೆಗಳನ್ನು ಕೂಡಿಸಬೇಕು. ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳನ್ನು ಒಳಗೊಳ್ಳುವ ಮೂಲೆ ಭಾಗವೇ ನೈಋತ್ಯ ದಿಕ್ಕಾಗಿದೆ. ಅಷ್ಟ ದಿಕಾ³ಲಕರಲ್ಲಿ ಒಬ್ಬರಾದ ನಿಋತನ ಆಳ್ವಿಕೆಗೊಳಪಟ್ಟ ದಿಕ್ಕು ಇದು. ಜೀವ ತತ್ವಕ್ಕೆ ಬೇಕಾದ ನೀರಿನ ವಿಚಾರವನ್ನು ನಿಯಂತ್ರಿಸುವ ಮೂಲೆ ಇದು. ಮನೆಯ ಕುರಿತಾದ ಮಹಡಿಯ ಮೆಟ್ಟಿಲುಗಳನ್ನು ಕೂಡಾ ನೈಋತ್ಯಕ್ಕೆ ಸಮಾವೇಶಗೊಳಿಸುವಂತೆ ರಚನೆ ಇರಬೇಕು. ಈ ರೀತಿಯ ಮಹಡಿ ಮೆಟ್ಟಿಲುಗಳು ಯಶಸ್ಸನ್ನು ಸಂಪಾದಿಸುವ ಎತ್ತರಕ್ಕೆ ತನ್ನ ಸ್ಪಂದನವನ್ನು ಕ್ರೋಢೀಕರಿಸಿಕೊಳ್ಳುತ್ತದೆ. ಅನುಮಾನವಿಲ್ಲ. ಮನೆಗೆ ಬೇಕಾದ ನೀರನ್ನು ಹಿಡಿದಿಡುವ ತೊಟ್ಟಿ ಅಥವಾ ವಾಟರ್‌ ಟ್ಯಾಂಕ್‌ ನೈಋತ್ಯ ಮೂಲೆಯಲ್ಲಿ ಕೂಡಿಸುವುದು ಒಳ್ಳೆಯದು. ನೀರಿನ ಸಂಬಂಧವಾದ ಸಲಿಲತೆ ಒದಗದೆ ಇರುವ ನೀರಿನ ಕುರಿತಾದ ಒರತೆಗೆ ಇದು ಶುಭದಾಯಕ. ಒಂದೊಮ್ಮೆ ನಿರ್ವಾಹವಿಲ್ಲದೆ ಅನಿವಾರ್ಯವಾಗಿ ಅಗ್ನಿಮೂಲೆಯಲ್ಲಿ ಅಥವಾ ವಾಯುವ್ಯದಲ್ಲಿ ನೀರಿನ ತೊಟ್ಟಿ ಇಡುವ ಅನಿವಾರ್ಯತೆ ಒದಗಿದಲ್ಲಿ, ಅಂತ ನೀರಿನ ತೊಟ್ಟಿಗಿಂತಲೂ ಎತ್ತರ ಹೊಂದುವ ಹಾಗೆ ನೈಋತ್ಯ ಮೂಲೆಯಲ್ಲಿ ಗೋಡೆಯ ಎತ್ತರ ಕಾಯ್ದುಕೊಳ್ಳಬೇಕು. ಜೊತೆಗೆ ನೈಋತ್ಯ ಮೂಲೆಯ ನೇರವಾದ ಕೋನವನ್ನು ಹೊದಿರಬೇಕೇ ವಿನಾ ಅಂಕುಡೊಂಕಾಗಿ ಇರಕೂಡದು. ಹೀಗೇನಾದರೂ ಆದರೆ ಮುಖ್ಯವಾಗಿ ರಕ್ತ ಪರಿಚಲನೆಗೆ ಸಂಬಂಧಿಸಿ ಏರುಪೇರುಗಳು ಮನೆಯ ಜನರಲ್ಲಿ ಉಂಟಾಗಬಹುದು. ಅಂತರ್ಗತ ಭೂಜಲ ಮನೆಯ ಪರಿಧಿಯಲ್ಲಿ ಒಣಗಿ ಬಿಡಬಹುದು.

ಈ ದಿಕ್ಕಿನಲ್ಲಿ ಬಾವಿಗಳು ಇರಬಾರದು. ನೀರಿನ ಕೊಳಾಯಿಯನ್ನು ಕೂಡಾ ಕೂಡಿಸಬಾರದು. ಇದರಿಂದ ವಿಧವಿಧವಾದ ಹಾನಿಗೆ ಎಡೆ ಮಾಡಿಕೊಡುವುದನ್ನು ಮನೆಯ ಜನವೇ ನಿರ್ಮಿಸಿದಂತಾಗುತ್ತದೆ. ವಿಶೇಷವಾಗಿ ಮಕ್ಕಳು ಮತ್ತು ಸ್ತ್ರೀಯರಿಗೆ ತೊಂದರೆ ಎದುರಾಗುವ ವಿಚಾರ ತಲೆದೋರುತ್ತದೆ. ನಿರಂತರವಾದ ರೋಗ ರುಜಿನಗಳಿಗೆ ವ್ಯಾಧಿಗಳಿಗೆ ಅವಕಾಶವಾಗಿ ಆಯಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಈ ಮೂಲೆಯಲ್ಲಿ ಚರಂಡಿಗಳು ಹಾಳು ಗುಂಡಿಗಳು ಸರ್ವಥಾ ಇರಕೂಡದು. ದಕ್ಷಿಣ ಮತ್ತು ಪಡುವಣ ದಿಕ್ಕುಗಳಲ್ಲಿ ಕೂಡಾ ಈ ಕ್ರಮವನ್ನು ಅನುಸರಿಸಬೇಕು.

ಒಟ್ಟಿನಲ್ಲಿ ನೈಋತ್ಯ ಮೂಲೆಯ ಸಮತೋಲನ ಸಿದ್ದಿಯಿಂದ ಕುಟುಂಬ ಜೀವನದಲ್ಲಿ ಉತ್ತಮವಾದ ನೆಮ್ಮದಿ ಪರಸ್ಪರ ತಿಳುವಳಿಕೆ ಸಂತೋಷಗಳನ್ನು ಸಂಪಾದಿಸಿಕೊಳ್ಳಬಹುದು. ದೇಹಾರೋಗ್ಯದ ವಿಚಾರದಲ್ಲಿ ಲವಲವಿಕೆ ಉತ್ಸಾಹ ಪರಿಪಕ್ವ ಸಕಾರಾತ್ಮಕ ಸ್ಪಂದನಗಳು ಸಾಧ್ಯ.  ಹೀಗಾಗಿ ನೈರುತ್ಯ ದಿಕ್ಕಿನ ಪರಿಣಾಮಗಳು ವಾಸ್ತು ಶಾಸ್ತ್ರದಲ್ಲಿ ಅತಿ ಮುಖ್ಯವಾದ ಘಟಕಗಳಾಗಿ ವಿಂಗಡಿಸಲ್ಪಟ್ಟಿವೆ. ಸಾಲದ ತೊಂದರೆಗಳೀಂದ ತಪ್ಪಿಸಿಕೊಳ್ಳಲು ಕೂಡಾ ಇದು ಸಂಪನ್ನತೆಯನ್ನು ನಿರ್ಮಿಸಬಹುದಾದ ಅಂಶವಾಗಿದೆ. ವಿಶೇಷವಾಗಿ ಸ್ತ್ರೀಯರ ಪಾಳಿನ ನೆಮ್ಮದಿಗೆ, ವಿಶೇಷ ಗಟ್ಟಿತನ ದೊರಕುತ್ತದೆ. ಇದರಿಂದಾಗಿಯೇ ಗಂಡಸರ ಪಾಲಿನ ನೆಮ್ಮದಿ, ಮಾನಸಿಕ ಶಾಂತಿ, ಅಂತರ್ಗತ ಉತ್ಸಾಹಗಳಿಗೆ ದಾರಿ ಸಿಗುತ್ತದೆ.


Monday, 6 November 2017

ಹೋಟೆಲ್‌, ರೆಸ್ಟೋರೆಂಟ್‌ಗಳ ವಾಸ್ತು ಹೀಗಿರಬೇಕು...

ಹೋಟೆಲ್‌ ಅಥವಾ ರೆಸ್ಟೋರೆಂಟ್‌ ವಿಷಯದಲ್ಲಿ ಭೋಜನದ/ ತಿಂಡಿ ತೀರ್ಥ ಸೇವನೆಯ ಸ್ಥಳ ಬಹಳ ಮುಖ್ಯವಾದದ್ದು. ಹೃದಯಭಾಗ. ಪಶ್ಚಿಮ ಭಾಗದತ್ತ ಈ ನಿಟ್ಟಿನ ಸ್ಥಳವು ಸಮಾವೇಶಗೊಳ್ಳುವುದು ಸೂಕ್ತ. ಶುಚಿತ್ವದ ಬಗೆಗೆ ಬೆಳಕು ಹಾಗೂ ಉತ್ತಮವಾದ ಗಾಳಿ, ಫ್ಯಾನ್‌,  ಸುಂದರ ಕೆತ್ತನೆಯ ಡೈನಿಂಗ್‌ ಟೇಬಲ್‌, ಕುರ್ಚಿ ಇವುಗಳ ಹಾಸುಗಳು ಕೂಡ ರೆಸ್ಟೋರೆಂಟ್‌ ಮಾಲೀಕರ ಜನ್ಮಕುಂಡಲಿಯ ಪ್ರಮುಖ ಗ್ರಹಗಳ ಆಧಾರದಿಂದ ನಿಯೋಜಿತಗೊಂಡ ಬಣ್ಣದಲ್ಲಿ ಇರುವುದು ಹೆಚ್ಚು ಸೂಕ್ತ.

ಹೋಟೆಲ್‌, ರೆಸ್ಟೋರೆಂಟ್‌ಗಳ ವಾಸ್ತು ವಿಚಾರದಲ್ಲಿ ಅತಿ ಮುಖ್ಯವಾಗಿರುವುದು ಇವು. ಮುಖ್ಯವಾಗಿ ಊಟದ ಸ್ಥಳ, ವಿದ್ಯುತ್‌ ಉಪಕರಣಗಳು ಅಡುಗೆ ಮನೆ, ವಸ್ತು ಸಂಗ್ರಹಾರಣ ಉಗ್ರಾಣ, ಕೈ ತೊಳೆಯುವ ಪಾತ್ರೆ, ಶೌಚಾಲಯಗಳ ಬಗ್ಗೆ ಜಾಗ್ರತೆ ವಹಿಸುವುದು.

ವಸ್ತು ಸಂಗ್ರಹಣೆ: ಕಾಳುಕಡಿ, ಧಾನ್ಯ, ಕಾಫಿ ಚಹಾಪುಡಿ, ಮಸಾಲೆ ಪದಾರ್ಥಗಳು, ತರಕಾರಿಗಳು ಎಣ್ಣೆ ಖಾದ್ಯ, ಹಿಟ್ಟು ಅಥವಾ ಇನ್ನೇನೇ ಸಸ್ಯ ಸಂಬಂಧಿ ಸರಕುಗಳು ವಸ್ತು ಸಂಗ್ರಹಣಾ ಉಗ್ರಾಣದಲ್ಲಿ ಇರಬೇಕಾದರೆ, ಇದು ಮುಖ್ಯವಾಗಿ ನೈಋತ್ಯ ಭಾಗದಲ್ಲಿ ಅಥವಾ ದಕ್ಷಿಣದಲ್ಲಿ ಸಂಗ್ರಹಿಸಲ್ಪಡಬೇಕು. ಯಮಧರ್ಮ ಅಥವಾ ರಾಕ್ಷಸ ಘಟಕ ಸಂಪನ್ನವಾಗಿಬಿಡುತ್ತದೆ. ಆದ್ದರಿಂದ ಈ ಭಾಗದಲ್ಲಿ ಇಟ್ಟರೆ ಇವು ನೈಋತ್ಯ ದೇವತೆಯ ಹಿಡಿತದಲ್ಲಿ ಸುರಕ್ಷಿತ ಎಂಬುದು ಭಾವನೆ.

ಭೋಜನ ಗೃಹ, ಹಜಾರ ವಿಸ್ತಾರ ವ್ಯಾಪ್ತಿ

ಹೋಟೆಲ್‌ ಅಥವಾ ರೆಸ್ಟೋರೆಂಟ್‌ ವಿಷಯದಲ್ಲಿ ಭೋಜನದ/ ತಿಂಡಿ ತೀರ್ಥ ಸೇವನೆಯ ಸ್ಥಳ ಬಹಳ ಮುಖ್ಯವಾದದ್ದು. ಹೃದಯಭಾಗ. ಪಶ್ಚಿಮ ಭಾಗದತ್ತ ಈ ನಿಟ್ಟಿನ ಸ್ಥಳವು ಸಮಾವೇಶಗೊಳ್ಳುವುದು  ಸೂಕ್ತ. ಶುಚಿತ್ವದ ಬಗೆಗೆ ಬೆಳಕು ಹಾಗೂ ಉತ್ತಮವಾದ ಗಾಳಿ, ಫ್ಯಾನ್‌ ಸುಂದರ ಕೆತ್ತನೆಯ ಡೈನಿಂಗ್‌ ಟೇಬಲ್‌, ಕುರ್ಚಿ ಇವುಗಳ ಹಾಸುಗಳು ಕೂಡ ರೆಸ್ಟೋರೆಂಟ್‌ ಮಾಲೀಕರ ಜನ್ಮಕುಂಡಲಿಯ ಪ್ರಮುಖ ಗ್ರಹಗಳ ಆಧಾರದಿಂದ ನಿಯೋಜಿತಗೊಂಡ ಬಣ್ಣದಲ್ಲಿ ಇರುವುದು ಹೆಚ್ಚು ಸೂಕ್ತ.  ಉತ್ತರ/ ಪೂರ್ವ ಭಾಗಗಳನ್ನು ಉಪಯೋಗಿಸಿಕೊಳ್ಳಲು ಏನೂ ಅಡ್ಡಿ ಇಲ್ಲ. ಪೂರ್ವ ಭಾಗದಲ್ಲಿ ಸುಡು ಬಿಸಿಲು ನುಗ್ಗದ ಹಾಗೆ ಜಾಗ್ರತೆ ವಹಿಸಬೇಕು. ಅಂತೂ ಗಿರಾಕಿಗಳು ತಿಂಡಿ/ ಭೋಜನ ಸ್ವೀಕರಿಸುವಾಗ ಪೂರ್ವ ಪಶ್ಚಿಮ ಉತ್ತರಗಳನ್ನು ದೃಷ್ಟಿಸುವಂತೆ ಮುತುವರ್ಜಿ ವಹಿಸಬೇಕು.

ವಿದ್ಯುತ್‌ ಉಪಕರಣಗಳು, ಫ್ರಿಡ್ಜ್ ತಂಪು ಗಾಳಿಗಾಗಿನ ವ್ಯವಸ್ಥೆ, ಯಂತ್ರಚಾಲಿತ ಬೀಸುಗಲ್ಲು ವಿದ್ಯುತ್‌ ಪೂರೈಕೆ ನಿಂತಾಗ ಬೇಕಾದ ಡೈನಮೋ ಉಪಕರಣಗಳು ಪಶ್ಚಿಮ ಭಾಗವನ್ನು ಆಕ್ರಮಿಸಿಕೊಳ್ಳಲಿ. ಸಮಸ್ಯೆ ಇಲ್ಲ.  ಇಡೀ ಕಟ್ಟಡದ ಹೊರ ಪಶ್ಚಿಮ ಸುತ್ತನ್ನು ಬಳಸಿಕೊಂಡರೂ ಸರಿಯೇ ವಿದ್ಯುತ್‌ ವಿಚಾರದಲ್ಲಿ ಶಕ್ತಿಗೆ ಧನ್ಯತೆ.  ಆಗ್ನೇಯ ಭಾಗದಲ್ಲಿ ಕಿಚನ್‌ ಇರುವುದೇ ಲೇಸು. ಇನ್ನೇನೋ ಕಾರಣದಿಂದಾಗಿ ಇದಕ್ಕೆ ತೊಂದರೆ ಇದ್ದಲ್ಲಿ ವಾಯುವ್ಯದ ಭಾಗವನ್ನು ಉಪಯೋಗಿಸಬಹುದು.

ರೆಸ್ಟೋರೆಂಟ್‌ ಅಥವಾ ಹೋಟೆಲಿನ ಜನರೇಟರ್‌ ವಿದ್ಯುತ್‌ ಸ್ವಿಚ್‌ ಬೆಂಕಿಗೆ ಸಂಬಂಧಿಸಿದ ಸ್ಟೌವ್‌, ಸಿಲಿಂಡರಿನ ಗ್ಯಾಸ್‌ ಕಂಟೇನರ್‌ ಇತ್ಯಾದಿ ಆಗ್ನೇಯ ದಿಕ್ಕಿನಲ್ಲಿ ಇಡಲ್ಪಡಲಿ. ರೆಸ್ಟೋರೆಂಟಿನ ಮುಖ್ಯ ಪ್ರವೇಶ ದ್ವಾರವು ಆರೋಹಣವಿದ್ದಲ್ಲಿ ವಿಸ್ತೃತ ಉತ್ಛಭಾಗದಲ್ಲಿ ಸಮಾವೇಶವಾಗಿರಲಿ. ಆದರೆ ಈಶಾನ್ಯ ಕಡೆಯ ಪೂರ್ವ, ಈಶಾನ್ಯ ಕಡೆಗಿನ ಉತ್ತರ ವಾಯುವ್ಯದ ಪಶ್ಚಿಮ ಭಾಗ ಆಗ್ನೇಯದ ದಕ್ಷಿಣ ಭಾಗಗಗಳಲ್ಲಿ ಇರುವಂತೆ ಆಗಿರಲಿ. ತೀರಾ ಈಶಾನ್ಯಭಾಗದ ಸ್ವಲ್ಪ ಸ್ಥಳ ವ್ಯಾಪ್ತಿ ಮೂಲೆ ಮುಖ್ಯವಾಗಿ ಖಾಲಿ ಇರಲಿ. ಪೂರ್ತಿ ಖಾಲಿಯಾಗಿ ಅಂದವಾಗಿ ರೂಪಿಸಲ್ಪಟ್ಟಿರಲಿ. ಹೊರಗಡೆಯ ಕೆಲಭಾಗವಾದರೂ ಈಶಾನ್ಯ ಮೂಲೆ ಖಾಲಿ ಜಾಗ ಇರುವಂತಿರಲಿ.

ಭೋಜನ ಸ್ಥಳ ತಿಂಡಿಗಾಗಿ ಕೂಡುವ ಸ್ಥಳ, ಕುರ್ಚಿ ಟೇಬಲ್ಲುಗಳು ಬಹು ವ್ಯವಸ್ಥಿತವಾಗಿ ಕಣ್ಣಿಗೆ ಅಂದವಾಗುವ ರೀತಿ ಕುಸುರಿ ಹೊಂದಿರಲಿ. ಹಸಿರು /ನಸುಹಳದಿ ಕೆಂಪು ಗಾಜಿನ ಆಸ್ವಾದನೆಗಳು ರೆಸ್ಟೋರೆಂಟಿಗೆ ಬಂದವರ ಕಣ್ಣಿಗೆ ಹಿತ ತರುವಂತಿರಲಿ. ತೆಳು ಪಾರದರ್ಶಕತೆಯ ಉಬ್ಬುಶಿಲ್ಪಗಳು ಉರಗ ಸ್ವರೂಪದ ಅಂಕುಡೊಂಕಿನೊಂದಿಗೆ ಪಾರದರ್ಶಕ ಕನ್ನಡಿಗಳಿಗೆ ಅಥವಾ ಹೊದಿಕೆಯಾದ ಕನ್ನಡಿಗಳಲ್ಲಿ ಮೂಡಿಕೊಂಡಿರಲಿ. ಹೂವುಗಳ ರೀತಿಯ ಉಬ್ಬು ಶಿಲ್ಪಗಳಿರಲಿ. ಕಣ್ಣು ಕೋರೈಸದ ಆದರೆ ಸ್ವಚ್ಛ ಬೆಳಕಿನ ಹೊನಲು, ಗಿರಾಕಿಗಳ ಮನಸೆಳೆಯುವಂತಿರಲಿ. ಉತ್ತರಕ್ಕೋ ಪೂರ್ವಕ್ಕೋ ಓಡಾಟದ ಹರವುಗಳಿರಲಿ. ಮುಖ್ಯಸ್ಥಳದ ಪಶ್ಚಿಮ ಅಥವಾ ದಕ್ಷಿಣದಲ್ಲಿ ಟೇಬಲ್‌ ಇರಲಿ. ಈ ಎಲ್ಲಾ ವಿಚಾರಗಳ ರೆಸ್ಟೋರೆಂಟಿನ ವಿಚಾರದಲ್ಲಿ ಯಶಸ್ಸಿನ ದಾರಿಗೆ ಸುಲಲಿತವಾಗುತ್ತದೆ.

Friday, 3 November 2017

ಮನೆಯ ಬಾವಿ ಯಾವ ಮೂಲೆಯಲ್ಲಿ ಇರಬೇಕು ಅನ್ನೋದು ಗೊತ್ತಾ?

ನೀರಿನ ಪೂರೈಕೆ ಮನೆಯೊಳಗಡೆ ಹೇಗೋ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿನಗರ, ಪ್ರತಿಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ. ಮನೆಯಲ್ಲಿ ಬಾವಿಯನ್ನು ತೋಡುವುದಾದರೆ ಈಶಾನ್ಯ ಮೂಲೆಯಲ್ಲಿ ತೋಡಬೇಕು. ಹಾಗೆಯೇ ನೀರಿನ ಬೋರ್‌ ಅನ್ನು ತೋಡುವುದಾದರೂ ಈಶಾನ್ಯವೇ ಪ್ರಶಸ್ತ ಜಾಗ.

ಮನೆಯಲ್ಲಿನ ನೀರಿನ ವಿಚಾರದಲ್ಲಿ ಹೆಚ್ಚು ಎಚ್ಚರವಿರಬೇಕು. ಈಗ ಬಾವಿಗಳನ್ನು ತೆಗೆಸುವ ವಿಚಾರದಲ್ಲಿ, ಬೋರ್‌ ಕೊರೆಸುವ ಸಂದರ್ಭದಲ್ಲಿ, ಬೇಕಾದ ನೀರನ್ನು ಕಾರ್ಪೊರೇಷನ್‌ ನಗರಸಭೆ ಮುನಿಸಿಪಾಲ್ಟಿ ಅಥವಾ ನಗರ ಪಂಚಾಯಿತಿಗಳು ಬಿಟ್ಟಾಗ ಸಂಗ್ರಹಿಸುವ ವಿಧಿ ವಿಧಾನಗಳನ್ನು ಜನರು ಅನುಸರಿಸುವುದಿಲ್ಲ. ಹೇಗೋ ಸಂಗ್ರಹಿಸುತ್ತಾರೆ. ಹೇಗೋ ನೀರಿನ ಪೂರೈಕೆ ಮನೆಯೊಳಗಡೆ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ
ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿನಗರ, ಪ್ರತಿಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ.

ಮನೆಯಲ್ಲಿ ಬಾವಿಯನ್ನು ತೋಡುವುದಾದರೆ ಈಶಾನ್ಯ ಮೂಲೆಯಲ್ಲಿ ತೋಡಬೇಕು. ಹಾಗೆಯೇ ನೀರಿನ ಬೋರನ್ನು ತೋಡುವುದಾದರೂ ಈಶಾನ್ಯವೇ ಪ್ರಶಸ್ತ ಜಾಗವಾಗಿದೆ. ಒಳಾಂತರ್ಗತವಾಗಿ ಮನೆಯಲ್ಲಿ ನೀರಿನ ಸಂಪನ್ನು ನಿರ್ಮಾಣ ಮಾಡಿಕೊಳ್ಳುವ ದಿಕ್ಕು ಕೂಡಾ ಈಶಾನ್ಯವೇ ಆಗಿರಬೇಕು. ಹೀಗೆ ನಿರ್ಮಿಸುವ ಸಂಪು ಈಶಾನ್ಯ ಮೂಲೆಯಲ್ಲಿರಬೇಕು ಎಂಬುದು ಮುಖ್ಯವೇ ವಿನಾ ಕಾಂಪೌಂಡ್‌ ಗೋಡೆಗಳಿಗೆ ಹೊಂದಿರಬೇಕೋ, ಮೂಲೆಗೆ ನಿರ್ದಿಷ್ಟವಾಗಿ ಸಮಾವೇಶವಾಗಬೇಕೋ ಎಂಬುದೆಲ್ಲಾ ತೆಲೆಕೆಡಿಸಿಕೊಳ್ಳುವ ವಿಚಾರವಲ್ಲ. ಸುಮಾರಿ ಒಟ್ಟು ವಿಸ್ತೀರ್ಣದ
ಶೇ. ಒಂದುರಷ್ಟು ಭಾಗದ ಉದ್ದಗಲಗಳನ್ನು ಸಂಪಿಗೆ ಒದಗಿಸಿರಬೇಕು.

ಸಂಪಿನ ಆಳ ಆರಡಿಗಳನ್ನು ಮೀರದಂತಿರಲಿ. ಇನ್ನಿಷ್ಟು ಆಳ ತುಸು ಅಪಾಯಕಾರಿ ಹಾಗೂ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಹಕಾರಿಯಾಗುವುದಿಲ್ಲ. ಸಂಪನ್ನು ಆಗಾಗ ಸ್ವತ್ಛಗೊಳಿಸುವುದು ಆರೋಗ್ಯಕ್ಕೆ ಒಳ್ಳೆಯದು. ಮಳೆನೀರಿನ ಕೊಯ್ಲು ಮತ್ತು ವಾಸ್ತು ಕೊಯ್ಲು ಇರುವುದಾದರೆ ಮುಕ್ತವಾಗಿ ತೆರೆಯಲ್ಪಟ್ಟ ಬಾವಿಯ ರೀತಿಯ ಕ್ರಮವನ್ನು ಅನುಸರಿಸುವುದೇ ಸೂಕ್ತ. ಈ ರೀತಿಯ ಬಾವಿ ಕೂಡಾ ಈಶಾನ್ಯ ಮೂಲೆಯಲ್ಲೇ ಇರಬೇಕು. ಇನ್ನು ಮನೆಯ ಲಕ್ಷಣಗಳಿಗೆ ಅಂದವನ್ನು ಹೆಚ್ಚಿಸುವ ಅಂಶವಾಗಿ ಕಿರುಗಾತ್ರದ ಸುಂದರ ಕೊಳವನ್ನೋ, ಚಿಮ್ಮುವ ಕಾರಂಜಿಯನ್ನೋ ನಿರ್ಮಿಸಿಕೊಳ್ಳುವ ಅಪೇಕ್ಷೆ
ಹಲವರದ್ದಿರುತ್ತದೆ. ಈಜುಕೊಳವನ್ನು ಕೂಡಾ ನಿರ್ಮಿಸುವ ವಿಚಾರವಿರುತ್ತದೆ. ಈ ಏನೇ ಇತರ ನೀರಿಗೆ ಸಂಬಂಧಿಸಿದ ವಿಚಾರಗಳಿದ್ದರೂ, ಈಶಾನ್ಯ ದಿಕ್ಕಿನ ಜಾಗವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲಾ ಮೂಲಗಳೂ ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಂಡಿರಬೇಕು.

ಹೀಗೆಂದು ಮನೆಯ ಮೇಲಿನ ಓವರ್‌ ಹೆಡ್‌ ಟ್ಯಾಂಕ್‌ಗಳು ಈಶಾನ್ಯದಲ್ಲಿರಬಾರದು. ಇವು ಕಡ್ಡಾಯವಾಗಿ ನೈಋತ್ಯದಿಕ್ಕಿನಲ್ಲಿ ಇರಬೇಕು. ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳು ಸೇರುವ ಮೂಲೆಗೆ ನೈಋತ್ಯವೆನ್ನುತ್ತಾರೆ. ನೈರುತ್ಯದಲ್ಲಿ ಟ್ಯಾಂಕ್‌ ಇಡುವುದು ಕ್ಷೇಮವೂ ಹೌದು. ಹಾಗೆಯೇ ಮನೆಯ ಈಶಾನ್ಯ ಮೂಲೆಯ ಸಂಪಿನಿಂದ ಪ್ರದಕ್ಷಿಣಾಕಾರದಲ್ಲಿ ಓವರ್‌ ಹೆಡ್‌ ಟ್ಯಾಂಕಿಗೆ ನೀರು ಪೂರೈಕೆಯಾಗುವಂತಿರಲಿ. ಈ ವಿಷಯವನ್ನು ಅವಶ್ಯವಾಗಿ ಗಮನಿಸಿ. ಪ್ರಾಣಿಕ್‌ ಹೀಲಿಂಗ್‌ ಎನ್ನುವ ವಿಚಾರದ ಸಕಾರಾತ್ಮಕ ಬಲ ರೀತಿಯ ಪ್ರದಕ್ಷಿಣಾತ್ಮಕವಾದ ನೀರಿನ
ಓಡಾಟದಿಂದ ದೊರೆಯುತ್ತದೆ. ಅಪ್ರದಕ್ಷಿಣಾ ರೂಪದಲ್ಲಿದ್ದರೆ ನಕಾರಾತ್ಮಕ ಬಲ ದೊರೆಯುತ್ತದೆ. ಇದು ಒಳ್ಳೆಯ ಫ‌ಲ ನೀಡಲಾರದು. ಆರೋಗ್ಯದ ವಿಚಾರದಲ್ಲಿ ಈ ಬಲಗಳು ಬಹು ಪರಿಣಾಮಕಾರಿಯಾಗಿದೆ.

ಸಂಪು ಹಾಗೂ ಓವರ್‌ ಹೆಡ್‌ ಟ್ಯಾಂಕ್‌ ವಿಚಾರಗಳಲ್ಲಿ ಪ್ರಧಾನವಾಗಿ ಬಣ್ಣಗಳು ಯಾವೆಲ್ಲಾ ಫ‌ಲಗಳನ್ನು,ಯಶಸ್ಸುಗಳನ್ನು ನೀಡುತ್ತದೆ ಎಂಬ ವಿಚಾರವನ್ನು ಮುಂದಿನ ವಾರ ಚರ್ಚಿಸೋಣ.


Thursday, 2 November 2017

ನಿಮ್ಮ ಮನೆಯ ವಾಸ್ತು ಹೀಗಿರಲಿ...

ನಿಮ್ಮ ಮನೆಯ ವಾಸ್ತು ಹೀಗಿರಲಿ...


* ಮನೆಯ ಮುಂಬಾಗಿಲು ಪೂರ್ವ ಅಧವಾ ಉತ್ತರ ದಿಕ್ಕಿನೆಡೆಗಿರಲಿ.

* ದಕ್ಷಿಣ ಮತ್ತು ಪೂರ್ವ ದಿಕ್ಕಿನ ಗೋಡೆಗಿಂತ ಉತ್ತರ ಮತ್ತು ಪಶ್ಚಿಮ ದಿಕ್ಕಿನ ಗೋಡೆ ಗಟ್ಚಿಮುಟ್ಟಾಗಿರಲಿ.

* ದಕ್ಷಿಣ ಅಧವಾ ಪೂರ್ವ ಭಾಗದಲ್ಲಿ ಅಡುಗೆ ಕೋಣೆ ಇರಲಿ

* ಪಶ್ಚಿಮ ದಿಕ್ಕಿನಲ್ಲಿ ಊಟದ ಕೋಣೆ ಇದ್ದರೆ ಆರೋಗ್ಯ ವರ್ಧಿಸುತ್ತದೆ.

Wednesday, 1 November 2017

ಕನ್ನಡಿಯನ್ನು ಎಲ್ಲಿ ಅಳವಡಿಸಬೇಕು: ವಾಸ್ತು ಟಿಪ್ಸ್‌ಗಳು

ನಿಮ್ಮ ಮನೆ ಅಥವಾ ಕಚೇರಿಯ ವಾಸ್ತುವಿನಲ್ಲಿ ಕನ್ನಡಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ಸತ್ಯ. ಕನ್ನಡಿ ಅಳವಡಿಸುವ ಸ್ಥಳವು ತುಂಬಾ ಪ್ರಭಾವ ಬೀರಲಿದೆ. ಇದನ್ನು ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ. ಇದನ್ನು ನಂಬಲು ತಯಾರಿಲ್ಲವೆಂದರೆ ಅಚ್ಚರಿಯಾಗದು. ಆದರೆ ನಿಮ್ಮ ಮನೆಯಲ್ಲಿ ಇಡುವ ಕನ್ನಡಿ ಮನೆಯ ಶಕ್ತಿ ಹೆಚ್ಚಿಸುವ ಅಥವಾ ಕಡಿಮೆಗೊಳಿಸುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ನಿಮ್ಮ ಮನೆಯ ಯಾವ ಭಾಗದಲ್ಲಿ ಕನ್ನಡಿ ಇಟ್ಟಿರುತ್ತಾರೆ ಎನ್ನುವ ಮೇಲೆ ಒಳಬರುವ ಧನಾತ್ಮಕ ಶಕ್ತಿಯು ಅವಲಂಬಿತವಾಗಿರುತ್ತದೆ. ವಾಸ್ತುವಿನ ಪ್ರಕಾರ ಕನ್ನಡಿಗಳು ಮತ್ತು ಅದನ್ನು ಇಡುವ ಎಲ್ಲಾ ಜಾಗ ಒಳ್ಳೆಯದಲ್ಲ. ಮನೆಯ ಕೆಲವೊಂದು ಭಾಗದಲ್ಲಿ ಅಳವಡಿಸುವ ಕನ್ನಡಿ ಋಣಾತ್ಮಕ ಶಕ್ತಿ ಉಂಟುಮಾಡುತ್ತದೆ ಎಂದು ಪರಿಗಣಿಸಲ್ಪಟ್ಟರೆ,

ವಾಸ್ತು ಕುರಿತು ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ವಾಸ್ತು ಪ್ರಕಾರ ಮನೆಗೆ ದೋಷ ತರುವ ವಸ್ತುಗಳು! 

ಮತ್ತೆ ಕೆಲವು ಧನಾತ್ಮಕ ಶಕ್ತಿ ಮನೆಯೊಳಗೆ ಬರುವಂತೆ ಮಾಡುತ್ತದೆ. ನಿಮ್ಮ ಮನೆಗೆ ಕನ್ನಡಿ ಬಗ್ಗೆ ಯೋಜನೆ ಹಾಕಿಕೊಂಡಿದ್ದರೆ ಆಗ ಇಲ್ಲಿರುವ ಕೆಲವೊಂದು ಮೂಲ ಟಿಪ್ಸ್ ಗಳು ನಿಮ್ಮ ನೆರವಿಗೆ ಬರಲಿದೆ. ಇಲ್ಲಿ ಕೊಟ್ಟಿರುವ ಕೆಲವೊಂದು ಟಿಪ್ಸ್‌ಗಳ ಹೊರತಾಗಿಯೂ ಹಲವಾರು ಟಿಪ್ಸ್ ಗಳಿವೆ. ಆದರೆ ಇದು ತುಂಬಾ ಮೂಲ ಮತ್ತು ಅತೀ ಹೆಚ್ಚು ಉಲ್ಲೇಖಿಸಲ್ಪಡುವ ಕನ್ನಡಿಯ ವಾಸ್ತು ಟಿಪ್ಸ್ ಗಳೆಂದು ಪರಿಗಣಿಸಲಾಗಿದೆ. ವಾಸ್ತು ಕುರಿತು ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ವಾಸ್ತು ಪ್ರಕಾರ ಬೆಡ್ ರೂಂನ ವಿನ್ಯಾಸ ಹೀಗಿರಬೇಕು! 

ಮನೆಯ ವಾಸ್ತುವಿಗೆ ಕನ್ನಡಿಯ ಟಿಪ್ಸ್ 


ನಿಮ್ಮ ಮನೆಯಲ್ಲಿ ಕನ್ನಡಿ ಹಾಕುವ ಯೋಜನೆ ಹಾಕಿಕೊಂಡಿದ್ದರೆ ಆಗ ಕೆಲವೊಂದು ವಿಷಯಗಳನ್ನು ಪರಿಗಣಿಸಿ. ನಿಮ್ಮ ಹಾಸಿಗೆ ಕಾಣುವಂತೆ ಕನ್ನಡಿ ಇಡಬೇಡಿ. ಇದರಿಂದ ಹೆಚ್ಚಿನ ಅನಾರೋಗ್ಯ ಹಾಗೂ ಋಣಾತ್ಮಕ ಪರಿಣಾಮ ಬೀರಬಹುದು. ನಿಮ್ಮ ಕನ್ನಡಿಯಲ್ಲಿ ಮುಖ್ಯ ದ್ವಾರ ಕಾಣಿಸುತ್ತಿದ್ದರೆ ಆಗ ನೀವು ಇದನ್ನು ಸ್ಥಳಾಂತರಿಸುವ ಬಗ್ಗೆ ಮರುಚಿಂತಿಸಬೇಕಾಗಿದೆ. ಇದರಿಂದ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ. ಋಣಾತ್ಮಕ ಶಕ್ತಿಯಿರುವ ಬೀರುವಂತಹ ವಸ್ತುಗಳಿಗೆ ವಿರುದ್ಧವಾಗಿ ಕನ್ನಡಿ ಅಳವಡಿಸಿ. ಇದು ಮನೆಯೊಳಗಿನ ಎಲ್ಲಾ ಋಣಾತ್ಮಕ ಶಕ್ತಿ ಹೀರಿಕೊಳ್ಳುತ್ತದೆ ಎನ್ನುವುದು ಮನೆಯಲ್ಲಿ ಕನ್ನಡಿ ಅಳವಡಿಸಲು ಇರುವ ವಾಸ್ತು ಟಿಪ್ಸ್. 

ಕಚೇರಿಯ ವಾಸ್ತುವಿಗೆ ಕನ್ನಡಿ ಟಿಪ್ಸ್ 


ನಿಮ್ಮ ವೃತ್ತಿಪರ ವಾತಾವರಣದಲ್ಲಿ ಎಲ್ಲಾ ಧನಾತ್ಮಕ ಶಕ್ತಿ ತರಲು ಬಯಸುತ್ತಿದ್ದೀರಾ? ಹಾಗಿದ್ದರೆ ಎರಡನ್ನು ಜತೆಯಾಗಿಟ್ಟುಕೊಳ್ಳಿ. ಇದಕ್ಕಾಗಿ ಕನ್ನಡಿಯು ಕೇವಲ ಧನಾತ್ಮಕ ಶಕ್ತಿ ಹೊರಹಾಕಬೇಕು. ಸಮೃದ್ಧಿ ಪಡೆಯಲು ನಿಮ್ಮ ಕಚೇರಿಯ ಲಾಕರ್ ಮುಂದೆ ಕನ್ನಡಿ ಅಳವಡಿಸಬೇಕು. ಕಿರಿದಾದ ಪ್ಯಾಸೆಜ್ ಗಳಲ್ಲಿ ಕನ್ನಡಿ ಅಳವಡಿಸಿದರೆ ಆಗ ಋಣಾತ್ಮಕ ಶಕ್ತಿ ಬರುತ್ತದೆ. ಕಿರಿದಾದ ಪ್ಯಾಸೆಜ್ ಗಳಲ್ಲಿ ಋಣಾತ್ಮಕತೆ ಮತ್ತು ಸುತ್ತಮುತ್ತಲಿನ ಇಕ್ಕಟ್ಟನ್ನು ಪ್ರತಿಫಲಿಸುತ್ತದೆ. ಇಂತಹ ಸ್ಥಳದಲ್ಲಿ ಕನ್ನಡಿ ಇಡಬೇಡಿ. ಕನ್ನಡಿಯಲ್ಲಿ ಒಳ್ಳೆಯ ದೃಶ್ಯಗಳು, ಧನಾತ್ಮಕ ಶಕ್ತಿ ಪ್ರತಿಫಲಿಸುತ್ತಿರಲಿ. ಕಿರುಕೋಣೆಯ ಕಿಟಕಿಗೆ ವಿರುದ್ಧವಾಗಿ ಕನ್ನಡಿ ಅಳವಡಿಸಿ. ಇದರಿಂದ ನಿಮ್ಮ ಕಚೇರಿಗೆ ಧನಾತ್ಮಕ ಶಕ್ತಿ ಬರುತ್ತದೆ.

 ವಾಸ್ತು ಕುರಿತು ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ಬೆಡ್ ರೂಂನಲ್ಲಿ ಮಾಡುವ ಐದು ತಪ್ಪುಗಳು 

ಕನ್ನಡಿಯ ಸಾಮಾನ್ಯ ವಾಸ್ತು ಟಿಪ್ಸ್‌ಗಳು 


ನಿಮ್ಮ ಸ್ನಾಹಗೃಹದಲ್ಲಿ ಕನ್ನಡಿ ಅಳವಡಿಸಲು ಬಯಸಿದ್ದರೆ ಆಗ ಅದನ್ನು ಉತ್ತರ ಅಥವಾ ಪೂರ್ವದಲ್ಲಿಡಿ. ಮನೆಯ ಮಧ್ಯಭಾಗದಲ್ಲಿ ಗೋಡೆಯಿದ್ದರೆ ಆಗ ಮನೆಯನ್ನು ಸಂಪರ್ಕಿಸುವಂತಾಗಲು ನೀವು ಅದರಲ್ಲಿ ಒಂದು ಕನ್ನಡಿಯನ್ನಿಡಿ. ಎದುರುಬದುರಾಗಿ ಯಾವಾಗಲೂ ಕನ್ನಡಿ ಅಳವಡಿಸಬೇಡಿ. ಇದಕ್ಕೆ ವಾಸ್ತು ಟಿಪ್ಸ್ ಎಂದರೆ ಹೀಗೆ ಅಳವಡಿಸಿದರೆ ಮನೆಯಲ್ಲಿ ವಿಶ್ರಾಂತಿ ಎನ್ನುವುದು ಇರಲ್ಲ. ಸ್ನಾನಗೃಹವನ್ನು ಹೊರತುಪಡಿಸಿ ಮನೆಯ ಯಾವುದೇ ಭಾಗದಲ್ಲಿ ಉತ್ತರ ಅಥವಾ ಪೂರ್ವ ಭಾಗದಲ್ಲಿ ಅಳವಡಿಸಬೇಡಿ. ಇದರಿಂದ ಧನಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ನಿಮ್ಮ ಚಿತ್ರಗಳು ಕನ್ನಡಿಯಲ್ಲಿ ಪ್ರತಿಫಲಿಸುವಂತಹ ರೀತಿಯಲ್ಲಿ ಕನ್ನಡಿ ಅಳವಡಿಸಬೇಡಿ. ಮುಖ್ಯದ್ವಾರ ಕಾಣುವಂತೆ ಕನ್ನಡಿ ಇಡಲೇಬಾರದು. ಕನ್ನಡಿ ಅಳವಡಿಕೆಗೆ ಇದು ಕೆಲವೊಂದು ವಾಸ್ತು ಟಿಪ್ಸ್ ಗಳು. ಇವುಗಳನ್ನು ಪಾಲಿಸಿದರೆ ಆಗ ನೀವು ಖಂಡಿತವಾಗಿಯೂ ಧನಾತ್ಮಕ ಶಕ್ತಿ ಪಡೆಯಬಹುದು.



ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...